Subscribe to Updates
Get the latest creative news from FooBar about art, design and business.
Author: roovari
ಹೆಬ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೆಬ್ರಿ ತಾಲೂಕು ಘಟಕ ಇದರ ವತಿಯಿಂದ ಸ್ವಾತಂತ್ರ್ಯ ಸೇನಾನಿ ಎಂ.ಡಿ. ಅಧಿಕಾರಿ ವೇದಿಕೆಯಲ್ಲಿ ‘ಹೆಬ್ರಿ ತಾಲೂಕು ಐದನೆಯ ಕನ್ನಡ ಸಾಹಿತ್ಯ ಸಮ್ಮೇಳನ -2025’ವನ್ನು ದಿನಾಂಕ 16 ಫೆಬ್ರವರಿ 2025ರಂದು ಶಿವಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 7-30 ಗಂಟೆಗೆ ದೇವಿದಯಾ ಕಲಾ ತಂಡದ ಶ್ರೀಮತಿ ಶೈಲಜಾ ಶಿವಪುರ ಮತ್ತು ತಂಡದವರಿಂದ ಕನ್ನಡ ಭಾವಗೀತೆಗಳ ಗಾಯನ ಪ್ರಸ್ತುತಗೊಳ್ಳಲಿದೆ. ಬೆಳಗ್ಗೆ ರಾಷ್ಟ್ರ ಮತ್ತು ಪರಿಷತ್ತಿನ ಧ್ವಜಾರೋಹಣ ಹಾಗೂ ಶಿವಪುರ ಗ್ರಾಮ ಪಂಚಾಯತಿಯ ವಠಾರದಿಂದ ಮೆರವಣಿಗೆ ಪ್ರಾರಂಭವಾಗಲಿದೆ. ಶ್ರೀಮತಿ ಪಿ. ಜಯಲಕ್ಷ್ಮೀ ಅಭಯ ಕುಮಾರ್ ಇವರು ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಮಾನ್ಯ ಸಚಿವರಾದ ಸುನಿಲ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಪುಸ್ತಕ ಮಳಿಗೆ ಉದ್ಘಾಟನೆ ಮತ್ತು ಮಂಜುನಾಥ ಕೆ. ಶಿವಪುರ ಇವರ ‘ಪ್ರಬುದ್ಧರಾಗೋಣ ಬನ್ನಿ’ ಹಾಗೂ ವಿಜಯಲಕ್ಷ್ಮೀ ಆರ್. ಕಾಮತ್ ಇವರ ‘ಜೀವನ ಸಂಗೀತ’ ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ.…
ಬೆಂಗಳೂರು: ‘ಪದ’ ಸಾಂಸ್ಕೃತಿಕ ಸಂಘಟನೆ ಏರ್ಪಡಿಸಿದ್ದ ‘ಡಾ. ಬಂಜಗೆರೆ ಜಯಪ್ರಕಾಶ್ ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ’ ಎಂಬ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವು ದಿನಾಂಕ 11 ಫೆಬ್ರವರಿ 2025ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ ‘ಹಿಂದಿನ ತಲೆಮಾರು ಮತ್ತು ಹೊಸ ತಲೆಮಾರುಗಳ ಪರಸ್ಪರ ಭೇಟಿಯಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಚಲನಶೀಲತೆ ಬರುತ್ತದೆ. ಬಂಜಗೆರೆ ಅವರು ಹೋರಾಟ ಮತ್ತು ಸಾಹಿತ್ಯವನ್ನು ಒಂದುಗೂಡಿಸಿದ ವಿಧಾನ ಹಾಗೂ ಎರಡರಲ್ಲೂ ಸಮಚಿತ್ತವನ್ನು ಉಳಿಸಿಕೊಂಡಿರುವುದು ವಿಶಿಷ್ಟವಾದ ಸಂಗತಿ” ಎಂದು ಹೇಳಿದರು. ಸಾಹಿತಿ ಕೆ. ಮರುಳಸಿದ್ದಪ್ಪ ಮಾತ್ರನಾಡಿ “ಬಂಜಗೆರೆ 90ರ ದಶಕದಲ್ಲಿ ಕರ್ನಾಟಕ ಪ್ರತ್ಯೇಕ ರಾಷ್ಟ್ರ ಎಂದು ಗೋಡೆ ಬರಹ ಚಳವಳಿ ಮಾಡಿದ್ದರು. ಆಗ ಏನು ಆಗಲಿಲ್ಲ. ಅವರ ‘ಆನುದೇವಾ ಹೊರಗಣವನು’ ಭಾರಿ ಚರ್ಚೆಗೆ ಕಾರಣವಾಯಿತು ಮತ್ತು ಪ್ರತಿರೋಧ ಸಹ ಎದುರಿಸಿತ್ತು. ಆದರೆ ಅವರ ಮೇಲೆ ಹಲ್ಲೆ ನಡೆಯಲಿಲ್ಲ. ಈಗ ಅಂತಹ ಮಾತನಾಡಲು ಧೈರ್ಯ ಮಾಡು…
ಬೆಂಗಳೂರು : ತೊ. ನಂಜುಂಡಸ್ವಾಮಿ ಗೆಳೆಯರ ಬಳಗ ಇದರ ವತಿಯಿಂದ ರಂಗಕರ್ಮಿ ತೊ. ನಂಜುಂಡಸ್ವಾಮಿ ನೆನೆಪಿನ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 10 ಫೆಬ್ರವರಿ 2025ರಂದು ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆಯಿತು. ರಂಗ ಸಂಘಟಕರು, ರಂಗ ನಿರ್ದೇಶಕರು ಸಮಾಜ ಸೇವಕರಾದ ಶ್ರೀ ಪ್ರಭು ಗುರಪ್ಪನವರ ಇವರಿಗೆ 2025ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ ಇವರು ಮಾತನಾಡಿ “ರಂಗಪ್ರೀತಿ ಇದ್ದರೆ ಎಂತಹ ಸಾಮಾನ್ಯ ಗ್ರಾಮವೂ ಸಹಾ ವಿಶ್ವದ ಗಮನ ಸೆಳೆಯಲು ಸಾಧ್ಯ. ಶೇಷಗಿರಿ ಅಂತಹ ಒಂದು ಸಾಧಾರಣ ಗ್ರಾಮ ಇಂದು ರಂಗ ಗ್ರಾಮವನ್ನಾಗಿ ಅರಳಿ ಹೆಸರಾಗಿದೆ. ಇಂತಹ ರಂಗಪ್ರೀತಿ ಪ್ರತಿಯೊಬ್ಬರಲ್ಲಿಯೂ ಇರಲಿ. ಒಬ್ಬ ಪೋಸ್ಟ್ ಮಾಸ್ಟರ್ ಆಗಿದ್ದ ಪ್ರಭು ಗುರಪ್ಪನವರ ಒಳಗೆ ಅಸಾಧಾರಣ ರಂಗ ಪ್ರೇಮಿಯಿದ್ದ. ಹಾಗಾಗಿಯೇ ಶೇಷಗಿರಿ ಇಂದು ರಂಗಭೂಮಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ರಂಗಭೂಮಿಯ ಸೆಳೆತ ವಿಶಿಷ್ಟವಾದದ್ದು. ಶೇಷಗಿರಿಯಲ್ಲಿ ಸಾಧಾರಣ…
ಕೋಣಾಜೆ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಇದರ ವತಿಯಿಂದ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆಯುವ 27ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ದಿನಾಂಕ 12 ಫೆಬ್ರವರಿ 2025ರಂದು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಬಿಡುಗಡೆಗೊಳಿಸಿಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು.ಟಿ. ಖಾದರ್ ಮಾತನಾಡಿ “ಸಾಹಿತ್ಯ ಸಮ್ಮೇಳನಗಳು, ಸಾಹಿತ್ಯ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಊರಿನ ಜನರಲ್ಲಿ ಕನ್ನಡಾಭಿಮಾನವನ್ನು ಹೆಚ್ಚಿಸಬೇಕು. ಜಿಲ್ಲೆಯ ಶಾಲಾ ವಿದ್ಯಾರ್ಥಿಗಳು, ಸಾಹಿತಿಗಳು, ಸಾರ್ವಜನಿಕರು ಸೇರಿದಂತೆ ಎಲ್ಲರ ಒಗ್ಗೂಡಿಕೆ ಮತ್ತು ಪಾಲ್ಗೊಳ್ಳುವಿಕೆಯ ಮೂಲಕ ಯಶಸ್ವಿಯಾಗಿ ಈ ಸಮ್ಮೇಳನ ನಡೆಯಬೇಕಿದ್ದು, ಈ ನಿಟ್ಟಿನಲ್ಲಿ ಸಮಿತಿಯ ಸಂಘಟಕರು, ಪದಾಧಿಕಾರಿಗಳ ಪಾತ್ರವು ಅತ್ಯಂತ ಮಹತ್ತರವಾದುದು. ಉಳ್ಳಾಲದಲ್ಲಿ ನಡೆಯುತ್ತಿರುವ ಜಿಲ್ಲಾ ಸಮ್ಮೇಳನವನ್ನು ರಾಜ್ಯಕ್ಕೆ ಮಾದರಿಯಾಗುವಂತೆ ಸಂಘಟಿಸಬೇಕು” ಎಂದು ಹೇಳಿದರು. ಮಂಗಳೂರು ವಿ.ವಿ. ಕುಲಸಚಿವರಾದ ರಾಜು ಮೊಗವೀರ ಕೆ., ಮೂಡಾ ಮಾಜಿ…
ಕಾರವಾರ : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಸಾಕ್ಷಿ ಪ್ರಜ್ಞೆಯಂತಿದ್ದ ಜಾನಪದ ಹಾಡುಗಳನ್ನು ಹಾಡುವ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿ ಗಳಿಸಿದ್ದ ಅಂಕೋಲಾ ತಾಲೂಕು ಬಡಗೇರಿಯ ಸುಕ್ರಿ ಬೊಮ್ಮ ಗೌಡ ಇವರು ದಿನಾಂಕ 13 ಫೆಬ್ರವರಿ 2025ರಂದು ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ ಸುಕ್ರಿ ಬೊಮ್ಮಗೌಡ ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಇಂದು ಮುಂಜಾನೆ 4 ಗಂಟೆ ಸಮಯಕ್ಕೆ ಅಂಕೋಲದ ಬಡಿಗೇರಿಯ ಅವರ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಹುಟ್ಟಿದ ಇವರು ವಿದ್ಯಾಭ್ಯಾಸ ಮಾಡದಿದ್ದರೂ ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಹೊಂದಿದ್ದಾರೆ. ಸುಮಾರು ಐದು ಸಾವಿರ ಹಾಲಕ್ಕಿ ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡುತ್ತಿದ್ದರು. ಇವುಗಳಲ್ಲಿ 100 ವರ್ಷಗಳಷ್ಟು ಹಿಂದಿನ ಹಾಡುಗಳೂ ಇವೆ. ಇವರನ್ನು ‘ಹಾಲಕ್ಕಿ ಹಾಡುಗಳ ಕೋಗಿಲೆ’ ಎಂದು…
ತುಮಕೂರು ಜಿಲ್ಲೆಯ ಎಡೆಯೂರು ಸಮೀಪದ ಜಲಧಿಗೆರೆ ಶ್ರೀನಿವಾಸ ಜಿ. ಕಪ್ಪಣ್ಣ ಇವರ ಹುಟ್ಟೂರು. ಬಡತನದ ಬೇಗೆಯಿಂದಾಗಿ ತಂದೆ ಗಿರಿಯಪ್ಪ ಮತ್ತು ತಾಯಿ ಜಯಮ್ಮರೊಂದಿಗೆ ಬಾಲ್ಯದಲ್ಲಿಯೇ ಬೆಂಗಳೂರಿನತ್ತ ಮುಖ ಮಾಡಿದವರು. ತಂದೆ ಗಿರಿಯಪ್ಪ ಕಾರ್ಮಿಕ ಇಲಾಖೆಯ ನೌಕರರಾಗಿದ್ದರೆ, ತಾಯಿ ಜಯಮ್ಮ ಆಸ್ಪತ್ರೆಯಲ್ಲಿ ಆಯಾ ಕೆಲಸ ಮಾಡುತ್ತಿದ್ದರು. 13 ಫೆಬ್ರವರಿ 1948ರಲ್ಲಿ ಜನಿಸಿದ ಕಪ್ಪಣ್ಣನವರು ಮೂವರು ಸಹೋದರರು ಹಾಗೂ ಓರ್ವ ಸಹೋದರಿಯರೊಂದಿಗೆ ಪ್ರೀತಿಯನ್ನು ಹಂಚಿಕೊಂಡು ಬೆಳೆದವರು. 7ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದು ತೇರ್ಗಡೆಯಾದ ಇವರು ಆರ್ಥಿಕವಾಗಿ ಕಡುಬಡವರಾಗಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದರು. ಕಾಲೇಜು ಜೀವನದಲ್ಲಿಯೇ ಪದ್ಮಭೂಷಣ ಎಚ್. ನರಸಿಂಹಯ್ಯನವರ ಪ್ರಭಾವಕ್ಕೆ ಒಳಗಾಗಿ ಅವರ ಮಾರ್ಗದರ್ಶನದಲ್ಲಿ ಬೆಳಕಿನ ರಂಗ ವಿನ್ಯಾಸದೊಂದಿಗೆ ನಾಟಕದ ಜವಾಬ್ದಾರಿಯನ್ನು ನಿರ್ವಹಿಸಿದರು. ಮೇಕಪ್ ನಾಣಿ ಎಂದೇ ಪ್ರಸಿದ್ಧರಾದ ಸೌಂದರ್ಯವರ್ಧಕ ಕಲಾವಿದ ಹಾಗೂ ಚಲನಚಿತ್ರ ನಟರಾದ ಬೆಳವಾಡಿ ನಂಜುಂಡಯ್ಯ ನಾರಾಯಣ ಇವರ ಮಾರ್ಗದರ್ಶನವು ದೊರೆಯಿತು. 1964ರಲ್ಲಿ ನ್ಯಾಷನಲ್ ಕಾಲೇಜಿನ ಹಿಸ್ಟ್ರಿಯಾನಿಕ್ ಕ್ಲಬ್ ಮೂಲಕ ನಾಟಕಗಳಿಗೆ ರಂಗ ಸಜ್ಜಿಕೆ, ಬೆಳಕು, ವಿನ್ಯಾಸ ಮುಂತಾದವುಗಳಿಗೆ ವಿಶೇಷ ಶ್ರಮಪಡುವ…
ಬಂಟ್ವಾಳ : ಶ್ರೀನಿವಾಸ ಯುನಿವರ್ಸಿಟಿ ಮತ್ತು ಶ್ರೀನಿವಾಸ ಸಂಸ್ಥೆ ಮಂಗಳೂರು ಇವರು ಎ. ಶ್ಯಾಮರಾವ್ ಸ್ಮರಣಾರ್ಥ ಅತ್ಯುತ್ತಮ ಶಿಕ್ಷಕರಿಗೆ ನೀಡುವ ನೀಡುವ ‘ಸಾಧನಾ ಶ್ರೀ -2025’ ಪ್ರಶಸ್ತಿಗೆ ಪಾಣೆಮಂಗಳೂರು ಪ್ರೌಢಶಾಲೆಯ ಶಿಕ್ಷಕಿ ಸುಧಾ ನಾಗೇಶ್ ಆಯ್ಕೆಯಾಗಿದ್ದಾರೆ. ಕಳೆದ 35 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತಿಯಾಗಿಯೂ ಗುರುತಿಸಲ್ಪಟ್ಟಿದ್ದಾರೆ. ‘ಮೂಡಲ ಮನೆ’,’ ಹೃದಯರಾಗ’, ‘ಹೀಗೆ ಸುಮ್ಮನೆ’, ‘ಹನಿ, ಮಿನಿ ಎನ್ ಸೈಕ್ಲೋಪೀಡಿಯ ಫಾರ್ ಸ್ಟೂಡೆಂಟ್ಸ್’ ,’ ಜೀನಿಯಸ್’ ಮೊದಲಾದ ಎಂಟು ಸಾಹಿತ್ಯ ಕೃತಿಗಳನ್ನು ಇವರು ಪ್ರಕಟಿಸಿದ್ದಾರೆ. ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆಯಾಗಿರುವ ಇವರು ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದು, ದುಬೈಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆಯಾಗಿದ್ದು , ಇವರ “ಬೇಸಿಗೆಯ ತಾಪಕ್ಕೆ ಬಿಸಿಯೇರುತ್ತಿದೆ ಭೂಮಿ” ಲೇಖನವು ಕೇರಳ ರಾಜ್ಯದ 6ನೇ ತರಗತಿಯ ಪಠ್ಯಪುಸ್ತಕವಾಗಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 14 ಫೆಬ್ರವರಿ 2025ರಂದು ಶ್ರೀನಿವಾಸ ಕಾಲೇಜು ಮುಕ್ಕದಲ್ಲಿ ನಡೆಯಲಿದೆ.
ನಾನು ರಾಮು. ತಂದೆ ತಾಯಿ ಮತ್ತು ನಾನೊಬ್ಬನೇ ಇರುವ ಸಣ್ಣ ಕುಟುಂಬ ನನ್ನದು. ಅಪ್ಪ ದಿನಕೂಲಿ, ಅಮ್ಮ ಗೃಹಿಣಿ. ಪ್ರತೀ ದಿನ ಸಂಜೆ ಮನೆಗೆ ಬರುವಾಗ ಕುಡಿದುಕೊಂಡು ಬರುವ ಅಭ್ಯಾಸ ಅಪ್ಪನಿಗೆ ಇತ್ತು. ಎಷ್ಟೇ ಕುಡಿದರೂ ನನಗಾಗಲಿ ಅಮ್ಮನಿಗಾಗಲಿ ಒಂದು ದಿನವೂ ತೊಂದರೆ ಕೊಟ್ಟವರಲ್ಲ. ನನ್ನ ಬೇಕುಗಳಿಗೆ ಬ್ರೇಕ್ ಹಾಕದೆ ಪ್ರೇಮದಿಂದ ಅಕ್ಕರೆ ತೋರುತ್ತಿದ್ದ ನನ್ನ ತಂದೆಯೇ ನನ್ನ ಮೊದಲ ಹೀರೋ. ತಂದೆಯೇ ನಿಲ್ಲಿಸಿ ಕಟ್ಟಿಸಿದ ಹಂಚಿನ ಅರಮನೆ ನನ್ನದು. ಒಳಗೆ ಗೋಡೆಗೆ ಬಣ್ಣ ಹಾಕಿಸುವ ಬದಲು ಮಗುವಿನಿಂದ ಈತನಕದ ನನ್ನ ಎಲ್ಲ ಭಾವಚಿತ್ರಗಳನ್ನು ಗೋಡೆಯ ಮೇಲೆ ಅಂಟಿಸಿದ್ದರು ನನ್ನಪ್ಪ. ಪ್ರತಿ ಭಾವಚಿತ್ರಕ್ಕೂ ಒಂದೊಂದು ಕಥೆ ಇರುತ್ತಿತ್ತು. ಆ ಎಲ್ಲಾ ಕಥೆಗಳಲ್ಲೂ ನಾನೇ ಹೀರೋ. ಹಾಗಾಗಿ ನನಗೆ ಮನೆಯಲ್ಲಿ ಮೊಬೈಲ್ ಇಲ್ಲ, ಟಿವಿ ಇಲ್ಲ, ರೇಡಿಯೋ ಇಲ್ಲ ನಿಮ್ಮ ಬೇಸರ ಎಂಬುದು ನನ್ನನ್ನು ಕಾಡಿರಲಿಲ್ಲ. ದಿನಾ ಸಂಜೆ ಮನೆಗೆ ಬರುವ ತಂದೆಯನ್ನು ಅಪರೂಪಕ್ಕೆ ಬರುವ ನೆಂಟರಂತೆ ಸ್ವಾಗತಿಸಲು ಮನೆಯ ಎದುರಿಗಿನ ಮುರಿದ…
ಶಿವಮೊಗ್ಗ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಂಗಾಯಣ ಶಿವಮೊಗ್ಗ ಇವರ ಜಂಟಿ ಆಶ್ರಯದಲ್ಲಿ ಮೈಸೂರು ರಂಗಾಯಣ ಪ್ರಸ್ತುತ ಪಡಿಸುವ ‘ಮೈ ಫ್ಯಾಮಿಲಿ’ ಕನ್ನಡ ನಾಟಕ ಪ್ರದರ್ಶನವನ್ನು ದಿನಾಂಕ 13 ಫೆಬ್ರವರಿ 2025ರಂದು ಸಂಜೆ 6-30 ಗಂಟೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಸತೀಶ್ ತಿಪಟೂರು ರಚಿಸಿರುವ ಈ ಕನ್ನಡ ನಾಟಕಕ್ಕೆ ಗಣೇಶ್ ಮಂದಾರ್ತಿ ಇವರು ಸಂಗೀತ, ವಿನ್ಯಾಸ ಮತ್ತು ನಿರ್ದೇಶನ ನೀಡಿರುತ್ತಾರೆ.
ಮೈಸೂರು : ಚೇತನ ಫೌಂಡೇಶನ್ ಕರ್ನಾಟಕ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ‘ಮೈಸೂರು ನುಡಿ ಸಡಗರ’ ಕಾರ್ಯಕ್ರಮವನ್ನು ದಿನಾಂಕ 16 ಫೆಬ್ರವರಿ 2025ರಂದು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಆಯೋಜಿಸಲಾಗಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ, ಕಲೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಚಿಂತನ-ಮಂಥನ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 9986821096 ಸಂಖ್ಯೆಯನ್ನು ಸಂಪರ್ಕಿಸಿರಿ.