Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು, ಕಾಸರಗೋಡು ಜಿಲ್ಲಾ ಘಟಕ ಮತ್ತು ಕೊಡಗು ಕನ್ನಡ ಭವನ, ಕನ್ನಡ ಚು. ಸಾ. ಪ ಕೊಡಗು ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಇದರ ಸಹಭಾಗಿತ್ವದಲ್ಲಿ ಅಗ್ರಗಣ್ಯ ಸಾಹಿತಿ, ಐತಿಹ್ಯಗಳ ಅಧ್ಯಾಪಕ, ಸಂಶೋಧಕ ದಿ. ಬೇಕಲ ರಾಮ ನಾಯಕ ಇವರ ಸ್ಮರಣಾಂಜಲಿ, ಬದುಕು ಬರಹದ ಬಗ್ಗೆ ಮೆಲುಕು, ಜಾನಪದ ಗಾಯನ, ಕವಿಗೋಷ್ಠಿ, ಕೃತಿ ಬಿಡುಗಡೆ, “ಚುಟುಕು ಕಾವ್ಯ ಪ್ರಶಸ್ತಿ” ಪ್ರದಾನ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ಕಾಸರಗೋಡು ನುಲ್ಲಿಪಾಡಿಯ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನದ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ. ಕನ್ನಡ ಚು.ಸಾ. ಪ. ಕಾಸರಗೋಡು ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿರಾಜ್ ಆಡೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಕನ್ನಡ ಚು. ಸಾ. ಪ. ಕಾಸರಗೋಡು ಜಿಲ್ಲಾ ಘಟಕದ ನಿರ್ದೇಶಕರಾದ ಡಾ. ಕೆ. ಎನ್. ವೆಂಕಟ್ರಮಣ…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ತಿಂಗಳ ಸರಣಿ ತಾಳಮದ್ದಳೆ “ಗದಾಯುದ್ಧ” ದಿನಾಂಕ 23 ಏಪ್ರಿಲ್ 2025ರಂದು ಬನ್ನೂರು ಭಾರತೀ ನಗರದ ಶ್ರೀ ವಿದ್ಯಾಗಣಪತಿ ದೇವಳದ ಆಶ್ರಯದಲ್ಲಿ ನಡೆಯಿತು. ಹಿಮ್ಮೇಳದಲ್ಲಿ ಯನ್. ಯನ್. ಭಟ್ ಬಟ್ಯಮೂಲೆ, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ, ಅಮೋಘ ಕೃಷ್ಣ, ಆದಿತ್ಯ ಕೃಷ್ಣ ದ್ವಾರಕ ಸಹಕರಿಸಿದರು. ಮುಮ್ಮೇಳದಲ್ಲಿ ಗುಂಡ್ಯಡ್ಕ ಈಶ್ವರ ಭಟ್ ( ಕೌರವ ), ವಿ. ಕೆ. ಶರ್ಮ ಅಳಿಕೆ ( ಶ್ರೀ ಕೃಷ್ಣ ), ಗುಡ್ಡಪ್ಪ ಬಲ್ಯ ( ಭೀಮ ), ಭಾಸ್ಕರ್ ಬಾರ್ಯ ( ಅರ್ಜುನ ), ಮಾಂಬಾಡಿ ವೇಣುಗೋಪಾಲ ಭಟ್ ( ಬಲರಾಮ ), ಹರಿಣಾಕ್ಷಿ ಜೆ. ಶೆಟ್ಟ ( ಧರ್ಮರಾಯ), ಅಚ್ಯುತ ಪಾಂಗಣ್ಣಾಯ ( ಶಬರ), ಸಹಕರಿಸಿದರು. ಪುಳು ಈಶ್ವರ ಭಟ್ ಸ್ವಾಗತಿಸಿ ಸುಬ್ರಹ್ಮಣ್ಯ ಭಟ್ ವಂದಿಸಿದರು. ಕಮ್ಮಾಜೆ ಕೇಶವ ಭಟ್ ಪ್ರಾಯೋಜಿಸಿದ್ದರು.
ಮಂಗಳೂರು: ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣ ಸಮಿತಿ, ಗುರು ಶಿಷ್ಯ ಒಕ್ಕೂಟ ಮತ್ತು ಚ. ರಾ. ಪ್ರಕಾಶನ ಇವರ ಆಶ್ರಯದಲ್ಲಿ ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ, ತಾಳಮದ್ದಳೆ ಮತ್ತು ಕೃತಿ ಬಿಡುಗಡೆ ಸಮಾರಂಭವು 20 ಏಪ್ರಿಲ್ 2025ರ ಭಾನುವಾರದಂದು ಸೋಮೇಶ್ವರ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಸ್ಮಾರಕ ಕಟ್ಟಡ ಸಭಾಗೃಹದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿ ಉದ್ಘಾಟಿಸಿದ ಹಿರಿಯ ವೈದ್ಯ ಮತ್ತು ಸಾಹಿತಿ ಡಾ. ರಮಾನಂದ ಬನಾರಿ ಮಾತನಾಡಿ “ಚರಾ ಎಂಬ ಅಭಿಧಾನದಲ್ಲಿ ಬರೆಯುತ್ತಿದ್ದ ರಾಮಚಂದ್ರ ಉಚ್ಚಿಲರ ಲೇಖನಗಳು ವಿಡಂಬನಾತ್ಮಕವಾಗಿದ್ದು ಓದುಗರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದವು. ಅವರು ಮುಂಬೈ ಬಿಟ್ಟು ಊರಲ್ಲಿ ನೆಲೆಸಿದ 25 ವರ್ಷಗಳಲ್ಲಿ ತಾವಿಬ್ಬರೂ ಅತ್ಯಂತ ಆಪ್ತರಾಗಿದ್ದೆವು. ಮುಂಬೈಯ ಮರ್ಕೆಂಟೈಲ್ ಬ್ಯಾಂಕ್ ನಲ್ಲಿ ಉದ್ಯೋಗಕ್ಕೆ ನಿಷ್ಠರಾಗಿದ್ದು ಪತ್ರಿಕಾ ಅಂಕಣಕಾರರಾಗಿ, ರಾತ್ರಿ ಶಾಲೆಯ ಅಧ್ಯಾಪಕರಾಗಿ ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದ ಉಚ್ಚಿಲರು ತಮ್ಮ ಜ್ಞಾನ ಶಕ್ತಿ, ಸ್ಮರಣ ಶಕ್ತಿ ಮತ್ತು ಇಚ್ಛಾಶಕ್ತಿಗೆ…
ಕವಿ, ವಿಮರ್ಶಕ, ಚಿಂತಕ, ವಾಗ್ಮಿ ಹಾಗೂ ಬಹುಶ್ರುತ ವಿದ್ವಾಂಸರಾದ ಪ್ರೊ. ಬಿ. ಎಚ್. ಶ್ರೀಧರರು ದಕ್ಷಿಣ ಕನ್ನಡ ಜಿಲ್ಲೆಯ ಬಿಜೂರು ಗ್ರಾಮದ ಬವಲಾಡಿಯಲ್ಲಿ ಸೀತಾರಾಮ ಹೆಬ್ಬಾರ ಹಾಗೂ ನಾಗಮ್ಮ ದಂಪತಿಯ ಸುಪುತ್ರರಾಗಿ 24 ಏಪ್ರಿಲ್ 1918 ರಂದು ಜನಿಸಿದರು. ಮೂಲತಃ ಇವರ ವಂಶಸ್ಥರು ಬಾರ್ಕೂರಿನವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಬಿಜೂರಿನಲ್ಲಿ ಮುಗಿಸಿದರೆ, ಸೊರಬ ಹಾಗೂ ಸಾಗರದಲ್ಲಿ ಮಿಡ್ಲ್ ಸ್ಕೂಲ್ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದರು. ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಧ್ಯಯನಕ್ಕೆ ಗ್ರಂಥಾಲಯದ ಪುಸ್ತಕಗಳು, ಶಾಲಾ ಶುಲ್ಕಕ್ಕೆ ಶಿಷ್ಯವೇತನ ಹಾಗೂ ನಿತ್ಯದ ಭೋಜನಕ್ಕಾಗಿ ವಾರಾನ್ನನ್ನು ಅವಲಂಭಿಸಿದ್ದ ಶ್ರೀಧರರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಕಲಿತು ರಾಜ್ಯಕ್ಕೆ ಮೊದಲಿಗರಾಗಿ ಉತ್ತೀರ್ಣರಾದವರು. ತಮ್ಮ ಮನೆ ಪಾಠ ಮತ್ತು ಶಿಷ್ಯವೇತನದಿಂದ ತಂದೆಯವರಿಗೂ ಸಂಸಾರ ನಿರ್ವಹಿಸಲು ಸಹಾಯಕರಾಗಿದ್ದದ್ದು ಹೆಮ್ಮೆ ಪಡುವ ವಿಚಾರ. ಮಹಾರಾಜ ಕಾಲೇಜಿನಲ್ಲಿ ಎಂ. ಎ. ಮುಗಿಸಿ, ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ, ಸಹ ಶಿಕ್ಷಕರಾಗಿ, ಪ್ರಾಚಾರ್ಯರಾಗಿ ಶ್ರೀಧರರು ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ ಇದ್ದ ಶ್ರೀಧರರು ತಮ್ಮ…
ಮಂಗಳೂರು : ರಂಗ ಸ್ವರೂಪದ 20ನೇ ವರ್ಷದ 4ದಿನಗಳ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ‘ರಂಗಸ್ವರೂಪ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 19 ಏಪ್ರಿಲ್ 2025ರ ಶನಿವಾರದಂದು ಮಂಗಳೂರಿನ ಮರಕಡ ಕುಂಜತ್ತಬೈಲ್ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ದ. ಕ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗೋವಿಂದ ಮಡಿವಾಳ ಮಾತನಾಡಿ “ಈಗಿನ ಕಾಲದಲ್ಲಿ ಪುಟಾಣಿ ಮಕ್ಕಳಿಗೆ ಬೋಧನೆ ಮಾಡುವುದು ಒಂದು ಚಾಲೆಂಜ್ ಅಗಿದೆ. ದ.ಕ. ಜಿಲ್ಲೆಯಲ್ಲಿ 1772 ಶಾಲೆಗಳಿವೆ. ರಂಗ ಸ್ವರೂಪ ಸಂಸ್ಥೆಯೊಂದಿಗೆ ಕೈಜೋಡಿಸಿ ಮರಕಡ ಶಾಲೆ ಆಯೋಜಿಸಿದ ಬೇಸಿಗೆ ಶಿಬಿರ ಇತರ ಶಾಲೆಗಳಿಗೆ ಮಾದರಿಯಾಗಿದೆ” ಎಂದರು. ಸಮಾರಂಭದಲ್ಲಿ ಜಾನಪದ ವಿದ್ವಾಂಸ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಕೆ.ಕೆ. ಪೇಜಾವರ್ ಅವರಿಗೆ ‘ರಂಗಸ್ವರೂಪ-2025’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು “ಈ ಶಿಬಿರ ನಿತ್ಯ ಶಿಬಿರವಾಗಬೇಕು ಮಕ್ಕಳು ನಿತ್ಯ ಸಂಭ್ರಮಿಸಬೇಕು ನಿತ್ಯ ಸಂಭ್ರಮಿಸಿದಾಗ ಶಿಕ್ಷಣಕ್ಕೆ ಹೆಚ್ಚು ಒತ್ತು ಬರುತ್ತದೆ” ಎಂದು ಹೇಳಿದರು. ಪ್ರಧಾನ…
ಧಾರವಾಡ : ಅಭಿನಯ ಭಾರತಿಯು ತನ್ನ ನಾಲ್ಕು ದಶಕಗಳ ಅನುಭವದ ಪರಿಪಾಕದೊಂದಿಗೆ ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ಧಾರವಾಡದ ಕಲಾ ರಸಿಕರಿಗೆ ‘ನಗೆ ಹಬ್ಬ’ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಾಸ್ಯದ ರಸದೌತಣ ನೀಡಲಿದೆ. ದಿನಾಂಕ 26 ಏಪ್ರಿಲ್ 2025ರ ಶನಿವಾರ ಹಾಗೂ 27 ಏಪ್ರಿಲ್ 2025ರ ರವಿವಾರದಂದು ಬೆಂಗಳೂರಿನ “ಅಂತರಂಗ- ಬಹಿರಂಗ” ತಂಡದವರು ಧಾರವಾಡದ ಸೃಜನಾ ರಂಗಮಂದಿರದಲ್ಲಿ ನಾಲ್ಕು ಹಾಸ್ಯರಸ ಪೂಣ೯ ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ. ಶನಿವಾರ ದಿನಾಂಕ 26ರಂದು ಸಂಜೆ 4.15 ಗಂಟೆಗೆ ನಾಟಕೋತ್ಸವದ ಮೊದಲ ನಾಟಕ ‘ಅನುಮಾನದ ಅವಾಂತರ’ ಶ್ರೀ ರಿಜವಾನ ಇನಾಮದಾರ-ಕೋಟಕ್ ಇನ್ಶುರೆನ್ಸನ ಅಧಿಕಾರಿಗಳಿಂದ ಹಾಗೂ ಸಂಜೆ 6.15 ಗಂಟೆಗೆ ಎರಡನೇ ನಾಟಕ “ಯಥಾ ಪ್ರಕಾರ” ಶ್ರೀ ಪಿ. ಎಮ್ ಕುಲಕರ್ಣಿ, ಅಧ್ಯಕ್ಷರು “ಭಗೀರಥ ಸ್ವಯಂ ಸೇವಾ ಸಂಸ್ಥೆ” ಇವರಿಂದ ಮತ್ತು ರವಿವಾರ ದಿನಾಂಕ 27ರಂದು ಸಂಜೆ 4.15 ಗಂಟೆಗೆ “ಬಾಯಿ ತುಂಬಾ ನಕ್ಕು ಬಿಡಿ” ನಾಟಕ ಶ್ರೀ ನಾರಾಯಣ ಎಮ್. ನಿವೃತ್ತ ಮುಖ್ಯ ಅಭಿಯಂತರರು ಹಾಗೂ ತಾಂತ್ರಿಕ…
ಮೂಡುಬಿದಿರೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮಂಗಳೂರು ವಿ. ವಿ. ಮಟ್ಟದ ಸಾಂಸ್ಕೃತಿಕ ವೈಭವ ತುಳುನಾಡ ಸಿರಿ ‘ಮದಿಪು’ ಕಾರ್ಯಕ್ರಮವು ದಿನಾಂಕ 23 ಏಪ್ರಿಲ್ 2025ರ ಬುಧವಾರ ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡು ಮಾತನಾಡಿ “ತುಳು ಭಾಷೆ ಅನೇಕ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ಅದು ನಮ್ಮ ನಿತ್ಯ ಬಳಕೆಯ ಭಾಷೆಯಾದಾಗ ವಿಸ್ತಾರವಾಗಿ ಬೆಳೆದು ಮುಂದಿನ ತಲೆಮಾರಿಗೆ ಹಸ್ತಾಂತರವಾಗಲು ಸಾಧ್ಯ . ಮಹಾವೀರ ಕಾಲೇಜಿನ ವಿದ್ಯಾರ್ಥಿಗಳು ಮೂಡುಬಿದಿರೆ ಸುತ್ತಮುತ್ತ ತುಳು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವುದಾದರೆ ಅದಕ್ಕೆ ತಗಲುವ ಖರ್ಚನ್ನು ಅಕಾಡೆಮಿ ವತಿಯಿಂದ ಭರಿಸಲಾಗುವುದು ಎಂದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಭಯಚಂದ್ರ ಜೈನ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ . ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಹರೀಶ್ ಸ್ವಾಗತಿಸಿ, ಪದವಿ ಕಾಲೇಜಿನ ಪ್ರಾಚಾರ್ಯ ರಾಧಾಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ…
ಮಂಗಳೂರು : ಕಲ್ಲಚ್ಚು ಪ್ರಕಾಶನ ಹಾಗೂ ಡಯಟ್ ಮಂಗಳೂರು ಆಶ್ರಯದಲ್ಲಿ ಸಾಹಿತಿ ಮನೋಜ್ ಕುಮಾರ್ ಶಿಬಾರ್ಲ ಇವರ ‘ಕಾಲು ಸಾವಿರ’ ಚುಟುಕುಗಳ ಕೃತಿ ಲೋಕರ್ಪಣಾ ಸಮಾರಂಭವು ದಿನಾಂಕ 22 ಏಪ್ರಿಲ್ 2025ರ ಮಂಗಳವಾರದಂದು ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್) ಇಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿದ ಸಂಘಟಕ ಹಾಗೂ ಸಾಹಿತಿ ಶಾಂತಾರಾಮ ಶೆಟ್ಟಿ ಮಾತನಾಡಿ “ಸಾಹಿತಿಯಾದವರು ಪದಗಳ ಬಳಕೆಯ ಬಗ್ಗೆ ಎಚ್ಚರ ವಹಿಸಬೇಕು. ತಪ್ಪುಗಳು ನಡೆದಲ್ಲಿ ಸಾಹಿತ್ಯವೇ ಅನರ್ಥವಾಗುತ್ತದೆ. ಬರೆಯುವ ಸಾಹಿತ್ಯದಲ್ಲಿ ಸಾಲುಗಳಿಗಿಂತ ಸೋಲ್(ಆತ್ಮ) ಮುಖ್ಯವಾಗಿದೆ. ಬರೆದದ್ದೆಲ್ಲ ಕವನವಾಗಲು ಸಾಧ್ಯವಿಲ್ಲ. ಬರವಣಿಗೆಗೆ ಸ್ವಜ್ಞಾನ ಅನುಭವ ಅಗತ್ಯ. ಸಾಹಿತ್ಯ ಬರೆಯುವ ಮೊದಲು ಓದುವ ಹವ್ಯಾಸ ಹೊಂದಿರಬೇಕು. ಹತ್ತು ಕೃತಿಗಳನ್ನು ಓದಿ ಅರ್ಥೈಸಿದ ಬಳಿಕ ಒಂದು ಕೃತಿ ಬರೆಯುವ ಪ್ರಯತ್ನ ಮಾಡಬೇಕು. ಓದುಗನನ್ನು ಮನದಟ್ಟು ಮಾಡುವಂತೆ ಬರೆಯುವುದೇ ಸಾಹಿತ್ಯ. ಪ್ರತೀ ಸಾಲಿನಲ್ಲೂ ಹೊಸತನದೊಂದಿಗೆ ಭಿನ್ನ ಅರ್ಥ ಹಾಗೂ ಸಂದೇಶ ನೀಡುವ ನಿಟ್ಟಿನಲ್ಲಿ ಸಾಹಿತಿಗಳು ಪ್ರಯತ್ನಿಸಬೇಕಾಗಿದೆ” ಎಂದರು. ಜಿಲ್ಲಾ ಶಿಕ್ಷಣ…
ಮಂಗಳೂರು : ಕೆನರಾ ಕಾಲೇಜು ಹಾಗೂ ಅಖಿಲ ಭಾರತೀಯ ಸಾಹಿತ್ಯ ಷರಿಷದ್ ಮಂಗಳೂರು ತಾಲೂಕು ಆಯೋಜಿಸಿದ ಉಪನ್ಯಾಸಕಿ ಶ್ರೀಮತಿ ಶೈಲಜಾ ಪುದುಕೋಳಿಯವರ ‘ಕನವರಿಕೆ’ ಕೃತಿ ಲೋಕಾರ್ಪಣಾ ಸಮಾರಂಭವು ದಿನಾಂಕ 21 ಏಪ್ರಿಲ್ 2025ರಂದು ಮಂಗಳೂರಿನ ಕೆನರಾ ಪದವಿ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪುಸ್ತಕ ಲೋಕಾರ್ಪಣೆಗೊಳಿಸಿದ ಕೆನರಾ ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಮಾತನಾಡಿ “ಭಾಷಾ ಪ್ರಾಧ್ಯಾಪಕರ ಪಾಠ ಪ್ರವಚನಗಳನ್ನು ಕೇಳುವುದೇ ಖುಷಿಯ ವಿಷಯ,. ಅವರ ಭಾಷಾ ಪ್ರೌಢಿಮೆ, ಪದಗಳ ಜೋಡಣೆ ಬಹಳ ಅಥ೯ಪೂಣ೯ ಹಾಗೂ ಸುಂದರ” ಎಂದರು ಕೆನರಾ ಪ. ಪೂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ರಘು ಇಡ್ಕಿದು ಕೃತಿ ಪರಿಚಯ ಮಾಡಿದರು. ಅಮೃತ ಪತ್ರಿಕೆಯ ಸಂಪಾದಕರಾದ ಶ್ರೀಮತಿ ಮಾಲತಿ ಶೆಟ್ಟಿ ಮಾಣೂರು ಅವರು ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಕೆನರಾ ಕಾಲೇಜಿನ ಆಡಳಿತಾಧಿಕಾರಿ ಶ್ರೀಮತಿ ದೀಪ್ತಿ ನಾಯಕ್, ಕೆನರಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ವಾಣಿ ಯು, ಲೇಖಕಿ ಶ್ರೀಮತಿ ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು.…
ಉಡುಪಿ : ಯಕ್ಷ ಶಿಕ್ಷಣ ಟ್ರಸ್ಟ್ (ರಿ.), ಉಡುಪಿ ಸಂಸ್ಥೆಯು ಯಕ್ಷಗಾನ ಕಲಾರಂಗದ ಐವೈಸಿಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ಮುಖವರ್ಣಿಕೆ ಶಿಬಿರದ ಸಮಾರೋಪ ಸಮಾರಂಭವು ದಿನಾಂಕ 18 ಏಪ್ರಿಲ್ 2025 ರಂದು ನಡೆಯಿತು. ಗುರು ಸಂಜೀವ ಸುವರ್ಣರ ನೇತೃತ್ವದಲ್ಲಿ ಯಕ್ಷಗಾನ ಗುರುಗಳಾದ ನರಸಿಂಹ ತುಂಗ ಮತ್ತು ಪ್ರಸಾಧನ ತಜ್ಞ ಮಿಥುನ್ ನಾಯಕ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಸಮಾರೋಪ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಎ. ರಘುಪತಿ ಭಟ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಯು. ಎಸ್. ರಾಜಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ನಾರಾಯಣ ಎಂ. ಹೆಗಡೆ, ಅನಂತರಾಜ್ ಉಪಾಧ್ಯ, ಕಿಶೋರ್ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿ, ಸಂಯೋಜಕ ನಿರಂಜನ್ ಭಟ್ ವಂದಿಸಿದರು. ಶಿಬಿರಾರ್ಥಿಗಳ ಪರವಾಗಿ ಸೃಷ್ಟಿ ಮತ್ತು ಆರುಷ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಈ ನಾಲ್ಕು ದಿನಗಳಲ್ಲಿ ಮಕ್ಕಳು ಸ್ವತಂತ್ರವಾಗಿ ವಿವಿಧ ವೇಷಗಳ ಮುಖವರ್ಣಿಕೆ, ಕಸೆ, ಗೆಜ್ಜೆ ಮತ್ತು ವೇಷಭೂಷಣ ಕಟ್ಟಿಕೊಳ್ಳುವುದನ್ನು ಕಲಿತುಕೊಂಡರು.…