Author: roovari

ವಿಜಯಪುರ : ವಿಜಯಪುರ ನಗರದಿಂದ ಅನತಿ ದೂರದಲ್ಲಿರುವ ತೊರವೆಯ ಶ್ರೀ ನೃಸಿಂಹ ದೇವಸ್ಥಾನದಲ್ಲಿ ತೊರವೆ ರಾಮಾಯಣ ಮಹಾಕಾವ್ಯದ ಯುದ್ಧಕಾಂಡದಲ್ಲಿರುವ `ಶ್ರೀರಾಮ ಪಟ್ಟಾಭಿಷೇಕಂ’ ಪ್ರಸಂಗದ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವು ದಿನಾಂಕ 30-05-2024 ರಂದು ಅರ್ಥಪೂರ್ಣವಾಗಿ ಜರುಗಿತು `ಶ್ರೀ ಜನಕಜಾ ರಮಣ, ವಿಮಲ ಸರೋಜ ಸಂಭವ ಜನಕ……….. ಸುರಭೂಜ ತೊರವೆಯ ರಾಯ ನರಹರಿ ಪಾಲಿಸುಗೆ ಜಗವ’ ಎಂಬ ಮಂಗಲಾಚರಣ ಪದ್ಯದೊಂದಿಗೆ ಗಮಕಿಗಳಾದ ಶ್ರೀಮತಿ ಪುಷ್ಪಾ ಕುಲಕರ್ಣಿ ಹಾಗೂ ಶ್ರೀಮತಿ ಭೂದೇವಿ ಕುಲಕರ್ಣಿ ಇವರುಗಳು ಗಮಕ ವಾಚನವನ್ನು ಆರಂಭಿಸಿದರು. 14 ವರುಷಗಳ ವನವಾಸದಿಂದ ಅಯೋಧ್ಯೆಗೆ ಮರಳಿ ಬಂದ ರಾಮನು ತನ್ನ ತಾಯಂದಿರು ಹಾಗೂ ತಮ್ಮಂದಿರನ್ನು ಕಂಡು ಪಡುವ ಆನಂದ, ಅಣ್ಣನನ್ನು ಅಪ್ಪಿಕೊಂಡು ಕಣ್ಣೀರಿಡುವ ಭರತ ಇವರುಗಳೆಲ್ಲ ಪ್ರಾಚೀನ ಭಾರತೀಯ ಸಂಸ್ಕೃತಿಯ ಆದರ್ಶ ಪಾತ್ರಗಳಾಗಿ ಮೂಡಿ ನಿಂತರು. ಶ್ರೀರಾಮನ ಪಟ್ಟಾಭಿಷೇಕವು ಸುಗ್ರೀವ, ವಿಭೀಷಣ, ಕಪಿಸೈನ್ಯಗಳ ಉತ್ಸಾಹದಿಂದ ವೈಭವಪೂರ್ಣವಾಗಿ ನೆರವೇರಿತು. ಶ್ರೀರಾಮನು ವಿಭೀಷಣನಿಗೆ ಹಾಗೂ ಸುಗ್ರೀವಾದಿ ಕಪಿಗಳಿಗೆ ಏರ್ಪಡಿಸಿದ ಭೋಜನಕೂಟ ಆತ್ಮೀಯವಾಗಿತ್ತು. ಆ ಭೋಜನಕೂಟದಲ್ಲಿ ಶ್ರೀರಾಮನು ಹನುಮಂತನಿಗೆ ಬೇರೆ…

Read More

ಕಾಸರಗೋಡು : ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ರಂಗಚಿನ್ನಾರಿ ಕಾಸರಗೋಡು (ರಿ.), ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ‘ನಾರಿ ಚಿನ್ನಾರಿ’ ಪ್ರಸ್ತುತ ಪಡಿಸುವ ಕಾಸರಗೋಡಿನ ಉದಯೋನ್ಮುಖ ನೃತ್ಯ ಪ್ರತಿಭೆಗಳ ಅನಾವರಣ ‘ಗೆಜ್ಜೆ ತರಂಗ’ ನೃತ್ಯ ಪ್ರದರ್ಶನವನ್ನು ದಿನಾಂಕ 09-06-2024ರಂದು ಸಂಜೆ 3-30 ಗಂಟೆಗೆ ಕಾಸರಗೋಡಿನ ಕರೆಂದಕ್ಕಾಡು ಪದ್ಮಗಿರಿ ಕಲಾ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ. ನಾರಿ ಚಿನ್ನಾರಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ಐ. ಭಟ್ ಇವರ ಅಧ್ಯಕ್ಷತೆಯಲ್ಲಿ ನೃತ್ಯ ಗುರುಗಳಾದ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನೃತ್ಯ ಗುರುಗಳಾದ ನಟನ ತಿಲಕಂ ಸುರೇಂದ್ರನ್ ಪಟ್ಟೇನ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕುಮಾರಿ ಯಶ್ನಾ ಬಿ. ನಾಯ್ಕ್ ಮತ್ತು ಕುಮಾರಿ ಶಾನ್ವಿ ಕೆ. ಇವರು ಭರತನಾಟ್ಯ, ಕುಮಾರಿ ಕೃಷ್ಣಪ್ರಭಾ ಪಿಳ್ಳೆಯವರು ಮೋಹಿನಿಯಾಟಂ, ಕುಮಾರಿ ದ್ರುವಿತಾ ಸಿ.ಎಸ್. ಇವರು ಜಾನಪದ ನೃತ್ಯ, ಕುಮಾರಿ ಕೃಷ್ಣೇಂದು ಕೂಚುಪುಡಿ, ಕುಮಾರಿ ಶಿವಾನಿ ಕೂಡ್ಲು ಕೇರಳ ನಟನಂ ಹಾಗೂ ಕುಮಾರಿ ಗೀತಪ್ರಿಯ ಡಿ. ಮತ್ತು ಕುಮಾರಿ…

Read More

ಉಡುಪಿ : ವಿಶ್ವ ಭಾರತ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಿತ ಕವಿ ದಿ. ಕುರಾಡಿ ಸೀತಾರಾಮ ಅಡಿಗರ ನೆನಪಿನ ‘ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ’ಗಾಗಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸಂಸ್ಥೆಯು 2023ರಲ್ಲಿ ಮೊದಲ ಆವೃತ್ತಿಯಲ್ಲಿ ಪ್ರಕಟಣೆಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಈ ಪ್ರಶಸ್ತಿಗೆ ವಿಜಯಪುರದ ಸುಮಿತ್ ಮೇತ್ರಿಯವರ ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿಯವರ ‘ಕೇಳಿಸದ ಸದ್ದುಗಳು’ ಕೃತಿಗಳು ಆಯ್ಕೆಯಾಗಿರುತ್ತವೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್.ಪಿ. ತಿಳಿಸಿದರು. ಪ್ರಶಸ್ತಿಗೆ 42 ಕೃತಿಗಳು ಬಂದಿದ್ದು, ಕನ್ನಡ ಸಾಹಿತ್ಯ ಲೋಕದ ಹಿರಿಯ ವಿಮರ್ಶಕರಾದ ಬೆಂಗಳೂರಿನ ಪ್ರೊ. ಎಚ್. ದಂಡಪ್ಪ ಹಾಗೂ ಉಡುಪಿಯ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು. ಪ್ರಶಸ್ತಿಯು ರೂ.10,000/- ಗೌರವ ನಗದಿನೊಂದಿಗೆ ಪ್ರಶಸ್ತಿಪತ್ರ ಹಾಗೂ ಫಲಕವನ್ನು ಒಳಗೊಂಡಿದ್ದು ಇಬ್ಬರಿಗೆ ಹಂಚಿಹೋಗಿವೆ. ಆಗಸ್ಟ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ನಡೆಸಲಾಗುವುದು ಎಂದು ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ…

Read More

ಮಂಗಳೂರು : ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವತಿಯಿಂದ ‘ಸ್ವಸ್ತಿಕ ಯಕ್ಷವಾಸ್ಯಂ’ ಇದರ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ‘ಸ್ವಸ್ತಿಕ ಯಕ್ಷಪರ್ಬ 2024’ ಅಂತರ್ ಕಾಲೇಜು ಯಕ್ಷಗಾನ ತಾಳಮದ್ದಳೆ ಸ್ಪರ್ಧೆಯು ದಿನಾಂಕ 09-06-2024ರಂದು ಬಂಟ್ಸ್ ಹಾಸ್ಟಲ್ ನ ಶ್ರೀಮತಿ ಗೀತಾ ಎಸ್.ಎಮ್. ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 8-30 ಗಂಟೆಗೆ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸ್ವಸ್ತಿಕ ಯಕ್ಷವಾಸ್ಯಂ ಇದರ ವಿದ್ಯಾರ್ಥಿಗಳಿಂದ ‘ಸುದರ್ಶನೋಪಖ್ಯಾನ’ ಎಂಬ ಪ್ರಸಂಗದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 1-00 ಗಂಟೆಗೆ ಅಂತರ್ ಕಾಲೇಜು ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ನಡೆಯಲಿದೆ. ಸಂಜೆ 5-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಶ್ರೀ ರಾಮಕೃಷ್ಣ ಶಾಲೆಯ ಶಿಕ್ಷಕರಾದ ಡಾ. ಹೇಮಲತಾ ಶೆಟ್ಟಿ ಇವರಿಗೆ ‘ಯಕ್ಷವಾಸ್ಯಂ ಕಲಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಚಿಂತಕರು, ಖ್ಯಾತ ನಿರೂಪಕ ನಿರ್ದೇಶಕರಾದ ಶ್ರೀ ಕದ್ರಿ ನವನೀತ್ ಶೆಟ್ಟಿ ಮತ್ತು ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ರಮೇಶ್ ಕುಲಶೇಖರ ಇವರುಗಳಿಗೆ ಗುರುವಂದನಾ ಕಾರ್ಯಕ್ರಮ…

Read More

ಮಂಗಳೂರು : ಕಲಾಭಿ ಥಿಯೇಟರ್ ಫೆಸ್ಟಿವಲ್ ಪ್ರಯುಕ್ತ ಶ್ರವಣ್ ಹೆಗ್ಗೋಡು ನಿರ್ದೇಶನದಲ್ಲಿ ‘ಎ ಫ್ರೆಂಡ್ ಬಿಯೊಂಡ್ ದಿ ಫೆನ್ಸ್’ ಕನ್ನಡ ನಾಟಕ ಪ್ರದರ್ಶನವು ದಿನಾಂಕ 09-06-2024ರಂದು ಸಂಜೆ 7-00 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಟೌನ್ ಹಾಲ್ ಇಲ್ಲಿ ನಡೆಯಲಿದೆ. ದಶಕಗಳ ಹಿಂದೆ ಕಂಪನಿ ನಾಟಕಗಳಲ್ಲಿ ಜೀವಂತ ಆನೆ-ಒಂಟೆಗಳು ರಂಗದ ಮೇಲೆ ಬಂದು ರಂಜಿಸುವಷ್ಟು ಕನ್ನಡ ರಂಗಭೂಮಿ ಶ್ರೀಮಂತವಾಗಿತ್ತು. ಈ ಕಾಲಘಟ್ಟದಲ್ಲಿ ಸರಳ ರಂಗತಂತ್ರಗಳ ಮೂಲಕ ಹೆಣೆದ ನಾಟಕಗಳನ್ನು ಕಟ್ಟಲಾಗುತ್ತದೆ. ಆದರೆ ಈಗ ಮಂಗಳೂರಿನ‌ ಕಲಾಭಿ ಸಂಸ್ಥೆ ಗತಕಾಲದ ಕನ್ನಡ ರಂಗಭೂಮಿಯ ವೈಭವವನ್ನು ನೆನಪಿಸುವ ಅಮೋಘ ಪ್ರಯೋಗವನ್ನು ಮಂಗಳೂರಿಗರಿಗೆ ಉಣಬಡಿಸಲಿದೆ. ಕಲಾಭಿಯ “ಎ ಫ್ರೆಂಡ್ ಬಿಯಾಂಡ್ ದಿ ಫೆನ್ಸ್” ಎಂಬ ಅಭೂತಪೂರ್ವ ನಾಟಕ ಕನ್ನಡ ರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಜೀವಂತ ಆನೆಯಷ್ಟೇ ಗಾತ್ರದ, ಜೀವಂತ ಆನೆಯಷ್ಟೇ ಜೀವಂತಿಗೆ ಹೊಂದಿರುವ ನೈಜ ಗಾತ್ರದ ಆನೆ ಮಂಗಳೂರಿನ ಪುರಭವನದ ವೇದಿಕೆಯಲ್ಲಿ ರಾರಾಜಿಸಲಿದೆ. ಜಪಾನಿನ ಜಾನಪದ ಗೊಂಬೆಯಾಟ ಪ್ರಕಾರವಾದ ಬುನಾರಾಕು ಶೈಲಿಯನ್ನು ಕಲಿತು, ನುರಿತ…

Read More

ಉತ್ತರ ಕೇರಳದ ಕಾಸರಗೋಡು, ಉತ್ತರ ಕನ್ನಡದ ಗೋಕರ್ಣ, ಅತ್ತ ಕನ್ನಡದ ಮಲೆನಾಡಲ್ಲೂ ಪಸರಿಸಿರುವ ಸರ್ವಾಂಗ ಸುಂದರ ಕಲೆಯೇ “ಯಕ್ಷಗಾನ”. ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ತೋರಿಸುತ್ತಾ ಮಿಂಚುತ್ತಿರುವ ಯುವ ಕಲಾವಿದರು ಪವನ್ ಆಚಾರ್ಯ ನೀರ್ಚಾಲು. ಕೇರಳದ ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಪುರೋಹಿತ ವಾಸುದೇವ ಆಚಾರ್ಯ ಹಾಗೂ ಪುಷ್ಪಲತಾ ಇವರ ಮಗನಾಗಿ 27.04.1999ರಂದು ಜನನ. MA in mass communication and journalism (MCJ) ಇವರ ವಿದ್ಯಾಭ್ಯಾಸ. ವಿಶ್ವ ವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ವೃತ್ತಿ ಜೀವನ ಆರಂಭ ಮಾಡಿ ಪ್ರಸ್ತುತ ಬೆಂಗಳೂರು ವಿಜಯವಾಣಿ ದಿನಪತ್ರಿಕೆಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಯುತ ದಯಾನಂದ ಪಿಳಿಕೂರು, ತಲಪಾಡಿ ಇವರ ಯಕ್ಷಗಾನ ಗುರುಗಳು. ತಂದೆಗೆ ಯಕ್ಷಗಾನದಲ್ಲಿ ತುಂಬಾ ಆಸಕ್ತಿ ಇತ್ತು. ಆಟ ನೋಡಲು ಹೋಗುತ್ತಿದ್ದೆ. ಅದೊಂದು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾದರೆ, ಹತ್ತನೇ ತರಗತಿಯಲ್ಲಿ ಇರುವಾಗ ಮೊದಲು ಶ್ರೀ ಕಾಳಿಕಾಂಬ ಮಠ ಮಧೂರು ಅಲ್ಲಿ ಯಕ್ಷಗಾನ ತರಬೇತಿಯನ್ನು ನಾಟೇಕಲ್ಲಿನ ಹವ್ಯಾಸಿ ಕಲಾವಿದರಾದ ನವೀನ್ ಎಂಬವರು…

Read More

ಮಂಗಳೂರು: ಬನವಾಸಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಮಟ್ಟದ ಸಮಾವೇಶ ‘ಪ್ರಕೃತಿಯ ಮಡಿಲು ನುಡಿಯ ಒಡಲು’ ಕಾರ್ಯಕ್ರಮದ ಅಂಗವಾಗಿ ‘ಮನೆಯಂಗಳದಿ ಸಾಹಿತ್ಯ ರಸದಿನ’ ಕಾರ್ಯಕ್ರಮವು ದಿನಾಂಕ 02-06-2024ರಂದು ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ನರೂರು, ಬನವಾಸಿಯ ಶ್ರೀ ರಘುನಂದನ ಭಟ್ಟರ ಮನೆಯ ಆವರಣದಲ್ಲಿ ನಡೆಯಿತು. ವಿಶ್ವ ಪರಿಸರ ದಿನಕ್ಕೆ ಪೂರಕವಾಗಿ, ಶ್ರೀ ಜಗದೀಶ ಭಂಡಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತೀರ್ಥಹಳ್ಳಿ ಸಮಿತಿಯ ಆಧ್ಯಕ್ಷರಾದ ಅಣ್ಣಪ್ಪ ಅರಬಗಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಣಚೂರು ಹಾಗೂ ಮಂಗಳಾ ಆಸ್ಪತ್ರೆ ವೈದ್ಯ ಮತ್ತು ಕವಿಯಾದ ಡಾ. ಸುರೇಶ ನೆಗಳಗುಳಿ ಅವರನ್ನು ಮಂಗಳೂರಿನ ಮಾಜಿ ಎಸ್‌. ಪಿ. ಕುಮಾರಸ್ವಾಮಿ ಶಾಲು ತೊಡಿಸಿ, ಫಲ ಹಾಗೂ ಫಲಕ ನೀಡಿ ಗೌರವಿಸಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿಯ ನಾರಾಯಣ ಶೇವಿರೆ ಇವರ ದಿಕ್ಕೂಚಿ ಭಾಷಣದಿಂದ ಪ್ರಾರಂಭಗೊಂಡ ಈ ಕಾರ್ಯಕ್ರಮದಲ್ಲಿ ಮಂಗಳೂರಿನ ವಿದ್ಯಾರ್ಥಿ ಪ್ರಮುಖ್ ತಿಮ್ಮಣ್ಣ ಭಟ್…

Read More

ಕಿನ್ನಿಗೋಳಿ : ಶಿವಪ್ರಣಂ (ರಿ.) ನೃತ್ಯ ತರಗತಿಯ ವತಿಯಿಂದ ಕಿನ್ನಿಗೋಳಿಯ ಯುಗಪುರುಷ ಮತ್ತು ನೇಕಾರ ಸೌಧ ಇವುಗಳ ಸಹಯೋಗದೊಂದಿಗೆ ‘ಶಿವಾಂಜಲಿ 2024’ ನೃತ್ಯ ಪ್ರದರ್ಶನವನ್ನು ದಿನಾಂಕ 08-06-2024, 09-06-2024 ಮತ್ತು 15-06-2024ರಂದು ಕಿನ್ನಿಗೋಳಿಯ ಯುಗಪುರುಷದಲ್ಲಿ ಹಮ್ಮಿಕೊಳ್ಳಲಾಗಿದೆ. ದಿನಾಂಕ 08-06-2024ರಂದು ಸಂಜೆ ಗಂಟೆ 4-45ಕ್ಕೆ ಮಂಗಳೂರಿನ ಕೊಟ್ಟಾರದ ಭರತಾಂಜಲಿ (ರಿ.) ಇದರ ನಿರ್ದೇಶಕರಾದ ಗುರು ಶ್ರೀಧರ ಹೊಳ್ಳ ಹಾಗೂ ಶ್ರೀಮತಿ ಪ್ರತಿಮಾ ಶ್ರೀಧರ್ ಇವರ ಗೌರವ ಉಪಸ್ಥಿತಿಯಲ್ಲಿ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಯುಗಪುರುಷದ ಪ್ರಧಾನ ಸಂಪಾದಕರಾದ ಶ್ರೀ ಭುವನಾಭಿರಾಮ ಉಡುಪ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೃತ್ಯಾಂಗನ್ ಇದರ ಗುರು ರಾಧಿಕಾ ಶೆಟ್ಟಿ ಇವರ ಶಿಷ್ಯೆ ಅದಿತಿ ಲಕ್ಷ್ಮೀ, ನೃತ್ಯ ವಸಂತ ಇದರ ಗುರು ಪ್ರವಿತ ಅಶೋಕ್ ಇವರ ಶಿಷ್ಯೆಯರಾದ ಪೂರ್ವಿಕ ಹಾಗೂ ಗಾರ್ಗಿ ದೇವಿ, ಗಾನ ನೃತ್ಯ ಅಕಾಡೆಮಿ (ರಿ.) ಇದರ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ವಿದುಷಿ ಅಂಕಿತ…

Read More

ಬ್ರಹ್ಮಾವರ : ಯಕ್ಷಗಾನ ಬಡಗು ತಿಟ್ಟಿನ ಹಿರಿಯ ಕಲಾವಿದರಾದ ಪೇತ್ರಿ ಮಾಧವ್ ನಾಯ್ಕ್ ಇವರು ದಿನಾಂಕ 05-06-2024ರ ಬುಧವಾರದಂದು ನಿಧನ ಹೊಂದಿದರು. ಇವರಿಗೆ 84 ವರ್ಷ ವಯಸ್ಸಾಗಿತ್ತು. 1940ರಲ್ಲಿ ಬ್ರಹ್ಮಾವರ ತಾಲೂಕಿನ ಪೇತ್ರಿ ಸಮೀಪದ ಹಲುವಳ್ಳಿಯ ವಾಮನ ನಾಯ್ಕ್ ಹಾಗೂ ಮೈದಾ ಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಮಾಧವ ನಾಯ್ಕರಿಗೆ ಯಕ್ಷಗಾನದ ಮದ್ದಳೆಯ ಕ್ರಾಂತಿಕಾರ ಎಂದೇ ಖ್ಯಾತಿಯ ಸೋದರ ಮಾವನಾದ ತಿಮ್ಮಪ್ಪ ನಾಯ್ಕರೇ ಮೊದಲ ಗುರು. ದಿಗ್ಗಜ ಗುರು ತಿಮ್ಮಪ್ಪ ನಾಯ್ಕರ ಮಾರ್ಗದರ್ಶನದಲ್ಲಿ ಯಕ್ಷರಂಗಕ್ಕೆ ಕಾಲಿಟ್ಟ ಮಾಧವ ನಾಯ್ಕರು ಎಲ್ಲರಿಗೂ ಪ್ರೀತಿಯ ನೆಚ್ಚಿನ ಕಲಾವಿದರಾಗಿದ್ದರು. ಯಕ್ಷಗಾನದ ಹೆಜ್ಜೆಗಾರಿಕೆ ಅಭ್ಯಾಸ ಮಾಡಿದ ಬಳಿಕ ಅಂದಿನ ಪ್ರಸಿದ್ದ ಕಲಾವಿದರಾದ ಭಾಗವತ ತೆಂಗಿನಜೆಡ್ಡು ರಾಮಚಂದ್ರ ರಾಯರು ಹಾಗೂ ಗೋರ್ಪಾಡಿ ವಿಟ್ಠಲ ಪಾಟೀಲರು ಹೆಚ್ಚಿನ ಮಾರ್ಗದರ್ಶನ ನೀಡಿದರು. ತನ್ನ 14ನೇ ವಯಸ್ಸಿನಲ್ಲಿ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆ ಕಟ್ಟಿ ಸಾಲಿಗ್ರಾಮ, ಪೆರ್ಡೂರು, ಮೂಲ್ಕಿ, ಅಮೃತೇಶ್ವರಿ ಮೇಳಗಳಲ್ಲಿ ಸುಮಾರು 30ವರ್ಷಗಳ ಕಾಲ ವಿವಿಧ ಪಾತ್ರಗಳಲ್ಲಿ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿ ಕಲಾ…

Read More

ಶಿಲಾಬಾಲಿಕೆ ಮೈಮಾಟದ ಅನಘಾ ಅಂದು ರಂಗದ ಮೇಲೆ ಪ್ರದರ್ಶಿಸಿದ ಅದೆಷ್ಟು ಮೋಹಕ ಯೋಗದ ಭಂಗಿಗಳು ಹಾಗೆಯೇ ಮನಃಪಟಲದ ಮೇಲೆ ಅಚ್ಚೊತ್ತಿ ನಿಂತಿದ್ದವು. ಗಮನ ಸೆಳೆದ ಸರಳ ನಿರಾಡಂಬರ ಆಹಾರ್ಯ, ಭಾವಸ್ಫುರಣ ಮೊಗ-ಕಾಂತಿಯುಕ್ತ ಕಣ್ಣುಗಳು, ಲೀಲಾಜಾಲವಾಗಿ ಹರಿದಾಡಿದ ದ್ರವೀಕೃತ ಚಲನೆಗಳು, ಅಂಗಶುದ್ಧ ಅಚ್ಚುಕಟ್ಟಾದ ನರ್ತನಗಳಿಂದ ಅವಳೊಬ್ಬ ಭರವಸೆಯ ಕಲಾವಿದೆಯಾಗಿ ಹೊರಹೊಮ್ಮಿದಳು. ‘ಕಲಾಸಿಂಧು ಅಕಾಡೆಮಿ’ಯ ಗುರು ವಿದುಷಿ ಪೂರ್ಣಿಮಾ ಗುರುರಾಜ ಅವರ ನುರಿತ ತರಬೇತಿಯಲ್ಲಿ ಮಿಂದು ಮೈದಳೆದ ಕಲಾಶಿಲ್ಪ ಅನಘಾ ತನ್ನ ‘ರಂಗಾರ್ಪಣೆ’ಯಲ್ಲಿ ವರ್ಚಸ್ಸಿನಿಂದ ನಿರಾಯಾಸವಾಗಿ ನರ್ತಿಸಿ ನೆರೆದ ಕಲಾರಸಿಕರನ್ನು ಮುದಗೊಳಿಸಿದಳು. ಸುಮನೋಹರ ನೃತ್ಯ ಸಂಯೋಜನೆಗಳಿಂದ ಕೂಡಿದ್ದ, ಮೆರುಗಿನ ನೃತ್ತಗಳು, ಸ್ಫುಟವಾದ ಮುದ್ರೆಗಳು, ಆಹ್ಲಾದಕರ ಆಂಗಿಕಾಭಿನಯ, ಹೃದ್ಯವಾದ ಸಮತೋಲನದ ಅಭಿನಯ-ಕರಾರುವಾಕ್ಕಾದ ಮುಕ್ತಾಯ ಅವಳು ಸಾಕಾರಗೊಳಿಸಿದ ಎಲ್ಲ ಕೃತಿಗಳಲ್ಲೂ ಮಿಂಚಿತ್ತು. ಮನಸೆಳೆದ ‘ಪುಷ್ಪಾಂಜಲಿ’ಯಿಂದ ಕಣ್ಸೆಳೆದ ಸರಸ್ವತೀ ಸ್ತುತಿ ಸುಮನೋಹರವಾಗಿ ಮನವನ್ನು ಆವರಿಸಿತು. ಕಾಂಚೀಪುರದ ಶಕ್ತಿಪೀಠದ ಕಾಮಾಕ್ಷಿಯ ಶೋಭಾಯಮಾನ ವ್ಯಕ್ತಿತ್ವ-ಮಹಿಮೆಗಳನ್ನು ದರ್ಶನ ಮಾಡಿಸಿದ ಶ್ಯಾಮಾಶಾಸ್ತ್ರಿಗಳ ಭೈರವಿ ‘ಸ್ವರಜತಿ’ಯಲ್ಲಿ ‘ಅಂಬಾ ಕಾಮಾಕ್ಷಿ’ ಕೃತಿಯು ಅನಘಳ ದೈವೀಕ ನರ್ತನದಲ್ಲಿ, ಪೂರ್ಣಿಮಾರ…

Read More