Subscribe to Updates
Get the latest creative news from FooBar about art, design and business.
Author: roovari
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕೋಶಾಧ್ಯಕ್ಷರಾಗಿ ಕೆನರಾ ಬ್ಯಾಂಕ್ ಇದರ ಡಿವಿಜನಲ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಹಾಗೂ ಹಣಕಾಸು, ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಪಡೆದಿರುವ ಡಿ. ಆರ್. ವಿಜಯ ಕುಮಾರ್ ದಿನಾಂಕ 09 ಜುಲೈ 2025 ರಂದು ಅಧಿಕಾರವನ್ನು ಸ್ವೀಕರಿಸಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿವಿಧ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳಲ್ಲಿ 38 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ಇವರು ನಿವೃತ್ತಿಯ ನಂತರ ವಕೀಲಿ ವೃತ್ತಿಯನ್ನೂ ಕೂಡ ಕೈಗೊಂಡಿದ್ದವರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಅಪಾರ ಒಲವನ್ನು ಹೊಂದಿರುವ ಇವರು ಈ ಕುರಿತು ಅಧ್ಯಯನವನ್ನೂ ನಡೆಸಿರುವವರು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೂಡ ಇವರು ಸಕ್ರಿಯರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9(3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾದ ಅಧಿಕಾರದನ್ವಯ ಈ ನಾಮ ನಿರ್ದೇಶನವನ್ನು ಮಾಡಲಾಗಿದೆ. ವಿಜಯಕುಮಾರ್ ಅವರ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತ ಪ್ರೀತಿ, ಆಡಳಿತಾತ್ಮಕ ಮತ್ತು ಕಾನೂನು ಕ್ಷೇತ್ರದಲ್ಲಿರುವ ಅಪಾರ ತಿಳುವಳಿಕೆ ಕನ್ನಡ ಸಾಹಿತ್ಯ…
ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಶಿಕ್ಷಣ, ಸಂಶೋಧನೆ, ಸಂಘಟನಾ ಕಾರ್ಯದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಿರಿಯರ ಮಾಹಿತಿ ಕೋಶ ಸಿದ್ದಪಡಿಸಲು ನಿರ್ಧರಿಸಿದ್ದು, ಈ ಬಗ್ಗೆ ಮಾಹಿತಿದಾರರಾಗಲು ಆಸಕ್ತರಾಗಿರುವವರು, ಅಕಾಡೆಮಿಗೆ ದಿನಾಂಕ 21 ಜುಲೈ 2025ರ ಮೊದಲು ಅರ್ಜಿ ಸಲ್ಲಿಸಲು ಕೋರಲಾಗಿದೆ. ದಿನಾಂಕ 24 ಜುಲೈ 2025ರಂದು ಅಪರಾಹ್ನ ಘಂಟೆ 4.00ಕ್ಕೆ ಅಕಾಡೆಮಿ ಕಛೇರಿಯಲ್ಲಿ ಮಾಹಿತಿ ಸಭೆಯನ್ನು ಕರೆಯಲಾಗಿದೆ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಲಾಲ್ಭಾಗ್, ಮಂಗಳೂರು 575003, ದೂರವಾಣಿ ಸಂಖ್ಯೆ: 0824-2453167, 8792934290ಗೆ ಸಂಪರ್ಕಿಸಬಹುದು.
ಬೆಂಗಳೂರು : ಕ. ವಿ. ಪ್ರ. ನಿ. ನಿ., ಲೆಕ್ಕಾಧಿಕಾರಿಗಳ ಸಂಘ ಬೆಂಗಳೂರು ಆಯೋಜಿಸುವ ‘ಯಕ್ಷ ನೃತ್ಯ -ಸಂವಾದ ಸನ್ಮಾನ’ ಕಾರ್ಯಕ್ರಮವು ದಿನಾಂಕ 12 ಜುಲೈ 2025ರ ಎರಡನೆಯ ಶನಿವಾರ ಬೆಳಗ್ಗೆ ಘಂಟೆ 10.00ರಿಂದ ಬೆಂಗಳೂರಿನ ಆನಂದ ರಾವ್ ವೃತ್ತದ ಬಳಿಯಿರುವ ಕ. ವಿ. ಪ್ರ. ನಿ. ನಿ. ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ನಡೆಯಲಿದೆ. ಅಂಕಣಕಾರರು ಹಾಗೂ ಲೇಖಕರಾದ ಶ್ರೀ ರಾಜು ಅಡಕಳ್ಳಿ ಮತ್ತು ಯಕ್ಷಗಾನ ಪ್ರಸಂಗಕರ್ತರು ಹಾಗೂ ಕೆ. ಪಿ. ಟಿ. ಸಿ. ಎಲ್ ಇದರ ನಿವೃತ್ತ ಇಂಜಿನಿಯರ್ ಆಗಿರುವ ಶ್ರೀ ಜಿ. ಮೃತ್ಯುಂಜಯ ಇವರ ಘನ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಸಾಹಿತ್ಯದ, ವಿ. ಉಮಾಕಾಂತ ಭಟ್ಟ ಕರೇಕೈ ನಿರ್ದೇಶನದಲ್ಲಿ ಕು. ತುಳಸಿ ಹೆಗಡೆ ಪ್ರಸ್ತುತಪಡಿಸುವ ‘ಯಕ್ಷ ನೃತ್ಯ ವಿಶ್ವಾಭಿಗಮನಮ್’ ಯಕ್ಷಗಾನ ನೃತ್ಯ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಾಹಿತಿಗಳು, ಯಕ್ಷಗಾನ ಪ್ರಸಂಗಕರ್ತರು ಹಾಗೂ ಕೆ. ಪಿ. ಟಿ. ಸಿ. ಎಲ್. ಇದರ…
ಕೊಪ್ಪಳ : ವಿಸ್ತಾರ್ ರಂಗಶಾಲೆ ಕೊಪ್ಪಳ ಇದರ 2025-26 ನೇ ಸಾಲಿನ ಒಂದು ವರ್ಷದ ನಾಟಕ ಡಿಪ್ಲೋಮ ಕೋರ್ಸ್ ಆರಂಭವಾಗಲಿದ್ದು, ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ತರಗತಿಗಳು ಆಗಸ್ಟ್ 2025 ರಿಂದ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು 30 ಜುಲೈ 2025 ಕೊನೆಯ ದಿನಾಂಕವಾಗಿದೆ. ಮೊದಲು ಬಂದವರಿಗೆ ಆದ್ಯತೆ. ಅರ್ಹತೆಗಳು: ದ್ವಿತೀಯ PUC ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 18 ವರ್ಷದಿಂದ 32 ವರ್ಷದೊಳಗಿನವರಿಗೆ ಅವಕಾಶ. ರಂಗಭೂಮಿ ಆಸಕ್ತಿವುಳ್ಳವರಾಗಿರಬೇಕು. ಷರತ್ತು ಮತ್ತು ನಿಯಮಗಳಿಗೆ ಬದ್ಧರಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 9535383161, 70269 72770, 97411 35933 ವಿಳಾಸ: ವಿಸ್ತಾರ್ ರಂಗಶಾಲೆ, ವಿಸ್ತಾರ್ – ಬಾಂಧವಿ ಹೊನ್ನುನಸಿ ಕ್ರಾಸ್, ಹಿರೇ ಬೀಡಿನಾಳ್ ಪೋಸ್ಟ್, ಕೂಕನೂರು, ಕೊಪ್ಪಳ- 583230.
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತ ಎಸ್.ಎನ್.ಪಿ.ಯು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಜನಪದದೊಂದಿಗೆ ಜೀವನ ಮೌಲ್ಯ ಸಂಗೀತ ಕಾರ್ಯಾಗಾರ’ ದಿನಾಂಕ 05 ಜುಲೈ 2025ರ ಶನಿವಾರದಂದು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಮಾತನಾಡಿ “ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಬದುಕಿನ ವಿದ್ಯೆ ಅತ್ಯವಶ್ಯಕ. ಜನಪದ ಹಾಡುಗಳೊಂದಿಗೆ ಜೀವನದ ಸಾರವನ್ನು ಯುವ ಜನಾಂಗಕ್ಕೆ ನೀಡುವುದರಿಂದ ಅವರಿಗೆ ಬದುಕಿನ ಅರ್ಧ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ. ಜೀವನ ಕಟ್ಟಿಕೊಳ್ಳಲು ಬೇಕಾದ ವಿಚಾರಗಳನ್ನು ಹಾಡಿನ ಮೂಲಕ ತಿಳಿಸಿದಾಗ ವಿದ್ಯಾರ್ಥಿಗಳ ಮನಸಿನಲ್ಲಿ ಅವುಗಳು ಅಚ್ಚಳಿಯದೆ ನಿಲ್ಲುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಬದುಕಿಗೆ ತಿರುವನ್ನು ಒದಗಿಸುತ್ತದೆ. “ಹಾಡಿನೊಂದಿಗೆ ತಿಳಿಸುವ ಜೀವನ ಕೌಶಲ್ಯದ ಜ್ಞಾನವು ಮಕ್ಕಳ ಭವಿಷ್ಯದ ಉನ್ನತಿಗೆ ಸೋಪಾನವಾಗುತ್ತದೆ” ಎಂದರು. ಕಾಲೇಜಿನ ಪ್ರಾಚಾರ್ಯರಾದ ಸೋಮಶೇಖರ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಕಲಾವಿದರಾದ ನಾದ ಮಣಿ ನಾಲ್ಕೂರು, ಸಾಂಸ್ಕೃತಿಕ ನಂಘದ ನಂಚಾಲಕರಾದ ರೇಖಾರಾಣಿ ಸೋಮಶೇಖರ್, ಪ್ರೌಢಶಾಲಾ ಮುಖ್ಯಶಿಕ್ಷಕರಾದ…
ಬೆಂಗಳೂರು : ಬ್ಯಾಂಗಲೋರ್ ಪ್ಲೇಯರ್ಸ್ ಪ್ರಸ್ತುತ ಪಡಿಸುವ ನೂತನ ನಾಟಕ ‘ಲಕ್ಷ್ಮೀ ಕಟಾಕ್ಷ’ ಇದರ ಮೊದಲ ಪ್ರದರ್ಶನವು ದಿನಾಂಕ 13 ಜುಲೈ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ. ಕಿಶೋರ್ ಕುಮಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕಕ್ಕೆ ಸಹಾಯಕ ನಿರ್ದೇಶಕರಾಗಿ ಗಿರೀಶ್ ಹಾಗೂ ಹೃತಿಕ್, ಸಂಗೀತದಲ್ಲಿ ಸುಭಾಸ್ ಹಾಗೂ ಶರತ್, ರಂಗ ಸಜ್ಜಿಕೆಯಲ್ಲಿ ತೇಜಸ್, ವೇಷ ಭೂಷಣದಲ್ಲಿ ಉಲ್ಲಾಸ್, ಬೆಳಕಿನ ಸಂಯೋಜನೆಯಲ್ಲಿ ಶ್ರೀನಿಧಿ, ಹಾಗೂ ಪ್ರಚಾರದಲ್ಲಿ ಯಶವಂತ್ ಸಹಕರಿಸಲಿದ್ದಾರೆ. ‘ಲಕ್ಷ್ಮೀ ಕಟಾಕ್ಷ’ : ಪ್ರತಿಯೊಬ್ಬ ಮನುಷ್ಯನು ಜೀವನವೆಂಬ ಪಥದಲ್ಲಿ, ಸಂಬಂಧಗಳ ಹಳಿಯಲ್ಲಿ ನಡೆಯುತ್ತಿದ್ದಾನೆ. ಆ ನಡೆಗೆ ಒಂದು ಉದ್ದೇಶ, ಆ ಉದ್ದೇಶದ ಹಿಂದೆ ಹಲವಾರು ಲೆಕ್ಕಾಚಾರಗಳು, ಹಾಗಿದ್ದರೆ ಜೀವನ ಲೆಕ್ಕಾಚಾರವೇ? ಹಾಗಿದ್ದಲ್ಲಿ ಸಂಬಂಧಗಳು? ಲೆಕ್ಕಾಚಾರದ ಉದ್ದೇಶದಿಂದ ಸಂಬಂಧಗಳು ಬಂಧಿತವಾಯಿತೆ? ಗಂಡ – ಹೆಂಡ್ತಿ, ಪ್ರೀತಿ – ಕಾಮ ಗುರು – ಶಿಷ್ಯ, ವಿದ್ಯೆ – ವ್ಯಾಪಾರ ಹೆತ್ತವರು – ಮಕ್ಕಳು, ಮಮತೆ – ತಾತ್ಸಾರ ಒಡಹುಟ್ಟಿದವರು – ಒಡನಾಡಿಗಳು,…
ಮಂಗಳೂರು : ಯಕ್ಷ ಕುಸುಮ ಚಾರಿಟೇಬಲ್ ಟ್ರಸ್ಟ್ (ರಿ.) ಬಳ್ಕೂರು ಇದರ ಆಶ್ರಯದಲ್ಲಿ ಅಂಚೆ ಅಧೀಕ್ಷಕರಾದ ಶ್ರೀನಾಥ್ ಬಸ್ರೂರು ಇವರ ಅಂಕಣ ಬರಹಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 10 ಜುಲೈ 2025ರಂದು ಬೆಳಿಗ್ಗೆ 10-45 ಗಂಟೆಗೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ ಇವರು ಅಧ್ಯಕ್ಷತೆ ವಹಿಸಲಿದ್ದು, ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ.) ಇದರ ಅಧ್ಯಕ್ಷರಾದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಮಂಗಳೂರು : ಸಂಸ್ಕಾರ ಭಾರತೀಯು ಕಳೆದ 21 ವರ್ಷಗಳಿಂದ ಗುರುಪೂರ್ಣಿಮೆಯಂದು ನಾಡಿನ ಹಲವಾರು ಹಿರಿಯ ಕಲಾವಿದರು. ಕಲಾ ಸಂಘಟಕರು, ಸಮಾಜ ಸೇವಕರನ್ನು ಗುರುತಿಸಿ, ಗೌರವಿಸುತ್ತಾ ಬಂದಿದೆ. ಪ್ರಸ್ತುತ ವರ್ಷ ದಿನಾಂಕ 10 ಜುಲೈ 2025ನೇ ಗುರುವಾರ ಐವರು ಹಿರಿಯ ಕಲಾ ಸಾಧಕರನ್ನು ಅವರ ವಿವಾಸಕ್ಕೆ ತೆರಳಿ ಗುರುನಮನ ಸಲ್ಲಿಸಲಾಗುವುದು. ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅಜ್ಞಾತ ಕಲಾವಿದರು, ಶ್ರೇಷ್ಠ ಕಲಾ ಗುರುಗಳನ್ನು ಗುರುತಿಸಿ, ಸತ್ಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಗುರುನಮನ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಜನ ಪ್ರತಿನಿಧಿಗಳು, ಕಲಾಸಾಧಕರು ಮತ್ತು ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ. ನಿಟ್ಟೆ ಶಿಕ್ಷಣ ಸಂಸ್ಥೆಯ ವತಿಯಿಂದ ನಗದು ಪುರಸ್ಕಾರ ಹಾಗೂ ಸನ್ಮಾನ ಪತ್ರ ನೀಡಿ ಗುರುನಮನ ಸಲ್ಲಿಸಲಾಗುವುದು. ಸಾಧಕರ ವಿವರ : 1. ತುಳು ವಿದ್ವಾಂಸರಾದ ಶ್ರೀಮತಿ ಭವಾನಿ – ಜಾನಪದ (88 ವರ್ಷ) : ಸಾಂಪ್ರದಾಯಿಕವಾಗಿ ನೇಮ ಕಟ್ಟುವ ಪರಂಪರೆಯಿಂದ ಬಂದಿದ್ದು, ದೈವದ ಪಾಡ್ಡನದಲ್ಲಿ ವಿಶೇಷ ಅನುಭವವನ್ನು ಹೊಂದಿ, ಎಲ್ಲರ…
ಮೂಡುಬಿದಿರೆ : ಆಮ್ನಾಯಃ – ಯಕ್ಷಸಂಸ್ಕೃತಿ ಬಳಗ ಗಾಳಿಮನೆ ಇದರ ವತಿಯಿಂದ ಪಾಕ್ಷಿಕ ತಾಳಮದ್ದಲೆ ಸರಣಿ – ವಿಶ್ವಾವಸು 5127 ದಿನಾಂಕ 10 ಜುಲೈ 2025ರಂದು ಸಂಜೆ 6-00 ಗಂಟೆಗೆ ಮೂಡುಬಿದಿರೆಯ ಶ್ರೀಜೈನ ಮಠದ ಭಟ್ಟಾರಕ ಸಭಾಂಗಣದಲ್ಲಿ ನಡೆಯಲಿದೆ. ಕವಿ ಪಾರ್ತಿಸುಬ್ಬ ವಿರಚಿತ ‘ಶ್ರೀರಾಮಪಟ್ಟಾಭಿಷೇಕ’ ಎಂಬ ಆಖ್ಯಾನದ ತಾಳಮದ್ದಲೆಯಲ್ಲಿ ಹಿಮ್ಮೇಳದಲ್ಲಿ ಶಿವಪ್ರಸಾದ ಭಟ್ಟ ಕಾಂತಾವರ ಭಾಗವತರಾಗಿ, ಚೆಂಡೆ ಮದ್ದಳೆಯಲ್ಲಿ ರವಿಪ್ರಸಾದ ಶೆಟ್ಟಿ ಲಾಡಿ, ಪುರುಷೋತ್ತಮ ತುಳುಪುಳೆ, ವಿವಿಜೇಶ ಡಿ. ಭಟ್ಟ ಬೆಳುವಾಯಿ ಮತ್ತು ಪ್ರಮುಖ ತುಳುಪುಳೆ ಹಾಗೂ ಮುಮ್ಮೇಳದಲ್ಲಿ ವಾದಿರಾಜ ಕಲ್ಲೂರಾಯ ಕಿನ್ನಿಕಂಬಳ, ವಿನಾಯಕ ಚಂದ್ರಶೇಖರ ಭಟ್ಟ ಗಾಳಿಮನೆ, ಸದಾಶಿವ ರಾವ್ ನೆಲ್ಲಿಮಾರ್, ಪುರಂದರ ಪುರೋಹಿತ ಮುನಿಯಾಲು ಮತ್ತು ಶಾಲಿನೀ ಪ್ರಸಾದ ಇವರುಗಳು ಸಹಕರಿಸಲಿದ್ದಾರೆ.
ಉಡುಪಿ : ತುಳುಕೂಟ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತುಳುನಾಡ ಧ್ವನಿ ಸಹಯೋಗದೊಂದಿಗೆ ‘ಮದರೆಂಗಿದ ರಂಗ್’ ಕಾರ್ಯಕ್ರಮವು ದಿನಾಂಕ 05 ಜುಲೈ 2025ರಂದು ಉಡುಪಿಯ ಜಗನ್ನಾಥ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತುಳುಕೂಟ ಉಡುಪಿ ಇದರ ಅಧ್ಯಕ್ಷರಾದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ “ತುಳುನಾಡಿನ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿ ಉಳಿಯಬೇಕಾದರೆ ಮಾತೃಭಾಷೆ ತುಳುವನ್ನು ಪ್ರತೀ ಮನೆ ಮನೆಯಲ್ಲಿ ಬಳಸಬೇಕು. ಆ ಮೂಲಕ ತುಳುನಾಡಿನ ಪ್ರಾಕೃತಿಕ ಸಂಪತ್ತನ್ನು ಪರಿಚಯಿಸಬೇಕು. ಸಂಸ್ಕಾರಯುತ ಜೀವನಶೈಲಿಯನ್ನು ಮೂಡಿಸಲು ತುಳುಭಾಷೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ “ತುಳುನಾಡ ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಹಿರಿಯರು ಕೆಲಸ ಮಾಡಬೇಕು. ಆ ಮೂಲಕ ಮಕ್ಕಳಲ್ಲಿ ತುಳುಭಾಷೆಯ ಮಹತ್ವ ತಿಳಿಸಬೇಕು” ಎಂದರು ಮಲ್ಪೆ ಕಡಲತೀರದ ಶ್ರೀಜ್ಞಾನಜ್ಯೋತಿ ಭಜನಾ ಮಂದಿರದ ಕಾರ್ಯದರ್ಶಿ ರಾಧಾಕೃಷ್ಣ ಮೆಂಡನ್, ಉದ್ಯಮಿ ಶ್ರುತಿ ಜಿ. ಶೆಣೈ, ಮಹಿಳಾ ಮತ್ತು ಮಕ್ಕಳ ಕಲ್ಯಾಣ…