Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ಕಲಾಸಕ್ತರಿಗೆ ನೃತ್ಯಾಂಗನ್ ಟ್ರಸ್ಟಿನಿಂದ ನೃತ್ಯ ರಸದೌತಣ
    Bharathanatya

    ಮಂಗಳೂರಿನ ಕಲಾಸಕ್ತರಿಗೆ ನೃತ್ಯಾಂಗನ್ ಟ್ರಸ್ಟಿನಿಂದ ನೃತ್ಯ ರಸದೌತಣ

    February 9, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಡಾನ್ ಬಾಸ್ಕೋ ಸಭಾಂಗಣದಲ್ಲಿ ದಿನಾಂಕ 04-02-2024ರಂದು ಕಲಾಸಕ್ತರಿಗೆ ಸರದೌತಣ ನೀಡುವ ಇಬ್ಬರು ಕಲಾವಿದರ ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರಿನ ನೃತ್ಯಗುರು ವಿದ್ವಾನ್ ಪ್ರವೀಣ್ ಕುಮಾರ್ ಅವರ ಶಿಷ್ಯೆ ನವ್ಯಶ್ರೀ ಕೆ.ಎನ್. ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನೀಡಿದರು. ಮೊದಲಿಗೆ ಕಾಂಭೋಜಿ ರಾಗ-ಆದಿತಾಳದಲ್ಲಿ ‘ವರ್ಣಂ’ ಪ್ರದರ್ಶಿಸಿದ ಅವರು ಬಳಿಕ ‘ಜಗದೋದ್ಧಾರನ ಆಡಳಿಸಿದಳು ಯಶೋದೆ’ ಎಂಬ ಪುರಂದರದಾಸರ ಕೃತಿಯನ್ನು ಉತ್ತಮವಾಗಿ ಸಾದರಪಡಿಸಿದರು.

    ಬಳಿಕ ನೃತ್ಯಾಂಗನ್ ಟ್ರಸ್ಟ್ ನಿರ್ದೇಶಕಿ ಹಾಗೂ ನೃತ್ಯಗುರುಗಳಾದ ವಿದುಷಿ ರಾಧಿಕಾ ಶೆಟ್ಟಿ ‘ಮಾನುಷಿ’ ಎಂಬ ವಿಷಯಾಧಾರಿತ ನೃತ್ಯವನ್ನು ಪ್ರಸ್ತುತಪಡಿಸಿದರು. ಸರಸ್ವತಿ ನದಿಯ ಅನ್ವೇಷಣೆಯಿಂದ ಆರಂಭವಾಗುವ ಈ ಪ್ರಸ್ತುತಿಯು ನದಿಯ ಹುಟ್ಟಿನಿಂದ ಹರಿವಿನವರೆಗೆಯ ಕುತೂಹಲಕಾರಿ ವ್ಯಾಖ್ಯಾನಗಳನ್ನು ಒಳಗೊಂಡಿತ್ತು. ಸರಸ್ವತಿ ಇನ್ನೂ ಹರಿಯುತ್ತಾಳೆಯೇ? ಅವಳು ಉತ್ಸಾಹಭರಿತಳೇ? ಎಂಬ ಪ್ರಶ್ನೆಗಳೊಂದಿಗೆ ಅನ್ವೇಷಣೆಯ ಪಥವನ್ನು ಮುಂದುವರಿಸುತ್ತ, ಮೀರಾಬಾಯಿಯ ಕಡೆಗೆ ಹೊರಳಿದರು. ಆಕೆಯ ಕೃಷ್ಣಾನ್ವೇಷಣೆಗೆ ಸಾಂತ್ವನ ಲಭಿಸಿತೇ ಎಂಬ ಪ್ರಶ್ನೆ ಎದುರಾಗುತ್ತ, ಮತ್ತೊಂದೆಡೆ ತಾಯ್ತನದ ವರ್ಣನಾತೀತ ಅನುಭವದಿಂದ ದೇವಕಿ ವಂಚಿತಳಾದ ಬಗ್ಗೆ ಕಲಾವಿದೆ ಬೆಳಕು ಚೆಲ್ಲುತ್ತಾರೆ. ಕೊನೆಗೆ ವಚನಕಾರ್ತಿ ಅಕ್ಕ ಮಹಾದೇವಿ, ಚೆನ್ನಮಲ್ಲಿಕಾರ್ಜುನನ ಜತೆ ಐಕ್ಯವನ್ನು ಬಯಸುತ್ತಾಳೆ. ಆಕೆಯ ಉದ್ದೇಶ ಈಡೇರಬಹುದೇ? ಎಂಬ ಅನ್ವೇಷಣೆಯ ಪ್ರಶ್ನೆಗಳ ಉತ್ತರಗಳಿಗಾಗಿ ಮಾನುಷಿ ಹುಡುಕಾಡುತ್ತಳೇ ಇರುತ್ತಾಳೆ ಎಂಬುದನ್ನು ರಾಧಿಕಾ ಶೆಟ್ಟಿ ನೃತ್ಯದಲ್ಲಿ ಬಿಂಬಿಸಿದ್ದಾರೆ.

    ಹಿಮ್ಮೇಳದಲ್ಲಿ, ವಿದ್ಯಾಶ್ರೀ ರಾಧಾಕೃಷ್ಣ (ನಟುವಾಂಗ), ರೋಹಿತ್ ಭಟ್ ಉಪ್ಪೂರು (ಗಾಯನ), ವಿನಯ್ ನಾಗರಾಜನ್ (ಮೃದಂಗ) ಹಾಗೂ ನಿತೀಶ್ ಅಮ್ಮಣ್ಣಾಯ (ಕೊಳಲು) ಸಹಕರಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ನೃತ್ಯಾಂಗನ್ ಟ್ರಸ್ಟ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

    Share. Facebook Twitter Pinterest LinkedIn Tumblr WhatsApp Email
    Previous Articleವಿಮರ್ಶೆ – ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿನೂತನ ಯಕ್ಷರೂಪಕ ‘ಗೃಹಭಂಗ’.
    Next Article ಡಾ. ಕೆ. ಚಿನ್ನಪ್ಪ ಗೌಡ ಇವರ ‘ಸಿರಿಸಂಧಿ’ ಕೃತಿ ಬಿಡುಗಡೆ | ಫೆಬ್ರವರಿ 10
    roovari

    Add Comment Cancel Reply


    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.