Author: roovari

ಮಂಗಳೂರು : ಗೌರವಾನ್ವಿತ, ನಾಟ್ಯ ಕಲಾ ತಪಸ್ವಿ ನಾಟ್ಯಾಚಾರ್ಯ ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರು 90ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಭರತಾಂಜಲಿ ಪ್ರಸ್ತುತ ಪಡಿಸುವ ‘ಪುರುಷ ನಾಟ್ಯ ವಿಲಾಸ’ ಏಕವ್ಯಕ್ತಿ ನೃತ್ಯ ಪ್ರದರ್ಶನವನ್ನು ದಿನಾಂಕ 16-06-2024ರಂದು ಸಂಜೆ ಗಂಟೆ 5-15ಕ್ಕೆ ಡಾನ್ ಬೋಸ್ಕೋ ಹಾಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಗುರು ಶ್ರೀ ಉಳ್ಳಾಲ ಮೋಹನ್ ಕುಮಾರ್ ಮತ್ತು ಗುರು ವಿದುಷಿ ಕಮಲಾ ಭಟ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಹಾಸನದ ಗುರು ಉನ್ನತ ಎಚ್.ಆರ್. ಇವರ ಶಿಷ್ಯ ಸುಮಂತ್ ಎಸ್., ಬೆಂಗಳೂರಿನ ಗುರು ಪಾರ್ಶ್ವನಾಥ್ ಉಪಾಧ್ಯೆ ಇವರ ಶಿಷ್ಯ ಶೋಭಿತ್ ರಮೇಶ್ ಮತ್ತು ಹುಬ್ಬಳ್ಳಿಯ ವಿದ್ವಾನ್ ಸುಜಯ್ ಶಾನ್ ಬೋಗ್ ಇವರುಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ.

Read More

ಉಪ್ಪಳ : ‘ಕಾಸರಗೋಡು ಕನ್ನಡ ಹಬ್ಬ’ದ ಅಂಗವಾಗಿ ರಂಗ ಚಿನ್ನಾರಿ ಕಾಸರಗೋಡು ಇದರ ಸಂಗೀತ ಘಟಕವಾದ ಸ್ವರ ಚಿನ್ನಾರಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದಲ್ಲಿ ತರುಣ ಕಲಾವೃಂದ ಐಲ ಉಪ್ಪಳ ಏರ್ಪಡಿಸಿದ ಸುಮಧುರ ಗೀತೆಗಳ ಗಾಯನ ಕಾರ್ಯಕ್ರಮವಾದ ‘ಕನ್ನಡ ಉಸಿರು’ ಕಾರ್ಯಕ್ರಮವು ದಿನಾಂಕ 25-05-2024ರಂದು ಐಲ ಶ್ರೀ ದುರ್ಗಾಪರಮೇಶ್ವರಿ ಕಲಾ ಭವನದಲ್ಲಿ ಜರಗಿತು. ಸಮಾರಂಭವನ್ನು ಉದ್ಘಾಟಿಸಿದ ನಟ ಹಾಗೂ ಸಾಹಿತಿಯಾದ ಶಶಿರಾಜ್ ರಾವ್ ಕಾವೂರು ಮಾತನಾಡಿ “ಕಲಾಪ್ರೇಮಿಗಳಿಗೆ ಸ್ವರ ಚಿನ್ನಾರಿಯು ರಸ ನಿಮಿಷಗಳನ್ನು ನೀಡಿದೆ.” ಎಂದು ತಿಳಿಸಿದರು. ಐಲ ಕ್ಷೇತ್ರದ ಆಡಳಿತ ಮೊಕೇಸರ ಕೋಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಸಿರು ಸಂಚಾಲಕ ಹಾಗೂ ರಂಗ ಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ “ಕಾಸರಗೋಡಿನ ಕಲಾಪ್ರತಿಭೆಗಳಿಗೆ ಒಂದು ವೇದಿಕೆಯನ್ನು ನೀಡುವುದು, ಆ ಮೂಲಕ ಅವರ ಪ್ರತಿಭೆಯನ್ನು ಪ್ರಕಾಶಿಸಲು ಅವಕಾಶ ಕೊಡುವುದು ಸ್ವರ ಚಿನ್ನಾರಿಯ ಉದ್ದೇಶವಾಗಿದೆ.” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ…

Read More

ಅಂಕೋಲಾ : ಕರ್ನಾಟಕ ಸಂಘ (ರಿ.) ಅಂಕೋಲಾ ಮತ್ತು ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಅಂಕೋಲಾ ಇದರ ವತಿಯಿಂದ ‘ದತ್ತಿನಿಧಿ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ’ವು ದಿನಾಂಕ 16-06-2024ರಂದು ಬೆಳಗ್ಗೆ ಗಂಟೆ 10-30ಕ್ಕೆ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ನಡೆಯಲಿದೆ. ಬೆಂಗಳೂರು ವಿಧಾನ ಪರಿಷತ್ತಿನ ಮಾನ್ಯ ಸಭಾಪತಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಇವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಶಾಂತಾರಾಮ ನಾಯಕ ಇವರು ಅಧ್ಯಕ್ಷತೆ ವಹಿಸಲಿರುವರು. ಖ್ಯಾತ ನ್ಯಾಯವಾದಿಗಳಾದ ಶ್ರೀ ಪ್ರದೀಪ ಕೃಷ್ಣದೇವ ಗಾಂವಕರ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹೊನ್ನಾವರದ ಜಾನಪದ ವಿದ್ವಾಂಸರು ಮತ್ತು ಹಿರಿಯ ಸಾಹಿತಿಗಳಾದ ಡಾ. ಎನ್.ಆರ್. ನಾಯಕ ಇವರಿಗೆ ‘ದೀನಬಂಧು ಸ.ಪ. ಗಾಂವಕರ ದತ್ತಿನಿಧಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜನಪದ ಕಣಜ ಡಾ. ಎನ್.ಆರ್. ನಾಯಕ ಅಂಕೋಲಾ ತಾಲೂಕಿನ ಭಾವಿಕೇರಿಯಲ್ಲಿ ಜನಿಸಿದ ಡಾ. ಎನ್.ಆರ್. ನಾಯಕ ಇವರು ಹೊನ್ನಾವರದ ಎಸ್‌.ಡಿ.ಎಂ. ಕಾಲೇಜಿನಲ್ಲಿ…

Read More

ಉಡುಪಿ : ಬೆಂಗಳೂರಿನ ಲಹರಿ ಭಾರಿಘಾಟ್ ಅವರು ರಂಗಭೂಮಿ ಮತ್ತು ಭರತನಾಟ್ಯದ ಬಗ್ಗೆ ಆಳವಾದ ಒಲವು ಹೊಂದಿರುವ ಮತ್ತು ವೃತ್ತಿಯಾಗಿ ಸಮಾಜ ಕಾರ್ಯದಲ್ಲಿ ತೊಡಗಿರುವವರು. ತಮ್ಮ ಸಂಸ್ಥೆ ‘ಸಹಚಾರಿ’ ಮೂಲಕ ತಮ್ಮ ಸಮಾಜ ಕಾರ್ಯದ ಮೌಲ್ಯಗಳನ್ನು ಕಲೆಯೊಂದಿಗೆ ಬೆಸೆಯುವ ಉದ್ದೇಶವನ್ನು ಹೊಂದಿದ್ದಾರೆ. ‘ಸಹಚಾರಿ’ಯ ಮೊದಲ ಪ್ರಯೋಗ ‘ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ’ ಕಾರ್ಯಕ್ರಮ ‘ಸಂವಿಧಾನ ಸಾಥಿ’ ಯೋಜನೆಯ ಭಾಗವಾಗಿದ್ದು, ದಿನಾಂಕ 16-06-2024ರ ಭಾನುವಾರ ಸಂಜೆ ಗಂಟೆ 4-30ರಿಂದ 5-30ರ ತನಕ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಸಾಂಸ್ಕೃತಿಕ ಸಂಘಟನೆ, ರಥಬೀದಿ ಗೆಳೆಯರು (ರಿ.), ಉಡುಪಿ ಇದರ ಆಶ್ರಯದಲ್ಲಿ ನೃತ್ಯ ತಜ್ಞೆ ಕೆ. ಶಾರದಾ ಆಚಾರ್ಯ ಇವರು ಪ್ರಸ್ತುತ ಪಡಿಸಲಿದ್ದಾರೆ. ‘ಸಂವಿಧಾನ ಸಾಥಿ’ ಎಂಬುದು ಬೆಂಗಳೂರಿನ ಸಂವಾದ ಬದುಕು ನೀಡುವ ಫೆಲೋಶಿಪ್ ಆಗಿದ್ದು, ಇದು ಭಾರತದ ಸಂವಿಧಾನದ ತತ್ವಗಳನ್ನು ಉತ್ತೇಜಿಸುವ ಮತ್ತು ಪ್ರತಿಪಾದಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ ನೃತ್ಯ ಪ್ರದರ್ಶನವು ಸಂವಿಧಾನದಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಬಂಧುತ್ವ ಎಂಬ ಆದರ್ಶಗಳನ್ನು ಪ್ರತಿಪಾದಿಸುತ್ತದೆ. ಈ…

Read More

ಧಾರವಾಡ : ದಿನಾಂಕ 11-06-2024ರಂದು  ನಮ್ಮನ್ನಗಲಿದ ಹಿರಿಯ ಸರೋದ್ ಕಲಾವಿದರಾದ ಪಂಡಿತ್ ರಾಜೀವ್ ತಾರಾನಾಥರಿಗೆ ನುಡಿ ನಮನ ಕಾರ್ಯಕ್ರಮವು ದಿನಾಂಕ 13-06-2024 ರಂದು ಧಾರವಾಡದ ಗ್ರಂಥಮಾಲೆ ಅಟ್ಟದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪಂಡಿತ್ ವೆಂಕಟೇಶ ಕುಮಾರ್ “ಪಂಡಿತ್ ರಾಜೀವ್ ತಾರಾನಾಥರು ನಮ್ಮ ದೇಶದ ಶ್ರೇಷ್ಠ ಸಂಗೀತಗಾರರು. ಸ್ಪಷ್ಟವಾದಿ, ನೇರ ನಿಷ್ಠುರರಾಗಿದ್ದ ಶ್ರೀಯುತರು ಅತ್ಯುತ್ತಮ ಮಾನವತಾವಾದಿಯೂ ಆಗಿದ್ದರು.  ಉಸ್ತಾದ್ ಅಲಿ ಅಕ್ಬರ್ ಖಾನ್ ಅವರಲ್ಲದೆ, ಅನೇಕ ಗುರುಗಳಿಂದ ಮಾರ್ಗದರ್ಶನ ಪಡೆದಿದ್ದರು. ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿರುವ ರಾಜೀವ್ ತಾರಾನಾಥರು ಮತ್ತೆ ಈ ಸಂಗೀತ ನಾಡಿನಲ್ಲಿ ಹುಟ್ಟಿಬರಲಿ” ಎಂದು ಆಶಿಸಿದರು. ಹಿರಿಯ ಲೇಖಕ ಜಿ. ಸಿ. ತಲ್ಲೂರ ಮಾತನಾಡಿ “ಇಂತಹ ಕಲಾವಿದರು ಅಪರೂಪ. ಸಂಗೀತ ಎಲ್ಲರ ಮನಸ್ಸು ತಟ್ಟಬೇಕು. ಸಂಗೀತದಲ್ಲಿ ಶುದ್ಧತೆ, ಪ್ರಮಾಣ ಬದ್ಧತೆ, ಸಂಸ್ಕೃತಿ, ಸಂಸ್ಕಾರ ಇದೆ. ಅದನ್ನು ಸಾಧಿಸಿ ತೋರಿಸಿದವರು ಪಂ. ರಾಜೀವ ತಾರನಾಥ.” ಎಂದು ಹೇಳಿದರು. ರಮಾಕಾಂತ ಜೋಶಿಯವರು ಮಾತನಾಡಿ “ರಾಜೀವ್, ಜಿ. ಬಿ. ಜೋಶಿ ಮತ್ತು ಮನೋಹರ ಗ್ರಂಥಮಾಲೆ…

Read More

ಸಾವಿರಾರು ಮೈಲು ದೂರದ ಅರಬ್ ದೇಶವೊಂದರ ನೆಲದಲ್ಲಿ ಯಕ್ಷಗಾನವನ್ನು ಕಟೀಲು ಮೇಳದ ಆಯ್ದ ಪ್ರಬುದ್ಧ ಕಲಾವಿದರು ಪ್ರಸ್ತುತ ಪಡಿಸಿದ್ದು, ‘ಶ್ರೀದೇವಿ ಮಹಾತ್ಮೆ’ ಪ್ರಸಂಗ ಪ್ರದರ್ಶನ ಸಾವಿರಕ್ಕೂ ಹೆಚ್ಚು ಯಕ್ಷಗಾನಪ್ರಿಯ ಅನಿವಾಸಿ ಭಾರತೀಯರನ್ನು ಭಕ್ತಿ ಮತ್ತು ಭಾವ ಪರವಶರನ್ನಾಗಿಸಿದ್ದಲ್ಲದೆ ಮೆಚ್ಚುಗೆಯ ಮಹಾ ಪೂರವೇ ವ್ಯಕ್ತವಾಗಿದೆ. ಬಿರುವೆ ಜವನೆರ್ ಮಸ್ಕತ್ ತಂಡವು ಕಟೀಲಿನ ಆರೂ ಮೇಳಗಳ 33 ಮಂದಿ ಕಲಾವಿದರನ್ನು ಆಯ್ದು ಮಸ್ಕತ್‌ ನಲ್ಲಿ ಶ್ರೀದೇವೀ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ದಿನಾಂಕ 31-05-2024ರ ಶುಕ್ರವಾರ ದಂದು ಏರ್ಪಡಿಸಿತ್ತು. ರಂಗಸ್ಥಳ ನಿರ್ಮಾಣ ಹಾಗೂ ವಿನ್ಯಾಸ, ಯಕ್ಷಗಾನದ ಕೆಲ ಪರಿಕರಗಳ ಸಿದ್ದತೆಯ ಹೊಣೆಗಾರಿಕೆ ಹೊತ್ತು ನಿರ್ವಹಿಸಿದ್ದಲ್ಲದೆ ರಂಗಸ್ಥಳ ಹಾಗೂ ಕದಂಬವನ ಸ್ವರ್ಣದುಯ್ಯಾಲೆ ಮಂಟಪ ಅಲಂಕಾರಕ್ಕಾಗಿ ವೈವಿಧ್ಯಮಯ ಹೂವುಗಳನ್ನು ಭಾರತದಿಂದಲೇ ತರಿಸಲಾಗಿತ್ತು. ಶ್ರೀದೇವಿ ಪಾತ್ರಗಳಿಗೆ ಬಳಸಲಾದ ಮಲ್ಲಿಗೆ ಸಹಿತ ಇತರ ಹೂವುಗಳನ್ನು ದುಬಾರಿ ಬೆಲೆ ತೆತ್ತು ಅಲ್ಲಿಯೇ ಖರೀದಿ ಸಿದ್ದು, ಚೌಕಿ ಪೂಜೆಗಾಗಿ ಪವಿತ್ರ ಹೂವುಗಳನ್ನೇ ಬಳಸಿ ವಿನ್ಯಾಸಗೊಳಿಸಿದ ಕಟೀಲು ದೇವಿಯ ಭಾವಚಿತ್ರ ಆಕರ್ಷಕವಾಗಿತ್ತು. ಇಲ್ಲಿ ಸತ್ಕಾರ ವ್ಯವಸ್ಥೆಗೂ…

Read More

ಕುಶಾಲನಗರ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು (ಕ. ಸಾ. ಪ.), ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹೆಬ್ಬಾಲೆ ವಲಯ ಕ. ಸಾ. ಪ. ಘಟಕ ಹಾಗೂ ಹೆಬ್ಬಾಲೆ ಪ್ರೌಢಶಾಲೆಯ ಕನ್ನಡ ಭಾಷಾ ಸಂಘದ ಸಂಯುಕ್ತಾಶ್ರಯದಲ್ಲಿ ಬಿ. ಜಿ. ರಘುನಾಥನಾಯಕ್ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11-06-2024 ರಂದು ನಡೆಯಿತು. ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಹಾಗೂ ಕ. ಸಾ. ಪ. ಅಧ್ಯಕ್ಷರುಗಳು ಕುರಿತು ನಡೆದ ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಟಿ. ಜಿ. ಪ್ರೇಮಕುಮಾರ್ ಮಾತನಾಡಿ “ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಮೂಡಿಸುವುದು ಮತ್ತು ಅವರನ್ನು ಉತ್ತಮ ಸತ್ಪಜೆಗಳನ್ನಾಗಿ ರೂಪಿಸುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ. ಮಕ್ಕಳು ಕಲೆ, ಸಾಹಿತ್ಯ, ವಿಜ್ಞಾನದ ಪುಸ್ತಕಗಳನ್ನು ಓದುವ ಪ್ರವೃತ್ತಿಯೊಂದಿಗೆ ಬರವಣಿಗೆಯ ಕೌಶಲ್ಯ ಬೆಳೆಸಿಕೊಂಡು ಜ್ಞಾನವಂತರಾಗಬೇಕು. ನಾಡಿನ ಸಾಹಿತಿಗಳ ಸಾಹಿತ್ಯವನ್ನು…

Read More

ಬೆಂಗಳೂರು : ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘವು 2023 ಸಾಲಿನ ರಾಜ್ಯಮಟ್ಟದ ನಾನಾ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ‘ಸಾಹಿತ್ಯ ರತ್ನ’ ಪ್ರಶಸ್ತಿಗೆ ಲೇಖಕ ಡಾ. ಎನ್. ಜಗದೀಶ್ ಕೊಪ್ಪ ಅವರ ‘ಬಹುತ್ವದ ಭಾರತ’ ಕೃತಿಯು ಆಯ್ಕೆಯಾಗಿದ್ದು, ‘ಯುವ ಸಾಹಿತ್ಯ ರತ್ನ’ ಪ್ರಶಸ್ತಿಗೆ ನಟಿ ರಂಜಿನಿ ರಾಘವನ್‌ ಅವರ ‘ಟೈಪ್ ರೈಟ್’ ಕೃತಿ ಆಯ್ಕೆಯಾಗಿದೆ. ಅದೇ ರೀತಿ ‘ಪುಸ್ತಕ ರತ್ನ’ ಪ್ರಶಸ್ತಿಗೆ ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ‘ಮುದ್ರಣ ರತ್ನ’ ಪ್ರಶಸ್ತಿಗೆ ಗೌರಿ ಲ್ಯಾಮಿನೇಟರ್ಸ್ ಸಂಸ್ಥೆಯ ಟಂಕಸಾಲಿ ಎಸ್. ನಾಗರಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ. ನಾಲ್ಕೂ ಪ್ರಶಸ್ತಿಗಳು ತಲಾ 10,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿವೆ. ಪ್ರಶಸ್ತಿಗಳನ್ನು ದಿನಾಂಕ 06-07-2024ರಂದು ಬೆಂಗಳೂರಿನ ಗಾಂಧಿ ಭವನದ ಬಾಪೂ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸಾಮಯ್ಯ ತಿಳಿಸಿದ್ದಾರೆ. ಡಾ. ಹೆಚ್. ಎನ್. ಜಗದೀಶ್ ಕೊಪ್ಪ ಕುಮಾರಿ ರಂಜಿನಿ ರಾಘವನ್  ಶ್ರೀ ಅಭಿರುಚಿ ಗಣೇಶ್ …

Read More

ತುಮಕೂರು : ತುಮಕೂರಿನ ‘ವೀಚಿ ಸಾಹಿತ್ಯ ಪ್ರತಿಷ್ಠಾನ’ದ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಇದರ ಸಹಯೋಗದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 16-06-2024ರಂದು ತುಮಕೂರಿನ ಅಮಾನಿಕೆರೆ ರಸ್ತೆ, ಕನ್ನಡ ಭವನದಲ್ಲಿ ನಡೆಯಲಿದೆ. ಬೆಂಗಳೂರಿನ ಕೇಂದ್ರ ವಲಯದ ಮಾನ್ಯ ಪೋಲೀಸ್ ಮಹಾನಿರ್ದೇಶಕರಾದ ಡಾ. ಬಿ.ಆರ್. ರವಿಕಾಂತೇ ಗೌಡ ಇವರು ಈ ಕಾರ್ಯಕ್ರಮ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿದ್ದು, ವೀಚಿ ಸಾಹಿತ್ಯ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಶ್ರೀ ಎಸ್. ನಾಗಣ್ಣ ಇವರು ಅಧ್ಯಕ್ಷತೆ ವಹಿಸಲಿರುವರು. ಕನ್ನಡ ಪುಸ್ತಕ ಪ್ರಾಧಿಕಾರದ ಲೇಖಕರು ಮತ್ತು ಮಾಜಿ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಇವರು ಕವಿ ವೀಚಿಯವರ ಕುರಿತು ಮಾತನಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತ ‘ವಿನೂತನ ಕಥನ ಕಾರಣ’ (ಸಾಹಿತ್ಯ ವಿಮರ್ಶೆ) ಕೃತಿಯ ಲೇಖಕರಾದ ಡಾ. ಬಿ. ಜನಾರ್ದನ ಭಟ್, ಪ್ರಶಸ್ತಿ ಪುರಸ್ಕೃತ ‘ಅರಸು ಕುರನ್ಗರಾಯ’ (ಸಂಶೋಧನೆ) ಕೃತಿಯ ಲೇಖಕರಾದ ಡಾ. ರವಿಕುಮಾರ್ ನೀಹ ಇವರಿಗೆ ‘ವೀಚಿ ಸಾಹಿತ್ಯ ಪ್ರಶಸ್ತಿ 2023’, ಪ್ರಶಸ್ತಿ ಪುರಸ್ಕೃತ ‘ಬುದ್ಧನ ಕಿವಿ’…

Read More

ಮಡಿಕೇರಿ : ರೆಡ್ ಬ್ರಿಕ್ಸ್ ಇನ್‌ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ, ವಿರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ವಿರಚಿತ ವೈವಿಧ್ಯಮಯವಾದ 82 ಲೇಖನ ಗಳುಳ್ಳ 320 ಪುಟಗಳ ‘ಅಂತರಗಂಗೆ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 09-06-2024ರಂದು ನಡೆಯಿತು. ವೈಚಾರಿಕ ಬರಹಗಳು, ಮಹಿಳಾ ಪರವಾದ ಲೇಖನಗಳು, ಸಾಧಕರು ಹಾಗೂ ವಿಶೇಷ ದಿನಗಳನ್ನು ಕುರಿತ ಲೇಖನಗಳಿರುವ ಈ ಪುಸ್ತಕದ ಕುರಿತು ಎಲ್ಲರೂ ಮೆಚ್ಚುಗೆಯ ನುಡಿಗಳನ್ನಾಡಿದರು. ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ “ಮಹಿಳಾ ಬರಹಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2002ರಿಂದ ಕನ್ನಡ ಸಾಹಿತ್ಯ ಪರಿಷತ್ ಕೊಡಗಿನ ಗೌರಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿಗೆ ಈವರೆಗೂ 21 ಲೇಖಕಿಯರು ಅರ್ಹರಾಗಿದ್ದಾರೆ” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಅಳುವಾರದಲ್ಲಿನ ಕನ್ನಡ ವಿಶ್ವವಿದ್ಯಾನಿಲಯದ ಕನ್ನಡ ಉಪನ್ಯಾಸಕ ಡಾ.ಜಮೀರ್ ಅಹಮದ್ ಮಾತನಾಡಿ “ಸಾಮಾಜಿಕ ಹೊಣೆಗಾರಿಕೆ ಹೆಚ್ಚಿಸುವಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವ ನಿಟ್ಟಿನಲ್ಲಿ ಒಳ್ಳೆಯ ಮಾಹಿತಿಯುಳ್ಳ…

Read More