Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಖ್ಯಾತ ಸಾಹಿತಿ ಹಾಗೂ ಸಂಶೋಧಕ ಡಾ. ವೀರಣ್ಣ ರಾಜೂರ

    June 4, 2025

    ಉದ್ಘಾಟನೆಗೊಂಡ ‘ಬಾಲಗಾನ ಯಶೋಯಾನ’ ಕಾರ್ಯಕ್ರಮ

    June 4, 2025

    ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸ್ವೀಕಾರ

    June 4, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಕೃತಿಗಳ ಲೋಕಾರ್ಪಣೆ 
    Book Release

    ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಕೃತಿಗಳ ಲೋಕಾರ್ಪಣೆ 

    November 14, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಕಾಸರಗೋಡು :  ಬರಹಗಾರ್ತಿ ಪ್ರಸನ್ನಾ ವಿ. ಚೆಕ್ಕೆಮನೆ ಇವರ ಎರಡು ಹೊಸ ಕೃತಿಗಳ ಲೋಕಾರ್ಪಣಾ ಸಮಾರಂಭವು ದಿನಾಂಕ 11 ನವೆಂಬರ್ 2024ರ ಸೋಮವಾರ ಸಂಜೆ ಎದುರ್ತೋಡಿನ ‘ಸೀ ಕ್ಯೂಬ್’ ಇಲ್ಲಿ  ನಡೆಯಿತು.
    ಪ್ರಸನ್ನಾ ಅವರ ಹನ್ನೊಂದನೇ ಕೃತಿ ‘ಬಾನಂಚಿನ ಹೊಸಗಾನ’ ಪುಸ್ತಕವನ್ನು ಭಾರತೀಯ ಭೂ ಸೇನೆಯ ನಿವೃತ್ತ ಕಮಾಂಡೋ ಶ್ಯಾಮರಾಜ್ ಇ. ವಿ. ಹಾಗೂ ಹನ್ನೆರಡನೇ ಕೃತಿ ‘ಪೋಗದೆ ಇರೆಲೋ ರಂಗ…’ ಪುಸ್ತಕವನ್ನು ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ ಲೋಕಾರ್ಪಣೆಗೊಳಿಸಿದರು.
    ಸರಳ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಕನ್ನಡ ಸಾಹಿತ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷರಾದ  ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ “ಕಾಸರಗೋಡು ಎಂದಿಗೂ ಕನ್ನಡದ ಕಂಪನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಅನೇಕ ಘಟಾನುಘಟಿಗಳು ಕನ್ನಡಕ್ಕಾಗಿ ದೊಡ್ಡ ಕೊಡುಗೆ ನೀಡಿದ್ದಾರೆ.  ಯಾವತ್ತೂ ಕಾರ್ಯಕ್ರಮಗಳು ಹೃದಯಕ್ಕೆ ಹತ್ತಿರವಾಗಿ, ಮನಸ್ಸಿಗೆ ಸಂತೋಷ ನೀಡುವಂತಿರಬೇಕು. ಇಂತಹ ಸನ್ನಿವೇಶದಲ್ಲಿ ಈ ಕೃತಿ ಲೋಕಾರ್ಪಣೆಗೊಳ್ಳುತಿರುವುದು ಸಂತಸ ತಂದಿದೆ. ಪ್ರಸನ್ನಾ ವಿ. ಚೆಕ್ಕೆಮನೆ ಬಹಳ ಆಸಕ್ತಿಯಿಂದ ಕೃತಿಯನ್ನು ರಚಿಸಿದ್ದಾರೆ. ಇವರ ಸಾಧನೆ ಎಲ್ಲರೂ ಮೆಚ್ಚುವಂತಾಗಿದೆ.” ಎಂದರು.
    ಮುಖ ಅತಿಥಿಯಾಗಿ ಭಾಗವಹಿಸಿದ ಪತ್ರಕರ್ತ ಪ್ರಕಾಶ್ ಇಳಂತಿಲ ಮಾತನಾಡಿ “ಸೃಜನಶೀಲವಾದಂತಹ ಮನಸ್ಸಿನೊಂದಿಗೆ ಸಾಹಿತ್ಯವನ್ನು ಮೆಚ್ಚುವ ಕೃತಿಗಾರರ ಸಾಧನೆ ಸಾರ್ಥಕತೆಯನ್ನು ಕಂಡಿದೆ. ಇವರ ಕೃತಿ ಸಾಹಿತ್ಯ ಆಸಕ್ತಿ ಇಲ್ಲದವರನ್ನೂ ಅತ್ತ ಆಕರ್ಷಿಸುವಂತಹ ಬರಹವಾಗಿದೆ.” ಎಂದರು.
    ಕಾರ್ಯಕ್ರಮದ ಆರಂಭದಲ್ಲಿ ದೀಪ ಪ್ರಜ್ವಲನೆಯನ್ನು ರಮಾ ಎಚ್. ಭಟ್ ಹಾಗೂ ಶುಭಾ ನಿರ್ವಹಿಸಿದರು. ಮಾನಸ ಪ್ರಾರ್ಥನೆ ಹಾಡಿದರು.
    ಕಾರ್ಯಕ್ರಮದಲ್ಲಿ ಭೂಮಿಕಾ ಪ್ರತಿಷ್ಠಾನದ ಅನುಪಮಾ ರಾಘವೇಂದ್ರ, ತಂತ್ರಿವರ್ಯ ಶಂಕರನಾರಾಯಣ ಶರ್ಮಾ ಗೋಸಾಡ, ಗಂಗಾಧರ್ ತೆಕ್ಕೆ ಮೂಲೆ, ವೆಂಕಟಕೃಷ್ಣ ಭಟ್, ರಮಾ, ಶುಭ, ರಾಜಶ್ರೀ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡದ ರಂಗಾಯಣ ಸಭಾ ಭವನದಲ್ಲಿ ‘ಕನ್ನಡ ನುಡಿ ಸಂಭ್ರಮ -2024’ | ನವೆಂಬರ್ 15
    Next Article ಉಡುಪಿಯಲ್ಲಿ ಕನಕ ಗಾಯನ ಸ್ಪರ್ಧೆ | ಡಿಸೆಂಬರ್ 07 
    roovari

    Add Comment Cancel Reply


    Related Posts

    ವಿದ್ಯಾದಾಯಿನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಸ್ವೀಕಾರ

    June 4, 2025

     ಮಂಗಳೂರು ವಿವಿಯಲ್ಲಿ ಪ್ರೊ. ವಿವೇಕ ರೈಗಳಿಗೆ ಅಭಿವಂದನೆ

    June 4, 2025

    ಕಲಾಂಗಣದಲ್ಲಿ ಕೊಂಕಣಿ ಕಾರ್ಯಕ್ರಮಗಳು

    June 4, 2025

    ಪುಸ್ತಕ ವಿಮರ್ಶೆ | ಡಾ. ಪಾದೇಕಲ್ಲು ವಿಷ್ಣು ಭಟ್ಟ ಇವರ ವಿಮರ್ಶಾ ಕೃತಿ ‘ಗ್ರಂಥಾಲೋಕ’

    June 4, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.