Author: roovari

ಪಾವಂಜೆ : ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನ, ನಾಗವೃಜ ಕ್ಷೇತ್ರ ಪಾವಂಜೆ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಶ್ರೀ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರವನ್ನು ದಿನಾಂಕ 20 ಆಗಸ್ಟ್ 2025ರಿಂದ 24 ಆಗಸ್ಟ್ 2025ರವೆರೆಗೆ ಪ್ರತಿದಿನ ಸಂಜೆ ಗಂಟೆ 5-30ರಿಂದ 8-30ರ ತನಕ ಪಾವಂಜೆ ನಾಗವೃಜ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ. • ಈ ಕಾರ್ಯಾಗಾರವು ಯಕ್ಷಗಾನ ಪ್ರಸಂಗ ಸಾಹಿತ್ಯ, ರಂಗನಡೆ, ಪುರಾಣ ಕಥನ ಮಾಲಿಕೆಯ ವ್ಯಾಪ್ತಿಯನ್ನು ಒಳಗೊಂಡಿದೆ. • ಪ್ರಸಂಗ ಸಾಹಿತ್ಯವನ್ನು ಓದುವ ಬಗೆ, ಅರ್ಥವಿಸ್ತರಣೆಗೆ ಬೇಕಾದ ತಂತ್ರ, ರಂಗ ನಡೆಯ ಪ್ರಾಯೋಗಿಕ ತರಗತಿ ಸಹಿತ ಪ್ರಸಂಗಕ್ಕೆ ಪೂರಕವಾದ ಪ್ರಸಾದನ ಮತ್ತು ವೇಷಭೂಷಣದ ಪರಿಚಯವನ್ನು ಒಳಗೊಂಡಿದೆ. • ಈ ಕಾರ್ಯಾಗಾರವು ಉಚಿತವಾಗಿದ್ದು ಮೇಳದ ಕಲಾವಿದರು, ಹವ್ಯಾಸಿ ಕಲಾವಿದರು ಮತ್ತು ಯಕ್ಷಗಾನಾಭ್ಯಾಸ ನಿರತ ವಿದ್ಯಾರ್ಥಿಗಳು ಭಾಗವಹಿಸಬಹುದು. •…

Read More

ಬೆಂಗಳೂರು : ‘ರೂಪಾಂತರ’ ಕ್ರಿಯಾಶೀಲ ಜೀವಗಳು ತಂಡದ ವತಿಯಿಂದ ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರಿಗೆ ರಂಗ ನಮನ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನವನ್ನು ದಿನಾಂಕ 19 ಆಗಸ್ಟ್ 2025ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಡಾ. ಹೆಚ್.ಎಸ್. ವೆಂಕಟೇಶ ಮೂರ್ತಿಯವರು ರಚಿಸಿರುವ ರೂಪಾಂತರ ಅಭಿನಯಿಸುವ ಕೆ.ಎಸ್.ಡಿ.ಎಲ್. ಚಂದ್ರು ನಿರ್ದೇಶನದಲ್ಲಿ ‘ಹೆಜ್ಜೆಗಳು’ ನಾಟಕ ಪ್ರದರ್ಶನಗೊಳ್ಳಲಿದೆ. ದಯಮಾಡಿ ಅಭಿಮಾನಿ ರಂಗಾಸಕ್ತರೆಲ್ಲರೂ ನಾಟಕವನ್ನು ನೋಡುವುದರ ಮೂಲಕ ರಂಗಭೂಮಿಯ ದೀಪ ನಿರಂತರವಾಗಿ ಬೆಳಗುತ್ತಿರಲು ನೀವೆಲ್ಲರೂ ಸಾಕ್ಷಿಯಾಗಬೇಕು ಎಂದು ಅತ್ಯಂತ ಗೌರವದಿಂದ, ಪ್ರೀತಿಯಿಂದ ಸ್ವಾಗತಿಸುತ್ತಿದೆ.

Read More

ಬೆಂಗಳೂರು : ‘ಆವಿಷ್ಕಾರ’ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಇದರ ವತಿಯಿಂದ ಸ್ವಾತಂತ್ರ್ಯ ಹೋರಾಟದ ನೆನಪಿನಂಗಳದಿಂದ ‘ಕಥನ, ಕವನ, ಗಾಯನ’ ಕಾರ್ಯಕ್ರಮವನ್ನು ದಿನಾಂಕ 17 ಆಗಸ್ಟ್ 2025ರಂದು ಸಂಜೆ 5-00 ಗಂಟೆಗೆ ಆನ್ ಲೈನಿನಲ್ಲಿ ನಡೆಯಲಿದೆ. ವೈದ್ಯರು ಹಾಗೂ ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಡಾ. ರಾಜಶೇಖರ ಎಂ. ಇವರು ಕಥನ ಪ್ರಸ್ತುತಿ ಮಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸಲಹೆಗಾರರಾದ ವೆಂಕಟೇಶ್ ಟಿ.ಎಂ. ಸಮಾರೋಪ ನುಡಿಗಳನ್ನಾಡಲಿದ್ದು, ‘ಆವಿಷ್ಕಾರ’ ವೇದಿಕೆಯ ಸದಸ್ಯರಾದ ಎಸ್.ಎ. ಪ್ರವೀಣ್ ನಿರೂಪಣೆ ಮಾಡಲಿದ್ದಾರೆ. https://meet.google.com/uak-zczt-hjp

Read More

ಬ್ರಹ್ಮಾವರ : ಬ್ರಹ್ಮಾವರದ ಬಂಟರ ಭವನದಲ್ಲಿ ದಿನಾಂಕ 09 ಆಗಸ್ಟ್ 2025ರಂದು ‘ನೆನಪು’ ಚೌಕಿಮನೆಯ ಬೆಳಕಿನಲಿ ಒಂದು ಸ್ಮರಣೀಯ ಕಾರ್ಯಕ್ರಮ ನಡೆಯಿತು. ಹವ್ಯಾಸಿ ಯಕ್ಷಗಾನ ತಂಡಗಳಿಗೆ ವೇಷಭೂಷಣವನ್ನು ಬಹಳ ಪ್ರೀತಿಯಿಂದ ಒದಗಿಸಿ, ಈ ಭಾಗದಲ್ಲಿ ಯಕ್ಷಗಾನದ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಂದಾಡಿ ಬಾಲಕೃಷ್ಣ ನಾಯಕ್ (ಬಾಲಣ್ಣ) ಇವರ ಪ್ರಥಮ ಪುಣ್ಯತಿಥಿ ಅರ್ಥಪೂರ್ಣವಾಗಿ ಜರಗಿತು. ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದರಾದ ಇಂದ್ರಾಳಿ ಪ್ರಭಾಕರ್ ಆಚಾರ್ಯರಿಗೆ ಬಾಲಣ್ಣನ ನೆನಪಿನಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯಕ್ಷಶಿಕ್ಷಣ ಅಭಿಯಾನ ಯಶಸ್ವಿಯಾಗುವಲ್ಲಿ ಬಾಲಣ್ಣನ ಕೊಡುಗೆ ಅಪಾರ. ಸಮಾರಂಭದಲ್ಲಿ ಬಲ್ಲಣ್ಣನ ಸುಂದರವಾದ ಪುತ್ಥಳಿಯ ಅನಾವರಣವೂ ನೆರವೇರಿತು. ತಂದೆಯಂತೆ ತಮ್ಮನ್ನು ಯಕ್ಷಗಾನ ಕ್ಷೇತ್ರಕ್ಕೆ ಅರ್ಪಿಸಿಕೊಂಡ ಬಾಲಣ್ಣನ ಮೂವರು ಪುತ್ರರು ಕೂಡ ಅಭಿನಂದನಾರ್ಹರು. ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದವರಿಂದ ‘ಮೀನಾಕ್ಷಿ ಕಲ್ಯಾಣ’ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಂಡಿತು.

Read More

ಮಂಗಳೂರು : ಸ್ವರೂಪ ಅಧ್ಯಯನ ಕೇಂದ್ರ (ರಿ.) ಮಂಗಳೂರು ಇದರ ವತಿಯಿಂದ ‘ಸ್ವರೂಪ ಟಿಪಿಕಲ್’ ‘ಸೃಜನಾತ್ಮಕ ಕಲಾ ಪ್ರದರ್ಶನ’ವನ್ನು ದಿನಾಂಕ 17 ಆಗಸ್ಟ್ 2025ರಂದು ಮಧ್ಯಾಹ್ನ 1-30 ಗಂಟೆಗೆ ಮಂಗಳೂರಿನ ಬಾವುಟಗುಡ್ಡೆ ಮಹಾತ್ಮ ಗಾಂಧಿ ಪ್ರತಿಷ್ಠಾನ ಟಾಗೋರ್ ಪಾರ್ಕಿನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಸೈಂಟ್ ಅಲೋಸಿಯಸ್ ಸ್ವಾಯತ್ತೆ ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ರೆ.ಫಾ. ಪ್ರವೀಣ್ ಮಾರ್ಟಿಸ್ ಇವರು ಉದ್ಘಾಟನೆ ಮಾಡಿದ್ದು, ದ.ಕ. ಜಿಲ್ಲಾ ವಿದ್ವಾಂಗ ಉಪನಿರ್ದೇಶಕರಾದ ಜಿ.ಎಸ್. ಶಶಿಧರ್, ಗಾಂಧಿ ಪ್ರತಿಷ್ಠಾನದ ಉಪ ಕಾರ್ಯದರ್ಶಿಯಾದ ಎನ್.ಜಿ. ಮೋಹನ್, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಜಿ. ಆವುಟಿ, ಶ್ರೇಷ್ಟ ಚಿತ್ರ ಕಲಾವಿದರಾದ ಗಣೇಶ್ ಸೋಮಯಾಜಿ ಮತ್ತು ಕಲಾವಿದೆ ಶ್ವೇತಾ ಚಿತ್ರದುರ್ಗ ಇವರುಗಳು ಭಾಗವಹಿಸಲಿದ್ದಾರೆ.

Read More

ಮಂಗಳೂರು : ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಬೋಳಾರದ ದಿ. ಉಮಾವತಿ ಇವರ ಕಾರ್ಯಚಟುವಟಿಕೆಯನ್ನು ನೆನಪಿಸಿಕೊಳ್ಳುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಉಮ್ಮಕ್ಕೆ ನೆಂಪು ಕೂಟ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಮ್ಮಕ್ಕ ನೆಂಪು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ. ಮೂರನೇ ವರ್ಷಾಂತಿಕೆಯ ‘ಉಮ್ಮಕ್ಕೆನ ನೆಂಪು’ ಕಾರ್ಯಕ್ರಮ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ (ರಿ.) ಸಹಭಾಗಿತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ದಿನಾಂಕ 17 ಆಗಸ್ಟ್ 2025ರ ಭಾನುವಾರದಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ. ಉಮ್ಮಕ್ಕೆ ನೆಂಪು ಕೂಡುಕಟ್ಟ್ ದ ಪಾತೆರಕತೆ, ದತ್ತಿ ನಿಧಿ ಉಪನ್ಯಾಸ, ವಿದ್ಯಾರ್ಥಿನಿಯರಿಗೆ ಉಮ್ಮಕ್ಕೆ ನೆಂಪು ಪಣವುದ ಬೆರಿಸಾಯ, ಸಂತ ಕವಿ ಕನಕದಾಸ ಪ್ರಶಸ್ತಿ ಪ್ರದಾನ ಹಾಗೂ ಪದರಂಗಿತ ಕಾರ್ಯಕ್ರಮಗಳು ಪ್ರಸ್ತುತಗೊಳ್ಳಲಿದೆ. ಉಮೆಕ್ಕೆನ ನೆಂಪು ಕುರಿತ ಕೂಡು ಕಟ್ಟುದ ಪಾತೆರಕತೆಯನ್ನು ಮಂಗಳೂರು ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಲ್ಪಾಡಿಯವರು ನಡೆಸಿಕೊಡುವರು. ಚೇಳ್ಯಾರು ಸರಕಾರಿ ಪದವಿ ಪೂರ್ವ…

Read More

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರವು ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಉಡುಪಿ ಜಿಲ್ಲಾ ಮಟ್ಟದ ದೇಶಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ದಿನಾಂಕ 15 ಆಗಸ್ಟ್ 2024ರಂದು ನಡೆಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಇದರ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ “ದೇಶದ ಪ್ರತಿಯೊಬ್ಬ ನಾಗರಿಕರಲ್ಲೂ ದೇಶಪ್ರೇಮ ಜಾಗೃತವಾಗಿರಬೇಕು. ಅದರಲ್ಲೂ ಯುವ ಮನಸ್ಸುಗಳಲ್ಲಿ ದೇಶಪ್ರೇಮ ತುಂಬಿರಲೇಬೇಕು. ಈ ನೆಲೆಯಲ್ಲಿ ದೇಶ ಪ್ರೇಮವನ್ನು ಮೂಡಿಸುವ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತಿರಬೇಕು. ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಉದ್ದೇಶದಿಂದ ರೇಡಿಯೋ ಮಣಿಪಾಲ್ ನಲ್ಲಿ ಆಯೋಜಿಸಲಾದ ದೇಶಭಕ್ತಿಗೀತೆ ಸಮೂಹ ಗಾಯನ ಸ್ಪರ್ಧಾ ಕಾರ್ಯಕ್ರಮ ಅಭಿನಂದನೀಯ” ಎಂದು ಹೇಳಿದರು. ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ (ಎಂ.ಐ.ಸಿ.) ಸಂಸ್ಥೆಯ ನಿರ್ದೆಶಕರಾದ ಡಾ.…

Read More

ಮಂಗಳೂರು : ಮಂಗಳೂರಿನ‌ ಕೆನರಾ ಕಾಲೇಜಿನ ಐ.ಕ್ಯೂ.ಎ.ಸಿ. ಮತ್ತು ಗ್ರಂಥಾಲಯ ಮಾಹಿತಿ ಕೇಂದ್ರವು ದಿನಾಂಕ 14 ಆಗಸ್ಟ್ 2025ರಂದು ಏರ್ಪಡಿಸಿದ ಗ್ರಂಥಾಲಯ ವಿಜ್ಞಾನ ಪಿತಾಮಹ ಡಾ. ಎಸ್.ಆರ್. ರಂಗನಾಥನ್ ರವರ ನೆನಪು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ “ಆಧುನಿಕ ತಂತ್ರಜ್ಞಾನವು ಮಾಹಿತಿಗಳ ರಾಶಿಯನ್ನೇ ನಮ್ಮೆದುರು ತಂದಿಡುತ್ತಿವೆ. ಆದರೆ ಅದನ್ನು ಜ್ಞಾನವಾಗಿ ಪರಿವರ್ತಿಸಿ ಬದುಕಿಗೆ ದಾರಿದೀಪ ಮಾಡಬಲ್ಲ ಶಕ್ತಿ ಪುಸ್ತಕಗಳಿಗಿವೆ. ಅಪಾರ ಅನುಭವ ಮತ್ತು ಜ್ಞಾನವನ್ನು ಹೊಂದಿರುವ ಬರಹಗಾರರ ಕೃತಿಗಳನ್ನು ಓದುವುದರ ಮೂಲಕ ಲೋಕಾನುಭವವನ್ನು ಹೊಂದಬಹುದು. ಬಡತನದ ಕುಟುಂಬದಿಂದ ಬಂದ ರಂಗನಾಥನ್ ಅವರು ಗ್ರಂಥಗಳ ಕುರಿತು ಅಪಾರ ಪ್ರೀತಿಯುಳ್ಳವರಾಗಿದ್ದರು. ಆರಂಭದಲ್ಲಿ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಕೆಲ ಕಾಲ ಅಧ್ಯಾಪಕರಾಗಿದ್ದ ಅವರು ಬಳಿಕ ಲಂಡನ್ ಗೆ ಹೋಗಿ ಅಲ್ಲಿನ ಲೈಬ್ರರಿ ವ್ಯವಸ್ಥೆಯನ್ನು ನೋಡಿ ಭಾರತದಲ್ಲಿ ವ್ಯವಸ್ಥಿತ ಗ್ರಂಥಾಲಯಗಳನ್ನು ರೂಪಿಸಲು ಮುಂದಾದರು. ಅವರು ನೀಡಿದ ಪಂಚಸೂತ್ರಗಳು, ಗ್ರಂಥಾಲಯ ವ್ಯವಸ್ಥೆಯ ಮಾನದಂಡಗಳು…

Read More

ಮನುಷ್ಯ ಮತ್ತು ಪಶು ಪಕ್ಷಿಗಳ ನಡುವಿನ ಒಡನಾಟವು ಅನಾದಿ ಕಾಲದಿಂದ ಸಾಗಿ ಬಂದಿದೆ. ಪ್ರಾಣಿ ಪಕ್ಷಿಗಳೊಂದಿಗೆ ತನ್ನ ಸಂಬಂಧಕ್ಕೆ ಮಾನವನು ಹಲವು ರೀತಿಯ ಅರ್ಥಗಳನ್ನು ಹಚ್ಚುತ್ತಾ ಬಂದಿದ್ದಾನೆ. ಸುನಂದಾ ಬೆಳಗಾಂವಕರರ ‘ಕಾಕ ಭುಶುಂಡಿ’ ಎಂಬ ಪ್ರಬಂಧ ಸಂಕಲನವು ಮನುಷ್ಯ ಮತ್ತು ಪಶುಪಕ್ಷಿಗಳ ನಡುವಿನ ಸಂಬಂಧವನ್ನು ನವಿರಾಗಿ, ಆತ್ಮೀಯವಾಗಿ ಚಿತ್ರಿಸುವುದರೊಂದಿಗೆ ಅಂತರಂಗವನ್ನು ಸ್ಪರ್ಶಿಸುತ್ತವೆ. ಕಾಳಿ-ಬೆಳ್ಳಿ (ದನ-ಎತ್ತು) ಕಾಕ ಭುಶುಂಡಿ (ಕಾಗೆ), ಗುಂಡ್ಯಾ (ಬೆಕ್ಕು) ಅಳಿಲುಗಳು, ನಾಗಪ್ಪ, ಗುಬ್ಬಿಗಳು, ಮುರಿಗೆವ್ವ (ಎಮ್ಮೆ) ಟಾಮ್- ತಿಮ್ಮ (ನಾಯಿ) ಮಂಗ ಮಂಗಿಗಳು, ಗೂಗಪ್ಪ, ಪ್ರಾಣಿ ಪಕ್ಷಿಗಳೆನಿಸದೆ ಮನುಷ್ಯರೆಂಬಂತೆ ಭಾಸವಾಗುತ್ತದೆ. ಇವುಗಳು ಪ್ರಾಣಿ ಪಕ್ಷಿಗಳ ಕತೆಯಾಗಿ ಉಳಿಯದೆ ಜೀವನ ದರ್ಶನವನ್ನು ಮಾಡಿಸುವುದು ವಿಶೇಷ. ಇಲ್ಲಿ ಮೌಲ್ಯಗಳ ಪ್ರತಿಪಾದನೆಗೆ ಪ್ರಾಣಿ ಪಾತ್ರಗಳು ಬಳಕೆಯಾಗಿವೆ. ಮನುಷ್ಯಲೋಕವೂ ಅದರೊಂದಿಗೆ ಬೆರೆತುಕೊಳ್ಳುತ್ತದೆ. ಆದ್ದರಿಂದ ಇವುಗಳು ಸರಳ ನೀತಿಕತೆ ಮತ್ತೆ ದೃಷ್ಟಾಂತಗಳೆನಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತವೆ. ಮನುಷ್ಯರ ನಡೆನುಡಿಗಳನ್ನು ಪ್ರಾಣಿಗಳಲ್ಲಿಯೂ ಕಾಣುತ್ತೇವೆ. ಮಾನವ ಜನ್ಮವು ಶ್ರೇ಼ಷ್ಠವೆಂಬ ನಂಬಿಕೆಯು ಬೇರೂರಿರುವ ಹೊತ್ತಿನಲ್ಲಿ, ಲೇಖಕಿಯು ಪ್ರಾಣಿಗಳ ಪಾತ್ರವನ್ನು ಬಳಸಿಕೊಂಡು ಅವನ ಸಣ್ಣತನ,…

Read More

ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ನಡೆಯುವ ಯಕ್ಷಗಾನ ತರಬೇತಿಯ ಉದ್ಘಾಟನಾ ಸಮಾರಂಭವು ದಿನಾಂಕ 14 ಆಗಸ್ಟ್ 2025ರಂದು ನುಕ್ಕೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಎಸ್.ಡಿ.ಎಂ.ಸಿ. ಅಧ್ಯಕ್ಷೆ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರ ಉಪಸ್ಥಿತಿಯಲ್ಲಿ ಜರಗಿತು‌. ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಮಹೇಶ್ ಮಂದಾರ್ತಿಯವರ ನಿರ್ದೇಶನದಲ್ಲಿ ವಿದ್ಯಾರ್ಥಿನಿಯರಿಂದ ಪೂರ್ವರಂಗ ಪ್ರದರ್ಶಿಸಲ್ಪಟ್ಟಿತು. ಯಕ್ಷಶಿಕ್ಷಣ ಟ್ರಸ್ಟಿನ ಮುರಲಿ ಕಡೆಕಾರ್ ಮತ್ತು ನಾರಾಯಣ ಎಂ. ಹೆಗಡೆ ಸಮಾರಂಭದಲ್ಲಿ ಭಾಗವಹಿಸಿದರು.

Read More