Author: roovari

ಉಪ್ಪಿನಂಗಡಿ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಹುಣ್ಣಿಮೆಯ 3ನೇ ಮಖೆ ಜಾತ್ರೆ ಪ್ರಯುಕ್ತ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪವಾಂಜೆ ಇವರಿಂದ ‘ಶ್ರೀದೇವಿ ಲಲಿತೋಪ ಖ್ಯಾನ’ ಯಕ್ಷಗಾನ ಬಯಲಾಟವು ದಿನಾಂಕ 13 ಮಾರ್ಚ್ 2025ರಂದು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾದ ಕೆ. ಜಗದೀಶ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸುಬ್ರಯ ಹೊಳ್ಳ ಕಾಸರಗೋಡು ಮತ್ತು ಉಪ್ಪಿನಂಗಡಿಯ ಯಕ್ಷ ಸಂಗಮದ ಸಂಸ್ಥಾಪಕರಾದ ಯು. ಕೃಷ್ಣ ಕೋಟಿ ಇವರನ್ನು ಸನ್ಮಾನಿಸಲಾಗುವುದು.

Read More

ಕೋಟ : ಕೋಟದ ಸು. ವಿ.ಕಾ. ಸಾಂಸ್ಕೃತಿಕ ಸಂಘಟನೆಯು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿ ಗೋಷ್ಠಿ ಮತ್ತು ಪುಸ್ತಕ ಅನಾವರಣ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025ರ ಆದಿತ್ಯವಾರದಂದು ಕೋಟದ ಕಾರಂತ ಥೀಂ ಪಾರ್ಕ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ “ಅತಿ ಕಡಿಮೆ ಶಬ್ದಗಳ ಮೂಲಕ ಧ್ವನಿ ಪೂರ್ಣವಾಗಿ ಕಟ್ಟುವುದೇ ಕವಿತೆ. ಅನುಕರಣೆಯ ಮಿತಿಯನ್ನು ಮೀರಿ, ಅನುಭವದೊಂದಿಗೆ ಸೃಜನಶೀಲತೆಯನ್ನು ಸಾಧಿಸುವಲ್ಲಿ ಕವಿಯಾದವನು ಪ್ರಯತ್ನಿಸಬೇಕು. ನಮ್ಮ ಹೆಚ್ಚಿನ ಓದು ನಮ್ಮನ್ನು ಒಳ್ಳೆಯ ಬರಹಗಾರರನ್ನಾಗಿಸುತ್ತದೆ. ಕವಿತೆ ವಾಚ್ಯವಾಗದೆ ಓದುಗನಲ್ಲಿ ಹೊಸ ಹೊಳಹನ್ನು ಅರಳಿಸಬೇಕು” ಎಂದರು. ಇದೇ ಸಂದರ್ಭ ಉಪನ್ಯಾಸಕ ಸುಜಯೀಂದ್ರ ಹಂದೆಯವರ ಸಂಪಾದಿತ ಕಾಲೇಜು ವಿದ್ಯಾರ್ಥಿಗಳ ಕವನ ಸಂಕಲನ ‘ನನೆ ಮೊಗ್ಗು’ ಕೃತಿಯನ್ನು ಅನಾವರಣಗೊಳಿಸಿದ ಕವಯತ್ರಿ ಚಿತ್ರಪಾಡಿ ಸುಮನಾ ಆರ್ ಹೇರ್ಳೆ ಮಾತನಾಡಿ “ಪ್ರತಿಯೊಬ್ಬ ಕವಿಗೆ ತುಡಿಯುವ…

Read More

ದಾವಣಗೆರೆ : ವೃತ್ತಿ ರಂಗಭೂಮಿ ರಂಗಾಯಣವು ದಿನಾಂಕ 15, 16 ಮತ್ತು 17 ಮಾರ್ಚ್ 2025ರಂದು ದಾವಣಗೆರೆ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೃತ್ತಿ ರಂಗೋತ್ಸವ – 2025 ಕಾರ್ಯಕ್ರಮ ಹಮ್ಮಿಕೊಂಡಿದೆ. ವಿಚಾರ ಸಂಕಿರಣ, ರಂಗ ದಾಖಲೆ ಮತ್ತು ಚಿತ್ರಕಲಾ ಪ್ರದರ್ಶನ, ರಂಗ ಸಂವಾದ ಸೇರಿದಂತೆ ಮೂರು ದಿವಸಗಳಲ್ಲಿ ಮೂರು ಮಹತ್ವದ ನಾಟಕಗಳ ಪ್ರದರ್ಶನ ಜರುಗುತ್ತವೆ. ಮೂರು ನಾಟಕಗಳ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ‘ನಾಟಕ ವಿಮರ್ಶಾ’ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ₹ 3000/-, ದ್ವಿತೀಯ ಬಹುಮಾನ ₹ 2000/-, ತೃತೀಯ ಬಹುಮಾನ ₹ 1000/- ಸ್ಪರ್ಧೆಯ ನಿಯಮಗಳು : • ವಿಮರ್ಶೆಯು ಐದುನೂರು ಪದಗಳ ಮಿತಿಯಲ್ಲಿರಬೇಕು. • ವಿಮರ್ಶೆಯು ಮೂರು ನಾಟಕಗಳ ಕುರಿತು ಇರಬೇಕು. • ವಿಮರ್ಶಾ ಕೈ ಬರಹ ಸ್ಪಷ್ಟವಾಗಿದ್ದು, ಪದಗಳ ಸಂಖ್ಯೆ ಸಮೇತ ಇರಬೇಕು. ಡಿ.ಟಿ.ಪಿ. ಮಾಡಿ ಕಳಿಸಿದರೆ ಹೆಚ್ಚು ಉತ್ತಮ. • ಕಾಲೇಜು ಪ್ರಾಚಾರ್ಯರಿಂದ ತಾವು ವಿದ್ಯಾರ್ಥಿ ಎಂಬುದರ ದಾಖಲೆ ಸಲ್ಲಿಸಬೇಕು.…

Read More

ಪುತ್ತೂರು : ಮುಲ್ಕಿಯ ನೃತ್ಯಗುರು ಶ್ರೀಮತಿ ಅನ್ನಪೂರ್ಣ ರಿತೇಶ್ ಇವರ ಶಿಷ್ಯೆ ಉದಯೋನ್ಮುಖ ಪ್ರತಿಭೆ ಕು. ರಿದ್ಧಿ ಹೆಚ್. ಶೆಟ್ಟಿಯವರ ಮನಮೋಹಕ ಭರತನಾಟ್ಯ ಕಾರ್ಯಕ್ರಮ ದಿನಾಂಕ 11 ಜನವರಿ 2025ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನೃತ್ಯಾಂತರಂಗದ 120ನೇ ಸರಣಿಯಲ್ಲಿ ನಡೆಯಿತು. ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ವಿದ್ವಾನ್ ದೀಪಕ್ ಕುಮಾರ್ ರವರು ನಿರ್ವಹಣೆಗೈದರು. ಈ ಕಾರ್ಯಕ್ರಮದ ಅಭ್ಯಾಗತರಾಗಿ ಬಂದಿದ್ದ ಪುತ್ತೂರು ಇನ್ನರ್ ವೀಲ್ ನ ಅಧ್ಯಕ್ಷೆಯಾದ ಶ್ರೀಮತಿ ರಾಜೇಶ್ವರಿ ಆಚಾರ್ ಇವರು ಕಲಾವಿದೆಯ ನೃತ್ಯ ವೈಖರಿಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಶ್ರೀಯವರು ನಿರೂಪಣೆಗೈದು, ಕು. ಮಾತಂಗಿ – ಶಂಖನಾದ, ಶೌರೀಕೃಷ್ಣ- ಪಂಚಾಂಗ ವಾಚನ, ಭಾರ್ಗವಿ ಶೆಣೈ – ಪಾರ್ಥನೆ, ಸೃಷ್ಟಿ ಎನ್.ವಿ. – ವಿಷಯ ಮಂಡನೆ, ಶೋನಲ್ ರೈ ಮತ್ತು ವೃದ್ಧಿ ರೈ ಪರಿಚಯ ಮಾಡಿದರು. ಕಲಾವಿದೆಯ ಗುರು ವಿದುಷಿ ಅನ್ನಪೂರ್ಣ ರೀತೇಶ್ ನೃತ್ಯಗಳ ಬಗ್ಗೆ ಮಾಹಿತಿ ನೀಡಿದರು.

Read More

ಕಾಸರಗೋಡು : ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ಶ್ರೀ ಎಡನೀರು ಕ್ಷೇತ್ರದ ಭಾರತೀ ಕಲಾ ಸದನದ ಸಭಾ ಮಂದಿರದಲ್ಲಿ ದಿನಾಂಕ 15 ಮಾರ್ಚ್ 2025ರಂದು ಮಧ್ಯಾಹ್ನ 2-00 ಗಂಟೆಗೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಖ್ಯಾತ ಸಾಹಿತಿ ಪ್ರೊ. ತಾಳ್ತಜೆ ವಸಂತ ಕುಮಾರ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿಯವರು ಅಭಿನಂದನ ಭಾಷಣವನ್ನು ಮಾಡುವರು. ಡಾ. ರಮಾನಂದ ಬನಾರಿ ಮತ್ತು ಡಾ. ವಸಂತ ಕುಮಾರ ಪೆರ್ಲ ಇವರ ಸಂಪಾದಿತ ಕೃತಿಗಳಾದ ‘ಕನ್ನಡಿಯಲ್ಲಿ ಕನ್ನಡಿಗ ಸಂಪುಟ 1 ಮತ್ತು 2’ ಲೋಕಾರ್ಪಣೆಗೊಳ್ಳಲಿದ್ದು, ಕತೆಗಾರರು, ವಿಮರ್ಶಕರಾದ ಡಾ. ಸುಭಾಷ್ ಪಟ್ಟಾಜೆ ಕೃತಿ ಪರಿಚಯ ಮಾಡಿಕೊಡಲಿದ್ದಾರೆ. ಸಭಾ ಕಾರ್ಯಕ್ರಮದ ಮೊದಲು ಆಗಮ ಪೆರ್ಲ ಇವರಿಂದ ಕರ್ನಾಟಕ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಪಿಟೀಲಿನಲ್ಲಿ ಗೌತಮ ಭಟ್ ಪಿ.ಜಿ.…

Read More

ಬೆಂಗಳೂರು : ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕೃಷ್ಣಾಪುರ ದೊಡ್ಡಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇದರ ವತಿಯಿಂದ ‘ರೂಪಾಂತರ’ ತಂಡದವರಿಂದ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ ಪ್ರದರ್ಶನವನ್ನು ದಿನಾಂಕ 11 ಮಾರ್ಚ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಹಂಪಿ ನಗರ ಪಶ್ಚಿಮ ವಲಯ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕವನ್ನು ಡಾ. ರಾಮಕೃಷ್ಣ ಮರಾಠೆ ಇವರು ರಚನೆ ಮಾಡಿದ್ದು, ದೇಸಿ ಮೋಹನ್ ಇವರು ಸಂಗೀತ ನೀಡಿದ್ದು, ಕೆ.ಎಸ್.ಡಿ.ಎಲ್. ಚಂದ್ರು ಇವರು ನಿರ್ದೇಶನ ಮಾಡಿರುತ್ತಾರೆ. ರೂಪಾಂತರ…….. ಕಳೆದ ಮೂರುವರೆ ದಶಕಗಳಿಂದ ನಿರಂತರವಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿರುವ ರಂಗ ತಂಡ. ‘ರೂಪಾಂತರ’ ವಿಶೇಷವಾಗಿ ಕನ್ನಡ ಸಾಹಿತ್ಯ ಲೋಕದ ಮಹತ್ವದ ಲೇಖಕರ ಕಥೆ, ಕಾವ್ಯ, ಆಧಾರಿತ ಕಾದಂಬರಿಗಳ ರಂಗ ಪ್ರಯೋಗಗಳನ್ನು ಈ ನಾಡಿನಾದ್ಯಂತ ಮತ್ತು ಹೊರ ರಾಜ್ಯಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿ ಪ್ರೇಕ್ಷಕರ ಮತ್ತು ವಿಮರ್ಷಕರ ಮೆಚ್ಚುಗೆ ಗಳಿಸಿದೆ. ಲಂಕೇಶರ ರೊಟ್ಟಿ, ಮುಸ್ಸಂಜೆ ಕಥಾಪ್ರಸಂಗ, ತೇಜಸ್ವಿಯವರ ಕಿರಗೂರಿನ…

Read More

ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಆಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿ ಎಂ.ಸಿ.ಎಫ್. – ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ ಸಂಗೀತ ಕಛೇರಿ ಸರಣಿ ಕಾರ್ಯಕ್ರಮದ ಏಳನೇ ವರ್ಷದ ಸಂಭ್ರಮ ‘ಉದಯರಾಗ 60’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 09 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು “ಯುವ ಜನತೆಯಲ್ಲಿ ಪುರಾಣ ಪಜ್ಞೆ ಬೆಳೆಸುವಲ್ಲಿ ಭಕ್ತಿ ಸಂಗೀತ ಪೂರಕವಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿದ್ದು ಜನತೆ ಜಾಗೃತರಾಗಬೇಕಾಗಿದೆ” ಎಂದು ನುಡಿದರು. ಹಿರಿಯ ಗಮಕಿ ಎಚ್. ಯಜ್ಞೇಶ ಆಚಾರ್ಯ ಹೊಸಬೆಟ್ಟು ಇವರು ಭಕ್ತಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಗಾಯನದಲ್ಲಿ ಪವಿತ್ರಾ ಮಯ್ಯ ಸುರತ್ಕಲ್, ವಯಲಿನ್ ನಲ್ಲಿ ಪ್ರಸನ್ನ ಕುಮಾರ್ ಸುರತ್ಕಲ್, ಹಾರ್ಮೋನಿಯಂ…

Read More

ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 07 ಮಾರ್ಚ್ 2025ರಂದು ಮೂರ್ನಾಡಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್. ನಿವೇದಿತಾ ಇವರು ಮಾತನಾಡಿ “ಕೇವಲ 27 ವರ್ಷ ಬದುಕಿದ ಕೊಡಗಿನ ಗೌರಮ್ಮ ಸಾಹಿತ್ಯ ವಲಯದಲ್ಲಿ ಮೂಡಿಸಿದ ಸಂಚಲನ ಅತ್ಯಾದ್ಭುತವಾದದ್ದು ಮತ್ತು ಅನನ್ಯವಾದದ್ದು. ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ ಅವರು 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಅವರು ನೇರವಾಗಿ ಸ್ವಾತಂತ್ರ ಹೋರಾಟಕ್ಕೆ ಇಳಿಯದಿದ್ದರೂ ಗಾಂಧೀಜಿಯವರು 1934ರಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಕರ್ನಾಟಕದಲ್ಲಿ…

Read More

ರವಿ ಮಡೋಡಿ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ಪ್ರವೃತ್ತಿಯಿಂದ ಯಕ್ಷಗಾನ ಮತ್ತು ಸಾಹಿತ್ಯ ಪ್ರೇಮಿ. ಯಕ್ಷಗಾನ ನೃತ್ಯ ಹಾಗೂ ಅರ್ಥಗಾರಿಕೆಯಲ್ಲಿ ಪರಿಣತಿ ಹೊಂದಿರುವ ಅವರು, ಯಕ್ಷಗಾನದ ಅಕಾಡಮಿಕ್ ಕಾರ್ಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಅಲ್ಲದೆ, ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭವನ್ನು ತರಲು ನಿರಂತರ ಶ್ರಮಿಸುತ್ತಿದ್ದಾರೆ. ರವಿ ಮಡೋಡಿ ಅವರು ಪರಮೇಶ್ವರಯ್ಯ ಮತ್ತು ಲಕ್ಷ್ಮೀದೇವಿ ದಂಪತಿಯ ಪುತ್ರರಾಗಿದ್ದು, ನವೆಂಬರ್ 5ರಂದು ಜನಿಸಿದರು. ಅವರು Master of Computer Application (MCA), Post Graduate Diploma in Computer Science (PGDCS) ಮತ್ತು DCS ಪದವಿಗಳನ್ನು ಪಡೆದಿದ್ದಾರೆ. ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ಇವರಿಗೆ ಶ್ರೀ ಬೇಗಾರ್ ಶಿವಕುಮಾರ್ ಮತ್ತು ಶ್ರೀ ಕೃಷ್ಣಮೂರ್ತಿ ತುಂಗ ಯಕ್ಷಗಾನ ಗುರುಗಳಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು : ನಮ್ಮ ಪರಿಸರವೇ ಯಕ್ಷಗಾನದ ಆಡುಂಬೊಲವಾಗಿತ್ತು. ವರ್ಷಕ್ಕೆ ಅನೇಕ ಮೆಳಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತಾ ಇರುತ್ತಿದ್ದವು. ಬಾಲ್ಯದಲ್ಲಿ,…

Read More

ಬಿಳುಮನೆ ರಾಮದಾಸ್ ಒಬ್ಬ ಹಿರಿಯ ಕಥೆ ಕಾದಂಬರಿಕಾರ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿಳುಮನೆಯಲ್ಲಿ 1941 ಮಾರ್ಚ್ 9ರಂದು ಜನಿಸಿದವರು. ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸುವಲ್ಲಿ ಮೌಲ್ಯಯುತ ಕಾದಂಬರಿಗಳನ್ನು ರಚಿಸಿ ಪ್ರಕಟಿಸಿದ್ದಾರೆ. ‘ಅನಾವರಣ’ ಎಂಬುದು ನಗರ ಜೀವನದ ಬಗ್ಗೆ ರಾಮದಾಸ್ ಬಿಳುಮನೆಯವರು ಬರೆದ ಚೊಚ್ಚಲ ಕಾದಂಬರಿ. ‘ರೋಜಾ ಪುಸ್ತಕ’ ಇದು ಕಾದಂಬರಿ ಪ್ರಕಾರಕ್ಕೆ ಅವರು ನೀಡಿದ ಅನನ್ಯ ಕೊಡುಗೆ. ಇವರ ಪ್ರಮುಖ ಕಾದಂಬರಿಗಳು ‘ಮರಳಿನ ಮನೆ’, ‘ಕುಂಜ’, ‘ಕರಾವಳಿಯ ಹುಡುಗಿ’, ‘ಲಡಾಯಿ’, ‘ವ್ಯಾಮೋಹ’, ‘ನಂಬಿ ಕೆಟ್ಟವರಿಲ್ಲವೋ’, ‘ಮಲೆಯ ಸಂತ’ ಇತ್ಯಾದಿ. ‘ಪ್ರೇಮ ಪ್ರೇಮ ಪ್ರೇಮ’ ಚಲನಚಿತ್ರ ಇವರ ರಚನೆಯ ‘ತಲೆಮಾರು’ ಕಾದಂಬರಿಯಾಧಾರಿತವಾಗಿದೆ. ‘ಹುಲಿ ಮಾಡಿಸಿದ ಮದುವೆ’ ಇದೊಂದು ಪ್ರಬಂಧ ಸಂಕಲನ. ‘ಹತ್ತಿರ ಬಂದು ದೂರಸರಿದವರು’ ಇವರ ರಚನೆಯ ನಾಟಕ ಕೃತಿ. ಅನುಕರಣೆ ಮಾಡುವ ಕಲೆ ಸಿದ್ಧಿಸಿಕೊಂಡವರು ರಾಮದಾಸ್ ಬೀಳುಮನೆಯವರು. ಎರಡು ಪಾತ್ರಗಳ ಸಂವಾದವನ್ನು ದ್ವಿಪಾತ್ರ ಅಭಿನಯದ ಮೂಲಕ ಸುಂದರವಾಗಿ ನಿರೂಪಿಸುವ ಅನುಕರಣ ಪಟುವಾಗಿದ್ದರು. ಅವರ ಸಾಹಿತ್ಯದಲ್ಲಿ ಬದಲಾವಣೆಗೆ ಒಗ್ಗಿಕೊಂಡ ಮಲೆನಾಡಿನ ಬದುಕಿನ…

Read More