Author: roovari

ಯಕ್ಷಗಾನವು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ರತ್ನವಾಗಿ ಉಳಿದಿದೆ, ಸಾಂಪ್ರದಾಯಿಕವಾಗಿ ಈ ಪ್ರದರ್ಶನ ಕಲಾ ಪ್ರಕಾರವನ್ನು ಪುರುಷ ಕಲಾವಿದರು ಜೊತೆಗೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅಭ್ಯಾಸ ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಮಹಿಳಾ ಕಲಾವಿದರು ಅದರಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸುತ್ತಿದ್ದಾರೆ ಮತ್ತು ಅವರು ಪ್ರಾಮುಖ್ಯತೆಯನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅನೇಕ ಮಹಿಳಾ ಕಲಾವಿದರು ಈ ಕಲಾ ಪ್ರಕಾರವನ್ನು ಉತ್ಸಾಹದಿಂದ, ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಕುಂದಾಪುರದಲ್ಲಿ ಹೇಗೆ ಅನುಸರಿಸುತ್ತಿದ್ದಾರೆ ಎಂಬುದನ್ನು ನೋಡುವುದು ಸಾಕಷ್ಟು ಉತ್ತೇಜನಕಾರಿಯಾಗಿದೆ. ಹೀಗೆ ಯಕ್ಷಗಾನ ರಂಗದಲ್ಲಿ ಧೀಶಕ್ತಿ ಮಹಿಳಾ ಯಕ್ಷಗಾನ ತಂಡವನ್ನು ಪುತ್ತೂರಿನಲ್ಲಿ ಕಟ್ಟಿ ಯಕ್ಷಗಾನದ ಕಂಪನ್ನು ಪಸರಿಸುತ್ತಿರುವ ಕಲಾವಿದೆ ಪದ್ಮಾ ಕೆ ಆರ್ ಆಚಾರ್ಯ. ಗಡಿನಾಡ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇವರ ಹುಟ್ಟೂರು. ಅಲ್ಲಿರುವ ಶ್ರೀ ಎಡನೀರು ಮಠವು, ಪ್ರಸಿದ್ಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿದೆ. ಯಕ್ಷಗಾನ, ಕಲೆ, ಸಾಹಿತ್ಯ ಚಟುವಟಿಕೆಗಳ ಆಶ್ರಯ ತಾಣ. ಶ್ರೀ ಮಠದ ಮ್ಯಾನೇಜರ್ ಹುದ್ದೆಯನ್ನು ಬಹು ದೀರ್ಘ ಕಾಲ ನಿರ್ವಹಿಸಿದ ಶ್ರೀ ರಾಮಕೃಷ್ಣರಾವ್, ಎಡನೀರು…

Read More

ದಲಿತ-ಬಂಡಾಯ ಸಾಹಿತ್ಯವು ಹೊಸ ದಿಕ್ಕಿನತ್ತ ಹೊರಳಿದಾಗ ಹಸಿಹಸಿ ಅನುಭವ, ಪೂರ್ವ ನಿಯೋಜಿತ ಮಾದರಿ, ಏಕರೀತಿಯ ಘಟನಾವಳಿ, ಧ್ವನಿರಹಿತ ಭಾಷೆ, ವರದಿಗಾರಿಕೆಯ ಶೈಲಿ ಮತ್ತು ಸುಲಭ ಪರಿಹಾರಗಳನ್ನು ಮೀರಿ ಬದುಕಿನ ಆಳ ವಿಸ್ತಾರಗಳನ್ನು ಶೋಧಿಸತೊಡಗಿದ ಬರಹಗಾರರ ಪೈಕಿ ಜನಾರ್ದನ ಎರ್ಪಕಟ್ಟೆಯವರೂ ಒಬ್ಬರು. ತಾವು ಕಂಡು ಅನುಭವಿಸಿದ ಸಂಗತಿಗಳನ್ನು ಚಿತ್ರಿಸುವ ಪ್ರಾಮಾಣಿಕತೆ, ಹಳ್ಳಿಯ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಗಮನಿಸುವ ಚಿಕಿತ್ಸಕ ದೃಷ್ಟಿ, ತಮ್ಮ ಸಮುದಾಯದವರ ಅಂತರಂಗವನ್ನು ಹೊಕ್ಕು ಅವರ ನೋವು ನಲಿವುಗಳನ್ನು ಬಿಡಿಸುವ ಕಾಳಜಿ, ಒಳಗೆ ದುರ್ಬಲವಾಗಿದ್ದುಕೊಂಡು ಹೊರಗೆ ಕ್ರೂರವಾಗಿರುವ ಊಳಿಗಮಾನ್ಯ ಪದ್ಧತಿಯ ಒಳ ಹೊರಗುಗಳ ಅವಲೋಕನ, ಜನಾಂಗದ ಮೌಢ್ಯವನ್ನು ನಿವಾರಿಸುವ ಹಂಬಲಗಳನ್ನು ಒಳಗೊಂಡ ಕತೆಗಳು ಇಂದಿಗೂ ಅರ್ಥಪೂರ್ಣವೆನಿಸುತ್ತವೆ. ಇತರ ದಲಿತ ಬರಹಗಾರರಿಂದ ಭಿನ್ನವಾಗಿ ನಿಲ್ಲುವ ಎರ್ಪಕಟ್ಟೆಯವರ ಕತೆಗಳಲ್ಲಿ ದಲಿತರ ಸಾಂಸ್ಕೃತಿಕ ಲೋಕವು ಹೆಪ್ಪುಗಟ್ಟಿದೆ. ತುಳುನಾಡಿನ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಪ್ರಚಾರಪ್ರೀತಿಯ ದಾಳವಾಗಿ ಬದಲಾಗುವ ಬಗೆಗಿನ ವಿಷಾದವು ‘ಆಕ್ರಮಣ’ ಕತೆಯಲ್ಲಿದೆ. ಆಚಾರಗಳ ಮೇಲಿನ ಶ್ರದ್ಧೆ ಭಕ್ತಿಗಳು ವ್ಯಾವಹಾರಿಕತೆಯೊಂದಿಗೆ ಮುಖಾಮುಖಿಯಾಗುವಾಗ ಬೊಗ್ಗುವಿನ ಮಾನಸಿಕ ತುಮುಲವು ಭಾವ…

Read More

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ನೆಲೆಸಿದ್ದ ಕರ್ನಾಟಕದ ಖ್ಯಾತ ಇತಿಹಾಸ ತಜ್ಞ, ಕೆಳದಿ ಸಂಸ್ಥಾನ ಸೇರಿದಂತೆ ಹಲವಾರು ವಿಷಯಗಳಲ್ಲಿ ನಿಖರವಾಗಿ ಮಾತನಾಡುತ್ತಿದ್ದ ಕೆಳದಿ ಗುಂಡಾ ಜೋಯಿಸರು ದಿನಾಂಕ 02-06-2024ರಂದು ನಿಧನರಾಗಿದ್ದಾರೆ. ಪ್ರಖ್ಯಾತ ವಿದ್ವಾಂಸರೂ, ಸಂಶೋಧಕರೂ ಆಗಿ ಮಹತ್ವದ ಸಾಧನೆ ಮಾಡಿ ಹೆಸರಾಗಿದ್ದ, ಕೆಳದಿ ಸಂಸ್ಥಾನದ ಬಗ್ಗೆ ವಿಶಿಷ್ಟ ಸಂಶೋಧನೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದ ಕೆಳದಿ ಗುಂಡಾ ಜೋಯಿಸರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ತೀವ್ರ ಸಂತಾಪಗಳನ್ನು ಸೂಚಿಸಿದ್ದಾರೆ. ಹಿರಿಯ ಸಂಶೋಧಕರು ಮತ್ತು ಕೆಳದಿ ಇತಿಹಾಸ – ಹಸ್ತಪ್ರತಿ ವಿದ್ವಾಂಸರೂ ಆಗಿದ್ದ ಅವರು ತಮ್ಮ 60ನೇ ವಯಸ್ಸಿನಲ್ಲಿ ಎಂ.ಎ., ಪಿಎಚ್.ಡಿ. ಮಾಡಿ ಕೆಳದಿ ಸಂಸ್ಥಾನದ ಇತಿಹಾಸವನ್ನು ಆಮೂಲಾಗ್ರ ಅಧ್ಯಯನ ಮಾಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಾಳೆಗರಿ ಸಂಗ್ರಹ ಮತ್ತು ಅಧ್ಯಯನ ನಡೆಯಲು ಅವರ ಕೊಡುಗೆ ಬಹಳ ಮಹತ್ವದ್ದಾಗಿತ್ತು. ಕೆಳದಿಯಲ್ಲಿ ತಮ್ಮ ಮನೆಯಲ್ಲೇ ಇದ್ದ ಸಂಸ್ಥಾನದ ಪ್ರಾಚೀನ ಹಸ್ತಪ್ರತಿಗಳು ಮತ್ತು ಪ್ರಾಚ್ಯ ವಸ್ತುಗಳನ್ನು ಸಂರಕ್ಷಿಸಲು…

Read More

ಮೂಡುಬಿದಿರೆ : 2023ನೇ ಸಾಲಿನ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ‘ಶಿವರಾಮ ಕಾರಂತ ಪುರಸ್ಕಾರ’ಗಳ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮೂಡುಬಿದಿರೆ ಕನ್ನಡ ಭವನದ ಮಹಾಕವಿ ರತ್ನಾಕರ ವರ್ಣಿ ವೇದಿಕೆಯಲ್ಲಿ ದಿನಾಂಕ 29-05-2024ರಂದು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಶ ತೋಳ್ಪಾಡಿಯವರು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ “ಬಹು ವಿರಳವಾದ ವ್ಯಕ್ತಿತ್ವವನ್ನು ಹೊಂದಿದ್ದ ಶಿವರಾಮ ಕಾರಂತರು ತಮಗೆ ಅನಿಸಿದ್ದನ್ನು, ಮನಸ್ಸಿಗೆ ಬಂದದನ್ನು ನೇರವಾಗಿ ಹೇಳುತ್ತಿದ್ದರಲ್ಲದೆ ವಿಮರ್ಶೆ ಮಾಡಿ ಜೀವನ ಮಾಡು ಎಂಬ ವಿಚಾರವನ್ನು ಬಿಟ್ಟು ಹೋದವರು” ಎಂದು ಹೇಳಿದರು. ನಾಡು ಕಂಡ ಚಿಂತನಾಶೀಲ ಲೇಖಕರಾಗಿದ್ದ ಡಾ. ಶಿವರಾಮ ಕಾರಂತರ ಹೆಸರಿನಲ್ಲಿ ‘ಶಿವರಾಮ ಕಾರಂತ ಪ್ರತಿಷ್ಠಾನ’ವು ಪ್ರತಿವರ್ಷವೂ ನೀಡುತ್ತಾ ಬಂದಿರುವ ‘ಶಿವರಾಮ ಕಾರಂತ ಪ್ರಶಸ್ತಿ’ಗಳನ್ನು ಖ್ಯಾತ ಕವಿ, ಬರಹಗಾರ ಬೆಂಗಳೂರಿನ ಡಾ. ಚಿನ್ನಸ್ವಾಮಿ ಮೂಡ್ನಾಕೂಡು ಇವರಿಗೆ, ಖ್ಯಾತ ಜಾನಪದ ವಿದ್ವಾಂಸ, ಸೃಜನಶೀಲ ಲೇಖಕ ಮೈಸೂರಿನ ಪ್ರೊಫೆಸರ್ ಕೃಷ್ಣಮೂರ್ತಿ ಹನೂರ ಇವರಿಗೆ, ಕನ್ನಡದ ಕೀಲಿಮಣೆ ವಿನ್ಯಾಸ ಸಂಶೋಧಿಸಿ ಕನ್ನಡ ಭಾಷೆಗೆ ವಿಶಿಷ್ಟ ಕೊಡುಗೆ…

Read More

ಉಡುಪಿ : ಶ್ರೀ ಭಗವತೀ ಯಕ್ಷಕಲಾ ಬಳಗ ಉಡುಪಿ ಪುತ್ತೂರು ಇದರ ವತಿಯಿಂದ ತೆಂಕುತಿಟ್ಟು ಯಕ್ಷಗಾನ ಹೆಜ್ಜೆಗಾರಿಕೆಯ ನೂತನ ತರಗತಿಯು ದಿನಾಂಕ 02-06-2024ರ ಭಾನುವಾರದಂದು ಪುತ್ತೂರು ಶ್ರೀ ಭಗವತೀ ದುರ್ಗಾಪರಮೇಶ್ವರೀ ದೇವಳದ ಶ್ರೀ ಭಗವತೀ ಸಭಾಗೃಹದಲ್ಲಿ ಪ್ರಾರಂಭಗೊಂಡಿತು. ಖ್ಯಾತ ಯಕ್ಷಗಾನ ಕಲಾವಿದ ವಾಸುದೇವರಂಗಾ ಭಟ್ ತರಬೇತಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಶ್ರೀ ಭಗವತೀ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ರಕ್ಷಿತ್ ಪಡ್ರೆ, ದೇವಳದ ಆಡಳಿತ ಮೊಕ್ತೇಸರ ಕೃಷ್ಣಮೂರ್ತಿ ಭಟ್, ಕಲಾ ಬಳಗದ ಉಪಾಧ್ಯಕ್ಷ ಸುಬ್ರಹ್ಮಣ್ಯ ಜೋಷಿ, ಸಾಂಸ್ಕೃತಿಕ ಕಾರ್ಯದರ್ಶಿ ರವಿನಂದನ್ ಭಟ್, ಮೋಹನ ಉಡುಪ, ಶ್ರೀ ಭಗವತೀ ಯಕ್ಷಕಲಾ ಬಳಗದ ಬಡಗು ತರಗತಿಯ ಸಂಚಾಲಕಿ ನಿರುಪಮಾ ಪ್ರಮೋದ್, ತೆಂಕು ತಿಟ್ಟು ಗುರು ಪ್ರಣಮ್ಯ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು. ಉಭಯ ತಿಟ್ಟುಗಳಲ್ಲಿ ಹೆಜ್ಜೆಗಾರಿಕೆ ಮತ್ತು ಹಿಮ್ಮೇಳ ತರಗತಿಗಳಲ್ಲಿ ಈಗಾಗಲೇ 130ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ನಿರತರಾಗಿದ್ದಾರೆ. ತೆಂಕುತಿಟ್ಟು…

Read More

ಕಾಸರಗೋಡು : ಕೊಲ್ಲಂಗಾನ ಮೇಳದ ಶ್ರೀ ದೇವರ ತಿರುಗಾಟದ ಸೇವೆಯಾಟದಂದು ಮಧುಕರ ಭಾಗವತ್ ಇವರ ಕಥೆ ಆಧಾರಿತ ಪ್ರಸಂಗಕೃತಿ ರಚನೆಕಾರ ವರ್ಕಾಡಿ ಶ್ರೀ ರವಿ ಅಲೆವೂರಾಯ ವಿರಚಿತ ‘ವೀರ ಶತಕಂಠ’ ಪ್ರಸಂಗದ ಬಿಡುಗಡೆ ಸಮಾರಂಭವು ದಿನಾಂಕ 01-06-2024ರ ಶನಿವಾರದಂದು ನಡೆಯಿತು. ಮೇಳದ ಸಂಚಾಲಕರ ಹಾಗೂ ಶ್ರೀಚಕ್ರ ಆರಾಧಕರಾದ ಬ್ರಹ್ಮಶ್ರೀ ಗಣಾಧಿರಾಜ ತಂತ್ರಿ ಉಪಾಧ್ಯಯ, ಬೆಳ್ಳೂರು ಗಂಗಾಧರ ಬಲ್ಲಾಳ್, ಡಾ. ಮೋಹನ್ ದಾಸ್ ರೈ, ರಾಮ್ ಎಲ್ಲಂಗಳ, ನಿವೃತ್ತ ಉಪನ್ಯಾಸಕ ಪ್ರೊ. ಶ್ರೀನಾಥ್ , ಕೊಲ್ಲಂಗಾನ ಸುಂದರ ಶೆಟ್ಟಿ, ಉದಯ ಮಾಸ್ಟರ್ ಪಡುಮಲೆ, ಕೇಶವ ಕಂಬಾರ್ ಉಪಸ್ಥಿತರಿದ್ದರು.

Read More

ಧಾರವಾಡ : ಭಾರತೀಯ ಸಂಗೀತ ವಿದ್ಯಾಲಯ, ದಾಸಾ ಟ್ರಸ್ಟ್ ಹಾಗೂ ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ದಿನಾಂಕ 02-06-2024ರಂದು ಸೃಜನಾ ರಂಗಮಂದಿರದಲ್ಲಿ ನಡೆದ ‘ಮ್ಯೂಜಿಕ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಖ್ಯಾತ ಸಾರಂಗಿ ವಾದಕ ಉಸ್ತಾದ್ ಫಯಾಜ್ ಖಾನ್ ಅವರಿಗೆ ‘ವಿದುಷಿ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ “ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳಿಗೆ ಸಂಗೀತ ಕಲಿಸಲು ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯ. ಮಕ್ಕಳಿಗೆ ಸಂಗೀತ ಕಲಿಸುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ. ವಿಜ್ಞಾನ, ಗಣಿತದೊಂದಿಗೆ ಮಕ್ಕಳು ಸಂಗೀತವನ್ನೂ ಕಲಿಯುವುದು ಅವಶ್ಯಕ ಎಂಬುದನ್ನು ಶಿಕ್ಷಕರು ಹಾಗೂ ಪಾಲಕರು ಅರಿಯುವುದು ಅವಶ್ಯ. ಮಾನಸಿಕ ನೆಮ್ಮದಿ ಪಡೆಯಲು ಸಂಗೀತ ಸಹಾಯಕಾರಿದೆ. ‘ವಿದುಷಿ ಕೃಷ್ಣಾ ಹಾನಗಲ್ ರಾಷ್ಟ್ರೀಯ ಪ್ರಶಸ್ತಿ’ ಶ್ರೇಷ್ಠ ಗಾಯಕ ಹಾಗೂ ಸಾರಂಗಿ ವಾದಕ ಫಯಾಜ್ ಖಾನ್ ಅವರಿಗೆ ಲಭಿಸಿರುವುದು ಖುಷಿ ನೀಡಿದೆ” ಎಂದು ಹೇಳಿದರು. ವೇದಿಕೆ ಮೇಲೆ ವಿನಯ ನಾಯಕ್,…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಿತ್ರ ಮಂಡಳಿ ಕೋಟ, ಡಾ. ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02-06-2024ರಂದು ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಂಗಕರ್ಮಿ ಗಿಳಿಯಾರು ಶ್ರೀನಿವಾಸ ಅಡಿಗರ ಇಪ್ಪತ್ತೈದು ನಾಟಕಗಳ ಬೃಹತ್ ಕೃತಿ ‘ರಂಗ ಸಂಗಮ’ವು ಲೋಕಾರ್ಪಣೆಗೊಂಡಿತು. ಈ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಹಾರೈಕೆ ಮಾಡಿದ ಸಿನೇಮಾ ನಿರ್ದೇಶಕ, ರಂಗಕರ್ಮಿ, ಲೇಖಕ ಕೋಟೇಶ್ವರ ಶ್ರೀಧರ ಉಡುಪರು ಮಾತನಾಡುತ್ತಾ “ಇದೊಂದು ಅತ್ಯುತ್ತಮ ಕೃತಿಯಾಗಿದ್ದು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಪ್ರದರ್ಶನಗೊಂಡು ಜನಮನ್ನಣೆ ಗಳಿಸಿದೆ. ಓದಿ ಖುಷಿ ಪಟ್ಟಿದ್ದೇನೆ. ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ, ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದವರು” ಎಂದು ಹೇಳಿದರು. ಉಡುಪಿ ಜಿಲ್ಲಾ ಕ.ಸಾ.ಪ. ನೀಲಾವರ ಸುರೇಂದ್ರ ಅಡಿಗರು ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಗೆಳೆಯ ಸಾಧನಾ ರವಿಶಂಕರ್ ಅವರು ಭರತ್ ಪಬ್ಲಿಕೇಷನ್ ಮೂಲಕ ಸುಂದರವಾಗಿ ಪುಸ್ತಕ ಪ್ರಕಟಿಸಿದ್ದಾರೆಂದು ಶ್ಲಾಘನೆ ಮಾಡಿದ ಲೇಖಕ ಗಿಳಿಯಾರು ಶ್ರೀನಿವಾಸ ಅಡಿಗರು ನಾಟಕ ಬರೆಯುವ ಸಂದರ್ಭದಲ್ಲಿ…

Read More

ಧಾರವಾಡ : ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯು ಆಯೋಜಿಸಿದ ರಾಜ್ಯಮಟ್ಟದ ವಿದ್ಯಾರ್ಥಿ ಕಥಾಸ್ಪರ್ಧೆಯಲ್ಲಿ ಕುಮಾರಿ ಸುಪ್ರಿಯಾ ನಾಯಕ ತುಮಕೂರು ಪ್ರಥಮ, ಕುಮಾರಿ ಪ್ರತಿಭಾ ಹೆಗಡೆ ಶಿರಸಿ ದ್ವಿತೀಯ ಹಾಗೂ ಕುಮಾರಿ ದೇವಿಕಾ ಪಿ. ಕಾಸರಗೋಡು ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಸುಮಾರು ಐವತ್ತಕ್ಕೂ ಹೆಚ್ಚು ಕತೆಗಳು ಸ್ಪರ್ಧೆಗೆ ಬಂದಿದ್ದವು. ತೀರ್ಪುಗಾರರಾದ ಪ್ರಶಾಂತ್ ಮಾಡಳ್ಳಿ ಮಾತನಾಡಿ “ಸಮಕಾಲೀನ ವಸ್ತುಸ್ಥಿತಿಯನ್ನು ಆಯ್ದು ಬರೆದ ಕತೆಗಳು ತಮ್ಮ ಮಂಡನೆ, ಧಾಟಿ ಮತ್ತು ರಚನಾ ವಿನ್ಯಾಸಗಳಿಂದ ಗಮನ ಸೆಳೆಯುತ್ತದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದ ಕತೆಗಾರರಿಗೆ ಒಳ್ಳೆಯ ಭವಿಷ್ಯವಿದೆ.” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಬಹುಮಾನಿತರಾದ ಮತ್ತು ಭಾಗವಹಿಸಿದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Read More

ಭಾಷಿಕ ಸಂವಹನವು ಮನುಷ್ಯ ನಾಗರಿಕತೆಯ ದಾರಿಯಲ್ಲಿ ಕಂಡುಕೊಂಡ ಕ್ರಿಯೆ. ದಿನನಿತ್ಯದ ವ್ಯವಹಾರಗಳ ವಿವರದ ದಾಖಲೆಗಾಗಿ ಅದು ಹುಟ್ಟಿಕೊಂಡಿತು ಎನ್ನಬಹುದೇನೋ. ನಮ್ಮೊಳಗೆ ನಾವು ಇಳಿಯಲು ಸಹಾಯ ಮಾಡುವುದು ಭಾಷೆಯೆಂಬ ಸೋಪಾನ. ಅವಿರತವಾಗಿ ಅವರವರ ಇಂಗಿತವನ್ನು ಭಾಷೆಯ ಮೂಲಕವೇ ಜನ ಮನಗಳಿಗೆ ಹೇಳುವುದು ಜಗದ ನಿಯಮವಾಗಿದೆ. ಗತಕಾಲದಿಂದಲೂ ಶಿಲೆಗಳ ಮೇಲೆ, ತಾಮ್ರ ಪಟಗಳ ಮೇಲೆ, ತಾಳೆ ಗರಿಗಳ ಮೇಲೆ ಅಕ್ಷರಗಳನ್ನು ಅಚ್ಚು ಮಾಡಿದ್ದರ ಹಿಂದಿರುವ ಉದ್ದೇಶವೇನಿತ್ತು? ಇಂದಿನ ದಿನಗಳಲ್ಲಿ ಕೃತಿಗಳನ್ನು ಪ್ರಕಟಿಸುವ ಕಾರಣವೇನು? ಇವೆರಡಕ್ಕೂ ಉತ್ತರ ‘ತ್ರಿಕಾಲಪ್ರಜ್ಞೆ’ಯೇ? ನಮ್ಮ ಓದಿನ ಸಂಸ್ಕೃತಿ ಆರಂಭವಾದದ್ದು ಮಣ್ಣಿನ ಶಿಲಾಪಲಕಗಳಿಂದ. ಆ ನಂತರವೇ ಮಾನವ ರೂಪುಗೊಳ್ಳುತ್ತ ಬಂದು ಪ್ರಸ್ತುತದಲ್ಲಿ ತನ್ನದಲ್ಲದ ಲೋಕದ ಬಗೆಗೂ ತಿಳಿಯುವಂತಾಗಿದೆ. ಇವೆಲ್ಲವೂ ಓದುವ, ದಾಖಲಿಸುವ ಸಂಸ್ಕೃತಿಯಿಂದಲೇ ಹುಟ್ಟಿಕೊಂಡ ನಡವಳಿಕೆಗಳು ಎಂಬುದಾಗಿ ಹಿಂದಣ ಹೆಜ್ಜೆಗಳು ಹೇಳುತ್ತವೆ. ನಮ್ಮ ನಡೆ ಪಡೆ ಎಲ್ಲವನ್ನು ಸಂಸ್ಕಾರಗೊಳಿಸಿ ಅದನ್ನು ತಲೆಮಾರಿನಿಂದ ತಲೆಮಾರಿಗೆ ಬೆಳೆಸಿಕೊಂಡು ಹೋಗಬೇಕೆಂದರೆ ಅದಕ್ಕೆ ತಕ್ಕ ಸಿದ್ಧತೆಯನ್ನು ಮಾಡಬೇಕಾಗುವುದು. ಇಲ್ಲವಾದರೆ ಆ ಹರಿವು ಎಲ್ಲೋ ಒಂದು ಕಡೆ ಸ್ಥಗಿತವಾಗುತ್ತದೆ.…

Read More