Author: roovari

ಮೈಸೂರು : ಜಾನಪದ ವಿದ್ವಾಂಸರಾದ ಡಾ. ಜಯಲಕ್ಷ್ಮೀ ಸೀತಾಪುರ ದಿನಾಂಕ 16-06-2024ರ ಭಾನುವಾರದಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಕಳೆದ ವಾರ ಅವರು ಮಂಡ್ಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದವರಾದ ಡಾ.ಜಯಲಕ್ಷ್ಮಿ, ಮೈಸೂರು ವಿ. ವಿ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಜಯಲಕ್ಷ್ಮಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಜೀಶಂಪ ಪ್ರಶಸ್ತಿ, ಜನಪದಲೋಕ ಪ್ರಶಸ್ತಿಗಳು ಲಭಿಸಿವೆ. ಅವರ ತಾಯಿ ಬೋರಮ್ಮ ನಿಧನ ಹೊಂದಿದ ಸಂದರ್ಭದಲ್ಲಿ ಇವರೇ ಕೇಶಮುಂಡನೆ ಮಾಡಿಸಿಕೊಂಡು ಅಂತ್ಯ ಸಂಸ್ಕಾರ ಮಾಡಿದ್ದರು.

Read More

ಹೊಸ ದೆಹಲಿ : ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡಮಾಡುವ 2024ನೇ ಸಾಲಿನ ಸಾಲಿನ ‘ಯುವ ಪುರಸ್ಕಾರ’ ಪ್ರಕತಗೊಂಡಿದ್ದು, ವೈಶಾಲಿಯ ಆತ್ಮಕಥೆ ‘ಹೋಮ್‌ಲೆಸ್ ಗೋವಿಂಗ್ ಅಪ್ ಲೆಸ್ಬಿಯನ್ ಅಂಡ್ ಡೈಸೆಕ್ಸಿಕ್ ಇನ್ ಇಂಡಿಯಾ’ ಕೃತಿಗೆ ಮತ್ತು ಗೌರವ್ ಪಾಂಡೆ ಅವರ ಕವನ ಸಂಗ್ರಹ ‘ಸ್ಮೃತಿಯೋಂ ಕೆ ಬೀಚ್ ಗಿರೀ ಹೈ ಪೃಥ್ವಿ’ ಕವನ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ. ಸುಮಾರು 10 ಕಾವ್ಯಗಳು, ಕಿರುಕಥೆಗಳ ಏಳು ಸಂಗ್ರಹಗಳು, ಎರಡು ಲೇಖನ ಸಂಗ್ರಹ ಮತ್ತು ಒಂದು ಗಝಲ್ ಪುಸ್ತಕ ಸಹಿತ ಹಲವು ಕೃತಿಗಳು ಯುವ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಕನ್ನಡ ಬರಹಗಾರ್ತಿ ಶೃತಿ ಬಿ. ಆರ್., ಅಸ್ಸಾಮ್‌ನ ನಾರಾಯಣಜ್ಯೋತಿ, ಬಂಗಾಳದ ಸುತಪ ಚಕ್ರವರ್ತಿ, ರಾಣಿ ಬರೋ(ಬೋಡೋ), ರಿಂಕು ರಾಥೋಡ್ (ಗುಜರಾತ್), ಶ್ಯಾಮಕೃಷ್ಣನ್ ಆರ್.(ಮಲಯಾಳಂ), ಲೋಕೇಶ್‌ ರಘುರಾಮನ್ (ತಮಿಳ್), ರಮೇಶ್ ಕಾರ್ತಿಕ್ ನಾಯಕ್ (ತೆಲುಗು), ದೇವಿದಾಸ್ ಸೌದಾಗರ್ (ಮರಾಠಿ), ಸಂಜಯಕುಮಾರ್ ಪಾಂಡಾ(ಒಡಿಯಾ), ರಣಧೀರ್ (ಪಂಜಾಬಿ), ಸೋನಾಲಿ ಸುತರ್ (ರಾಜಸ್ಥಾನಿ), ಜಾವೇದ್ ಅಂಬರ್ ಮಿಸ್ಬಹಿ(ಉರ್ದು) ವೈಖಂ ಚಿಂಗ್ ಖೈಗನ್ಬಾ (ಮಣಿಪುರಿ)…

Read More

ಮಡಿಕೇರಿ : ಸಮರ್ಥ ಕನ್ನಡಿಗರು ಸಂಸ್ಥೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ‘ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ’ ಕಾರ್ಯಕ್ರಮದಡಿ ಮಕ್ಕಳಿಗೆ ವೈಯಕ್ತಿಕ ವಿಭಾಗದಲ್ಲಿ ನೃತ್ಯ ಹಾಗೂ ಕಥೆ ಹೇಳುವ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ತಿಳಿಸಿದ್ದಾರೆ. ಇದು ವೈಯಕ್ತಿಕ ಸ್ಪರ್ಧೆಯಾಗಿದ್ದು, ‘ಕಥೆ ಹೇಳುವ ಸ್ಪರ್ಧೆ’ಗೆ 3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದು ಹಾಗೂ ಮೂರು ನಿಮಿಷದ ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು. ಕಥೆ ಕನ್ನಡದಲ್ಲಿಯೇ ಇರಬೇಕು. ವಿಡಿಯೋ ವಾಟ್ಸಪ್ ಮಾಡಬೇಕಾದ ಸಂಖ್ಯೆ – ಕಥೆ ಹೇಳುವ ಸ್ಪರ್ಧೆ : 9353748962 ರಜನಿ ನವೀನ್. ‘ನೃತ್ಯ ಸ್ಪರ್ಧೆ’ಗೆ 7 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬಹುದು. ಕನ್ನಡ ಭಕ್ತಿ ಗೀತೆಗಳ ಮೂರು ನಿಮಿಷದ ಅವಧಿಯಲ್ಲಿ ನೃತ್ಯದ ವಿಡಿಯೋ ಮಾಡಿ ನೃತ್ಯ ಸ್ಪರ್ಧೆ : 9632870102 ಅಖಿಲಾ ಭಟ್ ಹಾಗೂ ಭರತನಾಟ್ಯ : 9480783156 ಉಮಾ ಇವರಿಗೆ ಕಳುಹಿಸತಕ್ಕದ್ದು.

Read More

ಧರ್ಮಸ್ಥಳ : ಮಂಗಳೂರಿನ ಕದ್ರಿ ದೇವಸ್ಥಾನ ರಸ್ತೆಯಲ್ಲಿರುವ ನೃತ್ಯ ಭಾರತಿ (ರಿ.) ಪ್ರಸ್ತುತ ಪಡಿಸುವ ವಿದುಷಿ ಕುಮಾರಿ ಚೈತ್ರ ಭಟ್ ಇವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 22-06-2024ರಂದು ಸಂಜೆ 6-00 ಗಂಟೆಗೆ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಲ್ಯದ ನಾಟ್ಯನಿಕೇತನದ ಶಾಂತಲಾ ಪ್ರಶಸ್ತಿ ಪುರಸ್ಕೃತ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು ಶುಭಾಶಂಸನೆಗೈಯಲಿದ್ದು, ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಶ್ರೀ ಸುಧಾಕರ್ ರಾವ್ ಪೇಜಾವರ ಇವರು ಅತಿಥಿಯಾಗಿ ಭಾಗವಹಿಸಲಿರುವರು. ಭರತನಾಟ್ಯ ರಂಗಪ್ರವೇಶಕ್ಕೆ ಹಿಮ್ಮೇಳದಲ್ಲಿ ನೃತ್ಯ ಭಾರತಿಯ ಗುರು ಗೀತಾ ಸರಳಾಯ ಇವರ ನೃತ್ಯ ನಿರ್ದೇಶನ, ನೃತ್ಯ ಭಾರತಿಯ ವಿದುಷಿ ರಶ್ಮಿ ಚಿದಾನಂದ ನಟುವಾಂಗ, ಮಾಹೆಯ ಸ್ವರಾಗ್ ಹಾಡುಗಾರಿಕೆ, ಉಡುಪಿಯ ವಿದ್ವಾನ್…

Read More

ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಇದರ ಸಂಯೋಜನೆಯ ‘ನೃತ್ಯ ಶಂಕರ’ ಸಾಪ್ತಾಹಿಕ ನೃತ್ಯ ಸರಣಿ 50ರಲ್ಲಿ ಕುಮಾರಿಯರಾದ ಅನ್ವಿತ ತಂತ್ರಿ ಮತ್ತು ಅರ್ಪಿತ ತಂತ್ರಿ ಸಹೋದರಿಯರಿಂದ ಕಿಕ್ಕಿರಿದು ತುಂಬಿದ್ದ ಕೊಡವೂರು ದೇವಳದ ವಸಂತ ಮಂಟಪದಲ್ಲಿ ನೃತ್ಯಾರ್ಪಣೆ ಕಾರ್ಯಕ್ರಮವು ದಿನಾಂಕ 17-06-2024ರಂದು ಅಮೋಘ ಅಭಿನಯದ ಮೂಲಕ ಸಂಪನ್ನಗೊಂಡಿತು. ಭರತನಾಟ್ಯದಲ್ಲಿ ಸಮಕಾಲೀನ ನೃತ್ಯದೊಂದಿಗೆ ಸೈ ಎನಿಸಿಕೊಂಡ ಪ್ರಸ್ತುತಿಯು ಪೇಕ್ಷಕರನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ನೃತ್ಯಶಂಕರ ಸರಣಿ ಮೂಲಕ ಹಲವಾರು ಪ್ರತಿಭೆಗಳಿಗೆ ಶ್ರೀದೇವಳದಲ್ಲಿ ವೇದಿಕೆ ಅವಕಾಶ ಮಾಡಿಕೊಟ್ಟ ಸಂಯೋಜಕರ ಕೆಲಸ ಶ್ಲಾಘನೀಯ. ಕೊಡವೂರು ನೃತ್ಯನಿಕೇತನದ ವಿದ್ವಾನ್ ಸುಧೀರ್ ರಾವ್ ಕೊಡವೂರು ಹಾಗು ವಿದುಷಿ ಮಾನಸಿ ಸುಧೀರ್ ಶಿಷ್ಯೆಯರಾದ ಈ ಸಹೋದರಿಯರು ವೇದಮೂರ್ತಿ ತೊಟ್ಟಂ ಮಧುಸೂದನ ತಂತ್ರಿ ಹಾಗು ಅಕ್ಷತಾ ತಂತ್ರಿಯವರ ಮುದ್ದಿನ ಕುವರಿಯರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿಯೂ, ಪದವಿ ಪೂರ್ವ ಶಿಕ್ಷಣವನ್ನು ಎಂ.ಜಿ.ಎಂ. ಕಾಲೇಜಿನಲ್ಲಿ ಪೂರೈಸಿ ಪ್ರಸ್ತುತ ಅನ್ವಿತ…

Read More

ಮಂಗಳೂರು : ನೃತ್ಯಾಂಗಣದ ವತಿಯಿಂದ ಕುಡ್ಲ ಆರ್ಟ್ಸ್ ಫೆಸ್ಟಿವಲ್ ಇದರ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ಡಾ. ಅರುಣ್ ಕುಮಾರ್ ಮೈಯ್ಯ ಇವರ ನೆನಪಿನಲ್ಲಿ ‘ಯುವ ನೃತ್ಯೋತ್ಸವ 2024’ವನ್ನು ದಿನಾಂಕ 23-06-2024ರಂದು ಸಂಜೆ 2-45 ಗಂಟೆಗೆ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಗಾನ ನೃತ್ಯ ಅಕಾಡೆಮಿ ಇದರ ನಿರ್ದೇಶಕರಾದ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ‘ಯುವ ನೃತ್ಯೋತ್ಸವ 2024’ದ ಅಂತಿಮ ಸ್ಪರ್ಧಿಗಳಾದ ಸಂಜನಾ ರಾಜೇಶ್, ಯುಕ್ತಿ ಉಡುಪ, ಸ್ವರಲಿ ಘನ್ಗುರ್ಡೆ, ನಿಕಿತಾ ಗೋಪಾಲಕೃಷ್ಣನ್, ಅದಿತಿ ರವಿ ಪ್ರಕಾಶ್, ಅಪೇಕ್ಷಾ ಕಾಮತ್, ಅನಂತಕೃಷ್ಣ ಸಿ.ವಿ. ಮತ್ತು ಶಿಲ್ಪ ವರಕ್ಕೋತ್ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರ ಶಿಷ್ಯ ವೃಂದದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

Read More

ಮಂಗಳೂರಿನವರಾದ ಮೀನಾ ಹರೀಶ್‌ ಕೋಟ್ಯಾನ್‌ ಅವರ ‘ನಿನ್ನೊಲುಮೆ ನನಗಿರಲಿ’ ಎಂಬ ಕಾದಂಬರಿಯು ಪ್ರೀತಿ ಪ್ರೇಮಗಳಿಗೆ ಬರೆದ ಭಾಷ್ಯವೆಂಬಂತೆ ಹೊರನೋಟಕ್ಕೆ ಕಂಡು ಬಂದರೂ ಕತೆಯ ಒಡಲಲ್ಲಿ ಭಾವನಾತ್ಮಕವಾಗಿ ಚಲಿಸುವ ಪಾತ್ರಗಳು ಈ ಕೃತಿಯನ್ನು ಪರಿಪೂರ್ಣ ನೆಲೆಯತ್ತ ಕೊಂಡೊಯ್ಯುತ್ತವೆ. ಬದುಕಿನ ವಿವಿಧ ಮಜಲುಗಳಲ್ಲಿ ಏರ್ಪಡುವ ಸಂಬಂಧಗಳು ಮುಖ್ಯವಾಗುತ್ತವೆ. ಈ ಮೂಲಕ ಕಾದಂಬರಿಯು ಸಾಮಾಜಿಕ ಕೌಟುಂಬಿಕ ವಿಚಾರಗಳನ್ನು ಪ್ರತಿಬಿಂಬಿಸುವತ್ತ ಗಮನ ಹರಿಸುತ್ತದೆ. ಅನುರಾಗದೆಡೆಗೆ ತುಡಿಯುವ ಹೃದಯ, ಹರೆಯದ ಬಯಕೆಗೆ ತಾನೂ ಹೊರತಲ್ಲ ಎಂಬುದನ್ನು ಪ್ರತಿನಿಧಿಸುವ ಪಾವನಿಯನ್ನು ನಾಯಕಿಯನ್ನಾಗಿರಿಸಿಕೊಂಡ ಕಾದಂಬರಿಯು ಪ್ರೀತಿ, ಪ್ರೇಮ ಪ್ರಣಯಗಳಲ್ಲಿ ಮಾತ್ರ ತಲ್ಲೀನವಾಗದೆ, ಕೌಟುಂಬಿಕ ವ್ಯವಸ್ಥೆಯಲ್ಲಿ ಸಡಿಲಗೊಳ್ಳುವ ನಂಟುಗಳನ್ನು ಹೊಸೆಯುವ ಮೂಲಕ ಬದುಕಿನಲ್ಲಿ ಸಾರ್ಥಕ್ಯವನ್ನು ಗಳಿಸುವ ಜವಾಬ್ದಾರಿಯುತ ನೆಲೆಯನ್ನು ತಲುಪುತ್ತದೆ. ಪ್ರಸನ್ನ ಮತ್ತು ಜಯಂತಿ ದಂಪತಿಗಳ ಮುದ್ದಿನ ಮಗಳು ಪಾವನಿಯ ಕಡೆಗೆ ಮಮತೆಯನ್ನು ತೋರುವ ಹಿರಿಯಣ್ಣ ಪ್ರಭಾಸ್, ತರಲೆ ತುಂಟಾಟಗಳಿಂದ ಗೋಳು ಹೊಯ್ಯುವ ಅಂಕಿತ್, ಇವರ ನಡುವೆ ಮೊಂಡುತನ, ಸಿಡುಕುತನದ ಪ್ರತಿರೂಪವಾಗಿರುವ ವಿಕ್ರಾಂತನ ಅಸಹನೀಯ ವರ್ತನೆಗಳಿಂದ ಕುಗ್ಗಿಹೋದರೂ ಜೀವನದ ಕೊನೆಯಲ್ಲಾದರೂ ಅವನ ಅಕ್ಕರೆಯನ್ನು…

Read More

ಪುತ್ತೂರು : ಶ್ರೀ ಶಾರದಾ ಭಜನಾ ಮಂದಿರದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ ದ.ಕ. ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಗಮಕ ವಾಚನ-ವ್ಯಾಖ್ಯಾನ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ದಿನಾಂಕ 16-06-2024ರಂದು ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಪ್ರೊ. ವೇದವ್ಯಾಸ ರಾಮಕುಂಜ ಇವರು ಮಾತನಾಡುತ್ತಾ “ಗಮಕ ಕಲೆಯು ಅತ್ಯಂತ ಪಾವಿತ್ರ್ಯತೆಯನ್ನು ಹೊಂದಿದ್ದು; ಸಾಮಾಜಿಕ, ಧಾರ್ಮಿಕ, ಬೌದ್ಧಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನೆಲೆಗಳಲ್ಲಿ ಉನ್ನತ ಮೌಲ್ಯಗಳನ್ನು ಹೊಂದಿದೆ. ಮುಂದೆ ಮನೆ ಮನೆಗಳಲ್ಲಿ ಉತ್ತಮ ಆಶಯವುಳ್ಳ ಅತ್ಯಂತ ಕಡಿಮೆ ವೆಚ್ಚದಲ್ಲಿ ಆಗುವಂತಹ ಗಮಕ ಕಾರ್ಯಕ್ರಮವನ್ನು ಹಮ್ಮಿಕೊಂಡು, ಕುಟುಂಬಗಳಲ್ಲಿ ಸಾಮರಸ್ಯ ಬೆಳೆಯುವಂತೆ ಮಾಡಬೇಕು” ಎಂಬ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರು ದೀಪ ಬೆಳಗಿಸಿ ಉದ್ಘಾಟಿಸಿ ಶುಭನುಡಿಗಳನ್ನಾಡಿದರು. ಗೌರವಾಧ್ಯಕ್ಷರಾದ ಶ್ರೀಯುತ ಭಾಸ್ಕರ ಬಾರ್ಯರು ಪ್ರಾಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಕಳೆದ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ರಾಘವಾಂಕ…

Read More

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯೂಕೇಶನಲ್ ಇದರ ವತಿಯಿಂದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22-06-2024ರಂದು ಬೆಳಗ್ಗೆ 10-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಆರ್.ಆರ್.ಸಿ. ದ್ವನ್ಯಾಲೋಕದಲ್ಲಿ ಆಯೋಜಿಸಲಾಗಿದೆ. ತುಳು ಭಾಷೆ ಹಾಗೂ ಸಂಸ್ಕೃತಿ ಚಿಂತಕ ಶ್ರೀ ಬೆನೆಟ್ ಜಿ. ಅಮ್ಮನ್ನ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ವಹಿಸಲಿದ್ದು, ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ‘ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳು’ ಎಂಬ ವಿಷಯದ ಬಗ್ಗೆ ಇತಿಹಾಸ ಸಹಪ್ರಾಧ್ಯಾಪಕರಾದ ಡಾ. ರಾಮದಾಸ ಪ್ರಭು ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ : ಪೊಳಲಿ ಶೀನಪ್ಪ ಹೆಗ್ಡೆಯವರೆಂದೇ ಪ್ರಸಿದ್ಧರಾದ ನಂದಳಿಕೆ ಅಮುಣಂಜೆ ಗುತ್ತು ಶೀನಪ್ಪ ಹೆಗ್ಗಡೆಯವರು…

Read More

ಬೆಂಗಳೂರು : ಸಾಹಿತಿ ನಿರಂಜನ ಇವರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 15-06-2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿರಂಜನ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ನಿರಂಜನ ಇವರು ಕನ್ನಡದ ವಿಶಿಷ್ಟ ಬರಹಗಾರ. ಆಕ್ರೋಶದ ಅಭಿವ್ಯಕ್ತಿಯಲ್ಲಿಯೂ ಸೂಕ್ಷ್ಮತೆಯನ್ನು ತರಬಹುದು ಎಂದು ತೋರಿಸಿಕೊಟ್ಟ ಇವರು ಕನ್ನಡದಲ್ಲಿ ಅಂಕಣ ಬರಹಗಳಿಗೆ ಘನತೆ-ಗೌರವಗಳನ್ನು ತಂದವರು. ಸಾಹಿತ್ಯದಲ್ಲಿ ತಾತ್ವಿಕತೆಯನ್ನು ತಂದಾಗಲೂ ಸೃಜನಶೀಲತೆಯ ಕುಶಲತೆ ಮುಕ್ಕಾಗದಂತೆ ನೋಡಿಕೊಂಡವರು. ಕಿರಿಯರ ವಿಶ್ವಕೋಶ ಮತ್ತು ವಿಶ್ವಕಥಾಕೋಶಗಳ ಮೂಲಕ ವಿಶ್ವಕೋಶದ ಸಾಧ್ಯತೆಗಳನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದವರು. 2024 ನಿರಂಜನ ಅವರ ಜನ್ಮ ಶತಮಾನೋತ್ಸವದ ವರ್ಷ ಕೂಡ ಆಗಿರುವುದರಿಂದ ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನರೂ ಸೇರಿದಂತೆ ಈ ವರ್ಷ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಬರಹಗಾರರ ಕುರಿತು ವಿಶೇಷ ಗೋಷ್ಠಿಯನ್ನು ಏರ್ಪಡಿಸಲಾಗುವುದು. ನಿರಂಜನ ಎನ್ನುವುದು ಕುಳಕುಂದ ಶಿವರಾಯರ ಕಾವ್ಯನಾಮ, ಕತೆಗಾರ, ಕಿಶೋರ, ಶಿ.ರಾ.ಕುಳಕುಂದ, ಕುಳಕುಂದ…

Read More