Author: roovari

ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯೂಕೇಶನಲ್ ಇದರ ವತಿಯಿಂದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 22-06-2024ರಂದು ಬೆಳಗ್ಗೆ 10-30ಕ್ಕೆ ಉಡುಪಿಯ ಎಂ.ಜಿ.ಎಂ. ಕಾಲೇಜಿನ ಆವರಣದಲ್ಲಿ ಆರ್.ಆರ್.ಸಿ. ದ್ವನ್ಯಾಲೋಕದಲ್ಲಿ ಆಯೋಜಿಸಲಾಗಿದೆ. ತುಳು ಭಾಷೆ ಹಾಗೂ ಸಂಸ್ಕೃತಿ ಚಿಂತಕ ಶ್ರೀ ಬೆನೆಟ್ ಜಿ. ಅಮ್ಮನ್ನ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಇವರು ವಹಿಸಲಿದ್ದು, ನಿವೃತ್ತ ಪ್ರಾಂಶುಪಾಲರಾದ ಡಾ.ಗಣನಾಥ ಶೆಟ್ಟಿ ಎಕ್ಕಾರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ‘ತುಳುನಾಡಿನ ಪ್ರಭುತ್ವ ಹಾಗೂ ಧಾರ್ಮಿಕ ಪಂಥಗಳು’ ಎಂಬ ವಿಷಯದ ಬಗ್ಗೆ ಇತಿಹಾಸ ಸಹಪ್ರಾಧ್ಯಾಪಕರಾದ ಡಾ. ರಾಮದಾಸ ಪ್ರಭು ಇವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ : ಪೊಳಲಿ ಶೀನಪ್ಪ ಹೆಗ್ಡೆಯವರೆಂದೇ ಪ್ರಸಿದ್ಧರಾದ ನಂದಳಿಕೆ ಅಮುಣಂಜೆ ಗುತ್ತು ಶೀನಪ್ಪ ಹೆಗ್ಗಡೆಯವರು…

Read More

ಬೆಂಗಳೂರು : ಸಾಹಿತಿ ನಿರಂಜನ ಇವರ ಜನ್ಮದಿನಾಚರಣೆ ಕಾರ್ಯಕ್ರಮವು ದಿನಾಂಕ 15-06-2024ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ನಿರಂಜನ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ನಿರಂಜನ ಇವರು ಕನ್ನಡದ ವಿಶಿಷ್ಟ ಬರಹಗಾರ. ಆಕ್ರೋಶದ ಅಭಿವ್ಯಕ್ತಿಯಲ್ಲಿಯೂ ಸೂಕ್ಷ್ಮತೆಯನ್ನು ತರಬಹುದು ಎಂದು ತೋರಿಸಿಕೊಟ್ಟ ಇವರು ಕನ್ನಡದಲ್ಲಿ ಅಂಕಣ ಬರಹಗಳಿಗೆ ಘನತೆ-ಗೌರವಗಳನ್ನು ತಂದವರು. ಸಾಹಿತ್ಯದಲ್ಲಿ ತಾತ್ವಿಕತೆಯನ್ನು ತಂದಾಗಲೂ ಸೃಜನಶೀಲತೆಯ ಕುಶಲತೆ ಮುಕ್ಕಾಗದಂತೆ ನೋಡಿಕೊಂಡವರು. ಕಿರಿಯರ ವಿಶ್ವಕೋಶ ಮತ್ತು ವಿಶ್ವಕಥಾಕೋಶಗಳ ಮೂಲಕ ವಿಶ್ವಕೋಶದ ಸಾಧ್ಯತೆಗಳನ್ನು ಕನ್ನಡಕ್ಕೆ ಸಮರ್ಥವಾಗಿ ಪರಿಚಯಿಸಿದವರು. 2024 ನಿರಂಜನ ಅವರ ಜನ್ಮ ಶತಮಾನೋತ್ಸವದ ವರ್ಷ ಕೂಡ ಆಗಿರುವುದರಿಂದ ಮಂಡ್ಯದಲ್ಲಿ ನಡೆಯಲಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಿರಂಜನರೂ ಸೇರಿದಂತೆ ಈ ವರ್ಷ ಜನ್ಮ ಶತಮಾನೋತ್ಸವ ಆಚರಿಸುತ್ತಿರುವ ಬರಹಗಾರರ ಕುರಿತು ವಿಶೇಷ ಗೋಷ್ಠಿಯನ್ನು ಏರ್ಪಡಿಸಲಾಗುವುದು. ನಿರಂಜನ ಎನ್ನುವುದು ಕುಳಕುಂದ ಶಿವರಾಯರ ಕಾವ್ಯನಾಮ, ಕತೆಗಾರ, ಕಿಶೋರ, ಶಿ.ರಾ.ಕುಳಕುಂದ, ಕುಳಕುಂದ…

Read More

ಬೆಂಗಳೂರು : ‘ಸಹಚಾರಿ’ ಪ್ರಸ್ತುತಪಡಿಸುವ ರಿತುಪರ್ಣ ಪಾಲ್ ಇವರಿಂದ ‘ಉಪನ್ಯಾಸ ಸರಣಿ’ಯು ದಿನಾಂಕ 20-06-2024ರಿಂದ 23-06-2024ರವರೆಗೆ ಬೆಂಗಳೂರಿನ ತ್ಯಾಗರಾಜ ನಗರದ ಸಹಚಾರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8762002411 ಮತ್ತು 9791032417.

Read More

ಕೋಲಾರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿರುವ ‘ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ’ ಇದರ ವತಿಯಿಂದ ಡ್ರಾಮಾ ಡಿಪ್ಲೊಮಾ 2024-25 ಒಂದು ವರ್ಷದ ಅಭಿನಯ ಮತ್ತು ರಂಗ ತರಬೇತಿ (ಯುಜಿ ಡಿಪ್ಲೊಮಾ) ಸನಿವಾಸ ತರಗತಿಗಳು ಪ್ರಾರಂಭವಾಗಲಿದೆ. ಆದಿಮ ಸಾಂಸ್ಕೃತಿಕ ಕೇಂದ್ರವು ನೆಲ ಸಂಸ್ಕೃತಿ ನಡೆಯ ಭಾಗವಾಗಿ 18 ವರ್ಷಗಳಿಂದ ನಡಿಸಿದ ಪ್ರಯೋಗಗಳ ಹಿನ್ನೆಲೆಯಲ್ಲಿ ಒಂದು ವರ್ಷದ ಡ್ರಾಮಾ ಡಿಪ್ಲೊಮಾ ಕಾಲೇಜು ತೆರೆಯಲಾಗಿದೆ. ಪಿ.ಯು.ಸಿ. / ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗಾಗಿರುವ 18ರಿಂದ 30 ವರ್ಷ ವಯೋಮಿತಿಯ ಅರ್ಹ ಅಭ್ಯರ್ಥಿಗಳು ಆದಿಮ ರಂಗಭೂಮಿ ಶಿಕ್ಷಣ ಕೇಂದ್ರ, ಶಿವಗಂಗೆ, ತೇರಹಳ್ಳಿ ಬೆಟ್ಟ, ಮಡೇರಹಳ್ಳಿ ಅಂಚೆ, ಕೋಲಾರ-563101, ಇಲ್ಲಿ ನಿಗದಿತ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ನಿಗದಿತ ಸಮಯದೊಳಗೆ ನೇರವಾಗಿ ಅಥವಾ ಅಂಚೆಯ ಮುಖಾಂತರ ಇಲ್ಲಿಗೆ ತಲಪಿಸತಕ್ಕದ್ದು. ಆಯ್ಕೆ ಪ್ರಕ್ರಿಯೆ ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು ಸಂದರ್ಶನದಲ್ಲಿ ಕಡ್ಡಾಯವಾಗಿ ಭಾಗವಹಿಸತಕ್ಕದ್ದು. ರಂಗಭೂಮಿ / ಕಲೆಗಳಲ್ಲಿ ಆಸಕ್ತಿ ಇರುವವರಿಗೆ ಮೊದಲ ಆದ್ಯತೆ. ಪ್ರವೇಶ ಪ್ರಕ್ರಿಯೆ…

Read More

ಮಂಗಳೂರು : ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಹವ್ಯಾಸಿ ನಾಟಕ ತಂಡವಾಗಿದ್ದು, ಸಮಾನ ಮನಸ್ಕರು ಒಟ್ಟು ಸೇರಿ ಕಟ್ಟಿದ ಸಂಸ್ಥೆ. ಕಳೆದ ಹತ್ತು ವರ್ಷಗಳಿಂದ ತನ್ನ ಇತಿಮಿತಿಯ ಒಳಗಡೆ ಅತಿಯೆನಿಸದೆ ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪ್ರಸ್ತುತ ನಮ್ಮ ತಂಡವು ಆಧುನಿಕ ತುಳು ನಾಟಕ ರಂಗಭೂಮಿಯ ಬೆಳವಣಿಗೆಯ ದೃಷ್ಟಿಯಿಂದ ಮತ್ತು ತುಳು ನಾಟಕ ಪಠ್ಯಗಳ ಕೊರತೆಯನ್ನು ನೀಗಿಸುವ ನೆಲೆಯಿಂದ ಪ್ರೊಫೆಸರ್ ಅಮೃತ ಸೋಮೇಶ್ವರವರ ಸವಿ ನೆನಪಿನಲ್ಲಿ ‘ತುಳು ನಾಟಕ ರಚನಾ ಕಾರ್ಯಾಗಾರ’ವನ್ನು ಹಮ್ಮಿಕೊಳ್ಳುತ್ತಿದ್ದೇವೆ. ಈ ಕಾರ್ಯಾಗಾರಕ್ಕೆ ಹಿರಿಯ ಅನುಭವಿಗಳನ್ನೊಳಗೊಂಡ ಸಲಹಾ ಮಂಡಳಿ ಮತ್ತು ಮಾರ್ಗದರ್ಶನ ಮಂಡಳಿ ಇರುತ್ತದೆ. ಈ ಕಾರ್ಯಾಗಾರವು ನಾಲ್ಕು ಹಂತಗಳಲ್ಲಿ ನಡೆಯಲಿದ್ದು, ಮೊದಲನೆಯ ಹಂತದಲ್ಲಿ ಆಯ್ಕೆಯಾಗುವ 10 ಜನ ಅಭ್ಯರ್ಥಿಗಳಿಗೆ ತುಳು ನಾಟಕ ರಂಗಭೂಮಿಯ ವಸ್ತುಸ್ಥಿತಿಯ ಪರಿಚಯ, ಹಲವಾರು ನಾಟಕ ಪಠ್ಯ-ಪ್ರಯೋಗಗಳ ಪರಿಚಯ ಮತ್ತು ವಿಶ್ಲೇಷಣೆ ಮೊದಲಾದವುಗಳ ಕುರಿತು ಚರ್ಚಿಸಲಾಗುತ್ತದೆ. ಎರಡನೆಯ ಹಂತದಲ್ಲಿ ಅಭ್ಯರ್ಥಿಗಳು ತಮ್ಮದೇ ಆದ ಸ್ವಂತ ಕತೆಯ ಎಳೆಯನ್ನು ಸಿದ್ಧಪಡಿಸಿಕೊಂಡು…

Read More

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಳ್ಳಾಲ ಮತ್ತು ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದ.ಕ., ಉಡುಪಿ ಜಿಲ್ಲೆ ಮತ್ತು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ದೇವಿನಗರ, ತಲಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕನ್ನಡ ಗೀತ ಸಂಗೀತ ಕಾರ್ಯಾಗಾರ ‘ಭಾವಯಾನ’ವು ದಿನಾಂಕ 13-06-2024ರಂದು ಶಾರದಾ ವಿದ್ಯಾನಿಕೇತನ ಡೇ-ಬೋರ್ಡಿಂಗ್ ವಿಭಾಗದ ಸರಸ್ವತಿ ಮಂದಿರದಲ್ಲಿ ಜರಗಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ.ಬಿ. ಪುರಾಣಿಕ್ “ಮನುಷ್ಯನ ಎಲ್ಲಾ ಸಮಸ್ಯೆಗಳ ಮೂಲ ಅತಿಯಾದ ಆಸೆ ಮತ್ತು ಅಹಂಕಾರವೇ ಆಗಿದೆ. ಸಾಹಿತ್ಯ ಸಂಗೀತಾದಿ ಕಲೆಗಳು ಮನಸ್ಸನ್ನು ಸುಸಂಸ್ಕೃತಗೊಳಿಸಿ ಅಹಂಕಾರ ನಿರಸನಕ್ಕೆ ದಾರಿ ಮಾಡಿಕೊಡುತ್ತದೆ. ಶಿಕ್ಷಣದಲ್ಲಿ ಕಲೆ, ಸಾಹಿತ್ಯವೂ ಒಳಗೊಂಡಾಗ ಮಾತ್ರ ಪರಿಪೂರ್ಣ ಶಿಕ್ಷಣ ಸಾಧ್ಯವಾಗುತ್ತದೆ” ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ಅರಣ್ಯ ಇಲಾಖೆಯ ನಿವೃತ್ತ ಅಧಿಕಾರಿ ಕೆರೆಮನೆ ನರಸಿಂಹ ಹೆಗಡೆ “ಮನಸು ಮತ್ತು ಬುದ್ಧಿಗಳ ನಡುವೆ ಹೊಂದಾಣಿಕೆ ಬೇಕು. ಸಂಗೀತದಿಂದ ಮನಸ್ಸು ಸಂಸ್ಕಾರಗೊಳ್ಳುತ್ತದೆ”…

Read More

ಪ್ರತಿಯೊಬ್ಬ ಭಾರತೀಯನಿಗೆ ‘ರಾಮಾಯಣ’ದ ಬಗೆಗಿನ ಒಲವು ರಕ್ತಗತವಾದದ್ದು. ಇಡೀ ಒಂದು ಆದರ್ಶ ಜೀವನಕ್ರಮಕ್ಕೇ ಅಡಿಗಲ್ಲು ಹಾಕುವಂಥ ಈ ಕಥನವು ಆತನ ಬದುಕಿನ ವಿವಿಧ ಸಂದರ್ಭಗಳಲ್ಲಿ ಬೇರೆ ಬೇರೆ ಉದ್ದೇಶಗಳಿಗೋಸ್ಕರ ಉಲ್ಲೇಖಿತವಾಗುತ್ತಲೇ ಇರುತ್ತದೆ. ಅನಂತ ಸಾಧ್ಯತೆಗಳಿರುವ ರಾಮಾಯಣದ ಸುಮಾರು ಮುನ್ನೂರರಷ್ಟು ರೂಪಗಳು ನೂರಾರು ಭಾಷೆಗಳಲ್ಲಿ ಜಗತ್ತಿನಾದ್ಯಂತ ಇವೆ ಎಂದು ಸಂಶೋಧಕರು ಹೇಳಿದ್ದಾರೆ. ಕನ್ನಡದಲ್ಲಿ ಪಂಪನಿಂದ ಮೊದಲ್ಗೊಂಡು ಕುವೆಂಪು ಅವರ ತನಕ ರಾಮಾಯಣಗಳು ರಚಿತವಾದದ್ದನ್ನು ನಾವು ನೋಡಿದ್ದೇವೆ. ತಮಿಳಿನ ಕಂಬರಾಮಾಯಣ, ಮಲೆಯಾಳದ ಅಧ್ಯಾತ್ಮ ರಾಮಾಯಣ, ಹಿಂದಿಯ ತುಳಸಿ ದಾಸ ವಿರಚಿತ ರಾಮಚರಿತಮಾನಸ ಮೊದಲಾದ ಕೃತಿಗಳು ಬಹಳ ಪ್ರಸಿದ್ಧವಾಗಿವೆ. ಗದ್ಯರೂಪದ ರಾಮಾಯಣಗಳಂತೂ ಸಾವಿರಾರು ಸಂಖ್ಯೆಯಲ್ಲಿ ಬಂದಿವೆ. ವಾಲ್ಮೀಕಿ ರಾಮಾಯಣವನ್ನು ನೆಲೆಯಾಗಿಟ್ಟುಕೊಂಡು ತಮ್ಮ ಸಾಮಾಜಿಕ ಸಂದರ್ಭಗಳಿಗೆ ತಕ್ಕುದಾದ ವ್ಯತ್ಯಾಸಗಳನ್ನು ಮಾಡಿಕೊಂಡು ಭಿನ್ನ ದೃಷ್ಟಿಕೋನಗಳಿಂದ ಭಿನ್ನ ಛಂದಸ್ಸುಗಳಲ್ಲಿ ಬರೆದ ಮಹಾಕಾವ್ಯಗಳು ಅವು. ಇತ್ತೀಚೆಗೆ ಲೇಖಕಿ ಇಂದಿರಾ ಜಾನಕಿಯವರು (ದೇರಾಜೆ ಸೀತಾರಾಮಯ್ಯನವರ ಮಗಳು) ವಾಲ್ಮೀಕಿ ರಾಮಾಯಣದ ಮೂಲ ಕಥೆಯಿಂದ ಭಿನ್ನವಲ್ಲದ ರೀತಿಯಲ್ಲಿ ‘ರಾಮ ಸಾಂಗತ್ಯ’ ಎಂಬ ಮಹಾಕಾವ್ಯವನ್ನು ರಚಿಸಿ ರಾಮಾಯಣ…

Read More

ಮೂಡುಬಿದಿರೆ : ಆಧ್ಯ ಶ್ರೀ ಚಾರುಕೀರ್ತಿ ಯಕ್ಷಗಾನ ಕಲಾಬಳಗದ 2024ರ ಸರಣಿ ತಾಳಮದ್ದಲೆ ಕಾರ್ಯಕ್ರಮವು ದಿನಾಂಕ 10-06-2024ರ ಸೋಮವಾರದಂದು ಮೂಡಬಿದಿರೆಯ ಜೈನಮಠದ ಭಟ್ಟಾರಕ ಭವನದಲ್ಲಿ ಪ್ರಾರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಮೂಡುಬಿದಿರೆ ಶ್ರೀ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾ ಚಾರ್ಯವರ್ಯ ಸ್ವಾಮೀಜಿ “ತಾಳಮದ್ದಲೆಯಲ್ಲಿ ರಾಮಾಯಣ, ಮಹಾಭಾರತ, ಜೈನ ಪುರಾಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯಕ್ಷಗಾನದ ಹಿಮ್ಮೇಳ, ಮುಮ್ಮೇಳ ಕಲಾವಿದರು ಸಂಪದ್ಭರಿತ ಮನಸ್ಸು ಕಟ್ಟುವವರು.” ಎಂದು ನುಡಿದರು. ಇದೇ ಸಂದರ್ಭದಲ್ಲಿ ತಾಳಮದ್ದಲೆಯ ಪ್ರಾಯೋಜಕರಾದ ಭುಜಬಲಿ ಧರ್ಮಸ್ಥಳ ಹಾಗೂ ಯಕ್ಷ ಗಾನ ಪೋಷಕ ಶೈಲೇಂದ್ರ ಕುಮಾ‌ರ್ ಇವರನ್ನು ಸ್ವಾಮೀಜಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಬಸದಿಗಳ ಮೊತ್ತೇಸರ ಪಟ್ಟಶೆಟ್ಟಿ ಸುಧೇಶ್ ಕುಮಾರ್, ಮೂಡುಬಿದಿರೆ ಸರ್ವೀಸ್ ಕೋ- ಆಪರೇಟಿವ್‌ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಕಾರ್ಯಕ್ರಮದ ಸಂಯೋಜಕ ಶಾಂತರಾಮ ಕುಡ್ವ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಡಾ. ಪ್ರಭಾತ್ ಕುಮಾ‌ರ್ ಬಲ್ನಾಡು ಕಾರ್ಯಕ್ರಮ ನಿರೂಪಿಸಿದರು. ಶಾಂತಾರಾಂ ಕುಡ್ವ ಇವರ ಸಂಯೋಜನೆಯಲ್ಲಿ ಸರಣಿಯ…

Read More

ಸುಳ್ಯ : ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಸುಳ್ಯ ಮತ್ತು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಹೋಬಳಿ ಘಟಕ ಇವರ ಜಂಟಿ ಆಶ್ರಯದಲ್ಲಿ ಸಾಹಿತಿ ಶ್ರೀ ಸುಬ್ರಾಯ ಚೊಕ್ಕಾಡಿಯವರ ಬಗ್ಗೆ ‘ಸಾಹಿತ್ಯ ಸಂವಾದ ಮಾಲಿಕೆ’ ಕಾರ್ಯಕ್ರಮವು ದಿನಾಂಕ 17-06-2024ರಂದು ಪೂರ್ವಾಹ್ನ 10-30 ಗಂಟೆಗೆ ಕುರಂಜಿಬಾಗ್ ಸಂಧ್ಯಾ ರಶ್ಮಿ ಸಭಾಂಗಣದಲ್ಲಿ ನಡೆಯಲಿದೆ. ಸಂಧ್ಯಾ ರಶ್ಮಿ ಸಾಹಿತ್ಯ ಸಂಘ ಇದರ ಅಧ್ಯಕ್ಷರಾದ ಶ್ರೀಮತಿ ಲೀಲಾ ದಾಮೋದರ ಅಧ್ಯಕ್ಷತೆ ವಹಿಸಲಿದ್ದು, ಸುಳ್ಯದ ಎನ್.ಎಂ.ಪಿ.ಯ ನಿವೃತ್ತ ಪ್ರಾಚಾರ್ಯರಾದ ಡಾ. ಪ್ರಭಾಕರ ಶಿಶಿಲ ವ್ಯಕ್ತಿತ್ವ ಪರಿಚಯ, ಸುಳ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಪದವೀಧರ ಸಹ ಶಿಕ್ಷಕಿ ಶ್ರೀಮತಿ ಚಂದ್ರಮತಿ ಕೆ. ಸಾಹಿತ್ಯ ಪರಿಚಯ ಮತ್ತು ಶ್ರೀ ಕೆ.ಆರ್. ಗೋಪಾಲಕೃಷ್ಣ, ಶ್ರೀಮತಿ ಗಿರಿಜಾ ಎಂ.ವಿ. ಶ್ರೀಮತಿ ಸತ್ಯವತಿ ಎಸ್. ಇವರು ಗೀತ ಗಾಯನ ನಡೆಸಿಕೊಡಲಿದ್ದಾರೆ.

Read More

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಿದ್ದು, ವಿವಿಧ ಕೃತಿಗಳಿಗೆ ಹಾಗೂ ಇಬ್ಬರಿಗೆ ಸಮಗ್ರ ಸಾಧನೆಗಾಗಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಈ ಪುಸ್ತಕ ಬಹುಮಾನಗಳಿಗೆ ನಾಡಿನ ವಿವಿಧ ಲೇಖಕಿಯರ ಕೃತಿಗಳು ಆಯ್ಕೆಯಾಗಿದ್ದು ಅವುಗಳ ವಿವರ ಈ ಕೆಳಗಿನಂತಿವೆ. ದತ್ತಿನಿಧಿಗೆ ಆಯ್ಕೆ ಯಾಗಿರುವ ಲೇಖಕಿಯರ ಕೃತಿಗಳು : 1. ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ – ಡಾ. ಚಂದ್ರಮತಿ ಸೋಂದಾ – ‘ದುಪಡಿ’ 2. ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ – ಡಾ. ಬಿ. ರೇವತಿ ನಂದನ್ – ‘ತೋಟದ ಲೋಕದ ಪಾಠಗಳು’ 3. ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) – ಸರಸ್ವತಿ ಭೋಸಲೆ – ‘ಕಾಡತಾವ ನೆನಪ’ 4. ಜಿ.ವಿ. ನಿರ್ಮಲ (ಭಾರತದ ಯಾವುದೇ ಭಾಷೆಯ ಅನುವಾದಿತ ಕಾದಂಬರಿ, ಕಥಾ ಸಂಕಲನ, ಜೀವನ ಚರಿತ್ರೆ) – ವಿಜಯಾ ಶಂಕರ – ‘ತಲ್ಲಣಗಳ ನಡುವೆ’ 5. ತ್ರಿವೇಣಿ ಸಾಹಿತ್ಯ ಪುರಸ್ಕಾರ – ಮಾಧವಿ ಭಂಡಾರಿ…

Read More