Subscribe to Updates
Get the latest creative news from FooBar about art, design and business.
Author: roovari
ಕುಶಾಲನಗರ : ಕೊಡಗು ಜಿಲ್ಲಾ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಮಹಾತ್ಮ ಗಾಂಧಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಾಹಿತ್ಯ ಮಂಥನ’ ಕಾರ್ಯಕ್ರಮವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ “ಸಂಸ್ಕೃತ ಭಾಷೆ ದೇವರ ಭಾಷೆ, ಜನರ ಭಾಷೆ ಹಾಗೂ ಶ್ರೀಮಂತರ ಭಾಷೆಯಾಗಿತ್ತು. ಜನಸಾಮಾನ್ಯರಿಗೆ ಸಂಸ್ಕೃತ ಭಾಷೆ ಕಬ್ಬಿಣದ ಕಡಲೆಯಾಗಿತ್ತು. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಲು ಹಾಗೂ ಬೆಳೆಸಲು ‘ವಿಕ್ರಮಾರ್ಜುನ ವಿಜಯ’ ಹಾಗೂ ‘ಆದಿ ಪುರಾಣ’ ಗ್ರಂಥಗಳನ್ನು ಬರೆದ ಪಂಪ ಮಹಾಕವಿ ಕನ್ನಡ ಭಾಷೆಗೆ ಶ್ರೇಷ್ಠತೆಯನ್ನು ತಂದು ಕೊಟ್ಟ ಮೇರು ಕವಿ. ಇಂದು ಕನ್ನಡ ಮಾತನಾಡಿದರೆ ಕೀಳರಿಮೆ, ಇಂಗ್ಲೀಷ್ ಮಾತನಾಡಿದರೆ ಹಿರಿಮೆ ಎಂದು ಬೀಗುತ್ತಿರುವ ಪರಿಸ್ಥಿತಿ. ಅಂದು ಪಂಪನ ಕಾಲಘಟ್ಟದಲ್ಲಿ ಇದ್ದುದರಿಂದ ಮೇಲ್ವರ್ಗದ ಮಂದಿ ಅಂದು ಸಂಸ್ಕೃತ ಭಾಷೆಯನ್ನು ವೈಭವೀಕರಿಸಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದರಿಂದಾಗಿ ಪಂಪ ಮಹಾಕವಿ ಮೈಕೊಡವಿ ನಿಂತು ಕನ್ನಡ ಸಾಹಿತ್ಯಕ್ಕೆ ಅಪಾರ ಶ್ರೀಮಂತಿಕೆ ತಂದು…
ಬದಿಯಡ್ಕ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ವತಿಯಿಂದ ದಿನಾಂಕ 01 ಮಾರ್ಚ್ 2025ರಂದು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ‘ದತ್ತಿ ಉಪನ್ಯಾಸ ಮತ್ತು ಕವಿ ಕಾವ್ಯ ಸಂವಾದ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ‘ಎಂ.ಕೆ. ಜಿನಚಂದ್ರನ್ ದತ್ತಿ ಉಪನ್ಯಾಸ’ದಲ್ಲಿ ‘ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡಿದ ಖ್ಯಾತ ವಾಗ್ಮಿ ಶ್ರೀಮತಿ ಆಯಿಶಾ ಪೆರ್ಲ “ಕನ್ನಡ ಸಾಹಿತ್ಯಕ್ಕೆ ಜೈನಕವಿಗಳು ನೀಡಿದ ಕೊಡುಗೆ ಅಪಾರ. ಹತ್ತನೇ ಶತಮಾನದ ಜೈನ ಕವಿಗಳು ತಮ್ಮ ಗ್ರಂಥಗಳಲ್ಲಿ ಒಂದನ್ನು ಧರ್ಮಕ್ಕೂ ಇನ್ನೊಂದನ್ನು ಲೌಕಿಕಕ್ಕೂ ಮೀಸಲಾಗಿರಿಸಿದ್ದಾರೆ. ಲೌಕಿಕ ಕಾವ್ಯಗಳಲ್ಲಿ ಪಂಪ, ರನ್ನ, ಪೊನ್ನರು ತಮ್ಮ ಆಶ್ರಯದಾತ ಅರಸರನ್ನು ಪುರಾಣ ಪುರುಷರನ್ನಾಗಿ ಕಲ್ಪಿಸಿಕೊಂಡು ಕಾವ್ಯನಾಯಕರನ್ನಾಗಿ ಮೆರೆಸಿದ್ದಾರೆ. ಆಡಳಿತ ವರ್ಗ ಮತ್ತು ಸಾಹಿತ್ಯ ಯಾವುದೇ ಪೂರ್ವಾಗ್ರಹ ಮತ್ತು ಆಮಿಷಗಳಿಗೆ ಒಳಗಾಗದೆ ಸಾಮರಸ್ಯದಿಂದ ಬೆರೆತು ಕಾರ್ಯನಿರ್ವಹಿಸಿದರೆ ಕಲೆ ಸಂಸ್ಕೃತಿಗಳ ಅಭಿವೃಧ್ಧಿ ಸಾಧ್ಯ. ಪಂಪಯುಗದಲ್ಲಿ ಕಾವ್ಯ ಸೃಷ್ಟಿಯನ್ನು ಮಾಡಿದವರ ಕೃತಿಗಳಲ್ಲಿ ಶೌರ್ಯ ಮತ್ತು ಸಂಸ್ಕೃತಿ ಸ್ಥಾಯಿಯಾಗಿತ್ತು. ಈ ಮನೋಭಾವವನ್ನು…
ಕೋಟ : ಸುವಿಕಾ ಸಾಂಸ್ಕೃತಿಕ ಸಂಘಟನೆ ಕೋಟ ಇದರ ವತಿಯಿಂದ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನ (ರಿ.) ಕೋಟ ಇವರ ಸಹಯೋಗದೊಂದಿಗೆ ಉಪನ್ಯಾಸಕ ಹೆಚ್. ಸುಜಯೀಂದ್ರ ಹಂದೆಯವರ ಸಂಪಾದಿತ ಕವನ ಸಂಕಲನ ‘ನನೆ ಮೊಗ್ಗು’ ಅನಾವರಣ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿಯನ್ನು ದಿನಾಂಕ 09 ಮಾರ್ಚ್ 2025ರಂದು ಬೆಳಿಗ್ಗೆ 10-00 ಗಂಟೆಗೆ ಕೋಟ ಕಾರಂತ ಥೀಂ ಪಾರ್ಕ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಕೋಟತಟ್ಟು ಪಂಚಾಯತ್ ಇವರ ಅಧ್ಯಕ್ಷರಾದ ಕೆ. ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕವಿ ಸುಮನ ಹೇರ್ಳೆ ಇವರು ಕೃತಿ ಅನಾವರಣಗೊಳಿಸಲಿದ್ದು, ಉಡುಪಿಯ ದೇಶ ವಿದೇಶಗಳ ಫಾರ್ಮಾಸುಟಿಕಲ್ ಸಂಸ್ಥೆಗಳ ಗುಣ ಮಟ್ಟ ನಿಯಂತ್ರಣ ಸಲಹೆಗಾರರಾದ ಡಾ. ವೆಂಕಟ ಕೃಷ್ಣ ಕೆ. ಇವರು ನಮ್ಮೊಂದಿಗೆ ಭಾಗವಹಿಸಲಿದ್ದಾರೆ. ಬಳಿಕ ಉಡುಪಿಯ ನೇತ್ರ ಜ್ಯೋತಿ ಇನ್ ಸ್ಟ್ಯೂಟ್…
ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಭೀಷ್ಮಾರ್ಜುನ’ ಆಖ್ಯಾನವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು. ಹಿಮ್ಮೇಳದಲ್ಲಿ ಆನಂದ ಸವಣೂರು, ತಾರಾನಾಥ ಸವಣೂರು, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ (ಭೀಷ್ಮ), ಹರಿಣಾಕ್ಷಿ ಜೆ ಶೆಟ್ಟಿ (ಅರ್ಜುನ), ಅಚ್ಯುತ ಪಾಂಗಣ್ಣಾಯ (ಅಭಿಮನ್ಯು) ಸಹಕರಿಸಿದರು. ಶ್ರೀಮತಿ ಮತ್ತು ಶ್ರೀ ದುಗ್ಗಪ್ಪ ಯನ್. ಕಾರ್ಯಕ್ರಮ ಪ್ರಾಯೋಜಿಸಿದ್ದರು.
ಕಾಸರಗೋಡು : ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಹಾಗೂ ಬನಾರಿ ಕೀರಿಕ್ಕಾಡು ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ದಿನಾಂಕ 02 ಮಾರ್ಚ್ 2025ರಂದು ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟರ ಬದುಕು- ಬರಹದ ಕುರಿತ ಸ್ಮರಣಾಂಜಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಂಸ್ಮರಣೆ ಭಾಷಣ ಮಾಡಿದ ನಿವೃತ್ತ ಮುಖ್ಯ ಶಿಕ್ಷಕ ಡಿ. ರಾಮಣ್ಣ ಮಾಸ್ಟರ್ “ಯಕ್ಷಗಾನದಲ್ಲಿ ಪ್ರಸಂಗದ ಜತೆಗೆ ಪ್ರಸಂಗಕರ್ತರ ಹೆಸರನ್ನೂ ಹೇಳಬೇಕು. ಇದು ಕೃತಿಕಾರರರಿಗೆ ಹಾಗೂ ಅವರ ಪರಿಶ್ರಮಕ್ಕೆ ನೀಡುವ ಗೌರವ. ಯಕ್ಷಗಾನದ ಪುನಶ್ಚೇತನಕ್ಕೆ ವಿಷ್ಣು ಭಟ್ಟರು ಮಹತ್ವದ ಕೊಡುಗೆ ನೀಡಿದ್ದಾರೆ. ಊರಿನ ಜನರ ಸಾಮಾಜಿಕ, ಸಾಂಸ್ಕೃತಿಕ ಪರಿವರ್ತನೆಗೆ ನಾಂದಿ ಹಾಡಿದರು. ಅವರು ಸ್ಥಾಪಿಸಿದ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘಕ್ಕೆ ಗಾಢ ಇತಿಹಾಸ ಇದೆ” ಎಂದು ಹೇಳಿದರು.…
ಕನ್ನಡ ಸಾಹಿತ್ಯವನ್ನು ಜನಮುಖಿ ಮಾಡಿದ ಮೊದಲಿಗರಲ್ಲಿ ಚಿರಸ್ಮರಣೀಯ ನಿರಂಜನ ಒಬ್ಬರು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ನವೋದಯದಿಂದ ಸತ್ಯೋತ್ತರ ಯುಗದ ದಲಿತ-ಬಂಡಾಯ ಸಾಹಿತ್ಯದವರೆಗಿನ ಅಕ್ಷರ ಕೃಷಿಯನ್ನು ಗಮನಿಸುವಾಗ ಒಂದು ಹೆಸರು ನೆನಪಾಗಲೇಬೇಕೆಂದರೆ ಅದು ‘ನಿರಂಜನ’ ಎಂದೇ ಗುರುತಿಸಲ್ಪಡುವ ಕುಳಕುಂದ ಶಿವರಾಯರು. ಸ್ವಾತಂತ್ರ್ಯೋತ್ತರ ಭಾರತದ ಕನ್ನಡ ಸಾಹಿತ್ಯ ಲೋಕದಲ್ಲಿ ಆರಂಭದ ದಿನಗಳಿಂದಲೂ ವ್ಯವಸ್ಥಿತವಾಗಿ ರೂಪುಗೊಂಡಿರುವ ‘ಸಾಹಿತ್ಯ ಕೂಟ’ದ ಒಂದು ಬೌದ್ಧಿಕ ಪರಂಪರೆಯಲ್ಲಿ ಸಾಹಿತ್ಯ ಪರಿಚಾರಕರೂ ಸಹ ತತ್ವ, ಸಿದ್ಧಾಂತ ಮತ್ತು ಸಾಮಾಜಿಕ ಅಸ್ಮಿತೆಗಳ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿರುವುದನ್ನು ವಿಷಾದದಿಂದಲೇ ಗುರುತಿಸಬೇಕಿದೆ. ಕಳೆದ ಐದು ದಶಕಗಳಲ್ಲಿ ಜಾತಿ ಅಸ್ಮಿತೆಯೂ ಇದರ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಕೂಟ ವ್ಯವಸ್ಥೆಯ ಒಂದು ಭಾಗವಾಗಿಯೇ ಕನ್ನಡದ ವಿಮರ್ಶಾ ಲೋಕವೂ ಸಹ ತನ್ನದೇ ಆದ ಬೇಲಿಗಳನ್ನು ನಿರ್ಮಿಸಿಕೊಂಡಿರುವುದೂ ಸತ್ಯ. ನವೋದಯ, ನವ್ಯ, ಬಂಡಾಯ-ದಲಿತ ಇತ್ಯಾದಿಗಳ ವರ್ಗೀಕರಣದ ನಡುವೆ ಪ್ರಧಾನವಾಗಿ ಕೇಳಿಬರದ ಒಂದು ಸಾಹಿತ್ಯ ಪ್ರಕಾರ ಎಂದರೆ ಪ್ರಗತಿಶೀಲ ಸಾಹಿತ್ಯ. ಆದರೂ ಒಂದು ಚಳುವಳಿಯ ರೂಪದ ಪ್ರಗತಿಶೀಲ ಸಾಹಿತ್ಯ ಕೆಲವೇ ಸಾಹಿತಿಗಳ ಮೂಲಕ…
ಶಿವಮೊಗ್ಗ : ವಸುಧಾ ಕರಣಿಕ್ ಹಾಗೂ ವೈಶಾಲಿ ಭಟ್ ಇವರ ಜನ್ಮದಿನೋತ್ಸವ ಅಂಗವಾಗಿ ನಾದನೃತ್ಯ ಸ್ಕೂಲ್ ಆಫ್ ಡ್ಯಾನ್ಸ್ ಎಂಡ್ ಕಲ್ಬರಲ್ ಟ್ರಸ್ಟ್ ಮಂಗಳೂರು ಇದರ ನಿರ್ದೇಶಕಿಯಾದ ಖ್ಯಾತ ಭರತನಾಟ್ಯ ಕಲಾವಿದೆ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರ ನಿರ್ದೇಶನದಲ್ಲಿ ‘ಕುಮಾರವ್ಯಾಸ ನೃತ್ಯ ಭಾರತ’ ಭರತನಾಟ್ಯ ಕಾರ್ಯಕ್ರಮವು ದಿನಾಂಕ 02 ಮಾರ್ಚ್ 2025ರ ಭಾನುವಾರದಂದು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ನಡೆಯಲಿದೆ. ಕರ್ನಾಟಕ ಸಂಘ ಶಿವಮೊಗ್ಗದ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಬಳ್ಳಾರಿ ಇದರ ವಿಶೇಷಾಧಿಕಾರಿಗಳಾದ ಶ್ರೀ ಮಂಜುನಾಥ್ ಪಿ.ಎಸ್ ಹಾಗೂ ಸಾಹಿತ್ಯ, ಸಂಗೀತ ಮತ್ತು ಕಲಾ ಸಂಘಟಕರಾದ ಬೆಂಗಳೂರಿನ ಶ್ರೀ ವಿಶ್ವೇಶ್ವರ ಗಾಯತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕಲಾವಿದೆ ಡಾ. ವಿದುಷಿ ಭ್ರಮರಿ ಶಿವಪ್ರಕಾಶ್ ಇವರನ್ನು ಸನ್ಮಾನಿಸಲಾಗುವುದು. ‘ಕುಮಾರವ್ಯಾಸ ನೃತ್ಯ ಭಾರತ’- ವೀರನಾರಾಯಣ ಸ್ವಾಮಿಯ ಸನ್ನಿಧಿಯಲ್ಲಿ ಗದುಗಿನ ನಾರಣಪ್ಪನಿಂದ ರಚಿತವಾದ ‘ಕರ್ಣಾಟ ಭಾರತ ಕಥಾಮಂಜರಿ’ಯಿಂದ ಆಯ್ದ…
ಪುತ್ತೂರು : ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ ವತಿಯಿಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ದಶಮನೋತ್ಸವದ ಸವಿ ನೆನಪಿನಲ್ಲಿ ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ 2025’ಯನ್ನು ಆಯೋಜಿಸಲಾಗಿದೆ. ‘ಡಾ. ಕೆ. ಶಿವರಾಮ ಕಾರಂತರ ‘ಚೋಮನ ದುಡಿ’ ಕಾದಂಬರಿಯಲ್ಲಿ ಸಾಮಾಜಿಕ ಮೌಲ್ಯ’ ಎಂಬ ವಿಷಯದ ಬಗ್ಗೆ ರಚಿಸಿದ ಪ್ರಬಂಧಕ್ಕೆ ಪ್ರಥಮ : 3000/-, ದ್ವಿತೀಯ : 2000/-, ತೃತೀಯ : 1000/- ಬಹುಮಾನಗಳು ನೀಡಲಾಗುವುದು. ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ : 1. ಪ್ರತಿ ಕಾಲೇಜಿನಿಂದ ಆಸಕ್ತ ಗರಿಷ್ಟ 5 ಜನ ವಿದ್ಯಾರ್ಥಿಗಳು ಭಾಗವಹಿಸಬಹುದು. 2. ಸಂಸ್ಥೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ತಮ್ಮ ಸ್ವ ಹಸ್ತಾಕ್ಷರದಲ್ಲಿ ಬರೆದ ಪ್ರಬಂಧವನ್ನು ಕಳುಹಿಸಬೇಕು. 3. ಪ್ರಬಂಧವು ಗರಿಷ್ಟ 6 ಪುಟಗಳನ್ನು ಮೀರಬಾರದು. (ಒಂದು ಬದಿ ಎ-4 ಅಳತೆ) 4. ಪ್ರಬಂಧವನ್ನು ತಮ್ಮ ವಿಳಾಸ ಮತ್ತು ಸಂಪರ್ಕ ಸಂಖ್ಯೆಯ (ವಾಟ್ಸಾಪ್ ಸಂಖ್ಯೆ) ಜೊತೆಗೆ ದಿನಾಂಕ 30 ಮಾರ್ಚ್…
ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 28 ಫೆಬ್ರವರಿ 2025ರಂದು ಮಡಿಕೇರಿಯ ಗೌಡ ಕೊಡಗು ಗೌಡ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಬರಹಗಾರರಿಗೆ ಪ್ರೋತ್ಸಾಹ ಬಹುಮಾನ ಪ್ರಶಸ್ತಿಯನ್ನು ವಿತರಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ. ಎಸ್. ಪೊನ್ನಣ್ಣ ಮಾತನಾಡಿ “ಇಂತಹ ಕಾರ್ಯಕ್ರಮಗಳು ಸಮುದಾಯದ ಬರಹಗಾರರನ್ನು ಪ್ರೋತ್ಸಾಹಿಸುವುದರೊಂದಿಗೆ ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಸಹಕಾರಿಯಾಗಲಿದೆ. ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳು ಸಮುದಾಯದ ಏಳಿಗೆಗೆ ಹಾಗೂ ಅಭಿವೃದ್ಧಿಗೆ ಪೂರಕ ಆಗಿರುವುದರೊಂದಿಗೆ ಅರೆಭಾಷೆ ಜನಾಂಗದ ಇತಿಹಾಸ ಹಾಗೂ ಸಮಗ್ರ ಚಟುವಟಿಕೆಗಳನ್ನು ಜಗತ್ತಿಗೆ ತಿಳಿಸುವಂತೆ ಕಾರ್ಯಪ್ರವೃತ್ತರಾಗಲಿ. ಅರೆಭಾಷೆ ಸಮುದಾಯಕ್ಕೆ ತನ್ನಿಂದ ಆಗುವ ಎಲ್ಲಾ ರೀತಿಯ ಸಹಾಯವನ್ನು ಒದಗಿಸಲು ನಾನು ಸದಾ ಸಿದ್ದ. ಐನ್ ಮನೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮನೆಯ ಇತಿಹಾಸವನ್ನು ಜಗತ್ತಿಗೆ ಹೇಳುವ ದಿಶೆಯಲ್ಲಿ…
ಬೆಂಗಳೂರು : ಯಕ್ಷವಾಹಿನಿ ಇದರ ವತಿಯಿಂದ ‘ಯಕ್ಷ ಸಾಹಿತ್ಯ ಸಾಂಗತ್ಯ -25’ ನಾಡಿನ ಖ್ಯಾತ ಕವಿಗಳು, ಚಿಂತಕರು, ವಿದ್ವಾಂಸರಿಂದ ಯಕ್ಷ ಪ್ರಸಂಗಗಳ ಸಾಹಿತ್ಯ ಅವಲೋಕನದ ಸರಣಿ ಕಾರ್ಯಕ್ರಮವನ್ನು ದಿನಾಂಕ 02 ಮಾರ್ಚ್ 2025ರಂದು ಸಂಜೆ 6-00 ಗಂಟೆಗೆ ಜೂಮ್ ಮೀಟಿಂಗ್ ನಲ್ಲಿ ಆಯೋಜಿಸಲಾಗಿದೆ. ಹಂಪಿ ವಿಶ್ವವಿದ್ಯಾನಿಲಯದ ಖ್ಯಾತ ವಿಮರ್ಶಕರು ಹಾಗೂ ಪ್ರಾಧ್ಯಪಕರಾದ ಡಾ. ವೆಂಕಟಗಿರಿ ದಳವಾಯಿ ಇವರಿಂದ ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ರಚಿಸಿದ ‘ರಾಮ ನಿರ್ಯಾಣ’ ಯಕ್ಷ ಪ್ರಸಂಗದ ಸಾಹಿತ್ಯಾವಲೋಕನ ನಡೆಯಲಿದ್ದು, ಹಿರಿಯ ಸಂಶೋಧಕರು ಡಾ. ಜಿ.ಎಸ್. ಭಟ್ ಸಾಗರ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಖ್ಯಾತ ಯಕ್ಷಗಾನ ವಿದ್ವಾಂಸರು ಡಾ. ಆನಂದರಾಮ ಉಪಾಧ್ಯ ಇವರಿಂದ ಸಮನ್ವಯ, ಶ್ರೀ ಶ್ರೀಧರ ಡಿ.ಎಸ್., ಪ್ರೊ. ಎಮ್. ಎಲ್. ಸಾಮಗ, ಶ್ರೀ ಗಿಂಡಿಮನೆ ಮೃತ್ಯುಂಜಯ, ಶ್ರೀ ನಟರಾಜ ಉಪಾಧ್ಯ, ಶ್ರೀ ಅನಂತ ಪದ್ಮನಾಭ ಫಾಟಕ್, ಶ್ರೀ ಇಟಗಿ ಮಹಾಜಲೇಶ್ವರ ಭಟ್, ವೇ ಅಜಿತ್ ಕಾರಂತ್, ಶ್ರೀ ಲನಾ ಭಟ್ ಹಾಗೂ ಶ್ರೀ ಸುಹಾಸ್…