Subscribe to Updates
Get the latest creative news from FooBar about art, design and business.
Author: roovari
ಜಿ. ಎಸ್. ಎಸ್. ಎಂದೇ ಚಿರಪರಿಚಿತರಾದ ಜಿ. ಎಸ್. ಶಿವರುದ್ರಪ್ಪನವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ. ಕನ್ನಡ ಸಾಹಿತ್ಯ ಆಚಾರ್ಯರಲ್ಲಿ ಒಬ್ಬರಾದ ಇವರು ಸಾಹಿತ್ಯ ಲೋಕದ ಸಮನ್ವಯ ಕವಿ ಎಂದು ಗುರುತಿಸಲ್ಪಟ್ಟ ಕರ್ನಾಟಕದ ಮೂರನೇ ರಾಷ್ಟ್ರಕವಿ. ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪುರವರ ಅಚ್ಚುಮೆಚ್ಚಿನ ಶಿಷ್ಯ. ‘ಆಡು ಪುಟ್ಟದ ಸೊಪ್ಪಿಲ್ಲ’ ಎಂಬ ಲೋಕೋಕ್ತಿಯಂತೆ ಕವಿ, ಲೇಖಕ, ಸಂಶೋಧಕ, ನಾಟಕಕಾರ, ವಿಮರ್ಷಕ ಹೀಗೆ ವಿಶಾಲ ಸಾಹಿತ್ಯ ತೋಟದ ಮೂಲೆ ಮೂಲೆಗಳಲ್ಲೂ ತಮ್ಮ ಛಾಪು ಮೂಡಿಸಿರುವ ಕರ್ನಾಟಕದ ಸಾಹಿತ್ಯ ಕಣಜ ಎಂದರೆ ಅತಿಶಯೋಕ್ತಿಯಾಗಲಾರದು. ಇಂತಹ ಬಹುಮುಖ ಪ್ರತಿಭೆಯ ಅಮೋಘ ವ್ಯಕ್ತಿತ್ವದ ಜಿ. ಎಸ್. ಎಸ್. ರವರು ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಶಿಕ್ಷಕರಾಗಿದ್ದ ಶಾಂತವೀರಪ್ಪ ಮತ್ತು ವೀರಮ್ಮ ದಂಪತಿಗಳ ಪುತ್ರನಾಗಿ 1926 ರ ಫೆಬ್ರವರಿ 07 ರಂದು ಜನಿಸಿದರು. ಬಡತನದಿಂದಾಗಿ ಹತ್ತನೇ ತರಗತಿ ಓದಿದ ನಂತರ ಒಂದು ಕಛೇರಿಯಲ್ಲಿ ಕೆಲಸಕ್ಕೆ ಸೇರಿದ್ದರೂ ಓದು ಮುಂದುವರಿಸಲೇಬೇಕೆಂಬ ಇವರ ತುಡಿತದಿಂದ ಮೈಸೂರಿನ ಮಹಾರಾಜ…
ಮಂಗಳೂರು: ‘ಸವಿ ಜೀವನಂ ನೃತ್ಯ ಕಲಾಕ್ಷೇತ್ರ ಟ್ರಸ್ಟ್ ಆಯೋಜಿಸುವ ‘ನೃತ್ಯ ಸಂಭ್ರಮ 2025’ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಸಂಗೆ ಘಂಟೆ 5.00 ರಿಂದ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಲ್. ಸಿ. ಆರ್. ಐ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರವರ್ತಕಿ ಸವಿತಾ ಜೀವನ್ ತಿಳಿಸಿದ್ದಾರೆ. ಅಂದು ನೃತ್ಯಗುರು ಉಳ್ಳಾಲ ಮೋಹನ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಆ್ಯಂಡ್ ಕಲ್ಬರಲ್ ಟ್ರಸ್ಟ್ನ ನಿರ್ದೇಶಕರಾದ ಭ್ರಮರಿ ಶಿವಪ್ರಕಾಶ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ನೃತ್ಯ ಕಲಾಕ್ಷೇತ್ರದ ಶಿಷ್ಯಂದಿರು ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ..
ಬೆಂಗಳೂರು: ಎಸ್. ಪಿ. ವರದರಾಜು ಆತ್ಮೀಯರ ಬಳಗದಿಂದ ನೀಡುವ ‘ಎಸ್.ಪಿ. ವರದರಾಜು ವಾರ್ಷಿಕ ಪ್ರಶಸ್ತಿ’ಗೆ ರಂಗಭೂಮಿ ಕ್ಷೇತ್ರದಿಂದ ಹುಬ್ಬಳ್ಳಿಯ ಹಿರಿಯ ಕಲಾವಿದೆ ಶಾಂತಾಬಾಯಿ ಬೀಳಗಿ ಹಾಗೂ ಸಿನಿಮಾ ಕ್ಷೇತ್ರದಿಂದ ಪ್ರಗತಿ ಅಶ್ವತ್ಥನಾರಾಯಣ ಅವರನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. 19ನೇ ವರ್ಷದ ಪ್ರಶಸ್ತಿ ಇದಾಗಿದೆ ಎಂದು ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ. ‘ಪ್ರಶಸ್ತಿ ಪ್ರದಾನ ಸಮಾರಂಭವು 11 ಫೆಬ್ರವರಿ 2025 ರಂದು ಸಂಜೆ 5.30ಕ್ಕೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ನಟಿ ಉಮಾಶ್ರೀ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಿರ್ದೇಶಕ ಪಿ. ಶೇಷಾದ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ರಾಜ್ಕುಮಾರ್ ಇವರ ಸೋದರ ಎಸ್. ಪಿ. ವರದರಾಜು ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದವರಾದ್ದರಿಂದ ಎರಡೂ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತಿದೆ. ಎಂದರು.
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08 ಫೆಬ್ರವರಿ 2025ರಂದು ಸಂಜೆ 4-00 ಗಂಟೆಗೆ ನಗರದ ಕೊಡಿಯಾಲ್ ಬೈಲ್ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಲಿದೆ. ಹಿರಿಯ ರಂಗಕರ್ಮಿ ಗುಲ್ವಾಡಿ ರಾಮದಾಸ್ ದತ್ತಾತ್ರೇಯ ಭಟ್ ಇವರು ಈ ಬಾರಿಯ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ ಹಾಗೂ ಹಿರಿಯ ಸಾಹಿತಿ-ಅನುವಾದಕಿ ಡಾ. ಗೀತಾ ಶೆಣೈಯವರು ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿ ಸ್ವೀಕರಿಸಲಿರುವರು. ಈ ಅಂತಾರಾಜ್ಯ ಕೊಂಕಣಿ ನಾಟಕ ಮಹೋತ್ಸವದಲ್ಲಿ ಎರಡು ಪ್ರಸಿದ್ಧ ಕೊಂಕಣಿ ನಾಟಕಗಳ ಪ್ರದರ್ಶನ ನಡೆಯಲಿದ್ದು, ನೆರೆಯ ಮಹಾರಾಷ್ಟ್ರದ ಸುಧಾಕರ ಭಟ್ ಅವರ ನೇತೃತ್ವದ ಪ್ರಸಿದ ಕಲಾತಂಡ ಅಮ್ಮಿ ರಂಗಕರ್ಮಿ (ರಿ.) ಮುಂಬೈ ಇವರು ‘ಪೋಸ್ಟ್ ಕಾರ್ಡ್’ ಮತ್ತು ಕರ್ನಾಟಕ…
ಬೆಳ್ತಂಗಡಿ : ಕಲಾನಿಕೇತನ ಡಾನ್ಸ್ ಫೌಂಡೇಷನ್ ಇವರ ವತಿಯಿಂದ ಶಾಶ್ವತ ತಾರನಾಥ್ ಇವರ ಭರತನಾಟ್ಯಂ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಬೆಳ್ತಂಗಡಿಯ ಶ್ರೀ ನಾರಾಯಣ ಗುರು ಸಂಕೀರ್ಣ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಇವರು ಗುರು ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯಾಗಿರುತ್ತಾರೆ. ಕರ್ನಾಟಕ ಕಲಾಶ್ರೀ ಗುರು ವಿದುಷಿ ನಯನ ವಿ. ರೈ, ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ್ ಮತ್ತು ಮೆಡಿಕಲ್ ಡೈರೆಕ್ಟರ್ ಡಾ. ಗೋಪಾಲಕೃಷ್ಣ ಭಟ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಗಪ್ರವೇಶ ಕಾರ್ಯಕ್ರಮದ ನಿರ್ದೇಶನ ಮತ್ತು ನಟ್ಟುವಾಂಗಂನಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ನಂದಕುಮಾರ್ ಉಣ್ಣಿಕೃಷ್ಣನ್, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಕಾರ್ತಿಕ್ ವಿಧಾತೃ, ಕೊಳಲಿನಲ್ಲಿ ಉಡುಪಿಯ ವಿದ್ವಾನ್ ನಿತೀಶ್ ಅಮ್ಮನ್ನಾಯ ಮತ್ತು ವೀಣೆಯಲ್ಲಿ ಬೆಂಗಳೂರಿನ ವಿದ್ವಾನ್ ಪ್ರಶಾಂತ್ ರುದ್ರಪಟ್ನ ಸಹಕರಿಸಲಿದ್ದಾರೆ.
ಮಂಗಳೂರು : ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ನೀಡುವ 2024-25ನೇ ಸಾಲಿನ ‘ವೀರರಾಣಿ ಅಬ್ಬಕ್ಕ ಪ್ರಶಸ್ತಿ’ಗೆ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಲೇಖಕಿ ಕ್ಯಾಥರಿನ್ ರೋಡ್ರಿಗಸ್, ಸಮಾಜ ಸೇವೆ ಕ್ಷೇತ್ರದಲ್ಲಿ ಹಿರಿಯ ಸಮಾಜ ಸೇವಕಿ ಸುವಾಸಿನಿ ದಾಮೋದರ್ ಆಯ್ಕೆಯಾಗಿದ್ದಾರೆ. ನಾ. ದಾಮೋದರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬಿ.ಎಂ. ರೋಹಿಣಿ, ಗಣೇಶ ಅಮೀನ್ ಸಂಕಮಾರ್ ಇವರನ್ನೊಳಗೊಂಡ ಆಯ್ಕೆ ಸಮಿತಿಯು ಇಬ್ಬರು ಸಾಧಕಿಯರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಅಬ್ಬಕ್ಕ ಉತ್ಸವ ನಡೆಸಲಾಗುತ್ತಿದ್ದು, ಅಬ್ಬಕ್ಕನ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ರೂ.25,000/- ನಗದು, ಸ್ಮರಣಿಕೆ ಒಳಗೊಂಡಿದೆ. ದಿನಾಂಕ 22 ಫೆಬ್ರವರಿ 2025ರಂದು ಉಳ್ಳಾಲ ನಗರಸಭೆ ಆವರಣದ ಮಹಾತ್ಮಾ ಗಾಂಧಿ ರಂಗಮಂದಿರದಲ್ಲಿ ನಡೆಯುವ ಅಬ್ಬಕ್ಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಟಪಾಡಿ ಗ್ರಾಮದ ಕ್ಯಾಥರಿನ್ ರೋಡ್ರಿಗಸ್ ಇವರು ಎಂ.ಎ. ಪದವೀಧರರಾಗಿದ್ದು, ಸಾಹಿತ್ಯ ಕ್ಷೇತ್ರದ ಬಹುಮುಖ ಮತ್ತು ಬಹುಭಾಷಾ ಪ್ರತಿಭೆ. ಕನ್ನಡ, ತುಳು, ಕೊಂಕಣಿಯಲ್ಲಿ ಕಥೆ, ಕವನ, ಕಾದಂಬರಿ,…
ವಿಜಯನಗರ ಬಿಂಬದಿಂದ ‘ಚಿಣ್ಣರ ಚಿತ್ತಾರ’ ಮತ್ತು ‘ಚಿಣ್ಣರ ಚಾವಡಿ’ ಮಕ್ಕಳ ಬೇಸಿಗೆ ಶಿಬಿರ | ದಾಖಲಾತಿ ಫೆಬ್ರವರಿ 09ರಿಂದ
ಬೆಂಗಳೂರು : ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ ಮಕ್ಕಳ ವಿಭಾಗದಲ್ಲಿ 3ರಿಂದ 8 ಮತ್ತು 8ರಿಂದ 15 ವರ್ಷದ ಮಕ್ಕಳಿಗೆ ಎರಡು ವಿಭಾಗಗಳಲ್ಲಿ ರಂಗ ತರಬೇತಿಯ ಬೇಸಿಗೆ ಶಿಬಿರ ಆರಂಭವಾಗಲಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. 3ರಿಂದ 8 ವರ್ಷದ ಮಕ್ಕಳಿಗೆ ‘ಚಿಣ್ಣರ ಚಿತ್ತಾರ’ ಬೇಸಿಗೆ ಶಿಬಿರವು ದಿನಾಂಕ 05 ಏಪ್ರಿಲ್ 2025ರಿಂದ 14 ಏಪ್ರಿಲ್ 2025ರವರೆಗೆ ಬೆಳಗ್ಗಿನ ಬ್ಯಾಚ್ 10-00 ಗಂಟೆಯಿಂದ 1-00 ಗಂಟೆ ತನಕ ಹಾಗೂ ಸಂಜೆ ಬ್ಯಾಚ್ 4-00 ಗಂಟೆಯಿಂದ 7-00 ಗಂಟೆ ತನಕ ನಡೆಯಲಿದೆ. ನಟನೆ, ರಂಗಾಟ, ಚಿತ್ರಕಲೆ, ಕ್ರಾಫ್ಟ್, ಹಾಡುಗಳು, ಚಿತ್ರಕಲಾ ಪ್ರದರ್ಶನ ಮತ್ತು ಮಕ್ಕಳಿಂದಲೇ ನಾಟಕ ಪ್ರದರ್ಶನ ನಡೆಯಲಿದೆ. 8ರಿಂದ 15 ವರ್ಷದ ಮಕ್ಕಳಿಗೆ ‘ಚಿಣ್ಣರ ಚಾವಡಿ’ ಬೇಸಿಗೆ ಶಿಬಿರವು ದಿನಾಂಕ 15 ಏಪ್ರಿಲ್ 2025ರಿಂದ 29 ಏಪ್ರಿಲ್ 2025ರವರೆಗೆ ಮೊದಲ ವಾರ ಬೆಳಗ್ಗೆ 9-30 ಗಂಟೆಯಿಂದ 4-00 ಗಂಟೆ ತನಕ ಹಾಗೂ ಎರಡನೇ ವಾರ ಬೆಳಗ್ಗೆ 9-30 ಗಂಟೆಯಿಂದ 7-30…
ಮಂಗಳೂರು : ಆಕೃತಿ ಆಶಯ ಪಬ್ಲಿಕೇಶನ್ಸ್ ಮಂಗಳೂರು ಇವರ ವತಿಯಿಂದ ಬೆಂಗಳೂರಿನ ರಾಜಾಜಿನಗರ ಪೇರೆಂಟ್ಸ್ ಅಸೋಶಿಯೇಶನ್ ಕಾಲೇಜು, ಪರಿಸರ ಸಂಗಮ ಮತ್ತು ಭೂಮಿ ಬುಕ್ಸ್ ಇವರ ಸಹಯೋಗದೊಂದಿಗೆ ಪ್ರೊ. ಮಾಧವ ಗಾಡ್ಗೀಳರ ಆತ್ಮಕಥೆ ‘A Walk up the Hill’ನ ಕನ್ನಡ ಆವೃತ್ತಿ ‘ಏರುಘಟ್ಟದ ನಡಿಗೆ’ ಅನುವಾದ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ದಿನಾಂಕ 13 ಫೆಬ್ರವರಿ 2025ರಂದು ಬೆಳ್ಳಿಗೆ 10-00 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಶಿಕ್ಷಣ ತಜ್ಞರು ಮತ್ತು ಚಿಂತಕರಾದ ಪ್ರೊ. ಕೆ.ಈ. ರಾಧಾಕೃಷ್ಣ ಇವರ ಅಧ್ಯಕ್ಷತೆ ನಡೆಯುವ ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಈಶ್ವರ ಖಂಡ್ರೆ ಇವರು ಆತ್ಮಕಥೆ ಕೃತಿಯನ್ನು ಲೋಕಾರ್ಪಣೆ ಮಾಡಲಿರುವರು. ಕೃಷಿಕರಾದ ಡಾ. ನರೇಂದ್ರ ರೈ ದೇರ್ಲ ಇವರು ಕೃತಿ ಅವಲೋಕನಗೈಯಲಿದ್ದು, ಮಾಜಿ ಸೈನಿಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಇವರು ಗಾಡ್ಗೀಳರ ಪರಿಸರ ಕಾಣ್ಕೆಗಳ ಬಗ್ಗೆ ಮಾತನಾಡಲಿದ್ದಾರೆ.
ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಅರ್ಪಿಸುವ ಅಪೂರ್ವ ಸಾಹಿತ್ಯ ಸೇವೆ ‘ಪುಸ್ತಕ ಪ್ರೇಮಿಗಳ ದಿನಾಚರಣೆ’ ಕಾರ್ಯಕ್ರಮವನ್ನು ದಿನಾಂಕ 14 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಇವರ ಅಧ್ಯಕ್ಷತೆಯಲ್ಲಿ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರು ಉದ್ಘಾಟನೆ ಮಾಡಲಿರುವರು. ನಾಡಿನ ಪ್ರಸಿದ್ಧ ಸಾಹಿತಿಗಳ 10 ಪುಸ್ತಕ ಬಿಡುಗಡೆ, ಪುಸ್ತಕ ಪ್ರೇಮದ ಚಿತ್ರಕಲಾ ಸ್ಪರ್ಧೆ ಮತ್ತು ಪುಸ್ತಕ ಮೇಳ ಜರಗಳಿವೆ. ಡಾ. ವಿಶ್ವನಾಥ ಬದಿಕಾನ ಇವರ ‘ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ’ ಸಂಶೋಧನಾ ಗ್ರಂಥ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರ ‘ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ’ ಕನ್ನಡ ಕವನ ಸಂಕಲನ, ಶ್ರೀಮತಿ ಅಕ್ಷತಾರಾಜ್ ಪೆರ್ಲ ಇವರ ‘ನೆಲ ಉರುಳು’ ಕನ್ನಡ ನಾಟಕ, ಶ್ರೀ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಇವರ ‘ನೆಪವು ಸಿಕ್ಕಿದೆ ಬದುಕಿಗೆ’ ಕನ್ನಡ ಕವನ ಸಂಕಲನ,…
ಬದಿಯಡ್ಕ : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ನೇತೃತ್ವದಲ್ಲಿ ಚುಟುಕು ಕವಿ ದಿವಂಗತ ಬದಿಯಡ್ಕ ಕೃಷ್ಣ ಪೈಯವರ ಬದುಕು – ಬರಹದ ಬಗ್ಗೆ ಮೆಲುಕು ಹಾಕುವ ‘ಸ್ಮರಣಾಂಜಲಿ’ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಅಪರಾಹ್ನ 2-30 ಗಂಟೆಗೆ ಬದಿಯಡ್ಕದ ಗಣೇಶ್ ಪೈಯವರ ಮನೆಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ದಿವಂಗತ ಬಿ. ಕೃಷ್ಣ ಪೈಯವರ ಭಾವಚಿತ್ರಕ್ಕೆ ಕುಟುಂಬದವರಿಂದ ಹಾಗೂ ಅಭಿಮಾನಿಗಳಿಂದ ಪುಷ್ಪಾರ್ಚನೆ ನಡೆಯಲಿದ್ದು, ನಿವೃತ್ತ ಪ್ರಾಂಶುಪಾಲ ಡಾ. ಬೇ.ಸೀ ಗೋಪಾಲಕೃಷ್ಣ ಭಟ್ ಸಂಸ್ಮರಣಾ ಭಾಷಣ ಮಾಡುವರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ ನಾರಾಯಣ್ ತೊಟ್ಟೆತ್ತೋಡಿ, ನಿವೃತ್ತ ಉಪ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಖ್ಯಾತ ವೈದ್ಯ ಡಾ. ಶ್ರೀನಿಧಿ ಸರಳಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಪ್ರಾಸ್ತಾವಿಕವಾಗಿ ಮಾತನಾಡುವರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಎ. ಶ್ರೀನಾಥ್ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಕ್ರಮದಲ್ಲಿ…