Subscribe to Updates

    Get the latest creative news from FooBar about art, design and business.

    What's Hot

    ಧಾರವಾಡದ ಸೃಜನಾ ರಂಗಮಂದಿರದಲ್ಲಿ ‘ಸ್ತ್ರೀ ನಾಟಕೋತ್ಸವ’ | ಜುಲೈ 06 ಮತ್ತು 07

    July 1, 2025

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಬೆಂಗಳೂರಿನಲ್ಲಿ ರಂಗರಥ ವತಿಯಿಂದ ‘ಅಭಿನಯ ಕಾರ್ಯಾಗಾರ’ | ಜುಲೈ 07ರಿಂದ 24

    July 1, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರಾವಳಿ ಲೇಖಕಿಯರ, ವಾಚಕಿಯರ ಸಂಘದಿಂದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭ | ಮಾರ್ಚ್ 20
    Awards

    ಕರಾವಳಿ ಲೇಖಕಿಯರ, ವಾಚಕಿಯರ ಸಂಘದಿಂದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭ | ಮಾರ್ಚ್ 20

    March 13, 2024Updated:March 23, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರಾವಳಿ ಲೇಖಕಿಯರ, ವಾಚಕಿಯರ ಸಂಘ (ರಿ.) ಅವಿಭಜಿತ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆ ಇವರು ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಹಯೋಗದೊಂದಿಗೆ ಆಯೋಜಿಸಿದ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭವು ದಿನಾಂಕ 20-03-2024ರಂದು ಅಪರಾಹ್ನ 1.30ರಿಂದ ಮಂಗಳೂರಿನ ಬಲ್ಮಠದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಲಿದೆ.

    ಮಂಗಳೂರು , ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇದರ ಪ್ರಾಂಶುಪಾಲರಾದ ಡಾ. ಜಗದೀಶ್ ಬಾಳ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ಡಾ. ವಿದ್ಯಾ ಕುಮಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕ.ಲೇ.ವಾ. ಸಂಘದ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾರ್ರು ಸ್ವಾಗತ ಮತ್ತು ಪ್ರಸ್ತಾವನೆ ಗೈಯ್ಯಲಿದ್ದು, ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವಿಶ್ರಾಂತ ಪ್ರಾಂಶುಪಾಲರಾದ ಡಾ. ಇಸ್ಮಾಯಿಲ್, ತುಳು ಮತ್ತು ಕನ್ನಡ ಲೇಖಕರಾದ ಶ್ರೀ ಬೆನೆಟ್ ಜಿ. ಅಮ್ಮನ್ನ ಹಾಗೂ ಹಿರಿಯ ಲೇಖಕಿಯಾದ ಶ್ರೀಮತಿ ಮಮತಾ ರಾವ್ ಭಾಗವಹಿಸಲಿದ್ದಾರೆ.

    ಈ ಸಾಲಿನ ಡಾ. ಸುನೀತಾ ಶೆಟ್ಟಿ ದತ್ತಿ ನಿಧಿ ‘ತೌಳವ ಸಿರಿ’ ಪ್ರಶಸ್ತಿಯನ್ನು ಹೆಚ್. ಶಕುಂತಲಾ ಭಟ್ ಹಳೆಯಂಗಡಿ, ನಾಡೋಜ ಡಾ. ಸಾರಾ ಅಬೂಬಕರ್ ದತ್ತಿ ನಿಧಿ ‘ಸಾರಾ ದತ್ತಿ ಪ್ರಶಸ್ತಿ’ಯನ್ನು ‘ಹಲವು ನಾಡು ಹೆಜ್ಜೆ ಹಾಡು’ ಪ್ರವಾಸ ಕಥನಕ್ಕಾಗಿ ಜಯಶ್ರೀ ದೇಶಪಾಂಡೆ ಹಾಗೂ ಚಂದ್ರಾಭಾಗಿ ರೈ ದತ್ತಿನಿಧಿ ‘ಚಂದ್ರಾಭಾಗಿ ರೈ ದತ್ತಿ ಬಹುಮಾನ’ವನ್ನು ‘ತೇವ ಕಾಯುವ ನದಿ’ ಅಪ್ರಕಟಿತ ಕವನ ಸಂಕಲನಕ್ಕಾಗಿ ಸ್ಮಿತಾ ಅಮೃತ್ ರಾಜ್ ಇವರಿಗೆ ನೀಡಿ ಗೌರವಿಸಲಾಗುವುದು.

    ಸ್ಪರ್ಧೆಯಲ್ಲಿ ತೀರ್ಪುಗಾರರರಾಗಿ ಸಹಕರಿಸಿದ ಸೀತಾರಾಮ್ ಭಟ್ ಇವರು ಪ್ರವಾಸ ಕಥನದ ಬಗ್ಗೆ ಮತ್ತು ಜ್ಯೋತಿ ಗುರುಪ್ರಸಾದ್ ಅಪ್ರಕಟಿತ ಕವನ ಸಂಕಲನದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಲಿದ್ದು, ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಕೀನಾ ನಾಸಿರ್ ಹಾಗೂ ಬೆಂಗಳೂರಿನ ಕಾಂತಿ ರೈ ಉಪಸ್ಥಿತರಿರುವರು.

    Share. Facebook Twitter Pinterest LinkedIn Tumblr WhatsApp Email
    Previous Article‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮದಲ್ಲಿ ಶ್ರದ್ಧಾ ಶ್ರೀನಿವಾಸ್ ಬೆಂಗಳೂರು ಇವರ ನೃತ್ಯ ಪ್ರದರ್ಶನ | ಮಾರ್ಚ್ 18
    Next Article  ಚಿನ್ಮಯ ವಿದ್ಯಾಲಯದಲ್ಲಿ ‘ಮೆಗಾ ತಿರುವಾದಿರ’
    roovari

    Add Comment Cancel Reply


    Related Posts

    ಶಕ್ತಿನಗರದ ಕಲಾಂಗಣದಲ್ಲಿ ‘ಅನುವಾದ ಕಾರ್ಯಾಗಾರ’

    July 1, 2025

    ಮಂಗಳೂರಿನ ಶಾರದಾ ವಿದ್ಯಾ ಸಂಸ್ಥೆಯಲ್ಲಿ ‘ಸಾಹಿತ್ಯ ಕೃತಿ ಅವಲೋಕನ’ ಕಾರ್ಯಕ್ರಮ | ಜುಲೈ 05

    July 1, 2025

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.