Subscribe to Updates

    Get the latest creative news from FooBar about art, design and business.

    What's Hot

    ಅದ್ದೂರಿಯಾಗಿ ರಂಗಪ್ರವೇಶಗೈದ ಕುಮಾರಿ ಅಪೂರ್ವ ಬಿ. ರಾವ್

    September 11, 2025

    ಲೇಖನ | ‘ಹಕ್ಕಿಗೆ ಗರಿ ಇದ್ದಂತೆ ಕವಿಗೆ ಕವನ’ ದ.ರಾ. ಬೇಂದ್ರೆ

    September 11, 2025

    ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭ | ಸೆಪ್ಟೆಂಬರ್ 13

    September 11, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡಿನ ಎಡನೀರು ಮಠದಲ್ಲಿ ಕೃತಿಗಳ ಲೋಕಾರ್ಪಣೆ
    Book Release

    ಕಾಸರಗೋಡಿನ ಎಡನೀರು ಮಠದಲ್ಲಿ ಕೃತಿಗಳ ಲೋಕಾರ್ಪಣೆ

    May 24, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಾ. ರಮಾನಂದ ಬನಾರಿ ಹಾಗೂ ಗಣರಾಜ ಕುಂಬ್ಳೆ ರಚಿಸಿರುವ ‘ತಾಳಮದ್ದಳೆ ಒಂದು ಐತಿಹಾಸಿಕ ಅಧ್ಯಯನ’ ಮತ್ತು ಪ್ರೊ. ಪಿ. ಎನ್. ಮೂಡಿತ್ತಾಯರು ಸಂಪಾದಿಸಿದ ‘ಚಿಕಿತ್ಸಕ ದೃಷ್ಟಿಯ ಸಂಸ್ಕೃತಿಯ ಸೂತ್ರಧಾರಿ ಡಾ.ರಮಾನಂದ ಬನಾರಿ’ ಎಂಬ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 19-05-2024ರ ಭಾನುವಾರದಂದು ಕಾಸರಗೋಡಿನ ಎಡನೀರು ಮಠದ ಭಾರತೀ ಸದನದಲ್ಲಿ ನಡೆಯಿತು.


    ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ತಾಳಮದ್ದಳೆ ಕ್ಷೇತ್ರಕ್ಕೆ ಡಾ. ರಮಾನಂದ ಬನಾರಿಯವರು ನೀಡಿದ ಕೊಡುಗೆ ಅಪಾರವಾದುದು. ಅವರ ವ್ಯಕ್ತಿತ್ವ ಸಾಧನೆ ಪುಸ್ತಕರೂಪದಲ್ಲಿ ಹೊರಬರುತ್ತಿರುವುದು ತುಂಬಾ ಸಂತೋಷದ ವಿಚಾರ. ‘ತಾಳಮದ್ದಳೆಯ ಐತಿಹಾಸಿಕ ಅಧ್ಯಯನದ’ ಪುಸ್ತಕವನ್ನು ಹೊರತರುತ್ತಿರುವುದು ತುಂಬಾ ಸ್ತುತ್ಯರ್ಹ.” ಎಂದು ಹೇಳಿದರು.

    ಖ್ಯಾತ ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ ಮೈಸೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್, ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಚಂದ್ರಶೇಖರ ದಾಮ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುಮಕೂರು ವಿ. ವಿ. ಯ ಪ್ರಾಧ್ಯಾಪಕ ಡಾ. ಸಿಬಂತಿ ಪದ್ಮನಾಭ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ಡಾ. ಬಾಲಕೃಷ್ಣ ಹೊಸಂಗಡಿ ಕೃತಿ ಪರಿಚಯ ಮಾಡಿದರು. ಡಾ. ರಮಾನಂದ ಬನಾರಿ, ಗಣರಾಜ ಕುಂಬ್ಳೆ ಮಾತನಾಡಿದರು. ಕೃತಿಯ ಲೇಖಕರಾದ ಡಾ. ವಸಂತಕುಮಾರ್ ಪೆರ್ಲ, ರಾಧಾಕೃಷ್ಣ ಕೆ. ಉಳಿಯತಡ್ಕ, ಡಾ. ಪ್ರಮೀಳಾ ಮಾಧವ, ಟಿ. ಎ. ಎನ್. ಖಂಡಿಗೆ, ಗಣರಾಜ ಕುಂಬ್ಳೆ, ವೆಂಕಟರಾಮ ಭಟ್ ಸುಳ್ಯ ಹಾಗೂ ಮುರಳೀಧರ ಚೂಂತಾರು ಇವರನ್ನು ಕಾರ್ಯಕ್ರಮದಲ್ಲಿ ಶಾಲು ಹೊದೆಸಿ, ಸ್ಮರಣಿಕೆ ಕ ನೀಡಿ ಅಭಿನಂದಿಸಲಾಯಿತು.


    ಕೃತಿ ಬಿಡುಗಡೆಗೆ ಮುನ್ನ ಕರ್ನಾಟಕದೊಂದಿಗೆ ಕಾಸರಗೋಡಿನ ಸಾಂಸ್ಕೃತಿಕ ವಿಲಿನೀಕರಣ ಎಂಬ ವಿಷಯದಲ್ಲಿ ಸಂವಾದಗೋಷ್ಠಿ ಜರಗಿತು. ಮಾಧ್ಯಮ ತಜ್ಞ ಭಾಸ್ಕರ ರೈ ಕುಕ್ಕುವಳ್ಳಿ ಗೋಷ್ಠಿಯನ್ನು ಉದ್ಘಾಟಿಸಿದರು. ಡಾ. ರಮಾನಂದ ಬನಾರಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ದೇಶಕ ಡಾ. ವಸಂತಕುಮಾರ್ ಪೆರ್ಲ, ದ. ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸಾಹಿತಿ ಹಾಗೂ ಉಪನ್ಯಾಸಕರಾದ ಟಿ. ಎ. ಎನ್. ಖಂಡಿಗೆ ಸಂವಾದದಲ್ಲಿ ಮಾತನಾಡಿದರು.

    ಸಮಾರಂಭದ ಅಂಗವಾಗಿ ಡಾ.ರಮಾನಂದ ಬನಾರಿಯವರ ಕಾವ್ಯಗಳ ವಾಚನ ಮತ್ತು ಗಾಯನ ನಡೆಯಿತು. ಸಿ. ಎಚ್. ಗೋಪಾಲಭಟ್ ಚುಕ್ಕಿನಡ್ಕ, ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಪ್ರಮೀಳಾ ಚುಳ್ಳಿಕಾನ, ವೆಂಕಟ್ ಭಟ್ ಎಡನೀರು, ಜಯಶ್ರೀ ಶ್ರೀಕೃಷ್ಣಯ್ಯ ಅನಂತಪುರ, ವಸಂತ ಬಾರಡ್ಕ ಇವರು ಕಾವ್ಯಗಳ ವಾಚನ, ಗಾಯನ ನಡೆಸಿದರು. ಶ್ರೀಕೃಷ್ಣಯ್ಯ ಅನಂತಪುರ, ನಾರಾಯಣ ದೇಲಂಪಾಡಿ, ಕಿಶೋರ ಬನಾರಿ ಉಪಸ್ಥಿತರಿದ್ದರು.
    ಅಹಲ್ಯಾ ಬನಾರಿ, ಪೃಥ್ವಿ ಬನಾರಿ ಪ್ರಾರ್ಥನೆ ಹಾಡಿ, ವಿಜಯಲಕ್ಷ್ಮೀ ಶ್ಯಾನುಭೋಗ್ ಸ್ವಾಗತಿಸಿ, ದಿವ್ಯಾ ಗಟ್ಟಿ ಪರಕ್ಕಿಲ ಕಾರ್ಯಕ್ರಮ ನಿರೂಪಿಸಿ, ವಿಶಾಲಾಕ್ಷ ಪುತ್ರಕಳ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ರಾಗ ಧನ ಸಂಸ್ಥೆಯ ‘ಸಂಗೀತ ಕಾರ್ಯಾಗಾರ’ದ ಸಮಾರೋಪ ಸಮಾರಂಭ
    Next Article ನಯನ ಸಭಾಂಗಣದಲ್ಲಿ ಕಾಸರಗೋಡಿನ ರಂಗಚಿನ್ನಾರಿಯಿಂದ ನಾಟಕ ಪ್ರದರ್ಶನ | ಜೂನ್ 1
    roovari

    Add Comment Cancel Reply


    Related Posts

    ‘ಪದ್ಮಗಿರಿ ಕಲಾ ಕುಟೀರ’ದಲ್ಲಿ ‘ಆಕಾಶದಿಂದ ಪಾತಾಳಕ್ಕೆ’ ಕೃತಿ ಲೋಕಾರ್ಪಣೆ | ಸೆಪ್ಟೆಂಬರ್ 13

    September 11, 2025

    ಮಂಗಳೂರಿನ ಬಾಳಂಭಟ್ ರಾಧಾಕೃಷ್ಣ ಸಭಾಂಗಣದಲ್ಲಿ ನುಡಿ ನಮನ ಮತ್ತು ಕೃತಿ ಬಿಡುಗಡೆ

    September 11, 2025

    ಪುಸ್ತಕ ವಿಮರ್ಶೆ | ‘ದುಂಡು ಮಲ್ಲಿಗೆಯ ಮುಖದವಳು’ ಕಥಾಸಂಕಲನ

    September 11, 2025

    ಎಂ. ಜಿ. ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆಯ ಫಲಿತಾಂಶ ಪ್ರಕಟ

    September 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.