Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ವಿಶೇಷ ಲೇಖನ -ನಾಡು ಕಂಡ ಅಪೂರ್ವ ಜನಪದ ವಿದ್ವಾಂಸ ಬಿ.ಎಸ್. ಗದ್ದಗಿಮಠ
    Article

    ವಿಶೇಷ ಲೇಖನ -ನಾಡು ಕಂಡ ಅಪೂರ್ವ ಜನಪದ ವಿದ್ವಾಂಸ ಬಿ.ಎಸ್. ಗದ್ದಗಿಮಠ

    January 17, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕರ್ನಾಟಕ ಜಾನಪದ ಅಧ್ಯಯನಕ್ಕೆ, ಸಂಶೋಧನೆಗೆ ನಾಂದಿ ಹಾಡಿ ಡಾ. ಬಿ.ಎಸ್. ಗದ್ದಗಿಮಠ ಅವರು ನಾಡು ಕಂಡ ಅಪೂರ್ವ ಜಾನಪದ ವಿದ್ವಾಂಸರು, ಕನ್ನಡ ಸಾಹಿತ್ಯದ ನವೋದಯ ಕಾಲದಲ್ಲಿ ಜಾನಪದ ಸಾಹಿತ್ಯದ ಬಗ್ಗೆ ಅಧಿಕೃತವಾಗಿ ಮಾತನಾಡಿದ ಧೀಮಂತ ವ್ಯಕ್ತಿ. ಜಾನಪದ ಸಾಹಿತ್ಯವನ್ನು ಉಸಿರಾಗಿಸಿಕೊಂಡಿದ್ದ ಇವರು ಜಾನಪದ ಸಾಹಿತ್ಯದ ಮೌಲಿಕತೆಯನ್ನು ಸಾಂಸ್ಕೃತಿಕ ವಿಕಾಸವನ್ನು ತೋರಿಸಿಕೊಟ್ಟವರು.

    07 ಜನವರಿ 1917ರಂದು ಬಿಜಾಪುರ ಜಿಲ್ಲೆ ಕೆರೂರಿನಲ್ಲಿ ಡಾ. ಬಿ.ಎಸ್. ಗದ್ದಗಿಮಠ ಇವರ ಜನನವಾಯಿತು. ಜಾನಪದ ಗೀತೆಗಳನ್ನು ಹಾಡುತ್ತಿದ್ದ ತಮ್ಮ ತಂದೆಯಿಂದ ಪ್ರಭಾವಿತರಾದ ಇವರು ಬೆಳೆಯುತ್ತಾ ಬೆಳೆಯುತ್ತಾ ಜಾನಪದ ಕ್ಷೇತ್ರದೊಂದಿಗೆ ತೀವ್ರವಾದ ಒಲವನ್ನು ಬೆಳೆಸಿಕೊಂಡರು. ಕನ್ನಡದಲ್ಲಿ ಎಂ. ಎ. ಪದವಿ ಪಡೆದ ಇವರು ಉತ್ತರ ಕರ್ನಾಟಕದ ನಾನಾ ಭಾಗಗಳಲ್ಲಿ ಸಂಚರಿಸುತ್ತಾ ಜಾನಪದ ಗೀತೆಗಳನ್ನು ಸಂಶೋಧಿಸುತ್ತಾ, ಸಂಗ್ರಹಿಸುತ್ತಾ ಪ್ರೌಢ ಪ್ರಬಂಧವನ್ನು ಬರೆದರು. ‘ಕನ್ನಡ ಜನಪದ ಗೀತೆಗಳು’ ಎಂಬ ಈ ಸಂಶೋಧನಾತ್ಮಕ ಪ್ರಬಂಧಕ್ಕೆ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ದೊರೆಯಿತು. ಇದು ಜಾನಪದ ಕ್ಷೇತ್ರಕ್ಕೆ ಪ್ರಥಮವಾಗಿ ದೊರೆತ ಪಿ.ಎಚ್.ಡಿ. ಪದವಿಯಾಗಿತ್ತು. ಬಾಗಲಕೋಟೆ ಬಸವೇಶ್ವರ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ಗದ್ದಗಿಮಠ ಅವರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಯಾಮ ಶಿಕ್ಷಕರಾಗಿ ಉದ್ಯೋಗ ಮುಂದುವರಿಸಿದರು. ಅವರು ನಂತರ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣಾ ವಿಭಾಗದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಸೇವಾವಧಿಯಲ್ಲಿರುವಾಗಲೇ 30 ಅಕ್ಟೋಬರ್ 1960ರಲ್ಲಿ ಹೃದಯಾಘಾತದಿಂದ ನಿಧನರಾದರು. ಆದರೂ ಡಾ. ಬಸಯ್ಯ ಸಾವಳಿಗೇಶ ಗದ್ದಗಿಮಠ ಅವರ ಕಾರ್ಯ ಜಾನಪದ ಕ್ಷೇತ್ರದಲ್ಲಿ ಅಜರಾಮರವಾಗಿ ಉಳಿದಿದೆ.

    ಡಾ. ಗದ್ದಗಿಮಠ ಅವರ ಸಂಗ್ರಹದ ಸಾಹಿತ್ಯ ಬಹುಪಾಲು ಪ್ರಕಟಗೊಳ್ಳದೇ ಉಳಿದಿದೆ. ಪ್ರಕಟಗೊಂಡ ಕೃತಿಗಳಲ್ಲಿ ‘ನಾಲ್ಕು ನಾಡ ಪದಗಳು’, ಕಂಬಿಯ ಹಾಡುಗಳು’, ಜನತಾ ಗೀತೆಗಳು’, ‘ಮಲ್ಲ ಮಲ್ಲಾಣಿ’, ‘ಕುಮಾರ ರಾಮನ ದುಂದಮೆ’ ‘ಲೋಕ ಗೀತೆಗಳು’ ಪ್ರಮುಖವು. ಪ್ರಕಟಗೊಳ್ಳಬೇಕಿದ್ದ ಸೋಬಾನ ಹಾಡುಗಳು, ಜೋಗುಳ ಹಾಡುಗಳು, ಜಾನಪದ ಮಹಾಭಾರತ, ಜಾನಪದ ರಾಮಾಯಣ, ಕಲ್ಯಾಣ ಬಸವ, ಕೋಲು ಪದಗಳಂಥ ಪ್ರಮುಖ ಸಂಗ್ರಹಗಳ ಹಸ್ತ ಪ್ರತಿಗಳು ಕಳೆದುಹೋಗಿದೆ.

    ಡಾ. ಬಿ.ಎಸ್. ಗದ್ದಗಿಮಠ ಹಾಗೂ ಶ್ರೀಮತಿ ಅನಸೂಯ ದಂಪತಿಗಳ ಅನ್ಯೋನ್ಯ ಪ್ರೀತಿಯ ಕುಸುಮಗಳಾಗಿ ಅರಳಿದ ಪುತ್ರ ರತ್ನರು – ಸಾವಳಿಗೇಶ (ಬಾಬಣ್ಣ), ರವಿ (ರುದ್ರಯ್ಯ) ಪುಲಕೇಶಿ, ನಿಜಗುಣದೇವ ಮತ್ತು ಏಕಮೇವ ಪುತ್ರಿ ಅಕ್ಕಮಹಾದೇವಿ. ಮಕ್ಕಳೆಲ್ಲರೂ ಪ್ರಚಂಡ ಬೌದ್ಧಿಕ ಜ್ಞಾನವನ್ನು ಹೊಂದಿದ್ದು, ವಿವಿಧ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಮಾಧುರಿ ಶ್ರೀರಾಮ

    ವಿಮರ್ಶಕರು

    article Birthday kannada Literature
    Share. Facebook Twitter Pinterest LinkedIn Tumblr WhatsApp Email
    Previous Articleಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪ್ರದಾನ ಸಮಾರಂಭ | ಜನವರಿ 20
    Next Article ಮೈಸೂರಿನ ‘ನಟನ’ದಲ್ಲಿ ‘ಹೂವಿನಕೋಲು’ ಯಕ್ಷಗಾನ ಪ್ರಕಾರದ ಪ್ರದರ್ಶನ
    roovari

    Add Comment Cancel Reply


    Related Posts

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಪುಸ್ತಕ ವಿಮರ್ಶೆ | ‘ವ್ಯಥೆ ಕಥೆ’ ಕನ್ನಡದ ವಿಶಿಷ್ಟವಾದ ಕಿರು ಕಾದಂಬರಿ

    May 24, 2025

    ‘ಭಾಷಾಂತರ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಜೂನ್ 20

    May 24, 2025

    ಸಾಹಿತಿ ಸವಿತಾ ನಾಗಭೂಷಣ ಇವರ ಕೃತಿ ‘ಡಾ. ವಿಜಯಾ ದಬ್ಬೆ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.