Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಬೆಳೆಸಿರಿ’ ಮಕ್ಕಳ ಲಲಿತಕಲಾ ಮಿಲನ – ಪಿ ಎನ್ ಮೂಡಿತ್ತಾಯರ ದೃಷ್ಟಿಯಲ್ಲಿ
    Dance

    ‘ಬೆಳೆಸಿರಿ’ ಮಕ್ಕಳ ಲಲಿತಕಲಾ ಮಿಲನ – ಪಿ ಎನ್ ಮೂಡಿತ್ತಾಯರ ದೃಷ್ಟಿಯಲ್ಲಿ

    May 11, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಒಂದು ಹಗಲ ‘ಬೆಳೆಸಿರಿ’ : ಲಲಿತಕಲೆಗಳ ಸಂಗಮ

    ಆಡಳಿತ ರೀತಿ , ಶಿಕ್ಷಣ ನೀತಿ , ಹಾಗೂ ಮತೀಯ ಒತ್ತಡಗಳು ಭಾರತೀಯ ಕಲೆಗಳನ್ನು ಹ್ರಾಸಗೊಳಿಸುತ್ತ ಬಂದಿವೆ . ಕುಣಿಯುವ ಹಾಡುವ ಸ್ವಾತಂತ್ರ್ಯ ಲಕ್ಷಾಂತರ ವರ್ಷಗಳಿಂದ ಮನರಂಜನೆಯನ್ನೂ ಆರೋಗ್ಯವನ್ನೂ ಕೊಡುತ್ತ ಬಂದಿದ್ದು ಸಹಜವಾಗಿಯೇ ಅಳವಟ್ಟಿರುವಾಗ ಅದೆಲ್ಲ ಈಗ ಅಗತ್ಯ ಇಲ್ಲವೆಂಬ ವಾದವೂ ಹೆಚ್ಚಾಗುತ್ತಿದೆ .

    ಸಾಮಾಜಿಕ ಜಾಲ ತಾಣಗಳ ಮೂಲಕ ಅತ್ಯುತ್ತಮಗಳನ್ನು ಆಸ್ವಾದಿಸುವುದು ವೈಯಕ್ತಿಕ . ಹಾಗೇ ಸಾರ್ವಜನಿಕದಲ್ಲಿ ಈ ಕಲೆಗಳನ್ನು ಒಪ್ಪಿ ಸ್ವೀಕರಿಸಿ ದೈಹಿಕ ಮಾನಸಿಕ ಆರೋಗ್ಯ ಸಂಪಾದಿಸುವುದು ಸಾಧ್ಯವೆ ? ಎಂಬ ಚಿಂತನೆ ಮೊನ್ನೆ ಮೇ ತಿಂಗಳ ಏಳನೇ ತಾರೀಕಿನಂದು ನಡೆದದ್ದು ಬಾಯಿಕಟ್ಟೆಯ ಅಯ್ಯಪ್ಪ ಮಂದಿರದ ವಠಾರದಲ್ಲಿ . ಜಿಲ್ಲಾ ಕನ್ನಡ ಲೇಖಕರ ಸಂಘ ಕಾಸರಗೋಡು , ತಪಸ್ಯ ಕಲಾಸಾಹಿತ್ಯ ವೇದಿಕೆ ಹಾಗೂ ಬೆಂಗಳೂರಿನ ಶಂ ಪಾ ಪ್ರತಿಷ್ಠಾನಗಳು “ಬೆಳೆಸಿರಿ” ಅಂಕಿತದಲ್ಲಿ ಈ ಕಾರ್ಯಕ್ರಮವನ್ನು ದಿನಾಂಕ 7-05-2023 ರಂದು ನಿರ್ವಹಿಸಿದುವು .

    ಪ್ರತಿಭಾವಂತ ಮಕ್ಕಳು ಭಾಗವಹಿಸಿದರು . ಭರತನಾಟ್ಯ , ಕೂಚುಪುಡಿ , ಜಾನಪದ ನೃತ್ಯಗಳಲ್ಲಿ ಜಿಲ್ಲೆಯ ಅಪೂರ್ವ ಪ್ರತಿಭೆ ಎನಿಸಿದ ಆದಿಶ್ರೀಯ ನೃತ್ಯ ಪ್ರಸ್ತುತಿ , ಶ್ರೀಆದ್ಯನಿಂದ ಭರತನಾಟ್ಯ , ನೃತ್ಯ , ಚಿತ್ರಕಲೆಗಳ ಪರಸ್ಪರ ಸಂಬಂಧದ ಕುರಿತ ಸಂವಾದ ನಡೆಯಿತು .

    ಉದ್ಘಾಟನಾ ಸಮಾರಂಭದಲ್ಲಿ ತಪಸ್ಯದ ಸದಸ್ಯ ಮಾಧವನ್ ನಂಬೂದಿರಿ ಮಾತನಾಡುತ್ತ , ಒಂದೊಂದು ಕುಟುಂಬವೂ ಕಲೆಗಳನ್ನು ಪ್ರೀತಿಸಿ ಒಳಿತುಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು . ಕಾರ್ಟೂನು ಹಾಗೂ ಚಿತ್ರಪ್ರದರ್ಶನಗಳನ್ನು ಏರ್ಪಡಿಸಿದ್ದ ಜಯಪ್ರಕಾಶ ಶೆಟ್ಟಿ , ವಿರಾಜ್ ಅಡೂರು, ರಾಧಾಕೃಷ್ಣ ಬಲ್ಲಾಳರು ಅಭಿಪ್ರಾಯಗಳನ್ನು ಹಂಚಿಕೊಂಡರು .
    ಕಾರ್ಟೂನು ಧಾರವಾಹಿಗಳಿಗೆ ಹೆಸರಾದ ಜಾನ್ ಚಂದ್ರನ್ , ಮಂಡಲ ಕಲಾ ಪ್ರವೀಣೆ ಕು l ಖುಶಿ ಶೆಟ್ಟಿ , ಕ್ಯಾರಿಕೇಚರ್ , ಚಿತ್ರಕಲೆಗಳಿಗೆ ಪ್ರಸಿದ್ಧರಾದ ಬಾಲ ಮಧುರಕಾನನರ ರಚನೆಗಳೂ ಪ್ರದರ್ಶನದಲ್ಲಿದ್ದುವು . ಸಾವಿರಾರು ಬಾರಿ ಕನ್ನಡ , ತುಳು ನಾಟಕಗಳಲ್ಲಿ ಪ್ರತಿಭೆಯನ್ನು ಹಂಚಿದ , ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆಯಂತಹ ಹತ್ತಾರು ಸಿನೆಮಗಳಲ್ಲಿ ಗೌಣ , ಪೋಷಕ ಪಾತ್ರಗಳನ್ನು ನಿರ್ವಹಿಸಿದ ರಾಧಾಕೃಷ್ಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು .

    ಕೇರಳದ ಆಯುರ್ವೇದ ಪ್ರತಿಭೆ , ವೈದ್ಯೆ ರೂಪಾ ಸರಸ್ವತಿ ಸಂಗೀತ ಚಿಕಿತ್ಸೆಯ ಕುರಿತು ಮಾಹಿತಿ ನೀಡುತ್ತ , ” ಮಾನಸಿಕ ಆಘಾತ , ನಡತೆಯಲ್ಲಿ ಭಿನ್ನತೆ , ರೋಗಬಾಧೆಗೀಡಾಗಿ ಅಡ್ ಪರಿಣಾಮಗಳಿಗೀಡಾದವರಿಗೆ ಮ್ಯೂಸಿಕ್ ಥೆರಪಿ ಬೇಕು . ಅಂತಹ ನೂರೆಂಬತ್ತು ಮಂದಿಗೆ ಪ್ರತಿ ತಿಂಗಳು ಸಂದರ್ಶಿಸಿ ಚಿಕಿತ್ಸೆ ಕೊಡುತ್ತಿದ್ದೇನೆ . ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಿವಿ ನಿದ್ದೆಯಲ್ಲೂ ಎಚ್ಚರವಿರುವ ಅವಯವ . ಹಾಗಾಗಿ ಶಬ್ದವೀಚಿ ( ಧ್ವನಿ ತರಂಗ ) ಗಳ ಮೂಲಕ ಚಿಕಿತ್ಸೆ ಸಾಧ್ಯ . ಪ್ರಭಾತಕಾಲ , ಮಧ್ಯಾಹ್ನ , ಸಂಜೆ ಮತ್ತು ಯಾವ ಕಾಲಕ್ಕೂ ಹೊಂದುವ ರಾಗಗಳು ಸಂಗೀತದಲ್ಲಿವೆ . ಗೌಳಿ , ಭೂಪಾಳಿ ಬೆಳಿಗ್ಗೆ , ಮಧ್ಯಾಹ್ನಕ್ಕೆ ಮಧ್ಯಮಾವತಿ , ಸಂಜೆಗೆ ಶಂಕರಾಭರಣ , ಕಲ್ಯಾಣಿಯಂತಹ ರಾಗಗಳು ಹೊಂದುತ್ತವೆ . ಸುಧಾರಣೆ ಮೆಲ್ಲ ಆಗುತ್ತದಾದರೂ , ಅದನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ವಾಸಿ ಮಾಡಿದ ಅನುಭವ ನನ್ನದು ” ಎಂದರು . ಅವರು ದೇವತಾರಾಧನೆಯಲ್ಲೂ , ಭರತನಾಟ್ಯದಲ್ಲೂ ಬಳಸುವ ಮುದ್ರೆಗಳ ಬಗ್ಗೆ ಮಾಹಿತಿ ಹಂಚಿಕೊಂಡು ಲಲಿತಕಲೆಗಳ ಪರಸ್ಪರ ಸಂಬಂಧವನ್ನೂ ಪರಿಚಯಿಸಿದರು . ಕೀರ್ತನೆಗಳನ್ನು ಹಾಡಿ ತೋರಿಸಿದರು .

    ಅಂತಾರಾಷ್ಟ್ರೀಯ ಜಾದೂಗಾರ ಬಾಲಚಂದ್ರನ್ ಕೊಟ್ಟೋಡಿ ಅವರ ಮ್ಯಾಜಿಕ್ ಶೋ , ವ್ಯಕ್ತಿತ್ವ ತರಬೇತಿಯ ಪಟ್ಟುಗಳು , ಸುಶ್ರಾವ್ಯವಾದ ಕೊಳಲುವಾದನ ರಂಜಿಸಿತು .

    ಚಿತ್ರ ಪ್ರದರ್ಶನದಲ್ಲಿ ಕಂಡುಬಂದ ವೈವಿಧ್ಯತೆಯನ್ನು ಮೆಚ್ಚಿ ಭಾರತೀಯ ಚಿತ್ರಕಲೆಯ ಹಂತಗಳನ್ನು ಮುಂದಿಟ್ಟ ಶಿಕ್ಷಕ ಸದಾನಂದನ್ , ಮಿನಿ ಭಾರತದಂತಿರುವ ಕಾಸರಗೋಡಿನ ಜನವರ್ಗ , ವಿಶಿಷ್ಟ ಸಂಸ್ಕೃತಿಯ ಕುರಿತು ನೆನಪಿಸಿದರು . ತಪಸ್ಯ ರಾಜ್ಯ ಸಮಿತಿಯ ಸದಸ್ಯ ಶೈಲೇಂದ್ರನ್ ಎಂ ವಿ ಇಲ್ಲಿನ ವಿವಿಧ ಭಾಷೆಗಳ ಮಾಹಿತಿ ನೀಡಿದ್ದಲ್ಲದೆ ಇಲ್ಲಿನ ಕಲಾಜಗತ್ತು ಸಾರುವ ಸಂಸ್ಕೃತಿಯ ಪರಿಚಯ ಮಾಡಿಸಿದರು .

    ಸಂಗೀತದ ಪ್ರಾದೇಶಿಕ ಪ್ರತಿಭೆ ಕಾವ್ಯಶ್ರೀ ಅವರಿಂ ಪ್ರಾರ್ಥನೆ , ಹಾಡು , ಮಾಸ್ಟರ್ ಸಿದ್ಧಾರ್ಥನ ಹಾಡು , ಮೀಯಪದವು ಪ್ರೌಢಶಾಲೆಯ ವಿದ್ಯಾರ್ಥಿ ಅನನ್ಯಳಿಂದ ಕಾವ್ಯವಾಚನ , ಸ್ಥಳೀಯ ಮಕ್ಕಳಿಂದ ಜಾನಪದ ನೃತ್ಯಗಳು ಗಮನಸೆಳೆದುವು .

    ಕೃತಿ ಬಿಡುಗಡೆ
    ಡಾ. ಪ್ರಮೀಳಾ ಮಾಧವ್ ಅವರ ಸ್ಫೂರ್ತಿ ಚೇತಸರು ಎಂಬ ಹದಿನೈದು ವ್ಯಕ್ತಿ ಚಿತ್ರಣಗಳನ್ನೊಳಗೊಂಡ ಬೃಹತಗ ಕೃತಿಯನ್ನು ಗೋವಾ ವಿ ವಿಯ ನಿವೃತ್ತ ಮುಖ್ಯಗ್ರಂಥಪಾಲಕ ಡಾ. ವಿ ಗೋಪಕುಮಾರ್ ಬಿಡುಗಡೆಗೊಳಿಸಿ , ಪುಸ್ತಕ ಪ್ರಪಂಚ , ಡಿಜಿಟಲ್ ಕ್ರಾಂತಿ , ಕೃತಕ ಬುದ್ಧಿಮತ್ತೆ ವಿಶೇಷ ಅ್ಯಾಪುಗಳ ಮೂಲಕ ತೋರುತ್ತಿರುವ ಕರಾಮತ್ತುಗಳನ್ನು ಪ್ರಸ್ತಾಪಿಸಿದರು .

    ಅಧ್ಯಕ್ಷತೆಯನ್ನು ವಹಿಸಿದ್ದ ಡಾ . ರಮಾನಂದ ಬನಾರಿ ಅವರು
    ಒಟ್ಟಿಗೇ ನಾಮಪದವೂ ಕ್ರಿಯಾಪದವೂ ಆಗುವ ಬೆಳೆಸಿರಿ ಎಂಬ ಶೀರ್ಷಿಕೆ ಇಂದಿನ ಕಾರ್ಯಕ್ರಕ್ಕೆ ಹೊಂದಿಕೆಯಾದ್ದನ್ನು ಉಲ್ಲೇಖಿಸಿದರು . ” ಕಾಸರಗೋಡಿನವರೇ ಆದ ಪ್ರಮೀಳಾ ತಡವಾಗಿ ಬಂದು ಫಕ್ಕನೆ ಮನೆ ಮಾತಾಗಿದ್ದಾರೆ . ಅವರ ಭಾಷಾ ಶೈಲಿ ಸರಳ . ಆದರೆ ಅರ್ಥಗರ್ಭಿತ . ತಕ್ಕುದಾದ ಪದಗಳನ್ನು ಬಳಸುವ ಅವರ ಶೈಲಿ ಕೌಶಲಯುಕ್ತವಾದುದು ” ಎಂದರು .

    ಕಾರ್ಯಕ್ರಮವನ್ನು ಉದ್ಘಾಟಿಸಿದವರು ಡಾ . ಶ್ರೀಕೃಷ್ಣ ಭಟ್ .
    ” ಶಿಷ್ಯೆ ಪ್ರಮೀಳಾ ನಿರಂತರ ಬರೆಯುತ್ತ ಬಂದವರು . ಈಕೆ ಪರಿಚಯಿಸಿದವರಲ್ಲಿ ಹಲವರು ಆಕೆಯ ಗುರುಗಳೇ . ಹಾಗಾಗಿ ಶಿಕ್ಷಕರನ್ನು ಗೌರವಿಸುವ ಸಂಸ್ಕೃತಿ ಇಲ್ಲಿ ಸುವ್ಯಕ್ತ . ಗುರುವಿನ ಮೇಲೆ ಶಿಷ್ಯರಿಗಿರುವ ವಿಶ್ವಾಸ ಮತ್ತು ಶಿಷ್ಯರ ಮೇಲೆ ಗುರುವಿಗೆ ಇರುವ ಪ್ರೀತಿ ಅನನ್ಯ . ಅಂತಹ ಸಾಂಸ್ಕೃತಿಕ ಮುಖವೂ ಈ ಕೃತಿಗೆ ಇದೆ .” ಎಂದರು .

    ಪುಸ್ತಕ ಪರಿಚಯವನ್ನು ಮಾಡಿಸಿದವರು ಅರುಣಾ ನಾಗರಾಜ್ ಕಾಸರಗೋಡು ಸರಕಾರಿ ಕಾಲೇಜಿನ ಹಳೆ ವಿದ್ಯಾರ್ಥಿ . ” ಈ ಕೃತಿಯ ಹೆಚ್ಚಿನವರು ನನಗೂ ಪರಿಚಿತರೇ . ಈ ಲೇಖಕಿಯ ಇದೊಂದು ಮೇರುಕೃತಿ ವ್ಯಕ್ತಿ ಚಿತ್ರಗಳಾಗಿರುವುದರೊಂದಿಗೆ ಪೂರ್ತಿ ಓದಿ ಆದ ಮೇಲೆ ಪ್ರಮೀಳಾ ಅವರ ಆತ್ಮಚರಿತ್ರೆಯ ಹಾಗೂ ಕಾಣಿಸುತ್ತದೆ . ” ಎಂದರು .

    ಕೊನೆಯಲ್ಲಿ ಕಯ್ಯಾರು ಬಾಲಕಿಯರ ಭಜನಾ ತಂಡದ ಕುಣಿತ ಭಜನೆ ಇತ್ತು . ಸಮರ್ಪಕ ಹೆಜ್ಜೆ ತಾಳಕ್ಕೆ ಹೊಂದಿ ಲಘು , ಧ್ರುತ ಗತಿಯ ಕುಣಿತ ಮೋಹಕವಾಗಿತ್ತು , ಜಯಲಕ್ಷ್ಮಿ ಕಾರಂತ , ಸತೀಶ್ , ಸೌಮ್ಯ ಮುಂತಾದವರು ಶ್ರಮ ವಹಿಸಿ ತಂಡವನ್ನು ಕರೆತಂದಿದ್ದು ಈ ಭಜನಾ ಕಾರ್ಯಕ್ರಮ ಚೇತೋಹಾರಿ ಅನಿಸಿತು .
    ನೀರಜಾ ಕಾಮತ್ ನಿರವಹಿಸಿದರು . ವಿವಿಧ ಹಂತಗಳಲ್ಲಿ ಇತರರ ಸಹಾಕಾರವಿದ್ದು ಒಟ್ಟು ಕಾರ್ಯಕ್ರಮ ಸಾಹಿತ್ಯ , ಸಂಗೀತ , ನೃತ್ಯ , ಚಿತ್ರ , ಶಿಲ್ಪ ಕಲೆಗಳ ಸಂಗಮದಂತಿದ್ದು ಪ್ರೇಕ್ಷಕರ ಪಾಲಿಗೆ ರಂಜನೀಯವೂ ಕಿರಿಯರಿಗೆ ಜ್ಞಾನ ಪ್ರದವೂ ಆಗಿ ಪರಿಣಮಿಸಿತು .

    • ಪಿ ಎನ್ ಮೂಡಿತ್ತಾಯ

    Share. Facebook Twitter Pinterest LinkedIn Tumblr WhatsApp Email
    Previous Articleನಾಟಕ ವಿಮರ್ಶೆ: ಇಂಜಿನಿಯರುಗಳು ಕಟ್ಟಿದ ‘ಅಸಂಗತಗಳು’ – ಗಣೇಶ ಅಮೀನಗಡ
    Next Article ಎಡನೀರಿನಲ್ಲಿ ಸಮಾರೂಪಗೊಂಡ ಭೂಮಿಕಾ ಪ್ರತಿಷ್ಠಾನದ ‘ಕನ್ನಡ ಸಂಸ್ಕೃತಿ ಶಿಬಿರ’
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.