Author: roovari

ಮುರ್ಡೇಶ್ವರ : ಉತ್ತರಕೊಪ್ಪ ಗೋಳಿಕುಂಬ್ರಿ ಇಲ್ಲಿರುವ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನ (ರಿ.) ಇದರ ವತಿಯಿಂದ ‘ಯಕ್ಷಸಪ್ತಾಹ ಮುರುಡೇಶ್ವರ – 2025’ 11ನೆಯ ವರ್ಷದ ಸಂಭ್ರಮವನ್ನು ದಿನಾಂಕ 08 ಫೆಬ್ರವರಿ 2025ರಿಂದ 14 ಫೆಬ್ರವರಿ 2025ರವರೆಗೆ ಪ್ರತಿದಿನ ಸಂಜೆ 6-00 ಗಂಟೆಗೆ ಮುರ್ಡೇಶ್ವರ ಬಸ್ತಿಮಕ್ಕಿ, ನೀರಗದ್ದೆ ಬೈಲೂರು, ಶ್ರೀ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಲ್ಲಿ ಪೂರ್ಣಚಂದ್ರ ಯಕ್ಷಗಾನ ಮಂಡಳಿ (ರಿ.) ಕೊಂಡದಕುಳಿ, ಕುಂಭಾಶಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷೋತ್ಸವ ನಡೆಯಲಿದೆ.

Read More

ಬಾಗಲಕೋಟೆ : ಹಿರಿಯ ಸಂಸ್ಕೃತ ವಿದ್ವಾನ್, ಮಂತ್ರಾಲಯದ ಸಂಸ್ಕೃತ ವಿದ್ಯಾಪೀಠದ ಕುಲಪತಿಯೂ ಆಗಿರುವ ಕರ್ನಾಟಕ ಮೂಲದ ಡಾ. ವಾದಿರಾಜಾಚಾರ್ಯ ರಾಘವೇಂದ್ರಾಚಾರ್ಯ ಪಂಚಮುಖಿಯವರು ದೇಶದ ಅತ್ಯುನ್ನತ ‘ಪದ್ಮಶ್ರೀ’ ಗೌರವಕ್ಕೆ ಭಾಜನರಾಗಿದ್ದಾರೆ. ಆಚಾರ್ಯಕೊಪ್ಪ ಗ್ರಾಮ ಮೂಲದ ಡಾ. ಪಂಚಮುಖಿಯವರ ಹಿರಿಯರು ಸ್ವಾತಂತ್ರ್ಯ ಪೂರ್ವದಲ್ಲೇ ಬಾಗಲಕೋಟೆಗೆ ಬಂದು ನೆಲೆಸಿದ್ದರು. 1936ರಲ್ಲಿ ಬಾಗಲಕೋಟೆಯಲ್ಲಿ ಜನಿಸಿದ ಪಂಚಮುಖಿಯವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದಿದ್ದರು. ಬಳಿಕ ಧಾರವಾಡಕ್ಕೆ ಸ್ಥಳಾಂತರಗೊಂಡಿದ್ದರು ಕುಟುಂಬದ ಕೆಲವರು ಈಗಲೂ ಬಾಗಲಕೋಟೆಯಲ್ಲಿದ್ದಾರೆ. ಪಂಚಮುಖಿಯವರ ತಂದೆ ರಾಘವೇಂದ್ರ ಆಚಾರ್ಯ ಕೂಡ ಇತಿಹಾಸ ಮತ್ತು ವೇದಾಂತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ‘ವಿದ್ಯಾರತ್ನ’ ಬಿರುದಿಗೆ ಪಾತ್ರರಾಗಿದ್ದರು. ಡಾ. ಪಂಚಮುಖಿ ಅವರು ಹಲವು ವರ್ಷಗಳ ಕಾಲ ರೇಡಿಯೋದ ಸಂಸ್ಕೃತ ಭಾಷೆಯ ವಾರ್ತಾ ವಾಚಕರಾಗಿದ್ದರು. 40 ವರ್ಷಗಳ ಹಿಂದೆ ಅವರ ಸಂಸ್ಕೃತ ವಾರ್ತೆ ಕೇಳಿದವರು ಇಂದಿಗೂ ಅವರ ಧ್ವನಿಯನ್ನು ಸ್ಮರಿಸುತ್ತಾರೆ. ಡಾ. ಪಂಚಮುಖಿಯವರು ಧಾರವಾಡದ ಕರ್ನಾಟಕ ವಿ.ವಿ.ಯಲ್ಲಿ ಸ್ನಾತಕ, ಮುಂಬಯಿ ವಿ.ವಿ.ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ವಿದ್ವತ್ತಿಗೆ ಕುಲಪತಿಗಳ ಚಿನ್ನದ ಪದಕವೂ…

Read More

ಬೆಂಗಳೂರು : ಮೂರು ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ಭಾಜನರಾಗಿರುವ ರಿಕ್ಕಿ ಕೇಜ್ ಹೆಸರಾಂತ ಗಾಯಕ, ಜನಪ್ರಿಯ ಸಂಗೀತ ನಿರ್ದೇಶಕ. ಅಮೆರಿಕಾ ಸಂಯುಕ್ತ ಸಂಸ್ಥಾನದ ಉತ್ತರ ಕರೊಲಿನಾದಲ್ಲಿ ಜನಿಸಿರುವ ರಿಕ್ಕಿ ಕೇಜ್ ಮೂಲತಃ ಭಾರತದವರು. ಎಂಟನೆ ವರ್ಷದಲ್ಲಿ ಹೆತ್ತವರೊಂದಿಗೆ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ರಿಕಿ ಕೇಜ್ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯಲ್ಲಿ ಪೂರ್ಣಗೊಳಿಸಿ, ಆಕ್ಸ್ ಫರ್ಡ್ ದಂತ ವೈದ್ಯಕೀಯ ಕಾಲೇಜಿನಲ್ಲಿ ದಂತ ಚಿಕಿತ್ಸಾ ವ್ಯಾಸಂಗವನ್ನು ಪೂರ್ಣಗೊಳಿಸಿದರು. ಆದರೆ ದಂತ ಚಿಕಿತ್ಸಾ ವೃತ್ತಿಯನ್ನು ಆಯ್ದುಕೊಳ್ಳದೆ ಸಂಗೀತವನ್ನು ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡ ಇವರು ‘ವಿಂಡ್ಸ್ ಆಫ್ ಸಂಸಾರ’, ‘ಶಾಂತಿ ಸಂಸಾರ’, ‘ಡಿವೈನ್ ಟೈಡ್ಸ್’ ಮತ್ತು ‘ಬ್ರೇಕ್ ಆಫ್ ಡಾನ್’ ಧ್ವನಿಸುರಳಿಗಳಿಗೆ ಪ್ರಶಸ್ತಿ ಪಡೆದಿರುವ ರಿಕ್ಕಿ ಕೇಜ್ ಕನ್ನಡದ ಐದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಂತಾರಾಷ್ಟ್ರೀಯವಾಗಿ ಈವರೆಗೆ 21 ಆಲ್ಬಂಗಳನ್ನು ಇವರು ಸಂಯೋಜಿಸಿದ್ದು, ಭಾರತೀಯ ಶಾಸ್ತ್ರೀಯ ಸಂಗೀತ, ಪಾಶ್ಚಾತ್ಯ ಸಂಗೀತ ಎಲೆಕ್ಟ್ರಾನಿಕ್ ಸಂಗೀತಗಳ ಮಿಶ್ರಣ ಫ್ಯೂಜನ್ ಜಾನರ್ ಗೆ ಹೆಸರುವಾಸಿಯಾಗಿದ್ದಾರೆ.…

Read More

ಬಾಗಲಕೋಟೆ : ಜಾನಪದ ಲೋಕದಲ್ಲಿ ಕೇಳಿ ಬರುವ ಹೆಸರು ವೆಂಕಪ್ಪ ಸುಗತೇಕರ್ ಇವರಿಗೆ ಕೇಂದ್ರ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ಘೋಷಿಸಿದೆ. 81 ವರ್ಷದ ಸುಗತೇಕರ ಅನಕ್ಷರಸ್ಥರಾಗಿದ್ದು, ಬಾಲ್ಯದಿಂದ ಹಾಡುತ್ತಿದ್ದಾರೆ. ಕಳೆದ ಆರುವರೆಯಿಂದ ಏಳು ದಶಕಗಳ ಕಾಲ ಒಂದು ಸಾವಿರಕ್ಕೂ ಅಧಿಕ ಗೋಂಧಳಿ (ಜಾನಪದ) ಹಾಡುಗಳನ್ನು ಹಾಡಿದ್ದೂ ಅಲ್ಲದೇ 150ಕ್ಕೂ ಹೆಚ್ಚು ಗೋಂಧಳಿ ಕಥೆಗಳನ್ನು ಹೇಳುವ ಮೂಲಕ ಮಕ್ಕಳಲ್ಲಿ ಕಥೆಗಳ ಬಗ್ಗೆ ಆಸಕ್ತಿ ಮೂಡಿಸಿದ ಗಾರುಡಿಗ. ಮೂಲೆ ಗುಂಪಾಗುತ್ತಿರುವ ಗೋಂಧಳಿ ಹಾಡುಗಳ ಕುರಿತು ಉಚಿತವಾಗಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಜಾನಪದ ಲೋಕಕ್ಕೆ ಸುಗತೇಕರ್ ನೀಡಿದ್ದ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕೊಂಡಾಡಿದ್ದರು. ಈಚೆಗೆ ಹಾವೇರಿಯ ಜಾನಪದ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ. ‘ಪದ್ಮಶ್ರೀ ಪ್ರಶಸ್ತಿ’ಗೆ ಆಯ್ಕೆಯಾದ ಜಾನಪದ ಗಾಯಕ ವೆಂಕಪ್ಪ ಸುಗತೇಕರ್ “ದೇವಿ ಆಶೀರ್ವಾದದಿಂದ ಒಳ್ಳೆಯದು ಆಗಿದೆ. ಸೇವಾ ಮಾಡಿದ್ದಕ್ಕೂ ಮನ್ನಣೆ ದೊರೆತಿದೆ. ಗೋಂಧಳಿ ಪದಗಳನ್ನು ಉಳಿಸುವುದಕ್ಕಾಗಿ ಶ್ರಮಿಸುತ್ತಿದ್ದೇನೆ. ಮುಂದಿನ ಪೀಳಿಗೆಗೆ ಹಸ್ತಾಂತರಿಸುವ…

Read More

ಹಾಸನ : ಸಾಹಿತ್ಯ, ಶಿಕ್ಷಣ ಮತ್ತು ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಪರೂಪದ ವ್ಯಕ್ತಿ ಡಾ. ಅರಕಲಗೂಡು ಸೂರ್ಯಪ್ರಕಾಶ್, ಹಾಸನ ಜಿಲ್ಲೆಯ ಅರಕಲಗೂಡಿನವರಾದ ಸೂರ್ಯಪ್ರಕಾಶ್ ಹೆಸರಾಂತ ಪತ್ರಕರ್ತರು. ಪ್ರಸಾರ ಭಾರತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ಮೈಸೂರು ವಿವಿಯಲ್ಲಿ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ತುಮಕೂರು ವಿವಿಯಲ್ಲಿ ಡಿ.ಲಿಟ್ ಪಡೆದ ಸೂರ್ಯಪ್ರಕಾಶ್ ಝೀ ನ್ಯೂಸ್, ದಿ ಪಯೋನಿರ್, ಏಷ್ಯಾ ಟೈಮ್ಸ್, ಇಂಡಿಯನ್ ಎಕ್ಸ್ ಪ್ರೆಸ್ ಮುಂತಾದ ಪತ್ರಿಕೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದವರು. ರಾಜಕೀಯ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅಪಾರ ಜ್ಞಾನವುಳ್ಳವರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಅಂಕಣಕಾರರಾಗಿಯೂ ಬಲು ಜನಪ್ರಿಯರು.

Read More

ಬೆಂಗಳೂರು : ಪಿಟೀಲು ವಾದಕ, ಸಂಗೀತಗಾರ, ಸಂಗೀತ ನಿರ್ದೇಶಕ ಲಕ್ಷ್ಮೀನಾರಾಯಣ ಸುಬ್ರಮಣಿಯಂ ವಾದ್ಯಗೋಷ್ಠಿಗಳಲ್ಲಿ ನುಡಿಸುವ ಕಲಾಭಿಜ್ಞ, ಕಲಾ ಕೌಶಲದ ವಿಧಾನಗಳಿಗೆ ಪ್ರಸಿದ್ಧರು. ಕರ್ನಾಟಕ ಸಂಗೀತ ಮತ್ತು ಪಾಶ್ಚಿಮಾತ್ಯ ಸಂಗೀತಗಳೆರಡರಲ್ಲೂ ತಮ್ಮದೇ ಆದ ಛಾಪು ಮುಡಿಸಿರುವ ಇವರು ಜಾಗತಿಕ ಸಂಗೀತ ವಲಯದಲ್ಲಿ ವೈಶಿಷ್ಯ ಪೂರ್ಣ ಸಂಯೋಜನೆಗಳನ್ನು ಮಾಡಿದ ಕೀರ್ತಿಗೂ ಪಾತ್ರರಾಗಿದ್ದಾರೆ. ಸ.ಪ. ಶಾಲೆಯ ಮೂಲಕ ಹಲವಾರು ವಿದ್ಯಾರ್ಥಿಗಳನ್ನು ತಯಾರು ಮಾಡಿರುವ ಇವರು ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ನ ಸ್ಥಾಪಕರು. ವಿ. ಲಕ್ಷ್ಮೀನಾರಾಯಣ – ಸೀತಾಲಕ್ಷ್ಮಿ ದಂಪತಿಯ ಮಗನಾಗಿ 1947ರ ಜುಲೈ 23ರಂದು ಜನಿಸಿದರು. ತಂದೆಯಿಂದಲೇ ಪಿಟೀಲು ಕಲಿತು ಆರನೇ ವಯಸ್ಸಿಗೇ ಕಛೇರಿ ನೀಡಿದ್ದರು. ಓದಿ ಎಂ.ಬಿ.ಬಿ.ಎಸ್. ಮಾಡಿದರೂ ಸಂಗೀತವನ್ನೇ ವೃತ್ತಿಯನ್ನಾಗಿ ಮಾಡಿಕೊಂಡು, ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕ್ಯಾಲಿಫೋರ್ನಿಯಾ ಕಲಾ ಸಂಸ್ಥೆಯಿಂದ ಪದವಿ ಪಡೆದುಕೊಂಡರು. 200 ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಐತಿಹಾಸಿಕ ಅಲ್ಬಂಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಮೀರಾ ನಾಯರ್ ನಿರ್ದೇಶನದ ‘ಸಲಾಮ್ ಬಾಂಬೆ’ ಮತ್ತು ‘ಮಿಸಿಸಿಪ್ಪಿ ಮಸಾಲಾ’ ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದರು.…

Read More

ಲಾಸ್ ಏಂಜಲೀಸ್‌ : ಭಾರತೀಯ ಅಮೆರಿಕನ್ ಗಾಯಕಿ ಮತ್ತು ಉದ್ಯಮಿ ಚಂದ್ರಿಕಾ ಟಂಡನ್ ಇವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ‘ತ್ರಿವೇಣಿ’ ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ. ಇದರಲ್ಲಿ 7 ಹಾಡುಗಳಿದ್ದು ಭಾರತದ ಪವಿತ್ರ ನದಿಗಳಾದ ಯಮುನಾ, ಗಂಗಾ, ಸರಸ್ವತಿಯ ಸಂಸ್ಕೃತಿ ಪರಿಚಯಿಸುತ್ತದೆ . ಮೊಲತಃ ಚೆನ್ನೈ ನವರಾದ ಟಂಡನ್ ಪೆಪ್ಸಿಕೋದ ಮಾಜಿ ಸಿ. ಇ. ಒ. ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಚಂದ್ರಿಕಾ ಈ ಪ್ರಶಸ್ತಿ ಗೆದ್ದಿದ್ದಾರೆ.ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ…

Read More

ಬೆಂಗಳೂರು : ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75ರ ಸಂಭ್ರಮ ಸಮಿತಿ ಇದರ ವತಿಯಿಂದ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಇದರ ಸಹಯೋಗದೊಂದಿಗೆ ‘ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ 75′ ಅಭಿನಂದನೆ ಸಮಾರಂಭವನ್ನು ದಿನಾಂಕ 08 ಫೆಬ್ರವರಿ 2025ರಂದು ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ಕುಮಾರಪಾರ್ಕ್ ಪೂರ್ವ, ಗಾಂಧಿಭವನ, 2ನೆಯ ಮಹಡಿ, ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಿರಿಯ ಕವಿಗಳಾದ ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಇವರ ಅಧ್ಯಕ್ಷತೆಯಲ್ಲಿ ಸಂಶೋಧಕ ಹಾಗೂ ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಹಂಪ ನಾಗರಾಜಯ್ಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಅಮೃತ ಕಥಾನಕ’ ಅಭಿನಂದನಾ ಗ್ರಂಥವನ್ನು ಪ್ರಸಿದ್ಧ ಸಾಹಿತಿ ಮತ್ತು ಸಂಸ್ಕೃತಿ ಚಿಂತಕರಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಇವರು, ‘ಸ್ನೇಹಮೇರು’ ಸ್ಮರಣ ಸಂಚಿಕೆಯನ್ನು ಕರ್ನಾಟಕ ಗಾಂಧಿ ಸ್ಮಾರಕನಿಧಿ ಇದರ ಅಧ್ಯಕ್ಷರಾದ ನಾಡೋಜ ಡಾ. ವೊಡೇ ಪಿ. ಕೃಷ್ಣ ಇವರು ಹಾಗೂ ‘ತೋರಿದ ದಾರಿ’ ಸಾಕ್ಷ್ಯಚಿತ್ರವನ್ನು ವಿದ್ವಾಂಸರು ಹಾಗೂ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿಗಳಾದ…

Read More

ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ದಿನಾಂಕ 01 ಫೆಬ್ರವರಿ 2025ರಂದು ಶ್ರೀ ಆಂಜನೇಯ ಮಂತ್ರಾಲಯದಲ್ಲಿ ಪಾರ್ತಿಸುಬ್ಬ ವಿರಚಿತ ‘ಸುಗ್ರೀವ ಸಖ್ಯ’ ಆಖ್ಯಾನ ನಡೆಯಿತು. ಹಿಮ್ಮೇಳದಲ್ಲಿ ಯಲ್.ಯನ್. ಭಟ್, ಮುರಳೀಧರ ಕಲ್ಲೂರಾಯ, ಅಚ್ಯುತ ಪಾಂಗಣ್ಣಾಯ, ಕುಮಾರಿ ಶರಣ್ಯ ನೆತ್ರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀ ರಾಮ (ಗುಡ್ಡಪ್ಪ ಬಲ್ಯ), ಸುಗ್ರೀವ (ಮಾಂಬಾಡಿ ವೇಣುಗೋಪಾಲ ಭಟ್). ಹನೂಮಂತ‌ (ಹರಿಣಾಕ್ಷಿ ಜೆ. ಶೆಟ್ಟಿ ಮತ್ತು ಭಾರತಿ ರೈ ಅರಿಯಡ್ಕ) ಸಹಕರಿಸಿದರು. ಅಧ್ಯಕ್ಷ ಭಾಸ್ಕರ್ ಬಾರ್ಯ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಟಿ. ರಂಗನಾಥ ರಾವ್ ವಂದಿಸಿದರು. ಉಪಾಧ್ಯಕ್ಷ ಗುಡ್ಡಪ್ಪ ಬಲ್ಯ ಪ್ರಾಯೋಜಿಸಿದ್ದರು.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ 21 ಮತ್ತು 22 ಫೆಬ್ರವರಿ 2025ರಂದು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿರುವ ಮಂಗಳ ಸಭಾಂಗಣದಲ್ಲಿ ನಡೆಯಲಿದೆ . ಡಾ.ಪ್ರಭಾಕರ ಶಿಶಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಮತ್ತು ಇತರ ಮಳಿಗೆಗಳಿಗೆ ಅವಕಾಶವಿದೆ. ಮಳಿಗೆಗಳ ವ್ಯವಸ್ಥೆಗೆ ದಿನಾಂಕ 05 ಫೆಬ್ರವರಿ 2025ರ ಒಳಗಾಗಿ ಪುಸ್ತಕ ಮಳಿಗೆ ಮತ್ತು ಇತರೆ ಮಾರಾಟ ಮಳಿಗೆ ಸಮಿತಿ ಸಂಚಾಲಕ ತ್ಯಾಗಂ ಹರೇಕಳ 8904842624, ಪ್ರಸಾದ ಎಸ್. 8317444793 ಸಂಪರ್ಕಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ.ಶ್ರೀ ನಾಥ ತಿಳಿಸಿದ್ದಾರೆ.

Read More