Subscribe to Updates

    Get the latest creative news from FooBar about art, design and business.

    What's Hot

    ಪರಿಚಯ | ಸುನಾದ ಚತುರ – ವಿಶ್ವಂಭರ ಅಲ್ಸೆ, ಐರೋಡಿ

    July 12, 2025

    ನಾದಾವಧಾನ ಪ್ರತಿಷ್ಠಾನದಿಂದ ಆನ್ಲೈನ್ ಯಕ್ಷಗಾನ ಭಾಗವತಿಕೆ-ಮದ್ದಳೆ-ಚಂಡೆ-ನೃತ್ಯಗಳ ತರಗತಿ

    July 12, 2025

    ಶಿರಿಯಾರದ ಸಾಹೇಬರಕಟ್ಟೆಯಲ್ಲಿ ‘ಪಂಚಸ್ವರ ಯಕ್ಷಗಾನ ವೈಭವ’

    July 12, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬ್ರಹ್ಮಕಲಶೋತ್ಸವ – ನೃತ್ಯ ಸುಧಾ
    Bharathanatya

    ಬ್ರಹ್ಮಕಲಶೋತ್ಸವ – ನೃತ್ಯ ಸುಧಾ

    May 27, 2023Updated:August 19, 20231 Comment1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ದೇರೆಬೈಲು ಕೊಂಚಾಡಿಯ ಶ್ರೀರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನಗರದ ನೃತ್ಯ ಸುಧಾ ಸಂಸ್ಥೆಯ ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಶಿಷ್ಯ ವರ್ಗ ದಿನಾಂಕ :23-05-2023 ಮಂಗಳವಾರ ರಾತ್ರಿ ಪ್ರಸ್ತುತಪಡಿಸಿದ ಭರತನಾಟ್ಯ ಕಾರ್ಯಕ್ರಮ ಕಲೆ ಮತ್ತು ಭಕ್ತಿ ಮೇಳೈಸಿ ಸಂಭ್ರಮದ ವಾತಾವರಣ ಸೃಷ್ಟಿಸಿತು.

    ಭಾವಪೂರ್ಣ ನಾಟ್ಯಭಂಗಿ ಮತ್ತು ಮೋಹಕ ಆಂಗಿಕ ಅಭಿನಯದ ಮೂಲಕ ಕಥಾಸಾರವನ್ನು ಪ್ರಸ್ತುತಪಡಿಸಿದ ಕಲಾವಿದರು ಸಹೃದಯಿಗಳನ್ನು ರಸಸಾಗರದಲ್ಲಿ ಮುಳುಗೇಳುವಂತೆ ಮಾಡಿದರು. ಕೃಷ್ಣನ ಲೀಲೆ, ರಾಮನ ಮಹಿಮೆ ಮತ್ತು ಹನುಮನ ನಿಷ್ಠೆ ಇತ್ಯಾದಿಗಳನ್ನು ನೃತ್ಯ ರೂಪಕದ ಮೂಲಕ ಕಂಡ ಕಲಾಪ್ರೇಮಿಗಳ ಮನಸ್ಸು ಭಕ್ತಿ-ಭಾವದಲ್ಲಿ ಆರ್ದ್ರವಾಯಿತು.

    ಪುಷ್ಪಾಂಜಲಿಯ ನಂತರ ಗೌಳ ರಾಗದಲ್ಲಿ ಏಕದಂತ ಗಣೇಶನ ಸ್ತುತಿಯ ಮೂಲಕ ಪ್ರೇಕ್ಷಕರ ಮನೋರಂಗಕ್ಕೆ ಕಲಾವಿದರು ಪ್ರವೇಶ ಮಾಡಿದ ಬೆನ್ನಲ್ಲೇ ಚಿಕ್ಕಮಕ್ಕಳು ಪ್ರಸ್ತುತಪಡಿಸಿದ ಗಣೇಶ, ಸರಸ್ವತಿ ಮುಂತಾದವರನ್ನು ಕೊಂಡಾಡುವ ನಾಲ್ಕು ಶ್ಲೋಕಗಳ ಗುಚ್ಛವು ಮುದ ನೀಡಿತು.

    ಬೇಹಾಗ್ ರಾಗದಲ್ಲಿ ಡಿವಿಜಿ ಅವರ ಅಂತಃಪುರ ಗೀತೆಗಳ ‘ಏನೇ ಶುಕಭಾಷಿಣಿ’ಯನ್ನು ಪ್ರಸ್ತುತಪಡಿಸಿದ ಕಲಾವಿದರು ಬೇಲೂರಿನ ಶಿಲಾಬಾಲಿಕೆಯರ ಸೌಂದರ್ಯವನ್ನು ವರ್ಣಿಸಿದರು. ರಾಧಾ ಕೃಷ್ಣೆಯರ ನೆನಪಿನಲ್ಲಿ ರಾಧಿಕೆಯರ ಆಟಗಳನ್ನು ಬಣ್ಣಿಸಿದ ನಂತರ ಬೀಜಾಕ್ಷರ ಮಂತ್ರವನ್ನು ಒಳಗೊಂಡ ದೇವಿಸ್ತುತಿಯು ರೇವತಿ, ಹಂಸಧ್ವನಿ, ಗೌಳ, ಕಾಮವರ್ಧಿನಿ ಮತ್ತು ಸಾಮ ರಾಗಗಳ ಮಾಲಿಕೆಯಲ್ಲಿ ಮೂಡಿಬಂದಿತು.

    ಕಲ್ಯಾಣಿ ರಾಗದಲ್ಲಿ ಶಾರದೆಯನ್ನು ಪೂಜಿಸುವ ‘ಶೃಂಗಪುರಾಧೀಶ್ವರಿ ಶಾರದೆ’ ಹಾಡು ಕೂಡ ನೃತ್ಯದ ಚೌಕಟ್ಟಿನಲ್ಲಿ ಮೋಹಕವಾಗಿ ಪ್ರಸ್ತುತಗೊಂಡಿತು. ಹರಿಸ್ಮರಣೆಯಲ್ಲಿ ದೌಪದಿ ವಸ್ತ್ರದಾನವನ್ನು ಅಭಿನಯಿಸಿದ ಕಲಾವಿದರು ಹನುಮಂತ ದೇವ ನಮೋ ಎಂಬ ಪೂರ್ವಿಕಲ್ಯಾಣಿ ರಾಗದ ಹಾಡಿಗೆ ಹೆಜ್ಜೆ ಹಾಕಿದಾಗ ಪ್ರೇಕ್ಷಕರು ಲಯ-ಲಾಸ್ಯವನ್ನೊಳಗೊಂಡ ಕಥೆಯ ಲೋಕದಲ್ಲಿ ವಿಹರಿಸಿದರು. ಹನುಮಂತ ಮತ್ತು ರಾಮನ ಭೇಟಿ, ಲಂಕಾದಹನ, ಸೇತುಬಂಧನ ಮುಂತಾದ ಸನ್ನಿವೇಶಗಳನ್ನು ಮನೋಜ್ಞವಾಗಿ ಅಭಿನಯಿಸಿದಾಗ ಸಭಾಂಗಣದಲ್ಲಿ ಚಪ್ಪಾಳೆಯ ಮಳೆ ಸುರಿಯಿತು. ಬೃಂದಾವನಿ ಸಾರಂಗ್ ರಾಗದ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿತ್ತು.

    Share. Facebook Twitter Pinterest LinkedIn Tumblr WhatsApp Email
    Previous Articleಅಂಬಿಗರ ಚೌಡಯ್ಯ: ವಚನ ಮೀಮಾಂಸೆ – ರಾಷ್ಟ್ರಮಟ್ಟದ ವಿಚಾರ ಸಂಕಿರಣ
    Next Article ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ ಪ್ರೊ. ಜಿ.ಎಚ್. ನಾಯಕ ವಿಧಿವಶ
    roovari

    1 Comment

    1. soumya sudhindra on May 27, 2023 8:21 pm

      Thank you so much for the coverage 🙏🏻

      Reply

    Add Comment Cancel Reply


    Related Posts

    ಭರತಾಂಜಲಿ (ರಿ.) ಕೊಟ್ಟಾರ ಸಂಸ್ಥೆಯಿಂದ ಗಣೇಶಪುರದಲ್ಲಿ ‘ಗುರು ಪೂರ್ಣಿಮ’ ಕಾರ್ಯಕ್ರಮ | ಜುಲೈ 13

    July 11, 2025

    ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಭರತನಾಟ್ಯ’ ಕಾರ್ಯಕ್ರಮ | ಜುಲೈ 13

    July 11, 2025

    ಮಂಗಳೂರಿನ ಪುರಭವನದಲ್ಲಿ ಭರತಾಂಜಲಿಯ ಕಿಂಕಿಣಿ ತ್ರಿoಶತ್ ಸಂಭ್ರಮ

    July 8, 2025

    ಪರಿಚಯ | ಯಕ್ಷ ಪ್ರತಿಭೆಯ ಕಲಾವಲ್ಲರಿ – ಶ್ರುತಿ ಭಟ್ ಮಾರಣಕಟ್ಟೆ

    July 6, 2025

    1 Comment

    1. soumya sudhindra on May 27, 2023 8:21 pm

      Thank you so much for the coverage 🙏🏻

      Reply

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.