Subscribe to Updates
Get the latest creative news from FooBar about art, design and business.
Author: roovari
ಉಪ್ಪಿನಕುದ್ರು : ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ವತಿಯಿಂದ 2024ರ ವಿನೂತನ ಕಾರ್ಯಕ್ರಮ ಸರಣಿಯ ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮದಲ್ಲಿ ನಾಡ ಗುಡ್ಡೆಯಂಗಡಿಯ ಶ್ರೀಧರ್ ನಾಯಕ್ ಹಾಗೂ ತಂಡದವರಿಂದ ‘ವೇಣು ವಾದನ’ವನ್ನು ದಿನಾಂಕ 15-09-2024ರಂದು ಸಂಜೆ 4-00 ಗಂಟೆಗೆ ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ : ಬಹುಮುಖಿ ಶಿವಮೊಗ್ಗ ಇದರ ವತಿಯಿಂದ ಪತ್ರಕರ್ತ, ಲೇಖಕರು, ಸಾಮಾಜಿಕ ಹೋರಾಟಗಾರರಾದ ಶ್ರೀ ಎನ್. ರವಿಕುಮಾರ್ ಇವರಿಂದ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 11 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಶಿವಮೊಗ್ಗದ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಫ್ರೆಂಡ್ ಸೆಂಟರ್ ಇಲ್ಲಿ ಆಯೋಜಿಸಲಾಗಿದೆ. ಬಹುಮುಖಿ : ಸಮಾನ ಮನಸ್ಕರ ಒಂದು ಮುಕ್ತ ವೇದಿಕೆ. ಯಾವುದೇ ಇಸಂ ಹಾಗೂ ಪಂಥಕ್ಕೆ ಜೋತು ಬೀಳದೆ ಎಲ್ಲಾ ವಿಚಾರಧಾರೆಗಳನ್ನು ಮುಕ್ತ ಮನಸ್ಸಿನಿಂದ ಅರ್ಥೈಸುವ ಹಾಗೂ ಚರ್ಚಿಸುವ ಒಂದು ಸಂದರ್ಭ. ಇಲ್ಲಿ ಯಾವುದೇ ಹಾರ ತುರಾಯಿಗಳಿಲ್ಲದೆ ನೇರವಾಗಿ ವಿಷಯವನ್ನು ಪ್ರವೇಶಿಸುವ ಪ್ರಯತ್ನ. ತಿಂಗಳಿಗೆ ಕನಿಷ್ಠ ಒಂದಾದರೂ ಕಾರ್ಯಕ್ರಮ ಆಯೋಜಿಸುವ ಹಂಬಲ. ಅದು ಉಪನ್ಯಾಸ, ಪ್ರಾತ್ಯಕ್ಷಿಕೆ, ಚರ್ಚೆ, ಸಿನಿಮಾ ಪ್ರದರ್ಶನ, ರಂಗ ಪ್ರಯೋಗಗಳ ವಿಮರ್ಶೆ, ಪ್ರಚಲಿತ ವಿದ್ಯಮಾನ, ಸಾಹಿತ್ಯ, ಸಂಸ್ಕೃತಿ, ರಾಜಕೀಯ… ಹೀಗೆ ಯಾವುದೇ ವಿಷಯವಾಗಿರಬಹುದು. ಹೆಚ್ಚಿನ ಮಾಹಿತಿಗಾಗಿ : 9449284495, 9845014229, 95380 20367
ಮಂಗಳೂರು : ಮಂಗಳೂರಿನ ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ದಿನಾಂಕ 26 ಆಗಸ್ಟ್ 2024ರಂದು ಜರಗಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಾವಿದೆ ವಿದುಷಿ ಅಯನಾ ಪೆರ್ಲ ಇವರ ಶ್ರೀಕೃಷ್ಣನ ಕುರಿತ ವಿಶೇಷ ಭರತನಾಟ್ಯ ಕಾರ್ಯಕ್ರಮ ಜನಮನ ರಂಜಿಸಿತು. ‘ಶ್ರೀಕೃಷ್ಣ ಲೀಲಾತರಂಗಿಣಿ’ಯಿಂದ ಆಯ್ದ ‘ದಿವ್ಯ ಗೋವೃಂದಗಳು’ ಎಂಬ ಭಾಗವನ್ನು ತನ್ನ ನೃತ್ಯಪ್ರಸ್ತುತಿಗೆ ಅಯನಾ ಪೆರ್ಲ ಆಯ್ದುಕೊಂಡಿದ್ದರು. ಶ್ರೀಕೃಷ್ಣನಿಗೆ ಗೋವುಗಳೊಂದಿಗೆ ಇರುವ ಸಂಬಂಧ, ಒಡನಾಟ ಮತ್ತು ಆ ಮೂಲಕ ಗೋಪಿಕಾ ಸ್ತ್ರೀಯರ ಗೆಳೆತನ ಮೊದಲಾದ ಭಾಗವನ್ನು ವಿವಿಧ ನೃತ್ತಭಂಗಿ, ಲಾಸ್ಯಭರಿತ ನೃತ್ಯ ಹಾಗೂ ಭಾವಪೂರ್ಣ ಅಭಿನಯಗಳೊಂದಿಗೆ ಅಯನಾ ಪೆರ್ಲ ಮನೋಜ್ಞವಾಗಿ ಪ್ರಸ್ತುತಪಡಿಸಿದರು. ರಾಗಮಾಲಿಕೆ, ತಾಳಮಾಲಿಕೆಯಲ್ಲಿರುವ ಈ ರಚನೆಗೆ ಖ್ಯಾತ ಅಭಿನೇತ್ರಿ ದೆಹಲಿಯ ವಿದುಷಿ ರಮಾ ವೈದ್ಯನಾಥನ್ ನೃತ್ಯಸಂಯೋಜನೆ ಮಾಡಿದ್ದಾರೆ. ಅನಂತರ ಅಯನಾ ಇವರು ದಾಸರ ಪದ ‘ಕಡೆಗೋಲ ತಾರೆನ್ನ ಚಿಣ್ಣವೇ’ ಎಂಬುದನ್ನು ಭಾವಪೂರ್ಣವಾಗಿ ಅಭಿನಯಿಸಿದರು. ಯಶೋದೆ ಮತ್ತು ಕೃಷ್ಣನ ನಡುವಿನ ಪ್ರೀತಿಯ ಆಟ – ಜಗಳ, ಆಕೆಯ ವಾತ್ಸಲ್ಯ ಮತ್ತು ಪ್ರೇಮಗಳು…
ಶಿವಮೊಗ್ಗ : ಕರ್ನಾಟಕ ಸಂಘ (ರಿ) ಶಿವಮೊಗ್ಗ ಇದರ ವತಿಯಿಂದ ಮಹಿಳಾ ಲೇಖಕರು ಪ್ರಕಾರಕ್ಕಾಗಿ ನೀಡುವ ‘ಎಂ.ಕೆ. ಇಂದಿರಾ ಪುಸ್ತಕ ಬಹುಮಾನ’ವನ್ನು ಘೋಷಿಸಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ಇರವಿನ ಅರಿವು’ ವಿಮರ್ಶಾ ಕೃತಿಯು ‘ಎಂ.ಕೆ. ಇಂದಿರಾ ಪ್ರಶಸ್ತಿ’ಗೆ ಪಾತ್ರವಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿಪತ್ರ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ದಿನಾಂಕ 22 ಸೆಪ್ಟೆಂಬರ್ 2024ರಂದು ಸಂಜೆ ಗಂಟೆ 5-30ಕ್ಕೆ ಶಿವಮೊಗ್ಗದಲ್ಲಿ ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ನಡೆಯಲಿದೆ. ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಇವರು ಸಾಹಿತ್ಯದ ಕಾವ್ಯ , ಕತೆ, ನಾಟಕ, ವಿಮರ್ಶೆ, ಅಂಕಣ ಬರಹ, ಅನುವಾದ, ಸಂಶೋಧನೆ ಮಂತಾದ ಪ್ರಕಾರಗಳಲ್ಲಿ ಈಗಾಗಲೇ ಸುಮಾರು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಕಾಯಕಾವ್ಯ’, ‘ಅವನು ಹೆಣ್ಣಾಗಬೇಕು’ ಹಾಗೂ ‘ನಕ್ಷತ್ರ ನಕ್ಕ ರಾತ್ರಿ’ ಮುಂತಾದ ಕವನ ಸಂಗ್ರಹಗಳು, ‘ತೊಗಲು ಗೊಂಬೆ’ ಕಾದಂಬರಿ, ‘ಇರವಿನ ಅರಿವು’ ಮತ್ತು ‘ಮೊಗ್ಗಿನ ಮಾತು’, ಮುಂತಾದವು ಇವರ ಕೆಲವು ಕೃತಿಗಳು. ಕನಕದಾಸರ ಕೀರ್ತನೆಗಳನ್ನು ಮತ್ತು ವಚನಗಳನ್ನು…
ಕಾಸರಗೋಡು : ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ, ಕೇಂದ್ರ ಕಚೇರಿ, ಹಾಸನ, ಕಾಸರಗೋಡು ಜಿಲ್ಲಾ ಘಟಕ, ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಕಾಸರಗೋಡಿನ ವಿಸ್ಡಮ್ ಇನ್ಸ್ಟಿಟ್ಯೂಷನ್ಸ್ ನೆಟ್ವರ್ಕ್ ಸಂಯುಕ್ತ ಆಶ್ರಯದಲ್ಲಿ ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸಭಾಂಗಣದಲ್ಲಿ ದಿನಾಂಕ 15 ಸೆಪ್ಟೆಂಬರ್ 2024ರಂದು ಬೆಳಗ್ಗೆ 9-00 ಗಂಟೆಗೆ ಕೇರಳ, ಕರ್ನಾಟಕ ಸ್ಪಂದನ ಸಿರಿ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನವು ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಜರುಗಲಿದೆ. ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆಯ ನಂತರ ಕುಮಾರಿ ಕೃಷ್ಣಿಮಾ ಭುವನೇಶ್ ಕೂಡ್ಲು ಇವರಿಂದ ಸ್ವಾಗತ ನೃತ್ಯ ಜರುಗಲಿದೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮೈಸೂರು ಸಮ್ಮೇಳನವನ್ನು ಉದ್ಘಾಟಿಸುವರು. ಕರ್ನಾಟಕ ಸರಕಾರದ ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಕೃತಿ…
ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗೋಣಿಕೊಪ್ಪಲು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ದಿ. ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿನಿಧಿ ಮತ್ತು ಶ್ರೀಮತಿ ದಿ.ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ಜ್ಞಾಪಕಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವು ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ದಿನಾಂಕ 11 ಸೆಪ್ಟೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೊನ್ನಂಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ವಹಿಸಲಿದ್ದು , ಕಾರ್ಯಕ್ರಮವನ್ನು ಗೋಣಿಕೊಪ್ಪಲು ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಕುಪ್ಪಂಡ ತಿಮ್ಮಯ್ಯ ಇವರು ನೆರವೇರಿಸಲಿದ್ದಾರೆ. ಪ್ರಾಸ್ತಾವಿಕವನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ನುಡಿಯಲಿದ್ದಾರೆ. ದತ್ತಿಯ ಆಶಯದಂತೆ ‘ಗ್ರಾಮೀಣ ಜಾನಪದ ಸೊಗಡು’ ಕುರಿತು ನಿವೃತ್ತ ಅದ್ಯಾಪಕಿ ಶ್ರೀಮತಿ ಎಚ್.ಜಿ. ಸಾವಿತ್ರಿ ಮತ್ತು ‘ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ’ ಕುರಿತು ನಿವೃತ್ತ…
ಕಾಸರಗೋಡು : ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಚತುರ್ಥ ಚಾತುರ್ಮಾಸ್ಯ ವ್ರತದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ದಿನಾಂಕ 20 ಆಗಸ್ಟ್ 2024ನೇ ಮಂಗಳವಾರ ಮಧು ಕುಮಾರ್ ಬೋಳೂರು ವಿರಚಿತ ‘ಸುದರ್ಶನ ವಿಜಯ’ ಎಂಬ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಮುರಳೀ ಕೃಷ್ಣ ಶಾಸ್ತ್ರಿ ತೆಂಕಬೈಲು, ಚೆಂಡೆ ಮತ್ತು ಮದ್ದಳೆಗಳಲ್ಲಿ ಪಿ.ಜಿ. ಜಗನ್ನಿವಾಸ ರಾವ್, ಲವ ಕುಮಾರ್ ಐಲ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ ಬಾರ್ಯ (ಲಕ್ಷ್ಮೀ), ನಾ. ಕಾರಂತ ಪೆರಾಜೆ (ವಿಷ್ಣು), ಗುಂಡ್ಯಡ್ಕ ಈಶ್ವರ ಭಟ್ (ಶತ್ರುಪ್ರಸೂದನ), ಕೈಯೂರು ನಾರಾಯಣ ಭಟ್ (ಈಶ್ವರ), ಶುಭಾ ಜೆ.ಸಿ. ಅಡಿಗ (ಸುದರ್ಶನ), ಕಿಶೋರಿ ದುಗ್ಗಪ್ಪ ನಡುಗಲ್ಲು (ದೇವೇಂದ್ರ) ಸಹಕರಿಸಿದರು. ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಕಲಾವಿದರಿಗೆ ಶ್ರೀ ದೇವರ ಪ್ರಸಾದ ಹಾಗೂ ಮಂತ್ರಾಕ್ಷತೆಯನ್ನಿತ್ತು ಹರಸಿದರು.…
ಮೂಡುಬಿದಿರೆ: ಆಳ್ವಾಸ್ ಪದವಿ-ಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ಉದ್ಘಾಟನಾ ಸಮಾರಂಭವು ದಿನಾಂಕ 06 ಸೆಪ್ಟೆಂಬರ್ 2024ರಂದು ಕಾಲೇಜಿನ ಆವರಣದಲ್ಲಿ ನಡೆಯಿತು. ಕಲಾ ಸಂಘವನ್ನು ಉದ್ಘಾಟಿಸಿದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ “ಕಲೆ ಜೀವನದ ಮೆರುಗನ್ನು ಹೆಚ್ಚಿಸಿ ಬದುಕನ್ನು ಶ್ರೀಮಂತಗೊಳಿಸುತ್ತದೆ. ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿಪುಲವಾದ ಅವಕಾಶಗಳಿದ್ದು ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ಪೋಷಕರ ಮೊಗದಲ್ಲಿ ನಗು ಮೂಡಿಸುವ ಕೆಲಸವನ್ನು ಮಕ್ಕಳು ಮಾಡಬೇಕು” ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ. ಎನ್. ಮಾತನಾಡಿ “ಇಂದು ವಿಜ್ಞಾನ, ವಾಣಿಜ್ಯ ಪದವೀಧರರು ನಿಮ್ಮೊಂದಿಗೆ ಸ್ಪರ್ಧೆಯಲ್ಲಿದ್ದಾರೆ. ಸರಕಾರಿ ಸ್ವಾಮ್ಯದ ಎಲ್ಲಾ ಉದ್ಯೋಗಳಲ್ಲೂ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಿದೆ. ನಿರಂತರ ಪ್ರಯತ್ನದಿಂದ ಯಶಸ್ಸನ್ನು ಪಡೆಯಬಹುದು.” ಎಂದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಜೀವನ್ರಾಂ ಸುಳ್ಯ ಮಾತನಾಡಿ “ನಿರಂತರ ದುಡಿಮೆ ಮತ್ತು ಕಾಲದ ಮಹತ್ವವನ್ನು ಅರಿತುಕೊಂಡಾಗ ಯಶಸ್ಸು ನಮ್ಮದಾಗುತ್ತದೆ. ಕಳೆದ ಸಮಯ ಮತ್ತೆ ಯಾರಿಗೂ…
ಸುತ್ತಲೂ ಹಸಿರಿನ ರಕ್ಷಾ ಕವಚ, ಕೆಂಪು ಹೆಂಚುಗಳ ಮೇಲೆ ಬಿದ್ದು ಜಿಟಿ ಜಿಟಿ ಸದ್ದು ಮಾಡುತ್ತಿದ್ದ ಮಳೆ…ತೊಟ್ಟಿ ಮನೆಯ ಆ ಹುಲ್ಲು ಹಾಸಿನ ಮೇಲೆ ಶಬ್ಧವಾಗದಂತೆ ಸದ್ದು ಮಾಡುತ್ತಿದ್ದ ಸೂರು ನೀರು… ಚುಮು ಚುಮು ಚಳಿ…ಮೂಗರಳುವಂತೆ ಅಡುಗೆ ಕೋಣೆಯಿಂದ ಬರುತ್ತಿದ್ದ ಕಾಫಿಯ ಸುವಾಸನೆ, ಉಪ್ಪಿಟ್ಟಿಗಾಗಿ ಬೇಯುತ್ತಿದ್ದ ರವೆಯ ಘಮ ಘಮ…ಕಣ್ಣೆದುರು ರೆಕ್ಕೆ ಅಗಿಲಿಸಿಕೊಂಡು ಹಾರಾಡುತ್ತಿದ್ದ ಬಾವಲಿಗಳು…ಹೀಗೆ ಥೇಟ್ ಮಲೆನಾಡಿನ ಮೂಡಿಗೆರೆಯ ವಾತಾವರಣದಂಥ ಶರವಣಕುಮಾರ್ ಅವರ ಮನೆ ‘ಪೂರ್ಣಚಂದ್ರ’ದಲ್ಲಿ ದಿನಾಂಕ 08 ಸೆಪ್ಟೆಂವರ್ 2024ರ ಭಾನುವಾರ ಇಳಿ ಸಂಜೆಯ ಹೊತ್ತಿನಲ್ಲಿ ಕರ್ವಾಲೋದ ಪೂರ್ಣಚಂದ್ರ ತೇಜಸ್ವಿ ತಮ್ಮ ‘ಕಿವಿ’ ಜತೆ ಆವಾಹನೆಯಾಗಿದ್ದರು ! ಮಂದಣ್ಣ, ಪ್ರಭಾಕರ, ಎಂಗ್ಟ, ಪ್ಯಾರಾ, ಬಿರಿಯಾನಿ ಕರಿಯಪ್ಪ… ಒಬ್ಬರಾ ? ಇಬ್ಬರಾ ? ಪೂಚಂತೇ ಅವರ ಕೃತಿಗಳ ಪಾತ್ರಧಾರಿಗಳ ದೊಡ್ಡ ಮೆರವಣಿಗೆಯೇ ನಡೆದುಹೋಯಿತು. ತೇಜಸ್ವಿಯವರನ್ನು ಮೌನವಾಗಿ ಧ್ಯಾನಿಸುವವರಿಗೆ ಅಪ್ಯಾಯಮಾನವಾದಂಥ ವಾತಾವರಣ ಅದು. ಈ ಕಾರ್ಯಕ್ರಮ ನೋಡಿದ್ದರೆ ಬರ್ತ್ಡೇ ಆಚರಣೆ, ಸನ್ಮಾನ ಎಂದರೆ ಬಾಯಿಗೆ ಬಂದಂತೆ ಬಯ್ದು ದೂರ ಓಡುತ್ತಿದ್ದ ತೇಜಸ್ವಿ…
ಮಂಗಳೂರು : ತುಳುಕೂಟ (ರಿ) ಕುಡ್ಲ ವತಿಯಿಂದ ಇತ್ತೀಚೆಗೆ ನಿಧನರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 09 ಸೆಪ್ಟೆಂಬರ್ 2024ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ “ತುಳು ಭಾಷೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ದಾಮೋದರ ನಿಸರ್ಗರು ಅರ್ಹಿನಿಶಿ ದುಡಿದಿದ್ದಾರೆ. ತಾನು ಬೆಳೆಯುವುದರ ಜೊತೆ ಜೊತೆಗೆ ತೌಳವರಿಗೆ ತುಳು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ತುಳುಕೂಟದ ಬೆಳವಣಿಗಾಗಿ ಅವರು ಗಂಧದಂತೆ ತಮ್ಮನ್ನು ತೀಡಿಕೊಳ್ಳುತ್ತಾ ಇಂದು ಚಿರಸ್ಮರಣೀಯರಾಗಿ ಉಳಿದಿದ್ದಾರೆ. ಈ ರೀತಿ ಸಾವಿನ ನಂತರವೂ ನೆನಪುಳಿಯುವ ತುಳುವರು ಮತ್ತೆ ಮರಳಿ ಮರಳಿ ತುಳುಮಣ್ಣಲ್ಲಿ ಹುಟ್ಟಿಬರಲಿ” ಎಂದರು. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ತಾರಾನಾಥ, ಜೆ. ವಿ. ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ, ನಾಗೇಶ ದೇವಾಡಿಗ ಕದ್ರಿ, ಶ್ರೀಮತಿ ಕೆ. ಎ.…