Author: roovari

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳಲ್ಲೊಂದಾದ 2024ನೆಯ ಸಾಲಿನ ಅಭಯಲಕ್ಷ್ಮಿ ದತ್ತಿ ಪ್ರಶಸ್ತಿಗೆ ಡಾ. ಜಯಮಾಲ ಪೂವಣಿ, ಆರ್. ವೆಂಕಟರಾಜು, ಶಾಂತಲ ಧರ್ಮರಾಜ್, ಆರ್. ರಾಮಚಂದ್ರ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ತಿಳಿಸಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರ ಗೌರವದಿಂದ ಶ್ರೀಮತಿ ಪಿ. ಜಯಲಕ್ಷ್ಮಿಯವರು ತಮ್ಮ ಪತಿ ಎಸ್.ಎ. ಅಭಯಕುಮಾರ್ ಅವರ ದಿವ್ಯ ಸ್ಮರಣೆಯಲ್ಲಿ ‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿರುತ್ತಾರೆ. ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರಿಗೆ ಪುರಸ್ಕಾರವನ್ನು ನೀಡಬೇಕೆನ್ನುವುದು ದತ್ತಿ ದಾನಿಗಳ ಆಶಯವಾಗಿದೆ 2024ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ. ಜಯಮಾಲಾ ಪೂವಣಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದವರು, ಸಮಾಜ ವಿಜ್ಞಾನದಲ್ಲಿ ಡಾಕ್ಟೋರೇಟ್ ಪದವಿ ಪಡೆದ ಮೊದಲ ಜೈನ…

Read More

ಮಂಗಳೂರು : ಕೊಂಕಣಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಳೆದ 39 ವರ್ಷಗಳಿಂದ ನಿರಂತರತೆಯನ್ನು ಕಾಪಾಡಿಕೊಂಡು ಬಂದಿರುವ ‘ಮಾಂಡ್ ಸೊಭಾಣ್’ ಸಂಸ್ಥೆಯ ವತಿಯಿಂದ ನಡೆಯುವ ತಿಂಗಳ ವೇದಿಕೆ ಸರಣಿಯ 280ನೇ ಕಾರ್ಯಕ್ರಮವು ದಿನಾಂಕ 06 ಏಪ್ರಿಲ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಮಾಂಡ್ ನಾಟಕ ತಂಡದ ಸದಸ್ಯ ರೆನಾಲ್ಡ್ ಲೋಬೊ ಘಂಟೆ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಂಡ್ ಸೊಭಾಣ್ ಪದಾಧಿಕಾರಿಗಳಾದ ಎರಿಕ್ ಒಝೇರಿಯೊ, ಲುವಿ ಪಿಂಟೊ, ಕೇರನ್ ಮಾಡ್ತಾ ಹಾಗೂ ಎಲ್ರೊನ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾಕಾರ್ಯಕ್ರಮದ ಬಳಿಕ ಜೆ. ಪಿ. ತೂಮಿನಾಡು ಇವರ ಮೂಲಕತೆ ಆಧರಿಸಿ ನೆಲ್ಲು ಪೆರ್ಮನ್ನೂರು ರಚಿಸಿ, ನಿರ್ದೇಶಿಸಿದ ‘ಎಸ್.ಬಿ.ಜಿ. ಟ್ರಾವೆಲ್ಸ್’ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ಹಲವಾರು ಪ್ರದರ್ಶನಗಳನ್ನು ಕಂಡ ಈ ನಾಟಕವು ಜನರಿಗೆ ಭರಪೂರ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ನೆಲ್ಲು ಪೆರ್ಮನ್ನೂರ್, ಲ್ಯಾನ್ಸಿ ಬಂಟ್ವಾಳ್, ಸಂದೀಪ್ ಮಸ್ಕರೇನ್ಹಸ್, ದೀಪಕ್ ಕುಟಿನ್ಹಾ, ಮರಿಯಾ ಜೊಯ್ಸ್, ಜಾಸ್ಮಿನ್ ಡಿ’ಸೋಜ, ಅಸುಂತಾ ಪಾಯ್ಸ್, ಜೊಯೆಲ್ ಪಿಂಟೊ, ಗ್ಲೆರನ್ ವಾಸ್, ಕೇತನ್ ರೊಡ್ರಿಗಸ್…

Read More

ಸೋಮವಾರಪೇಟೆ : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾಘಟಕದ ಅಧೀನಕ್ಕೊಳಪಡುವ, ಸೋಮವಾರಪೇಟೆ ತಾಲ್ಲೂಕು ಘಟಕಕ್ಕೆ, ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಳಪ್ಪ ಹಾಗೂ ಜಿಲ್ಲಾ ಸಮಿತಿಯ ನಿರ್ದೇಶನದಂತೆ, ಸೋಮವಾರಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಬಿ. ಪಿ. ಸುಮತಿ, ಪ್ರಧಾನ ಕಾರ್ಯದರ್ಶಿಯಾಗಿ ಒಡೆಪ್ಪನ ಕಾವ್ಯ ಪವನ್, ಶರಣು ಗೌಡ ಹರಗ ಇವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಸಮಿತಿ ಸದಸ್ಯರು ಹಾಗೂ ಸದಸ್ಯರಾಗಿ ಪ್ರದೀಪ್ ಪೆಂಗ್ವಿನ್, ಬಸೀರಾ ರಶೀದ್, ಉಮೇಶ್ ಅಂದೋನಿ, ಬಿ. ಬಿ. ಚಂದ್ರಕಲಾ, ಕೆ. ಪಿ. ನಜಿತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ಅಪ್ಪುಡ ಸುದೀಶ ಕುಶಾಲಪ್ಪ ತಿಳಿಸಿದ್ದಾರೆ.

Read More

ಧಾರವಾಡ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ ಧಾರವಾಡ, ಬಿ. ಜಿ. ಜೋಶಿ ಮೊಮೋರಿಯಲ್ ಟ್ರಸ್ಟ್ ಧಾರವಾಡ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಧಾರವಾಡ, ಗೊಂಬೆಮನೆ ಧಾರವಾಡ ಸಂಸ್ಥೆಗಳು ಜಂಟಿಯಾಗಿ ಆಯೋಜಿಸುವ ‘ಕನ್ನಡ ಕಾವ್ಯ ಕಸ್ತೂರಿ’ ಮಕ್ಕಳ ರಂಗ – ಸಂಸ್ಕೃತಿ ಶಿಬಿರವು ದಿನಾಂಕ 21 ಏಪ್ರಿಲ್ 2025 ರಿಂದ 11 ಮೇ 2025ರ ವರೆಗೆ ಧಾರವಾಡದ ಸೃಜನಾ ಡಾ. ಅಣ್ಣಾಜಿರಾವ ಸಿರೂರ ರಂಗಮಂದಿರದ ಆವರಣದಲ್ಲಿ ನಡೆಯಲಿದೆ. ನಟ, ನಿರ್ದೇಶಕ, ನಾಟಕಕಾರ ಹಾಗೂ , ಧಾರವಾಡ ರಂಗಾಯಣದ ಮಾಜಿ ನಿರ್ದೇಶಕರಾದ ಡಾ. ಪ್ರಕಾಶ ಗರುಡ ಇವರ ನಿರ್ದೇಶನದಲ್ಲಿ 10 ರಿಂದ 14 ವಯಸ್ಸಿನ ಮಕ್ಕಳಿಗಾಗಿ ನಡೆಯಲಿರುವ ಈ ಶಿಬಿರವು ಪ್ರತಿದಿನ ಬೆಳಿಗ್ಗೆ ಘಂಟೆ 9.30 ರಿಂದ ಮದ್ಯಾನ್ಹ ಘಂಟೆ 1.30ರ ವರೆಗೆ ನಡೆಯಲಿದೆ. • ಈ ಶಿಬಿರದಲ್ಲಿ ಮಕ್ಕಳಿಗಾಗಿ ‘ಕೇಳು’ ಮತ್ತು ‘ನೋಡು’ ಸಂಸ್ಕೃತಿಗಳನ್ನು ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಡಲಾಗುತ್ತದೆ. • ಚಿತ್ರಕಲೆ: ಮಕ್ಕಳೇ ಕಥೆ-ಕಾವ್ಯ ಹೇಳಿ ಅವುಗಳಿಗೆ ಚಿತ್ರಗಳನ್ನ ಬಿಡಿಸುತ್ತಾರೆ. •…

Read More

ವಿರಾಜಪೇಟೆ : ಭಾರತದ ಜಾನಪದ ಇತಿಹಾಸದಲ್ಲಿ ಪ್ರಪ್ರಥಮ ಜಾನಪದ ಆಧಾರಿತ ಸಂಗ್ರಹ ಪುಸ್ತಕ ಪಟ್ಟೋಲೆ ಪಳಮೆಯನ್ನು ಪ್ರಕಟಿಸಿದ, ಜಾನಪದ ಬ್ರಹ್ಮ ಎಂದೇ ಖ್ಯಾತರಾಗಿರುವ, ದಿ. ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಕೊಡವಾಮೆರ ಕೊಂಡಾಟ ಸಂಘಟನೆ ವತಿಯಿಂದ ಕೊಡವ ಜಾನಪದ ನಾಳ್ ಮತ್ತು ಕೊಡವಾಮೆಗಾಗಿ ಎಲೆಮರೆಯಲ್ಲಿ ದುಡಿಯುತ್ತಿರುವ ಸುಮಾರು 250 ಜನರಿಗೆ ದಿವಂಗತ ಮುಕ್ಕಾಟಿರ ಶಿವು ಮಾದಪ್ಪ ನೆನಪಿನಲ್ಲಿ ಸ್ಮರಣಿಕೆ ವಿತರಣಾ ಕಾರ್ಯಕ್ರಮ ದಿನಾಂಕ 06 ಏಪ್ರಿಲ್ 2025ರಂದು ವಿರಾಜಪೇಟೆಯ ಕೊಡವ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದ ಮೊದಲಿಗೆ ಅತಿಥಿ ಗಣ್ಯರನ್ನು ಕೊಡವ ಸಂಪ್ರದಾಯದಂತೆ ದುಡಿಕೊಟ್ಸ್ ಪಾಟ್ ಮೂಲಕ ಸ್ವಾಗತಿಸಲಾಯಿತು. ಬಳಿಕ ಅತಿಥಿ ಗಣ್ಯರು ನಡಿಕೇರಿಯಂಡ ಚಿಣ್ಣಪ್ಪ ಅವರ ಭಾವಚಿತ್ರಕ್ಕೆ ನಮಿಸಿ ಅಕ್ಷತೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ಜಾನಪದ ತಜ್ಞರಾದ ಬಾಚರಣೆಯಂಡ ಬಿ.ಅಪ್ಪಣ್ಣ ಮಾತನಾಡಿ “ಜಾನಪದಕ್ಕೆ ಮೊಟ್ಟ ಮೊದಲಿಗೆ ವೈಜ್ಞಾನಿಕ ನೆಲೆಯಲ್ಲಿ ಸ್ವರೂಪವನ್ನು ದೇಶಿ ಶಕ್ತಿಯಾಗಿ ಪ್ರಚುರಪಡಿಸಿದ ನಡಿಕೇರಿಯಂಡ…

Read More

ಬನವಾಸಿ : ಜಿಲ್ಲಾಡಳಿತ ಉತ್ತರ ಕನ್ನಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ‘ಕದಂಬೋತ್ಸವ 2025’ ಕಾರ್ಯಕ್ರಮವನ್ನು ದಿನಾಂಕ 12 ಮತ್ತು 13 ಏಪ್ರಿಲ್ 2025ರಂದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ, ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಗೋಷ್ಠಿಗಳು ಹಾಗೂ ಕಲಾ ಸಂಭ್ರಮ ಪ್ರಸ್ತುತಗೊಳ್ಳಲಿವೆ. ದಿನಾಂಕ 12 ಏಪ್ರಿಲ್ 2025ರಂದು ಸಂಜೆ 5-00 ಗಂಟೆಗೆ ಈ ಕಾರ್ಯಕ್ರಮವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಇವರು ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಇವರಿಗೆ 2024-25ನೇ ಸಾಲಿನ ‘ಪಂಪ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕದಂಬ ಸಾಂಸ್ಕೃತಿಕ ಕಲಾ ಮೆರವಣಿಗೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ನೃತ್ಯ ರೂಪಕ, ಜನಪದ ಗಾಯನ, ಭರತನಾಟ್ಯ, ಗೊಂಬೆಯಾಟ ಪ್ರದರ್ಶನ, ಸಂಗೀತ, ನೃತ್ಯ, ವಾದ್ಯ ಸಂಗೀತ ಜರಗಲಿವೆ. ದಿನಾಂಕ 13 ಏಪ್ರಿಲ್ 2025ರಂದು ಬೆಳಿಗ್ಗೆ…

Read More

ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ, ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ರಜತ ಮಹೋತ್ಸವ ಮತ್ತು ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ – ವಿಶ್ವ ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಂಗ ಸಾಧಕರಾದ ರಂಗಭೂಮಿ ಕಲಾವಿದರು ನಿರ್ದೇಶಕರಾದ ಡಿ. ವೆಂಕಟರಮಣಯ್ಯ (ಅಪ್ಪಾಜಿ), ಸುಗಮ ಸಂಗೀತ ಗಾಯಕರು ರಂಗ ನಿರ್ದೇಶಕರು ಕಲಾವಿದರಾದ ಕೆ. ಲಕ್ಷ್ಮಣ ಸುವರ್ಣ, ರಂಗಭೂಮಿ ಕಲಾವಿದರಾದ ಶ್ರೀಮತಿ ಕಲ್ಯಾಣಿ ಪ್ರದೀಪ್ ಹಾಗೂ ರಂಗಭೂಮಿ ನಿರ್ದೇಶಕರು ಸಂಘಟಕರು ಕಲಾವಿದರು ಲೇಖಕರಾದ ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ಬಳ್ಳಾರಿ ಇವರುಗಳಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕನ್ನಡ ಗ್ರಾಮ ಕಾಸರಗೋಡು ಇದರ ಪ್ರತಿಷ್ಠಿತ ‘ವಿಶ್ವ ರಂಗಭೂಮಿ ಪ್ರಶಸ್ತಿ 2025’ನ್ನು ನೀಡಿ ಗೌರವಿಸಲಾಯಿತು. ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ವಿಶ್ವ ರಂಗಭೂಮಿ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ, ಸ್ಮರಣೆಕೆ, ರೇಷ್ಮೆ ಶಾಲು, ಹಾರ ಮತ್ತು…

Read More

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕೆರೆವಡಿ ಗ್ರಾಮದ ಯುವ ಕವಯತ್ರಿ ಮಧು ಕಾರಗಿ ಇವರು ಭರವಸೆಯನ್ನು ಮೂಡಿಸುವ ಯುವ ಕವಯತ್ರಿ. ಹುಟ್ಟಿನಿಂದಲೇ ಶ್ರವಣಶಕ್ತಿಗಳನ್ನು ಕಳೆದುಕೊಂಡು, ದೊಡ್ಡಮ್ಮ ಮಹದೇವನಮ್ಮವರ ಆಸರೆಯಲ್ಲಿ ಬೆಳೆದ ಅವರು ಸಾಹಿತ್ಯ ವಲಯದಲ್ಲಿ ಮಿನುಗುತ್ತಿರುವ ಜ್ಯೋತಿ. ಚೊಚ್ಚಲ ಕವನ ಸಂಕಲನ ‘ಕನಸುಗಳ ಚೀಲ’ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2021ನೇ ಸಾಲಿನ ‘ಜ್ಯೋತಿ ಪುರಸ್ಕಾರ’ ದತ್ತಿ ಪ್ರಶಸ್ತಿಗೆ ಭಾಜನರಾದ ಪ್ರತಿಭಾವಂತೆ. ಹಾವೇರಿ ಜಿಲ್ಲೆಯ ಕೆರೆಮತ್ತಿಹಳ್ಳಿಯಲ್ಲಿ ಕನ್ನಡ ಸ್ನಾತಕೋತ್ತರ ಅಧ್ಯಯನವನ್ನು ಮಾಡುವುದರ ಜೊತೆಗೆ ಅವರ ಎರಡನೇ ಕೃತಿ ‘ತೆರೆಯದ ಬಾಗಿಲು’ ಕವನ ಸಂಕಲನದ ಬಿಡುಗಡೆಯಾಗಿ ಸಾಹಿತ್ಯಾಸಕ್ತರ ಕೈ ಸೇರಿದ್ದು ಸಂತಸದ ವಿಚಾರವಾಗಿದೆ. ನಾವು ಭಾವನೆಗಳ ಬೀದಿಯಲ್ಲಿ ಅನಿರೀಕ್ಷತವಾಗಿ ಭೇಟಿಯಾಗುತ್ತಿದ್ದೆವು. ಶಿಲಾಯುಗದ ಅವಶೇಷಗಳಿಂದ ಕಲಿಯುಗದ ವಿದ್ಯುನ್ಮಾನದವರೆಗೂ ಚರ್ಚೆಗಳು ಜರಗುತ್ತಿದ್ದವು. ನಮ್ಮ ಕಣ್ಣಿಗೆ ಕಾಣುವ ಐತಿಹಾಸಿಕ ವಸ್ತು ವಿಷಯಗಳು, ವೈಯಕ್ತಿಕ ನೋವು, ನಲಿವುಗಳ, ಸಿಹಿಕಹಿ ನೆನಪುಗಳು ಅನಿರೀಕ್ಷಿತವಾಗಿ ಇನ್ನೆಲ್ಲೋ ಕಂಡಾಗ ಅವುಗಳು ಕವಿಯ ಮನದಲ್ಲಿ, ಸೂಕ್ತ ಪದಗಳೊಂದಿಗೆ ಹೊಂದಿಕೊಂಡು ರೂಪು ತಾಳುವಾಗ ಹುಟ್ಟುವ ಭಾವನೆಗಳು…

Read More

ಉಡುಪಿ : ರೇಡಿಯೊ ಮಣಿಪಾಲ್, ಸಮುದಾಯ ಬಾನುಲಿ ಕೇಂದ್ರ ಮಣಿಪಾಲ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ‘ವಿಷುಕಣಿ-ಕವಿದನಿ’ ಬಹುಭಾಷಾ ಕವಿಗೋಷ್ಠಿಯನ್ನು ದಿನಾಂಕ 10 ಏಪ್ರಿಲ್ 2025ರಂದು ಮಧ್ಯಾಹ್ನ 2-30 ಗಂಟೆಗೆ ಮಣಿಪಾಲದ ಎಂ.ಐ.ಸಿ. ಕ್ಯಾಂಪಸ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕವಿಗೋಷ್ಠಿಯ ಉದ್ಘಾಟನೆಯನ್ನು ಮಾಹೆ ಮಣಿಪಾಲದ ನಿರ್ದೇಶಕರಾದ ಡಾ. ಶುಭ ಹೆಚ್.ಎಸ್. ಇವರು ಮಾಡಲಿದ್ದು, ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರಾದ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಕವಿತಾ ಎಸ್. ಮಣಿಪಾಲ (ಹವ್ಯಕ ಕನ್ನಡ). ವೈಷ್ಣವಿ ಸುಧೀಂದ್ರ ರಾವ್ (ಕುಂದಾಪ್ರ ಕನ್ನಡ), ರಾಮಾಂಜಿ ಉಡುಪಿ (ಕನ್ನಡ), ಮಾಲತಿ ರಮೇಶ್ ಭಂಡಾರಿ ಕೆಮ್ಮಣ್ಣು (ತುಳು), ಕೆ. ವಾಣಿಶ್ರೀ ಅಶೋಕ್ ಐತಾಳ್ (ತೆಲುಗು), ಪ್ರಣತಿ ಪಿ. ಭಟ್ ಮಣಿಪಾಲ (ಹಿಂದಿ), ವಿನೋದ ಪಡುಬಿದ್ರಿ (ತುಳು), ವಿಜಯಲಕ್ಷ್ಮೀ ಆರ್. ಕಾಮತ್ (ಕೊಂಕಣಿ), ಮನೋಹರ ಶೆಟ್ಟಿ ಬಿದ್ಕಲ್‌ಕಟ್ಟೆ (ತುಳು), ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ (ಮಲಯಾಳಂ), ವಸುಧಾ ಅಡಿಗ…

Read More

ಮೂಡುಬಿದಿರೆ : ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾಗಿರಿ ಮೂಡುಬಿದಿರೆ ಇವರ ಸಹಯೋಗದಲ್ಲಿ ಬಳಿಪ ಪ್ರಸಾದ ಭಾಗವತ 50ರ ನೆನಪು ‘ಪಂಚಾಶತ್ ಸ್ಮರಣ್ – ಪಂಚಾಶತ್ ಸಮ್ಮಾನ್’ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ಸನ್ಮಾನ ಕಾರ್ಯಕ್ರಮವನ್ನು ದಿನಾಂಕ 14 ಏಪ್ರಿಲ್ 2025ರಂದು ಅಪರಾಹ್ನ 3-00 ಗಂಟೆಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಭವನ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಇವರು ವಹಿಸಲಿದ್ದು, ಪಂಚಾಶತ್ ಸ್ಮರಣ್ – ಪಂಚಾಶತ್ ಸಮ್ಮಾನ್ ಕಾರ್ಯಕ್ರಮದ ಗೌರವ ಸಲಹೆಗಾರರಾದ ಕೆ. ಶ್ರೀಪತಿ ಭಟ್ ಇವರು ಉದ್ಘಾಟಿಸಲಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕರಾದ ಪಟ್ಲ ಸತೀಶ್ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.

Read More