Subscribe to Updates
Get the latest creative news from FooBar about art, design and business.
Author: roovari
22 ಮಾರ್ಚ್ 2023, ಮಂಗಳೂರು: ಇದೇ ಬರುವ ತಾರೀಕು 26-03-2023ರ ಬೆಳಿಗ್ಗೆ ಗಂಟೆ 10ಕ್ಕೆ ಮಂಗಳೂರು ರಥ ಬೀದಿಯ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆವರಣದಲ್ಲಿ “ವಿಶ್ವಕರ್ಮ ಕಲಾ ಪರಿಷತ್” ಇದರ ಉದ್ಘಾಟನಾ ಸಮಾರಂಭ ಹಾಗೂ “ಸಮರ್ಪಣಂ” – ವಿಶ್ವಕರ್ಮ ಕಲೋತ್ಸವ ನಡೆಯಲಿದೆ ಎಂದು ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್.ಪಿ.ಗುರುದಾಸ್ ತಿಳಿಸಿದರು. ಶ್ರೀಮದ್ ಜಗದ್ಗುರು ಆನೆಗುಂದಿ ಸರಸ್ವತೀ ಪೀಠಾಧೀಶ್ವರರಾದ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ವಿಶ್ವಕರ್ಮ ಕಲಾ ಪರಿಷತ್ತನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಕೆ. ಕೇಶವ ಆಚಾರ್ಯ, ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ್ ಇವರು ವಿಶ್ವಕರ್ಮ ಕಲೋತ್ಸವವನ್ನು ಉದ್ಘಾಟಿಸಲಿದ್ದಾರೆ. ಗೌರವ ಸನ್ಮಾನ: ಶ್ರೀ ಕ್ಷೇತ್ರದಲ್ಲಿ ಕಲಾ ಪೋಷಕರಾಗಿ ಸೇವೆ ಸಲ್ಲಿಸಿದ ಸ್ವರ್ಣ ಶಿಲ್ಪಿಗಳಾದ ಪಿ. ಶಿವರಾಮ ಆಚಾರ್ಯ ಕಂಕನಾಡಿ, ಮುನಿಯಾಲ್ ದಾಮೋದರ ಆಚಾರ್ಯ, ಪೈಯಾಲ್ ಭಾಸ್ಕರ ಆಚಾರ್ಯ, ಹಿರಿಯ ಕಲಾ ಪೋಷಕರಾದ ಶಕುಂತಳಾ ಬಿ. ರಾವ್, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದ ಯೋಗೀಶ್ ಬೋಳೂರು…
21-03-2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ದಶಮಾನೋತ್ಸವ ಪ್ರಶಸ್ತಿ ಮತ್ತು ಯಕ್ಷ ಮಂಗಳ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ದಿನಾಂಕ 18-03-2023ರ ಶನಿವಾರದಂದು ನಡೆಯಿತು. ಆಳ್ವಾಸ್ ಪ್ರತಿಷ್ಠಾನದ ಡಾ.ಎಂ.ಮೋಹನ್ ಆಳ್ವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ‘ವಿದ್ಯಾರ್ಥಿಗಳನ್ನು ಕಲಾ ಸಂಪತ್ತಾಗಿ ಬೆಳೆಸುವುದು ನಮ್ಮ ಜವಾಬ್ದಾರಿ. ಹಾಗಾದರೆ ಮಾತ್ರ ಕಲೆ ಭವಿಷ್ಯಕ್ಕೆ ಉಳಿಯಬಲ್ಲುದು. ವಿಜ್ಞಾನದಂತೆಯೇ ಸಾಂಸ್ಕೃತಿಕ ಬದುಕಿನಲ್ಲಿ ಸತ್ಯವಿದೆ. ಕಲೆ – ಸಂಸ್ಕೃತಿಯಲ್ಲಿರುವ ಸತ್ಯ ಉಳಿಯಬೇಕು. ತನ್ನದೇ ಆದ ಕ್ರೀಡೆ ಹಾಗೂ ಸಾಂಸ್ಕೃತಿಕ ನೀತಿಯನ್ನು ಹೊಂದಿರುವುದು ಮಂಗಳೂರು ವಿಶ್ವವಿದ್ಯಾನಿಲಯದ ಹೆಮ್ಮೆ. ಇವೆರಡೂ ಸಂಸ್ಥೆಯ ಕಣ್ಣುಗಳಿದ್ದಂತೆ’ ಎಂದರು. “ಆಶೀರ್ವಚನ ನೀಡಿದ ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತಿ ಸ್ವಾಮೀಜಿ, “ಶಿಕ್ಷಣ ಸಂಸ್ಥೆಗಳು ಕಲೆ ಸಂಸ್ಕೃತಿಗೆ ಬೆಂಬಲ ನೀಡಿದರಷ್ಟೇ ಅದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬಹುದು. ಇದಕ್ಕಾಗಿ ಸಾಂಸ್ಕೃತಿಕ ನೀತಿ ರೂಪಿಸಿರುವ ಮಂಗಳೂರು ವಿಶ್ವವಿದ್ಯಾನಿಲಯದ ಇತರ ಸಂಸ್ಥೆಗಳಿಗೆ…
21 ಮಾರ್ಚ್ 2023, ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ವತಿಯಿಂದ ಮಂಗಳೂರು ವಿವಿ ಪ್ರಸಾರಾಂಗ ಪ್ರಕಟಿಸಿದ ಲೇಖಕ ಇಸ್ಮತ್ ಪಜೀರ್ ರಚಿಸಿದ ಬ್ಯಾರಿ ವಿಮರ್ಶಾ ಲೇಖನಗಳ ಸಂಕಲನ ‘ಪಾಲ’ ಕೃತಿ ಬಿಡುಗಡೆ ಕಾರ್ಯಕ್ರಮ ಶನಿವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ಸೋಮಣ್ಣ ಹೊಂಗಳ್ಳಿ ಬ್ಯಾರಿ ಸಾಹಿತ್ಯ ಸಮೃದ್ಧವಾಗಿ ಬೆಳೆಯಬೇಕಾದರೆ ಯುವ ಜನಾಂಗವನ್ನು ಸಾಹಿತ್ಯದ ಕಡೆ ಆಕರ್ಷಿಸಬೇಕು. ಕಮ್ಮಟಗಳನ್ನು ಆಯೋಜಿಸಿ, ಸೂಕ್ತ ತರಬೇತಿ ನೀಡುವುದರ ಮೂಲಕ ಉತ್ತಮ ಕೃತಿಗಳು ಬ್ಯಾರಿ ಸಾಹಿತ್ಯದಲ್ಲಿ ಹೊರಬರಬೇಕು. ಕಥೆ ಕಾದಂಬರಿಗಳಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳೇ ಕೃತಿಗಳಿಗೆ ಜೀವ ತುಂಬುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಸಾರಾಂಗದ ಉಪನಿರ್ದೇಶಕ ಡಾ ಧನಂಜಯ ಕುಂಬ್ಳೆ ‘ಕರಾವಳಿ ತೀರದಲ್ಲಿ ವೈಚಾರಿಕ ಬರಹಗಾರರ ಸಂಖ್ಯೆ ತೀರಾ ಕಡಿಮೆಯಿದೆ. ಇತ್ತೀಚಿನ ದಿನಗಳಲ್ಲಿ ಬ್ಯಾರಿ ಮುಸ್ಲಿಂ ಸಮುದಾಯದ ಬರಹಗಾರರು…
21 ಮಾರ್ಚ್ 2023, ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತ ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ ಹಾಗೂ ಶೇಷಾದ್ರಿಪುರ ಕನ್ನಡ ಸಂಘ ದಿನಾಂಕ 18-03-2023ರ ಶನಿವಾರದಂದು ಶೇಷಾದ್ರಿಪುರದಲ್ಲಿ “ಗಡಿನಾಡು ಪ್ರದೇಶ ಲೇಖಕಿಯರ ಸಮಾವೇಶವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಉದ್ಘಾಟಿಸಿ, “ಗಡಿನಾಡ ಪ್ರದೇಶಗಳ ಅಸ್ಮಿತೆ ಕಾಪಾಡುವ ನಿಟ್ಟಿನಲ್ಲಿ ಕೆಲ ಪ್ರಮುಖ ಕ್ರಮಗಳನ್ನು ಕೈಕೊಳ್ಳಲಾಗಿದೆ. ಗಡಿನಾಡು ಪ್ರದೇಶದಲ್ಲಿ ಮಹಿಳೆಯರ ಪಾತ್ರ ವಿಶೇಷವಾದದ್ದು. ಕನ್ನಡದ ಅಸ್ಮಿತೆ ರಕ್ಷಿಸಲು ಲೇಖಕಿಯರ ಶ್ರಮ ಅಪರವಾದದ್ದು. ಮಹಿಳೆಯರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರು ಮತ್ತು ದಾರ್ಶನಿಕರು. ಸರ್ಕಾರದ ಅಧಿಕಾರಿಗಳು ಗಡಿನಾಡ ಪ್ರದೇಶಕ್ಕೆ ಆಗಾಗ್ಗೆ ಭೇಟಿ ನೀಡಿದರೆ ಅಲ್ಲಿನ ವಾಸ್ತವ ಸ್ಥಿತಿ ಚೆನ್ನಾಗಿ ಗೊತ್ತಾಗಲಿದೆ. ಗಡಿ ಭಾಗದ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಿ, ಶಾಲಾ ಕೊಠಡಿಗಳು ಮತ್ತು ಗ್ರಂಥಾಲಯಗಳನ್ನು ಸೇರಿಸಿ ಇತರ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಅನೇಕ ಸಂಘ ಸಂಸ್ಥೆಗಳಿಗೆ ಅನುದಾನ ನೀಡುವ ಮೂಲಕ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಾಗುತ್ತದೆ” ಎಂದರು.…
21 ಮಾರ್ಚ್ 2023, ಮಂಗಳೂರು: ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋಜಿಸುತ್ತಿರುವ ಸಂಗೀತ ಪರಿಷತ್ತಿನ ಹೆಮ್ಮೆಯ ಸದಸ್ಯರು ಹಾಗೂ ಕಲಾಪೋಷಕರಾದ ಪ್ರಭಾಚಂದ್ರಮಯ್ಯರು ಈ ತಿಂಗಳಲ್ಲಿ ಅಪರೂಪ ಎಂಬಂತೆ “ಯಕ್ಷಗಾನ ಹಾಡುಗಳ” ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ 18-03-2023ರಂದು ಕದ್ರಿ ಕಂಬಳದ ಗೋಕುಲ ರೆಸಿಡೆನ್ಸಿಯಲ್ಲಿ ಆಯೋಜಿಸಿದರು. ಗೊತ್ತು ಗುರಿ ಇಲ್ಲದ ಧೀರ್ಘ ಆಲಾಪನೆಗಳು, ಪುನರಾವರ್ತನ, ಯಕ್ಷಗಾನ ಹಾಡುಗಳ ಹೆಸರಿನಲ್ಲಿ ಜಾನಪದ, ಸಿನೆಮಾ, ಭಾವಗೀತೆಗಳನ್ನು “ಗಾನ ವೈಭವ” ಎಂಬ ಹೆಸರಿನಲ್ಲಿ ಕೇಳಿ ಕೇಳಿ ರೋಸಿ ಹೋದ ಮನಸ್ಸಿಗೆ ಪುತ್ತಿಗೆ ಹೊಳ್ಳರ ಪರಂಪರೆಯ ಯಕ್ಷಗಾನಯ ಶೈಲಿಯ ಹಾಡುಗಳ ಸಿಂಚನ ಮನಸ್ಸಿಗೆ ಮುದ ನೀಡಿತು. ಹಾಡುಗಳ ನಡುವೆ ಆ ಹಾಡಿನ ತಾಳ ಹಾಗೂ ರಾಗದ ಔಚಿತ್ಯದ ಬಗ್ಗೆ ಕೊಟ್ಟ ವಿವರಣೆ ಶ್ರೋತ್ರುಗಳ ಜ್ಞಾನ ಭಂಡಾರವನ್ನು ಹೆಚ್ಚಿಸಿತು. ಹೊಳ್ಳರು, ಅಗರಿ, ಬಲಿಪ, ಕಡತೋಕರ ಶೈಲಿಯನ್ನು ಉದಾಹರಣೆ ಸಹಿತ ಹಾಡಿತೋರಿಸಿದರು. ಉಳಿತ್ತಾಯರು ಭಾಗವತರ ಮನೋಧರ್ಮಕ್ಕೆ ತಕ್ಕಂತೆ ಮದ್ದಳೆ ನುಡಿಸಿ ರಸಿಕರ ಮನಸ್ಸು ಗೆಲ್ಲುವ ಜತೆ, ಹಿತಮಿತವಾದ ಮಾತುಗಳ ಮೂಲಕ ಕಾರ್ಯಕ್ರಮದ ನಿರ್ವಹಣೆಯ…
21 ಮಾರ್ಚ್ 2023 ಮಂಗಳೂರು: ‘ಇಂದಿನ ಕಾಲಘಟ್ಟದಲ್ಲಿ ಸಂವೇದನೆಯನ್ನು ಕಳೆದುಕೊಳ್ಳುತ್ತಿದ್ದೇವೆ, ಮೌಲ್ಯಗಳು ನಶಿಸಿಹೋಗುತ್ತಿವೆ. ಶಿಕ್ಷಣವು ಯಾಂತ್ರಿಕವಾಗಿದೆ’ ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಕಳವಳ ವ್ಯಕ್ತಪಡಿಸಿದರು. ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಸಹಾಯಕ ಪ್ರಾಧ್ಯಾಪಕ ನಿಯಾಝ್ ಪಡೀಲ್ ರಚಿಸಿದ ‘ಯತೀಮ್’ ಕನ್ನಡ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಹಿಸುವ ಗುಣ ಮರೆಯಾಗಿ ಮನೋಸ್ಥೈರ್ಯ ಕುಸಿಯುತ್ತಿರುವ ಇಂದಿನ ಸನ್ನಿವೇಶದಲ್ಲಿ ನಾವು ಪುಸ್ತಕದ ಪುಟ ತಿರುಗಿಸಿದರೆ ಸಾಲದು. ನಮ್ಮ ಅಂತರಂಗದ ಕಟ್ಟು ಬಿಚ್ಚಿ ಒಳಗಿನ ಕತ್ತಲೆಯನ್ನು ಓಡಿಸಬೇಕು. ಯಾಂತ್ರಿಕತೆಯಿಂದ ಹೊರಬರುವ ಪ್ರಯತ್ನ ಮಾಡಬೇಕು’ ಎಂದರು. ‘ಕೇವಲ ‘ಯತೀಮ್’ (ಅನಾಥ) ಮಕ್ಕಳಲ್ಲಿ ಮಾತ್ರ ಅನಾಥಪ್ರಜ್ಞೆ ಇರುವುದಲ್ಲ. ಅದು ಜಗತ್ತಿನ ಪ್ರತಿಯೊಬ್ಬರನ್ನೂ ಒಂದಿಲ್ಲ ಒಂದು ಹಂತದಲ್ಲಿ ಕಾಡುತ್ತದೆ. ಅದನ್ನು ಮೆಟ್ಟಿನಿಂತು ಮನುಷ್ಯರಾಗಲು ಯತ್ನಿಸಬೇಕು’ ಎಂದರು. ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕರ್ ಸಿದ್ದೀಕ್ ‘ಯತೀಮ್ ‘ ಕಾದಂಬರಿಯನ್ನು ಇಲ್ಲಿ ಬಿಡುಗಡೆಗೊಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ರಾಜ್ ಕುರ್ತ್ತಾ…
20 ಮಾರ್ಚ್ 2023, ಕಾಸರಗೋಡು: ಕಾಸರಗೋಡಿನ ಪೂರ್ವಸೂರಿಗಳ ಪುಸ್ತಕಗಳನ್ನು ಮರು ಮುದ್ರಣ ಮಾಡಬೇಕೆಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಲಾಕುಂಚದ ವತಿಯಿಂದ ಬೇಡಿಕೆ ಇಡಲಾಯಿತು. ಈ ನಿಟ್ಟಿನಲ್ಲಿ ದಿನಾಂಕ 18-03-2023 ಶನಿವಾರದಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜು ಅಡಿಟೋರಿಯಂನಲ್ಲಿ ಗಡಿ ಪ್ರದೇಶದ ಲೇಖಕಿಯರ ಸಮಾವೇಶದ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕರು, ಗಮಕಿಗಳು ಮತ್ತು ಭಾಷಣಕಾರರಾದ ಶ್ರೀಮತಿ ಜಯಲಕ್ಷ್ಮಿ ಕಾರಂತ ಇವರು ಮನವಿ ಸಲ್ಲಿಸಿದರು.
21 ಮಾರ್ಚ್ 2023, ಪುತ್ತೂರು: ಪುತ್ತೂರು ನಗರದ ಬನ್ನೂರು ಶ್ರೀ ಶಿವಪಾರ್ವತಿ ಮಂದಿರದ ಆಶ್ರಯದಲ್ಲಿ, ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಇದರ ತಿಂಗಳ ಸರಣಿ ತಾಳಮದ್ದಳೆ “ಸುದರ್ಶನ ವಿಜಯ” ದಿನಾಂಕ 20.3.2023ರಂದು ಸಂಜೆ ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಚಂದ್ರಶೇಖರ್ ಹೆಗ್ಡೆ ನೆಲ್ಯಾಡಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಅಚ್ಯುತ ಪಾಂಗಣ್ಣಾಯ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ ಮತ್ತು ದುಗ್ಗಪ್ಪ ಯನ್. (ವಿಷ್ಣು) ಸಂಜೀವ ಪಾರೆಂಕಿ (ಲಕ್ಷ್ಮೀ) ಗುಂಡ್ಯಡ್ಕ ಈಶ್ವರ ಭಟ್ (ಶತ್ರುಪ್ರಸೂದನ) ದಿವಾಕರ ಆಚಾರ್ಯ ಗೇರುಕಟ್ಟೆ (ಸುದರ್ಶನ) ಚಂದ್ರಶೇಖರ್ ಭಟ್ ಬಡೆಕ್ಕಿಲ (ದೇವೇಂದ್ರ) ಸಹಕರಿಸಿದರು. ಟಿ.ರಂಗನಾಥ ರಾವ್ ಸ್ವಾಗತಿಸಿ, ರಾಜಗೋಪಾಲ್ ಭಟ್ ಬನ್ನೂರು ವಂದಿಸಿದರು. ಮಂದಿರದ ಅಧ್ಯಕ್ಷ ವಿಶ್ವನಾಥ ಗೌಡ. ಮೋಹನ್ ಜೈನ್, ಚಂದ್ರಶೇಖರ್ ಮೊದಲಾದವರು ಸಹಕರಿಸಿದರು. ಶೇಖರ್ ಬಿರ್ವ ಬನ್ನೂರು ಪ್ರಾಯೋಜಿಸಿದರು.
21 ಮಾರ್ಚ್ 2023, ಮಂಗಳೂರು: ಶ್ರೀ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಸಮಾರಂಭದ ಸಮಾರೋಪದ ಉದ್ಘಾಟನೆ ಶ್ರೀ ಮಹಾಮಾಯಿ ದೇವಸ್ಥಾನದ ಆವರಣದಲ್ಲಿ ದಿನಾಂಕ 19-03-2023 ಆದಿತ್ಯವಾರ ಬೆಳಿಗ್ಗೆ 9 ಘಂಟೆಗೆ ಜರಗಿತು.ಶ್ರೀ ಮಹಮ್ಮಾಯಿ ದೇವಸ್ಥಾನದ ಅರ್ಚಕ ವೃಂದದಿಂದ ದೀಪ ಬೆಳಗಿಸಲಾಯಿತು.ಸಂಘದ ಕಾರ್ಯಾಧಕ್ಷ ನಾಗೇಶ್ ಪ್ರಭುಗಳ ಅಧ್ಯಕ್ಷತೆಯಲ್ಲಿ ಮಕ್ಕಳ, ಮಹಿಳೆ ಮತ್ತು ಪುರುಷರ 3 ವಿಭಾಗಗಳಲ್ಲಿ ಪೀಠಿಕಾ ಸ್ಪರ್ಧೆಯ ಉದ್ಘಾಟನೆಯನ್ನು ಇಸ್ಕಾನ್ ಮಂಗಳೂರು ವಿಭಾಗದ ಕಾರ್ಯದರ್ಶಿ ಸನಂದನ ದಾಸ ನೆರವೇರಿಸಿದರು.ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲೆಯ ಔನ್ನತ್ಯವನ್ನು ವಿವರಿಸುತ್ತ ಈ ಕಲೆಯತ್ತ ಎಳೆಯ ಮಕ್ಕಳು ಇನ್ನಷ್ಟು ಆಕರ್ಷಿತಾರಾಗಬೇಕೆಂದು ಕರೆ ಇತ್ತರು.ಯಾವ ರೀತಿ ಔಷದಗಳಿಗೆ ಸಿಹಿಯ ಲೇಪನ ಮಾಡಿದಾಗ ಸೇವಿಸುವುದಕ್ಕೆಆಹ್ಲಾದವಾಗುತ್ತದೋ, ಹಾಗೆಯೇ ಯಕ್ಷಗಾನವು ಮನರಂಜನೆಯೊಂದಿಗೆ ಮಧುರವಾದ ಸಂಗೀತ, ಪಾಂಡಿತ್ಯಪೂರ್ಣ ಪುರಾಣ ಜ್ಞಾನ ನೀಡುವ ಕಲೆ. ಈ ಕಲೆಯ ಪ್ರಚಾರ ಮಾಡುತ್ತಿರುವ ಇಂತಹ ಸಂಘಗಳು ಇನ್ನಷ್ಟು ಕಾಲ ಉಳಿಯಬೇಕೆಂದು ಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ನಾಗೇಶ್ ಪ್ರಭು ಯಕ್ಷಗಾನ ಜ್ಞಾನ ಪ್ರಸಾರಕ್ಕೆ ಅತ್ಯಂತ ಸಹಕಾರಿ ಎಂದರು.…
21 March 2023, Mangaluru: Institute of Aviation Studies, Srinivas University, conducted Bottle Painting Competition on 11th March 2023 for the students of B.B.A. Aviation Studies and M.B.A. Aviation Studies. Painting stimulates creativity, increases emotional intelligence, and also reduces stress. With this motive in mind and also to develop the concept of reusing and recycling materials the competition was set among the students. The participants were required to reuse and recycle the waste bottles and make a new masterpiece. The students used all their potential and skills to make a stunning piece of art. The students diligently took part with a…