Subscribe to Updates
Get the latest creative news from FooBar about art, design and business.
Author: roovari
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ‘ಶ್ರೀ ಆಂಜನೇಯ 57’ ವಾರ್ಷಿಕೋತ್ಸವವು ದಿನಾಂಕ 25 ಡಿಸೆಂಬರ್ 2025ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ನಟರಾಜ ವೇದಿಕೆಯಲ್ಲಿ ಅಪರಾಹ್ನ 2-00 ಗಂಟೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಿಂದ ತಾಳಮದ್ದಳೆ, ಶ್ರೀ ಶ್ರೀ ಎಡನೀರು ಶ್ರೀಗಳ ಸಾನಿಧ್ಯದಲ್ಲಿ ‘ಶ್ರೀಯಕ್ಷಾಂಜನೇಯ ಪ್ರಶಸ್ತಿ’ ಪ್ರದಾನ ಮತ್ತು ಶ್ರೀಮತಿ ಶಾಂತ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಆವಾರ್ಡ್ ಪ್ರದಾನಿಸುವುದೆಂದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದರು. ಪರ್ಲಡ್ಕದ ಶಿವಪೇಟೆಯ ಅಗಸ್ತ್ಯದಲ್ಲಿ ದಿನಾಂಕ 16 ನವೆಂಬರ್ 2025ರಂದು ಜರಗಿದ ಸಭೆಯಲ್ಲಿ ಸಂಘದ ಪದಾಧಿಕಾರಿಗಳು ಸದಸ್ಯರಾದ ಗುಂಡ್ಯಡ್ಕ ಈಶ್ವರ ಭಟ್, ದುಗ್ಗಪ್ಪ ಎನ್., ಪರೀಕ್ಷಿತ್, ವೇಣುಗೋಪಾಲ ಭಟ್, ಹರಿಣಾಕ್ಷಿ ಜೆ. ಶೆಟ್ಟಿ, ಭಾರತಿ ರೈ ಆರಿಯಡ್ಕ, ಆನಂದ ಸವಣೂರು, ಸತೀಶ್ ಕೆ., ಅಚ್ಯುತ ಕೆ., ಶಾರದಾ ಅರಸ್, ಕಿಶೋರಿ ದುಗ್ಗಪ್ಪ ಭಾಗವಹಿಸಿದ್ದರು. ಸ್ವರ್ಣಲತಾ ಭಾಸ್ಕರ್ ವಂದಿಸಿದರು.
ಮೈಸೂರು : ಕದಂಬ ರಂಗವೇದಿಕೆ (ರಿ.) ಮೈಸೂರು ಇವರ ವತಿಯಿಂದ ಕೃತಿ ಬಿಡುಗಡೆ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ದಿನಾಂಕ 20 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ಕಲಾ ಮಂದಿರ ಪಕ್ಕದಲ್ಲಿರುವ ಕಿರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಗಣೇಶ ಅಮೀನಗಡ ಇವರ ‘ಬಂಗಾರದ ಮನುಷ್ಯ’ ನಾಟಕ ಕೃತಿ ಬಿಡುಗಡೆ ಮತ್ತು ‘ಕೌದಿ’ ಏಕವ್ಯಕ್ತಿ ನಾಟಕದ 50ನೇ ಪ್ರದರ್ಶನ ನಡೆಯಲಿದೆ. ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಪಿ. ಶಿವರಾಜು ಇವರು ಕೃತಿ ಬಿಡುಗಡೆ ಮಾಡಲಿದ್ದು, ಲೇಖಕಿ ಡಾ. ಗಿರಿಜಾಪತಿ ಎನ್.ಎಂ. ಇವರು ಕೃತಿ ಪರಿಚಯ ಮಾಡಲಿದ್ದಾರೆ. ಗಣೇಶ ಅಮೀನಗಡ ಇವರ ಉಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕದಂಬ ರಂಗವೇದಿಕೆಯ ಅಧ್ಯಕ್ಷರಾದ ರಾಜಶೇಖರ ಕದಂಬ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಡಿಪು : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ʻಕನಕ ಜಯಂತಿʼ ಪ್ರಯುಕ್ತ ದಿನಾಂಕ 12 ನವಂಬರ್ 2025ರಂದು ನಡೆದ ‘ಕನಕ ಕೀರ್ತನ ಗಂಗೋತ್ರಿ’ ಕನಕದಾಸರ ಕೀರ್ತನೆಗಳ ಗಾಯನ ಕಾರ್ಯಕ್ರಮದ ಫಲಿತಾಂಶ ಪ್ರಕಟವಾಗಿದ್ದು, 12 ಉದಯೋನ್ಮುಖ ಗಾಯಕರು ಮತ್ತು 9 ತಂಡಗಳು ಕನಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಪ್ರೌಢ ಶಾಲಾ ವಿಭಾಗದಲ್ಲಿ : ಆಯುಷ್ ಪ್ರೇಮ್ 9ನೇ ತರಗತಿ ಸೆಂಟ್ ಅಲೋಸಿಯಸ್ ಹೌಸ್ಕೂಲ್ ಕೊಡಿಯಾಲ್ಬೈಲ್, ಪ್ರದಯ್ಯ ಶೆಣೈ 9ನೇ ತರಗತಿ ಕೆನರಾ ಸಿ.ಬಿ.ಎಸ್.ಇ. ಸ್ಕೂಲ್ ಡೊಂಗರಕೆರೆ ಮಂಗಳೂರು, ನಿಸ್ವನ 8ನೇ ತರಗತಿ ಪರಿಜ್ಞಾನ ವಿದ್ಯಾಲಯ ಸೋಮೇಶ್ವರ. ಪದವಿಪೂರ್ವ ವಿಭಾಗದಲ್ಲಿ : ನಿಹಾಲ್ ಪ್ರಥಮ ಪಿ.ಯು.ಸಿ. ಆಳ್ವಾಸ್ ಪಿ.ಯು. ಕಾಲೇಜು ಮೂಡಬಿದ್ರೆ, ಅನನ್ಯ ನಾರಾಯಣ್ ಪ್ರಥಮ ಪಿ.ಯು.ಸಿ. ಸೈಂಟ್ ಅಲೋಶಿಯಸ್ ಕಾಲೇಜು ಮಂಗಳೂರು, ಪೂರ್ವಿ ಬಿ.ಎಸ್. ಪ್ರಥಮ ಪಿ.ಯು.ಸಿ. ಶಾರದ ಪಿ.ಯು. ಕಾಲೇಜು ಕೊಡಿಯಾಲ್ಬೈಲ್ ಮಂಗಳೂರು. ಪದವಿ ವಿಭಾಗ ಸಮೂಹ…
ಧರ್ಮತ್ತಡ್ಕ : ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಮತ್ತು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಇದರ ಸಹಯೋಗದೊಂದಿಗೆ ಪೊಸಡಿ ಗುಂಪೆ ನಿಸರ್ಗಧಾಮದಲ್ಲಿ ದಿನಾಂಕ 15 ಮತ್ತು 16 ನವೆಂಬರ್ 2025ರಂದು ಡಾ. ಎಸ್.ಎಲ್. ಭೈರಪ್ಪನವರ ಸಂಸ್ಮರಣೆ ಮತ್ತು ಕೃತಿಗಳ ಅವಲೋಕನ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ಇವರು ಸಾಲುಮರದ ತಿಮ್ಮಕ್ಕನವರ ಸ್ಮರಣೆಯೊಂದಿಗೆ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ “ಇಪ್ಪತ್ತಕ್ಕೂ ಮಿಕ್ಕಿ ಅಮೂಲ್ಯ ಕಾದಂಬರಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಎಸ್.ಎಲ್. ಭೈರಪ್ಪನವರು ಕನ್ನಡಿಗರಲ್ಲಿ ಓದುವ ಅಭಿರುಚಿ ಹೆಚ್ಚಿಸಿದ ಮಹಾನ್ ಕಾದಂಬರಿಕಾರ” ಎಂದು ಹೇಳಿದರು. ವಿಶ್ರಾಂತ ಕುಲಪತಿ, ಜಾನಪದ ತಜ್ಞ ಡಾ. ಕೆ. ಚಿನ್ನಪ್ಪ ಗೌಡರು ಅಧ್ಯಕ್ಷತೆಯನ್ನು ವಹಿಸಿದ್ದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಸಾಹಿತಿ ಡಾ. ಸುರೇಶ್ ಪಾಟೀಲ ಬೆಂಗಳೂರು, ಪತ್ರಕರ್ತ…
ಬೆಂಗಳೂರು : ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಬಾಪು ಪದ್ಮನಾಭ ಹಲವು ಸಂಗೀತದ ಅನ್ವೇಷಣೆಗಳನ್ನು ಯಶಸ್ವಿಯಾಗಿ ಮಾಡಿದವರು. ಅವರ ಪ್ರಯೋಗಶೀಲ ಸಂಗೀತದ ಆಲ್ಭಂಗಳು ಜಾಗತಿಕ ಮನ್ನಣೆಯನ್ನು ಪಡೆದಿವೆ. ಪಂಡಿತ್ ಹರಿಪ್ರಸಾದ್ ಚೌರಾಸಿಯಾರವರ ನೇರ ಶಿಷ್ಯರಾದ ಇವರು ಸಾಹಿತ್ಯ ಮತ್ತು ಸಂಗೀತವನ್ನು ಬೆಸೆಯುವ ನೆಲೆಯಲ್ಲಿಯೂ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ವಚನಗಳನ್ನು ಅಂತರಂಗದ ಧ್ವನಿಯಾಗಿ ನೋಡುವ, ಅವುಗಳ ಸಾರ್ವಕಾಲಿಕ ನೆಲೆಗಳನ್ನು ಹಿಡಿಯುವ ಕೆಲಸವನ್ನು ಅವರು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ. ‘ವಚನ ದನಿ’ ಬಾಪು ಪದ್ಮನಾಭರವರ ವಿಶಿಷ್ಟ ಪ್ರಯತ್ನ. ವಚನಗಳ ಸ್ವರೂಪದ ಸೂಕ್ಷ್ಮಗಳನ್ನು ಸಂಗೀತದ ಮೂಲಕ ಅರಸುವ ಈ ವಿಶಿಷ್ಟ ಪ್ರಾತ್ಯಕ್ಷಿಕೆಯನ್ನು ಅಂತರ್ಧ್ವನಿ ಇವರ ವತಿಯಿಂದ ಇಂಡಿಯನ್ ಇನ್ಸಿಟ್ಯೂಟ್ ಆಫ್ ವಲ್ಡ್ ಕಲ್ಚರ್ ನಲ್ಲಿ ದಿನಾಂಕ 18 ನವಂಬರ್ 2025ರ ಮಂಗಳವಾರ ಸಂಜೆ ಗಂಟೆ 6-30ಕ್ಕೆ ಅಯೋಜಿತವಾಗಿದೆ. ಬಾಪು ಪದ್ಮನಾಭ ಇವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದು ಕೊಟ್ಟ ‘ಅಲ್ಲಮ’ ಚಿತ್ರದ ನಿರ್ದೇಶಕ ಡಾ. ಟಿ.ಎಸ್. ನಾಗಾಭರಣ ಇವರು ಇದಕ್ಕೆ ರಂಗರೂಪವನ್ನು ನೀಡಿದ್ದು, ಶ್ರೀಮತಿ ನಾಗಣಿ ಭರಣ ವಸ್ತ್ರವಿನ್ಯಾಸವನ್ನು ಮಾಡಿದ್ದಾರೆ.…
ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು 23ರಿಂದ 29 ನವೆಂಬರ್ 2025ರವರೆಗೆ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿರುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿ ಹಬ್ಬ, ತ್ರಯೋದಶ ಸರಣಿಯ ಆಮಂತ್ರಣ ಪತ್ರಿಕೆಯು ದಿನಾಂಕ 16 ನವೆಂಬರ್ 2025ರಂದು ಬಿಡುಗಡೆಗೊಂಡಿತು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಅಹ್ಮದ್ ನಗರ “ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾರವಿಡೀ ಯಕ್ಷಗಾನ ತಾಳಮದ್ದಳೆಗಳನ್ನು ನಡೆಸುವ ಮೂಲಕ ಯಕ್ಷಾಂಗಣ ಸಂಸ್ಥೆ ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವನ್ನು ಆಚರಿಸುತ್ತಿದೆ. ಸುಲಲಿತವಾದ ಕನ್ನಡ ಭಾಷೆಯನ್ನು ಯಕ್ಷಗಾನದಂತೆ ಸಶಕ್ತವಾಗಿ ಬಳಸಿಕೊಳ್ಳುವ ಕಲಾ ಮಾಧ್ಯಮ ಬೇರೊಂದಿಲ್ಲ”…
ಬೆಂಗಳೂರು : ಮಲೆನಾಡ ಬರಹಗಾರರ ವೇದಿಕೆ ಹೊರ ತಂದಿರುವ ‘ಕಾಡಸುರಗಿ’ ಕೃತಿಯು ದಿನಾಂಕ 15 ನವಂಬರ್ 2025ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಲೋಕಾರ್ಪಣೆಗೊಂಡಿತು. ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪದ್ಮಶ್ರೀ ಗಿರೀಶ್ ಕಾಸರವಳ್ಳಿ “ಮಲೆನಾಡಿನಲ್ಲಿಯೂ ಇಂದು ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದ್ದು, ಒಂದು ಕಾಲದಲ್ಲಿದ್ದ ದಟ್ಟ ಕಾಡು, ನೀರಿನ ಸೆಲೆ ಎಲ್ಲವೂ ಇಂದು ಇತಿಹಾಸದ ಪುಟವನ್ನು ಸೇರಿವೆ. ಸವಾಲಿನ ದಿನಗಳಲ್ಲಿ ಮಲೆನಾಡಿನ ಪರಿಸರವನ್ನು ಕಾಪಾಡಿದ ಸಾಧಕರ ಚರಿತ್ರೆ ದಾಖಲಾಗಬೇಕಾದ ಅಗತ್ಯ ಈ ಕಾರಣದಿಂದ ಹೆಚ್ಚಾಗಿದೆ. ‘ಕಾಡಸುರಗಿ’ ಎನ್ನುವ ಹೆಸರೇ ಮಲೆನಾಡಿನ ಅಸ್ಮಿತೆಯನ್ನು ಸೂಚಿಸುತ್ತದೆ. ಈ ಕೃತಿಯಲ್ಲಿ ಮಲೆನಾಡಿನ ನಲವತ್ತು ಸಾಧಕರ ಸಾರ್ಥಕ ವ್ಯಕ್ತಿಚಿತ್ರಣಗಳಿವೆ. ಇದೊಂದು ಮಾಲಿಕೆಯಾಗಿ ಬೆಳೆದರೆ ಮಹತ್ವದ ಸಾಂಸ್ಕೃತಿಕ ದಾಖಲೀಕರಣವಾಗುತ್ತದೆ. ಈ ವೇದಿಕೆಯ ಮೂಲಕ ಮಲೆನಾಡಿಗರು ತಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳುವಂತಾಗಲಿ” ಎಂದು ಆಶಿಸಿದರು. ಪ್ರಸ್ತಾವಿಕ ಭಾಷಣ ಮಾಡಿದ ಮಲೆನಾಡು ಬರಹಗಾರರ ವೇದಿಕೆಯ ಅಧ್ಯಕ್ಷ ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ “ಮಲೆನಾಡು ಬರಹಗಾರರ ವೇದಿಕೆ ಮಲೆನಾಡಿನ ಪ್ರತಿಭಾವಂತರ…
ಶ್ರೀ ಬ್ರಾಹ್ಮರಿ ನಾಟ್ಯಾಲಯ (ರಿ.) ರಜತ ವರ್ಷದ ಸಂಭ್ರಮದಲ್ಲಿದ್ದು ದಿನಾಂಕ 16. 11. 2025 ರಂದು ಅಂಬಲಪಾಡಿಯ ಭವಾನಿ ಮಂಟಪದಲ್ಲಿ ಮಧ್ಯಾಹ್ನ 3:00 ಯಿಂದ ಮಾರ್ಗಂ ಭರತನಾಟ್ಯ ಪ್ರಸ್ತುತಿಯನ್ನು ರಜತ ವರ್ಷದ ಅಂಗವಾಗಿ ಹಮ್ಮಿಕೊಂಡಿದೆ. ನವರು ನವಂಬರ್ 2025 ರಿಂದ ಆರಂಭಗೊಂಡು ಪ್ರತಿ ತಿಂಗಳು ಕಾರ್ಯಕ್ರಮ ನೀಡುತ್ತಾ 2027 ಏಪ್ರಿಲ್ ತಿಂಗಳಲ್ಲಿ ರಜತ ವರ್ಷದ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಗೆಜ್ಜೆಯೊಂದಿಗೆ ಬೆಳ್ಳಿ ಹೆಜ್ಜೆಯಿಡುವ ಸಂದರ್ಭದಲ್ಲಿ ನವಂಬರ್ 16ರಂದು ನಡೆಯುವ ಕಾರ್ಯಕ್ರಮದ ನಟುವಾಂಗ ಹಾಗೂ ಹಾಡುಗಾರಿಕೆಯಲ್ಲಿ ವಿದ್ವಾನ್ ಭವಾನಿ ಶಂಕರ್, ಮೃದಂಗದಲ್ಲಿ ಬಿ ಮನೋಹರ್ ರಾವ್ ಮಂಗಳೂರು, ಪಿಟೀಲು ವಾದಕರಾಗಿ ವೈಭವ ಪೈ ಮಣಿಪಾಲ್ ಮತ್ತು ಯೋಗೀಶ್ ಕೊಳಲಗಿರಿ ಇವರ ನಿರೂಪಣೆ ಹಾಗೂ ಶ್ರೀಮತಿ ಸುಹಾಸಿನಿಯವರ ಸಹಕಾರದೊಂದಿಗೆ ನಡೆಯಲಿದೆ.
ವಿರಾಜಪೇಟೆ : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ವಿದ್ಯಾರ್ಥಿ ಬಳಗದ ವತಿಯಿಂದ ಕೊಡಗಿನ ಕನ್ನಡ ನುಡಿ ವೈಭವದ ಹಬ್ಬ ‘ನುಡಿ ಉತ್ಸವ-2025’ದ ಲಾಂಛನ ಬಿಡುಗಡೆ ಕಾರ್ಯಕ್ರಮವು ದಿನಾಂಕ 11 ನವೆಂಬರ್ 2025ರಂದು ನಡೆಯಿತು. ಸೆಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ. ಫಾ. ಮದಲೈ ಮುತ್ತು ಇವರು ಲಾಂಛನ ಬಿಡುಗಡೆಗೊಳಿಸಿ “ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗುವ ಈ ಕಾರ್ಯಕ್ರಮವು ಸಂಭ್ರಮದ ಕಾರ್ಯಕ್ರಮವಾಗಿದ್ದು, ನಮ್ಮ ನಾಡಿನ ಹೆಮ್ಮೆಯ ಹಬ್ಬವು ಆಗಿದೆ. ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡ ನಾಡು ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ರಾಜ್ಯೋತ್ಸವದ ಆಚರಣೆಯು ನಾವು ನಾಡಿಗೆ ಸಲ್ಲಿಸುವ ಗೌರವವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ನುಡಿ ಉತ್ಸವ ಸಮಿತಿಯ ಸಂಚಾಲಕರು ಹಾಗೂ ಪತ್ರಕರ್ತರಾದ ಅಬ್ದುಲ್ ರೆಹಮಾನ್ ಮಾತನಾಡಿ “ಕನ್ನಡಮ್ಮನ ಸೇವೆಗೆ ನಾವು ಸದಾ ಸಿದ್ಧರಿರಬೇಕು. ವಿರಾಜಪೇಟೆಯ ಈ ಪ್ರತಿಷ್ಠಿತ…
ಮಂಗಳೂರು : ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಮತ್ತು ವಚನ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ದಿನಾಂಕ 07 ನವೆಂಬರ್ 2025ರಂದು ಆಯೋಜಿಸಿದ್ದ ರಸಪ್ರಶ್ನೆಯ 2ನೇ ಸರಣಿ ಕಾರ್ಯಕ್ರಮವನ್ನು ಬೆಸೆಂಟ್ ಹಿರಿಯ ಪ್ರೌಢಶಾಲೆ ಕನ್ನಡ ಮಾಧ್ಯಮದಲ್ಲಿ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಶಾಲೆಯ ಮುಖ್ಯೋಪಾಧ್ಯಾಯನಿ ಶ್ರೀಮತಿ ತ್ರಿವೇಣಿ ಕಾರ್ಯಕ್ರಮವನ್ನು ಉದ್ಘಾಟಿಸಿ “ಮಕ್ಕಳಿಗಾಗಿ ನಡೆಸುವ ಈ ಕಾರ್ಯಕ್ರಮ ಉತ್ತಮವಾಗಿದೆ ಮತ್ತು ಸಾಹಿತ್ಯದ ಬಗ್ಗೆ ಒಲವನ್ನು ಮೂಡಿಸುವಲ್ಲಿ ಅನುಕೂಲವಾಗಿದೆ” ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ರತ್ನಾವತಿ ಜೆ. ಬೈಕಾಡಿ ಇವರು “ಮಕ್ಕಳು ಬಾಲ್ಯದಲ್ಲಿಯೇ ಶರಣರು ವಚನಗಳಲ್ಲಿ ಹೇಳಿದ ಒಳ್ಳೆಯ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೊಡ್ಡ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು” ಎಂದು ತಿಳಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉರ್ವಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಸುರೇಂದ್ರ ರಾವ್ ಇವರು “ಕನ್ನಡ ಮಾಧ್ಯಮದಲ್ಲಿ ಕಲಿತಂತಹ ಅನೇಕ ಸಾಧಕರು ನಮ್ಮ ಮುಂದಿದ್ದಾರೆ. ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದುವಂತಹ ಮಕ್ಕಳು ಯಾವುದೇ…