Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು : ಬೆಂಗಳೂರಿನ ಆಧಾರಿತ ನೃತ್ಯ, ನಾಟಕ ಮತ್ತು ಸಂಗೀತ ತಂಡ ಕ್ರಾನಿಕಲ್ಸ್ ಆಫ್ ಇಂಡಿಯಾ ಇದರ ವತಿಯಿಂದ ಮಹಾನ್ ಭಾವಗೀತೆ ಕವಿ ಮತ್ತು ಸಾಹಿತ್ಯ ದಿಗ್ಗಜ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ಸ್ಮರಣಾರ್ಥವಾಗಿ ದಿನಾಂಕ 19 ಜುಲೈ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ‘ಬಾನಿನಲ್ಲಿ ಬರೆದವರು’ (ಭಾವಗೀತೆಗಳಲ್ಲಿ ಡಾ. ವೆಂಕಟೇಶ್ ಮೂರ್ತಿ ಅವರ ಕಾವ್ಯಾನುಭವ) ಒಂದು ಸಂಗೀತ ಸಂಜೆ ಆಯೋಜಿಸಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8867419347 | 9741059758.
ಬದಿಯಡ್ಕ : ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 12 ಜುಲೈ 2025ರಂದು ಕಾಸರಗೋಡಿನ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕನ್ನಡ ಸಾಹಿತ್ಯ ಮಾರ್ಗದರ್ಶನ ಅಭಿಯಾನದ 3ನೇ ಶಿಬಿರವು ನಡೆಯಿತು. ಈ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ರಾಜ್ಯ- ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕ ಸಂಚಾಲಕ ಡಾ. ಕೆ. ವಾಮನ್ ರಾವ್ ಬೇಕಲ್ “ಕನ್ನಡ ಸಾಹಿತ್ಯದ ಮೂಲಕ ಮಕ್ಕಳಲ್ಲಿ ಭಾಷಾಭಿಮಾನ ಬೆಳೆಸಲು ಸಾಧ್ಯ. ಕನ್ನಡ ಕಟ್ಟುವ ನಿಟ್ಟಿನಲ್ಲಿ ಆತ್ಮಾವಲೋಕನ ಮಾಡಬೇಕಾದ ಸ್ಥಿತಿಯಿದೆ” ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಸೇವಾ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ಮಾತನಾಡಿ “ಪ್ರತಿಯೊಬ್ಬ ಕನ್ನಡಿಗರೂ ಕೂಡಾ ಬೇರೆ ಭಾಷೆಯ ಶಬ್ಧಗಳನ್ನು ಸೇರಿಸದ ಶುದ್ಧ ಕನ್ನಡದಲ್ಲಿ ವ್ಯವಹರಿಸುವ ಪ್ರತಿಜ್ಞೆ ಮಾಡಬೇಕು. ಇಂದಿನ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯಾಕರಣ ಬದ್ಧವಾದ ಸಾಹಿತ್ಯ ಕಲಿಕೆಯ ಅಗತ್ಯವಿದೆ. ಕನ್ನಡ ವ್ಯಾಕರಣದ ಬಗ್ಗೆ ನಿರ್ಲಕ್ಷ್ಯ ಸಲ್ಲದು” ಎಂದು ಹೇಳಿದರು.…
ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೇಳನೇ ಉಪನ್ಯಾಸ ಕಾರ್ಯಕ್ರಮ ದಿನಾಂಕ 12 ಜುಲೈ 2025 ರಂದು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಇಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಯುವ ಲೇಖಕಿ ಮತ್ತು ವಾಗ್ಮಿಯಾದ ರೆಶೆಲ್ ಬ್ರೆಟ್ನಿ ಫೆರ್ನಾಂಡಿಸ್ “ದಿಟ್ಟ ಮನಸ್ಸುಗಳ ನಿರ್ಮಾಣ – ಇಂದಿನ ಯುವಕರಿಗಾಗಿ ಸ್ವಾಮಿ ವಿವೇಕಾನಂದರ ಚಿಂತನೆ” ಎಂಬ ವಿಷಯದಲ್ಲಿ ಮಾತನಾಡಿ “ಸ್ವಾಮಿ ವಿವೇಕಾನಂದರು ಯುವಕರನ್ನು ದೇಶದ ನಿಜವಾದ ಶಕ್ತಿ ಎಂದು ಕರೆದು, ಅವರಿಗೆ ಆತ್ಮಶ್ರದ್ಧೆ ಎಂಬ ಅಮೋಘ ಶಸ್ತ್ರವನ್ನು ನೀಡಿದ್ದಾರೆ. ಅವರು ಬೋಧಿಸಿದಂತೆ, “ನೀನು ದೇವನಸ್ವರೂಪ, ನಿನ್ನೊಳಗೇ ಅನಂತ ಶಕ್ತಿ ಇದೆ” ಎಂಬ ನಂಬಿಕೆಯನ್ನು ಪ್ರತಿಯೊಬ್ಬ ಯುವಕನ ಮನಸ್ಸಿನಲ್ಲಿ ಬೆಳೆಸಿದವರು. ಭಯ, ಅನುಮಾನ, ಹತಾಶೆ – ಈ ಎಲ್ಲವುಗಳಿಂದ ಯುವಕರು ಅಸ್ತವ್ಯಸ್ತರಾಗುತ್ತಿರುವ ಈ ಸಮಯದಲ್ಲಿ, ವಿವೇಕಾನಂದರ ಚಿಂತನೆ ದಿಟ್ಟತನವಲ್ಲದೆ ಬೇರೇನಲ್ಲ. ಅವರು ಹೇಳಿದಂತೆ, “ಭಯವೇ ಪಾಪ”. ನಮ್ಮ ಮನಸ್ಸು ಭಯವನ್ನು…
ಉಡುಪಿ : ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಉಡುಪಿ ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಕೊಡ ಮಾಡುವ ‘ಪೊಳಲಿ ಶೀನಪ್ಪ ಹೆಗ್ಗಡೆ’ ಮತ್ತು ‘ಎಸ್.ಆರ್. ಹೆಗ್ಡೆ’ ಪ್ರಶಸ್ತಿ ಪ್ರದಾನ 2025 ಸಮಾರಂಭವು ದಿನಾಂಕ 12 ಜುಲೈ 2025ರಂದು ಉಡುಪಿ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಿರಿಯ ವಿದ್ವಾಂಸ ಡಾ. ಪಾದೆಕಲ್ಲು ವಿಷ್ಣು ಭಟ್ ‘ತುಳುನಾಡಿನ ಇತಿಹಾಸ ರಚನೆಯ ಕಾರ್ಯದಲ್ಲಿ ಪೊಳಲಿ ಶೀನಪ್ಪ ಹೆಗ್ಗಡೆಯವರ ಕಾರ್ಯ ವಿಶಿಷ್ಟವಾದುದು. ಇತಿಹಾಸಗಾರರ ಶ್ರಮದ ಕಾರ್ಯವನ್ನು ಗುರುತಿಸಿ ಗೌರವಿಸುವ ಕಾರ್ಯ ಅಭಿನಂದನೀಯವಾದುದು” ಎಂದರು. ಪುರಾತತ್ವ ತಜ್ಞ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಪ್ರಶಸ್ತಿ ಪುರಸ್ಕೃತೆ ಡಾ. ಮಾಲತಿ ಕೃಷ್ಣಮೂರ್ತಿಯವರನ್ನು ಅಭಿನಂದಿಸಿ “ವಸಾಹತು ಕಾಲದ ದಕ್ಷಿಣ ಕನ್ನಡದ ವ್ಯಾಪಾರ ಮತ್ತು ವಾಣಿಜ್ಯದ ಕುರಿತು ಮಾಲತಿಯವರು ನಡೆಸಿದ ಸಂಶೋಧನೆ ಒಳನೋಟಗಳಿಂದ ಕೂಡಿದ್ದು ತುಳುನಾಡಿನ ಇತಿಹಾಸವನ್ನು ಅರಿತುಕೊಳ್ಳಲು ಸಹಕಾರಿಯಾಗಿದೆ” ಎಂದರು. ‘ಮೌಖಿಕ ಪರಂಪರೆ ಮತ್ತು ತುಳುವ ಇತಿಹಾಸ’…
ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇದರ ವತಿಯಿಂದ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ವನಮಹೋತ್ಸವ ಮತ್ತು ‘ಹನಿ ಇಬ್ಬನಿ-ಸಿಹಿ ಸಿಂಚನ’ ಮುಂಗಾರು ಬಹುಭಾಷಾ ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಸ್ಥಳೀಯ ಲಾಲ್ಬಾಗ್ನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಜಿಲ್ಲಾಧ್ಯಕ್ಷರಾದ ಪಿ.ಬಿ. ಹರೀಶ್ ರೈಯವರು ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಮಾಜಿ ಮೇಯರ್ ದಿವಾಕರ್ ಕದ್ರಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ ವನಮಹೋತ್ಸವಕ್ಕೆ ಚಾಲನೆ ನೀಡಿ ಇದರ ಮಹತ್ವದ ಕುರಿತು ಮಾತನಾಡಿದರು. ಗೌರವ ಅತಿಥಿಯಾಗಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ನ ಅಧ್ಯಕ್ಷರಾದ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ, ರೇಮಂಡ್ ಡಿಕೂನ ತಾಕೊಡೆ, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಎಂ.ಎಸ್. ವೆಂಕಟೇಶ ಗಟ್ಟಿ, ಚೇತನ್, ವೈಭವ್ ಡಿ. ಶೆಟ್ಟಿಗಾರ್, ಪ್ರೇಮ…
ಪುತ್ತೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಶ್ರಯದಲ್ಲಿ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಮತ್ತು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಸಂಯೋಜನೆಯಲ್ಲಿ ದಿನಾಂಕ 25 ಜುಲೈ 2025ರಿಂದ 31 ಜುಲೈ 2025ರವರೆಗೆ ಸಾಯಂಕಾಲ 5-00 ಗಂಟೆಯಿಂದ ರಾತ್ರಿ 8-00 ಗಂಟೆವರೆಗೆ ‘ಭೀಷ್ಮ ಭಾರತ’ ಶೀರ್ಷಿಕೆಯಲ್ಲಿ ಸಂಘದ ಮತ್ತು ಅತಿಥಿ ಕಲಾವಿದರಿಂದ ತಾಳಮದ್ದಳೆ ಸಪ್ತಾಹ ಜರಗಲಿದೆ. ಈ ಬಗ್ಗೆ ಪೂರ್ವಭಾವಿ ಸಭೆಯು ಪುತ್ತೂರು ಪರ್ಲಡ್ಕದ ಅಗಸ್ತ್ಯ ನಿವಾಸದಲ್ಲಿ ದಿನಾಂಕ 13 ಜುಲೈ 2025ರಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆಯಲ್ಲಿ ಜರಗಿತು. ಸಪ್ತಾಹದಲ್ಲಿ ‘ಗಾಂಗೇಯ’, ‘ಭೀಷ್ಮೊತ್ಪತ್ತಿ’, ‘ಸಾಲ್ವ ಶೃಂಗಾರ’, ‘ಅಂಬಾ ಶಪಥ’, ‘ಗಂಗಾ ಸಾರಥ್ಯ’, ‘ಭೀಷ್ಮ ಸೇನಾಧಿಪತ್ಯ’, ‘ಕರ್ಮಬಂಧ – ಭೀಷ್ಮಪರ್ವ’ ತಾಳಮದ್ದಳೆಯನ್ನು ನಡೆಸಲಾಗುವುದು. ಸಂಘದ ಉಪಾಧ್ಯಕ್ಷರಾದ ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ, ಭಾಗವತರಾದ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಕೆ., ಹರಿಣಾಕ್ಷಿ ಜೆ. ಶೆಟ್ಟಿ, ಭಾರತಿ ರೈ,…
ಮಡಿಕೇರಿ : ಕನ್ನಡಸಿರಿ ಸ್ನೇಹ ಬಳಗ ಕೊಡಗು ಜಿಲ್ಲೆ ಇದರ ವತಿಯಿಂದ ಲೇಖಕ ಹೇಮಂತ್ ಪಾರೇರರವರ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 15 ಜುಲೈ 2025ರಂದು ಸಂಜೆ 4-00 ಗಂಟೆಗೆ ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಬಿ.ಎಸ್. ಇವರು ವಹಿಸಲಿದ್ದು, ಶ್ರೀಕ್ಷೇತ್ರ ಮಂಜುನಾಥ ದೇವಾಲಯದ ಶ್ರೀಶ್ರೀ ರಾಜೇಶನಾಥ್ ಗುರೂಜಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಇವರು ಕೃತಿ ಬಿಡುಗಡೆಗೊಳಿಸಲಿದ್ದು, ಕಲಾವಿದರಾದ ಶ್ರೀಮತಿ ಮಿಲನ ಭರತ್ ಇವರು ಕೃತಿ ಪರಿಚಯ ಮಾಡಲಿದ್ದಾರೆ.
ಮಂಗಳೂರು : ಶ್ರೀರಾಮ ಕ್ಷತ್ರಿಯ ಮಹಿಳಾ ಯಕ್ಷ ವೃಂದದ ವತಿಯಿಂದ ದಿನಾಂಕ 13 ಜುಲೈ 2025ರ ಭಾನುವಾರದಂದು ಭಿಕ್ಷು ಲಕ್ಷ್ಮಣಾನಂದ ಸಭಾಭವನದಲ್ಲಿ ಗುರುವಂದನಾ ಕಾರ್ಯಕ್ರಮ ಜರಗಿತು. ಈ ಕಾರ್ಯಕ್ರಮದಲ್ಲಿ ಗುರುವಿನ ಮಹತ್ವದ ಬಗ್ಗೆ ಮಾತನಾಡಿದ ಶ್ರೀರಾಮ ಕ್ಷತ್ರಿಯ ಸೇವಾ ಸಮಿತಿಯ ಅಧ್ಯಕ್ಷ ಮುರಳೀಧರ ಚಂದ್ರಗಿರಿ “ಈ ಅದ್ಭುತ ಸೃಷ್ಟಿಯಲ್ಲಿ ನಮಗೆ ಅರಿವಿನ ಮೂಲವನ್ನು ತೋರಿಸಿ ನಡೆಸುವವನೇ ಗುರು. ಎಲ್ಲಾ ಕಾಲಘಟ್ಟದಲ್ಲೂ ಗುರುವಿನ ಸ್ಥಾನ ಉಲ್ಲೇಖನೀಯವೇ ಆಗಿದೆ. ಮನಸ್ಸಿಗೆ ಕವಿದ ಮಂಜನ್ನು ಒರಸಿ ಬೆಳಕಿನೆಡೆಗೆ ಗುರು ಒಯ್ಯುತ್ತಾನೆ. ‘ಏಕಕ್ಷರಂ ಕಲಿಸಿದಾತಂ ಗುರು’ ಎಂಬ ಮಾತಿದೆ. ಅಂತೆಯೇ ನಮ್ಮ ಜೀವನದಲ್ಲೂ ಅನೇಕ ಕಡೆ ಅನೇಕ ಗುರುಗಳು ಮಾರ್ಗದರ್ಶನ ನೀಡುತ್ತಾರೆ. ಅಂತಹಾ ಗುರುಸ್ಥಾನವನ್ನು ಗೌರವಿಸುವುದು ನಮಗೆ ಹೆಮ್ಮೆ” ಎಂದು ವಿವರಿಸಿದರು. ಶ್ರೀರಾಮಕ್ಷತ್ರಿಯ ಮಹಿಳಾ ವೃಂದದ ಅಧ್ಯಕ್ಷೆ ವಿದ್ಯಾ ನಾಗರಾಜ್ ಕೂಡಾ ಗುರುಪೂರ್ಣಿಮೆಯ ಮಹತ್ವದ ಸಂದೇಶ ನೀಡಿದರು. ಶ್ರೀರಾಮಕ್ಷತ್ರಿಯ ಮಹಿಳಾ ಯಕ್ಷ ವೃಂದದ ಸಂಧ್ಯಾ ದಿನೇಶ್ ಪ್ರಾರ್ಥಿಸಿ, ಕಲ್ಪನಾ ವೆಂಕಟೇಶ್ ಸ್ವಾಗತಿಸಿ, ಅಧ್ಯಕ್ಷೆ ವಾರಿಜಾ ಕೊರಗಪ್ಪ ಧನ್ಯವಾದ…
ಮಡಿಕೇರಿ : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ‘ಕೊಡವ ಭಾಷೆ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ’ ಏರ್ಪಡಿಸುವ ಸಂಬಂಧ ಸ್ವರಚಿತ ಕವನ ಆಹ್ವಾನಿಸಲಾಗಿದೆ. ಯಾವುದೇ ಜಾತಿ ಧರ್ಮ ಆಧಾರಿತ ಕವನಗಳನ್ನು ಹೊರತುಪಡಿಸಿ, ಕೊಡವ ಸಾಹಿತ್ಯ-ಸಂಸ್ಕೃತಿ ಇಲ್ಲಿನ ಪರಿಸರ, ಪ್ರಕೃತಿ ಒಳಗೊಂಡಂತೆ ತಾತ್ವಿಕ ವಿಚಾರಗಳಿಗೆ ಒತ್ತುಕೊಡುವಂತೆ ಕವನಗಳಿಗೆ ಅವಕಾಶ ನೀಡಲಾಗುವುದು. 25 ಸಾಲುಗಳಿಗೆ ಮೀರಿದ ಕವನಗಳನ್ನು ವಾಚಿಸಲು ಅವಕಾಶ ಇರುವುದಿಲ್ಲ. ಯಾವುದೇ ಕವನಗಳ ಸಾಲುಗಳನ್ನು ಗೋಷ್ಠಿಯಲ್ಲಿ ಪುನರುಚ್ಚರಿಸುವಂತಿಲ್ಲ. ಕವನಗಳನ್ನು ಕಳುಹಿಸುವ ಹಾಗೂ ಭಾಗವಹಿಸುವ ಕವಿಗಳಿಗೆ ಜಾತಿ-ಧರ್ಮಗಳ ನಿರ್ಬಂಧ ಇರುವುದಿಲ್ಲ. ಕೊಡವ ಭಾಷೆಯು ಕಡ್ಡಾಯವಾಗಿದ್ದು, ತಮ್ಮ ಕವನಗಳನ್ನು ಅಕಾಡೆಮಿ ಮೊಬೈಲ್ ಸಂಖ್ಯೆ 8762942976ಕ್ಕೆ ಕಳುಹಿಸಲು 19 ಜುಲೈ 2025 ಕೊನೆಯ ದಿನಾಂಕವಾಗಿದೆ. ಕವಿಗೋಷ್ಠಿಯು ನಾಯಕಂಡ ಬೇಬಿ ಚಿಣ್ಣಪ್ಪ ಇವರ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಕಂಬೆಯಂಡ ಡೀನಾ ಬೋಜಣ್ಣ ಸಂಚಾಲಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಕಾಡೆಮಿ ನಿಯಮದಂತೆ ಕವಿಗೋಷ್ಠಿಗೆ ಆಯ್ಕೆಯಾಗುವ ಹಾಗೂ ಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳಿಗೆ ಸಂಭಾವನೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷರಾದ…
ಬೆಂಗಳೂರು : ವಿಜಯನಗರ ಬಿಂಬದ ರಂಗ ಶಿಕ್ಷಣ ಕೇಂದ್ರ ಹಿರಿಯರ ವಿಭಾಗದ ವತಿಯಿಂದ 13ನೇ ವರ್ಷದ ಡಿಪ್ಲೋಮೋ ವಿದ್ಯಾರ್ಥಿಗಳಿಂದ ಅಭ್ಯಾಸ ಮಾಲಿಕೆ -1ಯಲ್ಲಿ ‘ಭಾಸ’ನ ‘ಮಧ್ಯಮ ವ್ಯಾಯೋಗ’ ನಾಟಕ ಪ್ರದರ್ಶನವನ್ನು ದಿನಾಂಕ 20 ಜುಲೈ 2025ರಂದು ಸಂಜೆ 4-00 ಹಾಗೂ 7-00 ಗಂಟೆಗೆ ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ಆಯೋಜಿಸಲಾಗಿದೆ. ಪ್ರೊ. ಕೀ.ರಂ. ನಾಗರಾಜ್ ಇವರು ಕನ್ನಡಕ್ಕೆ ಅನುವಾದಿಸಿದ್ದು, ಡಾ. ಎಸ್.ವಿ. ಕಶ್ಯಪ್ ವಿನ್ಯಾಸ ಮತ್ತು ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 9845734967, 9844017881, 9845265967 ಮತ್ತು 9844152967 ಸಂಖ್ಯೆಯನ್ನು ಸಂಪರ್ಕಿಸಿರಿ.