Author: roovari

ಯಕ್ಷಗಾನ ರಂಗಕ್ಕೆ ಇವರು ವೇಷಧಾರಿಯಾಗಿ ಬಂದವರು. ನಂತರ ಹಿಮ್ಮೇಳದ ಕಡೆಗೆ ಒಲವು ಮೂಡಿ ಯಕ್ಷಗಾನ ರಂಗದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವವರು ವಿಶ್ವಂಭರ ಅಲ್ಸೆ, ಐರೋಡಿ. 17.04.2002 ರಂದು ವಿಶ್ವನಾಥ ಅಲ್ಸೆ, ಐರೋಡಿ ಹಾಗೂ ವೀಣಾ ಅಲ್ಸೆ ಇವರ ಮಗನಾಗಿ ಜನನ. MCOM ಇವರ ವಿದ್ಯಾಭ್ಯಾಸ. ಯಕ್ಷಗಾನ ಗುರುಗಳು:- ಮಂಜುನಾಥ ಕುಲಾಲ್ ಐರೋಡಿ ಹಾಗೂ ಪ್ರತೀಶ್ ಕುಮಾರ್, ಬ್ರಹ್ಮಾವರ ಹೆಜ್ಜೆಗಾರಿಕೆ ಗುರುಗಳು. ಶಿವಾನಂದ, ಕೋಟ ಚಂಡೆಯ ಗುರುಗಳು. ದೇವದಾಸ್ ರಾವ್, ಕೂಡ್ಲಿ ಮದ್ದಳೆಯ ಗುರುಗಳು. ನೆಚ್ಚಿನ ಚೆಂಡೆ ಹಾಗೂ ಮದ್ದಳೆಗಾರರು: ಅಕ್ಷಯ್ ಆಚಾರ್ ಬಿದ್ಕಲ್ಕಟ್ಟೆ ಇವರ ಮದ್ದಳೆ ಮತ್ತು ಚಂಡೆಯನ್ನು ತುಂಬಾ ಇಷ್ಟ ಪಡುತ್ತೇನೆ. ಇವರನ್ನು ಬಿಟ್ಟರೆ ಶಶಾಂಕ್ ಆಚಾರ್, ರಾಘವೇಂದ್ರ ಹೆಗಡೆ, ಕೆ.ಜೆ. ಸುಧೀಂದ್ರ ಆಚಾರ್. ಕೃಷ್ಣಯ್ಯ ಆಚಾರ್ ಬಿದ್ಕಲ್ಕಟ್ಟೆ, ರಾಧಾಕೃಷ್ಣ ಕುಂಜತ್ತಾಯ, ಸುಜನ್ ಹಾಲಾಡಿ. ನೆಚ್ಚಿನ ಭಾಗವತರು: ರಾಘವೇಂದ್ರ ಮಯ್ಯ ಹಾಲಾಡಿ, ಪ್ರಸಾದ್ ಕುಮಾರ್ ಮೊಗೆಬೆಟ್ಟು, ಗಣೇಶ್ ಆಚಾರ್ ಬಿಲ್ಲಾಡಿ. ಹನುಮಗಿರಿ ಮೇಳದ ಸಾಕೇತ ಸಾಮ್ರಾಜ್ಞಿ, ಇಂದ್ರಪ್ರಸ್ಥ, ಶುಕ್ರನಂದನೆ, ಜೊತೆಗೆ…

Read More

ಕುಂದಾಪುರ : ‘ನಾದಾವಧಾನ’ ಪ್ರತಿಷ್ಠಾನ ಕುಂದಾಪುರ ಇವರು ಬಡಗುತಿಟ್ಟು ಯಕ್ಷಗಾನದ ಭಾಗವತಿಕೆ-ಮದ್ದಳೆ-ಚಂಡೆ-ನೃತ್ಯಗಳ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುತಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ತರಗತಿಗಳಲ್ಲಿ ಎ. ಪಿ. ಫಾಟಕ್ ಭಾಗವತಿಕೆ, ಅಶ್ವಿನಿ ಕೊಂಡದಕುಳಿ ನೃತ್ಯ ಹಾಗೂ ಎನ್. ಜಿ. ಹೆಗಡೆ ಚಂಡ ಮದ್ದಳೆ ಗುರುಗಳಾಗಿ ಯಕ್ಷಗಾನ ಶಿಕ್ಷಣ ನೀಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ‘ನಾದಾವಧಾನ’ ಸಂಸ್ಥೆಯಿಂದ ಆನೈನ್ ನಲ್ಲಿ ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದು, 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯ ಅಡಿಯಲ್ಲಿ ಯಕ್ಷ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆನೇಕರು ಈಗಾಗಲೇ ರಂಗ ಪ್ರವೇಶವನ್ನು ಮಾಡಿ ಹಲವು ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ‘ನಾದಾವಧಾನ’ ಸಂಸ್ಥೆಯ ಕಾರ್ಯಕ್ರಮಗಳು ಮತ್ತು ವಿದ್ಯಾರ್ಥಿಗಳ ಪ್ರಸ್ತುತಿಗಳು ಕಲಾವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ತರಗತಿಗಳಿಗೆ ಸಂಬಂಧಪಟ್ಟ ಸೂಚನೆಗಳು ಈ ಕೆಳಗಿನಂತಿವೆ : ಸಂಜೆ 7 ರಿಂದ 9ರ ಒಳಗಿನ ಸಮಯದಲ್ಲಿ ತರಗತಿಗಳು ನಡೆಯಲಿದ್ದು, ತರಗತಿಯು ಗೂಗಲ್ ಮೀಟ್ ನಲ್ಲಿ ನಡೆಯುತ್ತದೆ. ಕಲಿಕೆಗೆ ಬೇಕಾದ ನೋಟ್, ವಿಡಿಯೋ, ಆಡಿಯೋ ಇವುಗಳ ರೆಕಾರ್ಡಿಂಗ್ ನೀಡಲಾಗುವುದು. 10…

Read More

ಶಿರಿಯಾರ : ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಹೇಬರಕಟ್ಟೆ ಶಿರಿಯಾರ ಇವರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭ ಪ್ರಯುಕ್ತ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ‘ಪಂಚಸ್ವರ ಯಕ್ಷಗಾನ ವೈಭವ’ ಕಾರ್ಯಕ್ರಮವು ದಿನಾಂಕ 13 ಜುಲೈ 2025ರ ಭಾನುವಾರ ಶಿರಿಯಾರದ ಸಾಹೇಬರಕಟ್ಟೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಭಾಗವತರಾಗಿ ಸರ್ವಶ್ರೀ ಡಾ. ರವಿ ಕುಮಾರ್ ಸೂರಾಲು, ಪ್ರಸಾದ್ ಕುಮಾ‌ರ್ ಮೊಗೆಬೆಟ್ಟು, ಗಜೇಂದ್ರ ಶೆಟ್ಟಿ ಆಜ್ರೆ, ಮಧುಕರ್‌ ಮಡಾಮಕ್ಕಿ, ಮನೋಜ್ ಕಕ್ಕುಂಜೆ ಭಾಗವಹಿಸಲಿದ್ದು, ಇವರಿಗೆ ಮದ್ದಳೆಯಲ್ಲಿ ಆನಂದ ಭಟ್ ಪೆರ್ಡೂರು, ವಿಶ್ವಂಬರ ಅಲೈ ಹಾಗೂ ಚಂಡೆಯಲ್ಲಿ ಸುಜನ್ ಕುಮಾರ್ ಹಾಲಾಡಿ, ವಿಶ್ವೇಶ್ ಪೂಜಾರಿ ಬೈದಬೆಟ್ಟು ಸಹಕರಿಸಲಿದ್ದಾರೆ. ಸುಶಾಂತ್ ಶೆಟ್ಟಿ ಅಚ್ಚಾಡಿ ಕಾರ್ಯಕ್ರಮ ನಿರೂಪಿಸಲಿದ್ದಾರೆ.

Read More

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಮೂಹ ವಿದ್ಯಾ ಸಂಸ್ಥೆಗಳು ಮತ್ತು ಹಳೆ ವಿದ್ಯಾರ್ಥಿ ಸಂಘದ ಮುತುವರ್ಜಿಯಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಹಾರ್ಮೋನಿಯಂ ಮತ್ತು ಕೀ ಬೋರ್ಡ್ ವಾದನ ತರಗತಿ ಉದ್ಘಾಟನೆಯು ದಿನಾಂಕ 14 ಜುಲೈ 2025ರಂದು ಅಪರಾಹ್ನ 3-30 ಗಂಟೆಗೆ ಕಟೀಲು ಪದವಿ ಪೂರ್ವ ಕಾಲೇಜಿನ ಭಾರತೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅನುವಂಶಿಕ ಅರ್ಚಕರಾದ ಶ್ರೀ ಹರಿನಾರಾಯಣದಾಸ ಆಸ್ರಣ್ಣ, ಬಿ.ಎಸ್.ಎನ್.ಎಲ್. ಕೆ. ಸುರೇಶ್ ರಾವ್ ಸಿತ್ಲ ಮತ್ತು ಹಾರ್ಮೋನಿಯಂ ಗುರುಗಳಾದ ವಾಸು ಮಾಸ್ತರ್ ಇವರುಗಳು ಉಪಸ್ಥಿತರಿರಲಿದ್ದಾರೆ.

Read More

ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮತ್ತು ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ತಾಲೂಕು ಇದರ ಸಹಯೋಗದೊಂದಿಗೆ ದಿನಾಂಕ 06 ಜುಲೈ 2025ರಂದು ಯಕ್ಷಗಾನ ಪ್ರಸಂಗ ರಚನೆ ಕಮ್ಮಟವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ಜರುಗಿತು. ಹಿರಿಯ ಯಕ್ಷಕವಿ ಕೀರ್ತಿಶೇಷ ಶಿರೂರು ಪಣಿಯಪ್ಪಯ್ಯರವರ 108ನೇ ಜನ್ಮದಿನದ ಪ್ರಯುಕ್ತ ಇಡೀ ಕಾರ್ಯಕ್ರಮವನ್ನು ಅವರಿಗೆ ಸಮರ್ಪಿಸಲಾಯಿತು. ಈ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಿ, ಆಶೀರ್ವದಿಸಿ, “ಅಧ್ಯಯನ ಯೋಗ್ಯ ಕಾರ್ಯಕ್ರಮಗಳ ಜೊತೆ ಪ್ರಸಂಗ ರಚನೆ ಕಮ್ಮಟವು ಅಪೂರ್ವವೆನಿಸಿದೆ, ಯಶಸ್ವಿಯಾಗಲಿ” ಎಂದರು. ಗಡಿನಾಡು ಕಾಸರಗೋಡಿನ ಹಿರಿಯ ಯಕ್ಷಗಾನ ಕವಿ ಶೇಡಿಗುಮ್ಮೆ ವಾಸುದೇವ ಭಟ್ ಇವರಿಗೆ ಫಣಿಗಿರಿ ಪ್ರತಿಷ್ಠಾನ ಶಿರೂರು ಬೈಂದೂರು ಇವರು ‘ಫಣಿಗಿರಿ ಪ್ರಶಸ್ತಿ- 2025’ ನೀಡಿ ಗೌರವಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಉಮೇಶ ಶಿರೂರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹಳೆಯ ಯಕ್ಷಗಾನ ಧ್ವನಿಸುರುಳಿಗಳ ಸಂರಕ್ಷಕರಾದ ಶ್ರೀ ಎಂ.ಎಲ್. ಭಟ್ ಮರವಂತೆ ಇವರನ್ನು ಸಿರಿಬಾಗಿಲು…

Read More

ಮೈಸೂರು : ನಟನ ರಂಗಶಾಲೆಯ 2024-25ನೇ ಸಾಲಿನ ರಂಗ ಭೂಮಿ ಡಿಪ್ಲೋಮಾ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ಸುಬ್ಬಣ್ಣ ಸ್ಮರಣೆ ಪ್ರಯುಕ್ತ ಬಿ. ಚಂದ್ರೇ ಗೌಡ ಅವರ ಅಂಕಣ ‘ಕಟ್ಟೆ ಪುರಾಣ’ ನಾಟಕ ಪ್ರದರ್ಶನವನ್ನು ದಿನಾಂಕ 13 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರ, ನಟನ ರಂಗಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ನಾಟಕಕ್ಕೆ ದಿಶಾ ರಮೇಶ್ ಬೆಳಕು, ಮೇಘ ಸಮೀರ ವಿನ್ಯಾಸ ಮತ್ತು ಮಂಡ್ಯ ರಮೇಶ್ ನಿರ್ದೇಶನ ಮಾಡಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7259537777, 9480468327 ಮತ್ತು 9845595505 ಸಂಪರ್ಕಿಸಿರಿ.

Read More

ಮಂಗಳೂರು : ಜನಪದ ಪಾಡ್ದನ ಕಲಾವಿದ ಬೊಳ್ಳಾಜೆ ಬಾಬಣ್ಣ (71 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಿನ್ನಕ 11 ಜುಲೈ 2025ರಂದು ದಿವಂಗತರಾದರು. ತುಳುನಾಡಿನ ಹಲವಾರು ದೈವಗಳ ಪಾಡ್ದಾನ ಬಲ್ಲವರಾಗಿದ್ದು, ಆಕಾಶವಾಣಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪಾಡ್ದನವನ್ನು ಹಾಡುತ್ತಿದ್ದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ಡೈಜೀವರ್ಲ್ಡ್ ವಾಹಿನಿಯಲ್ಲಿ ಇವರ ಪಾಡ್ದನ ದಾಖಲೀಕರಣದೊಂದಿಗೆ ಪ್ರದರ್ಶನಗೊಂಡಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಸನ್ಮಾನಿತರಾಗಿದ್ದು, ಹಲವಾರು ಸನ್ಮಾನ ಪುರಸ್ಕಾರಗಳನ್ನು ಪಡೆದಿದ್ದರು. ಇತ್ತೀಚೆಗೆ ಕಾಂತಾರ ಚಲನಚಿತ್ರ ತಂಡಕ್ಕೆ ಪಾಡ್ದಾನವನ್ನು ಹಾಡಿದ್ದರು. ಆದಿ ದ್ರಾವಿಡ ಸಮುದಾಯದ ಹಿರಿಯ ನೇತಾರರಾಗಿದ್ದು, ಸಮುದಾಯದ ಕುಲ ಸತ್ಯಗಳಾದ ಸತ್ಯ ಸಾರಮಣಿ ದೈವಗಳ ಪಾಡ್ದಾನದ ಆಕರವಾಗಿ ಸಮುದಾಯಕ್ಕೆ ಮಾರ್ಗದರ್ಶಕರಾಗಿದ್ದರು. ಒಂದು ಗಂಡು,ಮೂರು ಹೆಣ್ಣು ಮಕ್ಕಳು, ಶಿಷ್ಯಂದಿರು ಮತ್ತು ಅಪಾರ ಭಂದುವರ್ಗವನ್ನು ಅಗಲಿದ್ದಾರೆ.

Read More

ಮುಂಡಗೋಡ : ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಮುಂಡಗೋಡ ಮತ್ತು ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗ (ರಿ.) ರಾಜ್ಯ ಸಮಿತಿ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಮಧ್ಯಾಹ್ನ 2-00 ಗಂಟೆಗೆ ಮುಂಡಗೋಡ ನಿವೃತ್ತ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಡಗೋಡ ಕ.ಸಾ.ಪ. ಇದರ ಅಧ್ಯಕ್ಷರಾದ ವಸಂತ ಕೊಣಸಾಲಿ ಇವರು ವಹಿಸಲಿದ್ದು, ಕರುನಾಡ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಬಳಗದ ರಾಜ್ಯಾಧ್ಯಕ್ಷರಾದ ಎಸ್.ಡಿ. ಮುಡೆಣ್ಣವರ ಇವರ ಉದ್ಘಾಟಿಸಲಿದ್ದಾರೆ. ‘ಪತ್ರಿಕಾ ರಂಗ ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಬಗ್ಗೆ ಪ್ರಾಧ್ಯಾಪಕರಾದ ಡಾ. ಮಂಜಣ್ಣ ಜಂಗವಾಡ ಇವರು ಉಪನ್ಯಾಸ ನೀಡಲಿದ್ದು, ಎಸ್.ಕೆ. ಬೋರ್ಕರ, ಎಸ್.ಬಿ. ಹೂಗಾರ ಮತ್ತು ಶ್ರೀಮತಿ ನಂದಾ ನರಗುಂದ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Read More

ಕುಶಾಲನಗರ : ತೊರೆನೂರು ವಿರಕ್ತ ಮಠದಲ್ಲಿ ಮಾಸಿಕ ಪುಣ್ಣಿಮೆ ಪೂಜಾ ಕಾರ್ಯಕ್ರಮ, ಶಿವಾನುಭವ ಗೋಷ್ಠಿ ಮತ್ತು ಫ.ಗು‌. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮವು ದಿನಾಂಕ 10 ಜುಲೈ 2025 ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ “ಕಾಯಕ ಮಹತ್ವ, ತ್ರಿವಿಧ ದಾಸೋಹ ಪರಿಕಲ್ಪನೆ, ಸಾಮಾಜಿಕ ಸಮಾನತೆ, ಸ್ತ್ರೀ ಸಮಾನತೆ, ದಯೆ ಮತ್ತು ಧರ್ಮದ ಪರಿಕಲ್ಪನೆ, ಅನುಭಾವ, ಸಮ ಸಮಾಜದ ನಿರ್ಮಾಣ ಮೊದಲಾದ ವಿಶ್ವ ಮೌಲಿಕ ಆಶಯಗಳನ್ನು ಶರಣರ ವಚನಗಳಲ್ಲಿ ಕಾಣಬಹುದಾಗಿದೆ. ಬಸವಾದಿ ಶರಣರು ನಡೆ-ನುಡಿ ಒಂದಾಗಿಸಿಕೊಂಡು ಬದುಕಿದವರು. ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿಯೇ ಕರ್ಮಠತನದ ಸಾಮಾಜಿಕ ವ್ಯವಸ್ಥೆಯ ವರ್ಗ-ಜಾತಿ-ಲಿಂಗ ತಾರತಮ್ಯವನ್ನು ನೇರವಾಗಿ ವಿರೋಧಿಸಿ ಸಮ ಸಮಾಜದ ಮಾನವೀಯ ಮೌಲ್ಯಗಳನ್ನು ಇಡೀ ಜಗತ್ತಿಗೆ ಸಾರಿದರು. ಜನಪರವಾದ ಮತ್ತು ಲೋಕಕಲ್ಯಾಣಕರವಾದ ಚಿಂತನೆಗಳು ಬಸವಾದಿ ಶರಣರ ವಚನಗಳಲ್ಲಿ ಕಂಡುಬರುತ್ತದೆ. ವಚನ ಪಿತಾಮಹ, ವಚನ ಕಮ್ಮಟ, ರಾವ್ ಬಹದ್ದೂರ್, ರಾವ್ ಸಾಹೇಬ್ ಎಂದೇ ಪ್ರಸಿದ್ಧರಾಗಿದ್ದ ಫ.ಗು. ಹಳಕಟ್ಟಿಯವರು ತಮ್ಮ…

Read More

ಶೇವಾಳಿ : ಸಪ್ತಸ್ವರ ಸೇವಾ ಸಂಸ್ಥೆ (ರಿ.) ಶೇವಾಳಿ ಇದರ ವತಿಯಿಂದ ‘ಸುಗ್ಗಿ ಹುಗ್ಗಿ 2025’ ಆನ್ಲೈನ್ ಜಾನಪದ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಿಯಮಗಳು : * ಜಾನಪದ ಹಾಡುಗಳನ್ನೇ ಹಾಡಿ ವಿಡಿಯೋ ಮಾಡಿ ಕಳುಹಿಸಬೇಕು. * ಜಾನಪದ ವಾದ್ಯಗಳನ್ನು ನೀವೇ ಬಳಸಿ ಹಾಡಬಹುದು. * ವಿಡಿಯೋವನ್ನು 8123327419 ಈ ನಂಬರಿಗೆ ವಾಟ್ಸಪ್ ಮುಖಾಂತರ ಕಳುಹಿಸುವುದು. * ವಿಡಿಯೋ ಪ್ರಾರಂಭದಲ್ಲಿ ನಿಮ್ಮ ಹೆಸರು ಮತ್ತು ಊರು ಹೇಳಬೇಕು ಮತ್ತು ಕನ್ನಡದಲ್ಲಿ ಮಾತನಾಡಬೇಕು. * ವಿಡಿಯೋ ಹೊರತಾಗಿ ಅಡಿಯೋಗಳಿಗೆ ಅವಕಾಶವಿಲ್ಲ. * 2ರಿಂದ 3 ನಿಮಿಷ ಕಾಲಾವಕಾಶವಿದೆ. * ಮೊಬೈಲನ್ನು ಅಡ್ಡ ಮಾಡಿ ವಿಡಿಯೋ ಮಾಡಬೇಕು. * ದಿನಾಂಕ 28 ಜುಲೈ 2025ರಿಂದ ವಿಡಿಯೋ ಸ್ವೀಕಾರ ಮಾಡುತ್ತೇವೆ. * ವಯಸ್ಸಿನ ಮಿತಿ ಇರುವುದಿಲ್ಲ. * ವಿಡಿಯೋ ಉತ್ತಮವಾಗಿರಬೇಕು. * ವಿಡಿಯೋ ಕಳುಹಿಸಲು ಕೊನೆಯ ದಿನಾಂಕ 03 ಆಗಸ್ಟ್ 2025 ಮಧ್ಯಾಹ್ನ 12-00 ಗಂಟೆಯವರೆಗೆ. * ಇಬ್ಬರು ನಿರ್ಣಾಯಕರು ಇರುತ್ತಾರೆ. * 25% ವೀವ್ಸ್,…

Read More