Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಯಕ್ಷ ಸಿಂಧೂರ’ | ಜೂನ್ 21 

    June 18, 2025

    ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ಲಂಕಾ ದಹನ’ ಯಕ್ಷಗಾನ | ಜೂನ್ 21

    June 18, 2025

    ಪಯ್ಯನೂರಿನಲ್ಲಿ ತುರೀಯಮ್ ಮ್ಯೂಜಿಕ್ ಫೆಸ್ಟಿವಲ್ | ಜೂನ್ 19  

    June 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಇವರಿಗೆ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ | ಅಕ್ಟೋಬರ್ 8ರಂದು
    Awards

    ಹಿರಿಯ ಯಕ್ಷಗಾನ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಇವರಿಗೆ ‘ಬಾಬು ಕುಡ್ತಡ್ಕ ಪ್ರಶಸ್ತಿ’ ಪ್ರದಾನ | ಅಕ್ಟೋಬರ್ 8ರಂದು

    October 4, 20231 Comment2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಜಲ್ಲಿಗುಡ್ಡೆಯ ಸ್ವಸ್ತಿಕ್ ಕಲಾ ಕೇಂದ್ರ (ರಿ.) ಇದರ ವತಿಯಿಂದ ಯಕ್ಷರಂಗದ ಕಣ್ಮಣಿ ದಿ| ಬಾಬು ಕುಡ್ತಡ್ಕ ಅವರ ಹೆಸರಿನಲ್ಲಿ ಪ್ರತೀ ವರ್ಷ ನೀಡಲಾಗುವ ಪ್ರತಿಷ್ಠಿತ ‘ಬಾಬು ಕುಡ್ತಡ್ಕ ಪ್ರಶಸ್ತಿ’ಗೆ ತೆಂಕುತಿಟ್ಟಿನ ಹೆಸರಾಂತ ಹಿರಿಯ ಕಲಾವಿದ ವೇಣೂರು ಸದಾಶಿವ ಕುಲಾಲ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ.10,000 ನಗದು ಪುರಸ್ಕಾರದೊಂದಿಗೆ ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಫಲಕಾಣಿಕೆಯನ್ನೊಳಗೊಂಡಿರುತ್ತದೆ.

    ಮಂಗಳೂರಿನ ಕುದ್ಮುಲ್ ರಂಗರಾವ್‌ ಪುರಭವನದಲ್ಲಿ ದಿನಾಂಕ 08-10-2023ರಂದು ಸಂಜೆ 3 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಇವರು ವಹಿಸಲಿದ್ದು, ಮಾಜಿ ಸರಕಾರಿ ಮುಖ್ಯ ಸಚೇತಕರಾದ ಐವನ್ ಡಿಸೋಜಾ, ಪಡೀಲಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಟ್ರಸ್ಟಿಯಾದ ಡಾ. ಅಣ್ಣಯ್ಯ ಕುಲಾಲ್, ಮಾಜಿ ಶಾಸಕರಾದ ಶ್ರೀ ಜೆ.ಆರ್. ಲೋಬೋ ಮತ್ತು ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಟ್ರಸ್ಟಿಯಾದ ಶ್ರೀ ಎ.ಸದಾನಂದ ಶೆಟ್ಟಿ ಇವರುಗಳು ವಿಶೇಷ ಅಭ್ಯಾಗತರಾಗಿ ಆಗಮಿಸಲಿರುವರು. ಇದೇ ಸಂದರ್ಭದಲ್ಲಿ ಜಲ್ಲಿಗುಡ್ಡೆಯ ಶ್ರೀ ಅಂಬಾಭವಾನಿ ಯಕ್ಷಗಾನ ಕಲಾಮಂಡಳಿಯ ಸದಸ್ಯರಿಂದ ದಿನಕರ್ ಎಸ್. ಪಚ್ಚನಾಡಿ ನಿರ್ದೇಶನದಲ್ಲಿ ‘ಶ್ರೀ ದೇವಿ ಮಹಿಷಮರ್ಧಿನಿ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

    ವೇಣೂರು ಸದಾಶಿವ ಕುಲಾಲ್‌:
    ವೇಣೂರಿನ ಕೃಷ್ಣಯ್ಯ ಮೂಲ್ಯ ಹಾಗೂ ಅಪ್ಪಿ ಮೂಲ್ಯೆದಿ ದಂಪತಿಗಳ ಸುಪುತ್ರರಾದ ಸದಾಶಿವ ಕುಲಾಲ್ ಇವರನ್ನು ಹಾಸ್ಯಗಾರ ವೇಣೂರು ಸುಂದರ ಆಚಾರ್ಯ ಯಕ್ಷಗಾನ ಕ್ಷೇತ್ರಕ್ಕೆ ಪರಿಚಯಿಸಿದರು. ಶ್ರೀ ಧರ್ಮಸ್ಥಳ ಲಲಿತಾ ಕೇಂದ್ರದಲ್ಲಿ ಗುರು ಶ್ರೀ ಪಡ್ರೆ ಚಂದ್ರು ಇವರ ಮಾರ್ಗದರ್ಶನದಲ್ಲಿ ತಮ್ಮ ಯಕ್ಷ ಶಿಕ್ಷಣ ಆರಂಭಿಸಿಸಿದ ಇವರು 26ವರ್ಷಗಳ ಕಾಲ ಸುರತ್ಕಲ್ ಮೇಳದಲ್ಲಿ, 8ವರ್ಷ ಮಂಗಳಾದೇವಿ ಹಾಗೂ 17ವರ್ಷ ಹನುಮಗಿರಿ ಮೇಳ ಹೀಗೆ ಯಕ್ಷಗಾನ ಕ್ಷೇತ್ರದ ಯಾನದಲ್ಲಿ 51ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
    ಅಭಿಮನ್ಯು, ಬಾಬ್ರುವಾಹನ, ಚಂಡ ಮುಂಡ, ಅಶ್ವತ್ಥಾಮ, ಷಣ್ಮುಕ, ಲೀಲೆಯ ಕೃಷ್ಣ, ಲಕ್ಷ್ಮಣ, ಕಡುಗಲಿ ಕುಮಾರ, ರಾಮದ ಕುಮಾರ, ಬಪ್ಪನಾಡು ಕ್ಷೇತ್ರ ಮಹಾತ್ಮೆಯ ಗುಳಿಗ, ರಾಣಿ ರತ್ನಾವಳಿಯ ಉದಯನ ಹಾಗೂ ಚೆನ್ನಯ ಮುಂತಾದ ವೇಷಗಳು ಇವರನ್ನು ಪ್ರಸಿದ್ದಿಗೆ ಏರಿಸಿದ ಪತ್ರಗಳು.

    Share. Facebook Twitter Pinterest LinkedIn Tumblr WhatsApp Email
    Previous Article‘ನವರಂಗೋತ್ಸವ’ ಸಾಮೂಹಿಕ ನೃತ್ಯ ಸ್ಪರ್ಧೆ | ಕೊನೆಯ ದಿನಾಂಕ ಅಕ್ಟೋಬರ್ 12
    Next Article ಕಾಸರಗೋಡಿನ ಪದ್ಮಗಿರಿ ಕಲಾಕುಟೀರದಲ್ಲಿ ‘ಕನ್ನಡ ವಿದ್ಯಾರ್ಥಿ ಕಲರವ’ ಕಾರ್ಯಕ್ರಮ | ಅಕ್ಟೋಬರ್ 7ರಂದು
    roovari

    1 Comment

    1. Pingback: ಯಕ್ಷಗಾನವನ್ನು ಉಳಿಸಿ ಬೆಳೆಸುವ ಸ್ವಸ್ತಿಕ್ ಕಲಾಕೇಂದ್ರದಿಂದ ವೇಣೂರು ಸದಾಶಿವ ಕುಲಾಲ್‌ ಇವರಿಗೆ ‘ದಿ.ಬಾಬು ಕುಡ

    Add Comment Cancel Reply


    Related Posts

    ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ಯಕ್ಷ ಸಿಂಧೂರ’ | ಜೂನ್ 21 

    June 18, 2025

    ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ‘ಲಂಕಾ ದಹನ’ ಯಕ್ಷಗಾನ | ಜೂನ್ 21

    June 18, 2025

    ಬಲಮುರಿ ಶ್ರೀ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ತಿಂಗಳ ಸರಣಿ ತಾಳಮದ್ದಳೆ

    June 18, 2025

     ಡಾ. ಆರ್. ಗಣೇಶರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’

    June 18, 2025

    1 Comment

    1. Pingback: ಯಕ್ಷಗಾನವನ್ನು ಉಳಿಸಿ ಬೆಳೆಸುವ ಸ್ವಸ್ತಿಕ್ ಕಲಾಕೇಂದ್ರದಿಂದ ವೇಣೂರು ಸದಾಶಿವ ಕುಲಾಲ್‌ ಇವರಿಗೆ ‘ದಿ.ಬಾಬು ಕುಡ

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.