Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆಯ ಹಯಗ್ರೀವದಲ್ಲಿ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮ
    Awards

    ತೆಕ್ಕಟ್ಟೆಯ ಹಯಗ್ರೀವದಲ್ಲಿ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮ

    December 23, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ತೆಕ್ಕಟ್ಟೆ: ಸಂಯಮಂ (ರಿ.)ಕೋಟೇಶ್ವರ ಹಾಗೂ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999’  ಶ್ವೇತಯಾನ-8’ ಇದರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಂಸದ ಮತ್ತು ಸಚಿವರಾದ ಪ್ರಮೋದ ಮಧ್ವರಾಜ್ ಮಾತನಾಡಿ “ಮಲ್ಪೆಯ ಸಾಮಗ ಮನೆತನದವರೆಲ್ಲರೂ ವಿಶಿಷ್ಟ ಪ್ರತಿಭಾವಂತರು. ವಾಸುದೇವ ಸಾಮಗರು ವಿದ್ವತ್ತಿನಲ್ಲಿ ತಮ್ಮ ಹಿರಿಯರನ್ನು ಅನುಸರಿಸಿದರೂ, ತಮ್ಮದೇ ಆದ ಅಭಿವ್ಯಕ್ತಿಯ ಕ್ರಮವನ್ನು ರೂಪಿಸಿಕೊಂಡು ಜನಪ್ರಿಯ ಕಲಾವಿದರಾದರು. ಪಾತ್ರ ಪೂರಕವಾಗಿ ಬೇಕಾದಾಗ, ಎದುರು ಪಾತ್ರಧಾರಿ ತಮ್ಮ ತಂದೆಯೇ ಆಗಿದ್ದರೂ ನಿಷ್ಠುರವಾಗಿ ಮಾತನಾಡುತ್ತಿದ್ದುದನ್ನು ನಾನು ನೋಡಿದ್ದೇನೆ.” ಎಂದರು.
    ಸಾಮಗ ಪ್ರಶಸ್ತಿಯನ್ನು ಸ್ವೀಕರಿಸಿದ  ಪ್ರಸಿದ್ಧ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಮಾತನಾಡಿ “ವಾಸುದೇವ ಸಾಮಗರು ಎಲ್ಲರಿಗೂ ಆತ್ಮೀಯರು. ನಾರಣಪ್ಪ ಉಪ್ಪೂರರ ಅಮೃತೇಶ್ವರಿ ಮೇಳದಲ್ಲಿ ಉದಯೋನ್ಮುಖ ಕಲಾವಿದರಾಗಿ ಹೆಸರಿಸಿಕೊಂಡವರು ಸಾಮಗರು. ಸಾಮಗರೊಂದಿಗಿನ ಸಹವಾಸದಲ್ಲಿ ನಾನು ಮಾತನ್ನು ಹಾಗೂ ಚುರುಕಿನ ಕುಣಿತವನ್ನು  ಕಲಿತೆ. ಇದು ನನ್ನ ಪ್ರಸಿದ್ಧಿಗೆ ಕಾರಣವಾಯ್ತು’ ಎಂದರು.
    ಸಂಸ್ಮರಣಾ ಮಾತುಗಳನ್ನಾಡಿದ ಡಾ. ವೈಕುಂಠ ಹೇರ್ಳೆ “ಸಾಮಗರ ಜೀವನೋತ್ಸಾಹ, ಗುಣಗ್ರಾಹಿತ್ವ, ಪಾತ್ರಚಿತ್ರಣ ಜನರಿಗೆ ಆಪ್ತವಾಗಿ ತಲುಪುವ ಶೈಲಿ, ಬಹುಮುಖೀ ವ್ಯಕ್ತಿತ್ವ ಮೊದಲಾದವು ಎಲ್ಲರಿಗೂ ಆದರ್ಶ.” ಎಂದರು.
     ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಹೊರಗೆ ಒರಟರಂತೆ ಕಾಣುವ ನಿಷ್ಠುರ ನುಡಿಯ ಸಾಮಗರು, ಮಾನವೀಯತೆಯ ಅಂತಃಕರಣವನ್ನು ಹೊಂದಿದವರು.” ಎಂಬದನ್ನು  ನೆನಪಿಸಿಕೊಂಡರು.
    ಸಾಮಗರ ಅರ್ಥ ಸಹಿತವಾದ ‘ಯಕ್ಷ ರಸಾಯನ’ ಗ್ರಂಥವನ್ನು ವಿಶ್ಲೇಷಿಸಿದ ಪ್ರಸಿದ್ಧ ಅರ್ಥಧಾರಿ ಉಜಿರೆ ಅಶೋಕ ಭಟ್‌ “ವಾಸುದೇವ ಸಾಮಗರ ಈ ಗ್ರಂಥ ಮತ್ತು ‘ಸಂಯಮಂ’ ಎಂಬ ತಂಡಗಳು ಯಕ್ಷಗಾನದ ಕ್ರಾಂತಿ, ಉತ್ಕ್ರಾಂತಿ  ಮತ್ತು ಸಂತ್ಕ್ರಾಂತಿ.” ಎಂದರು.
    ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಮುರಳೀ ಕಡೆಕಾರ್ ಕಲಾರಂಗದೊಂದಿಗೆ ಸಾಮಗರ ಒಡನಾಟ ಮತ್ತು ಅವರಲ್ಲಿದ್ದ ಕಲಾವಿದರಿಗಿರಬೇಕಾದ ಸಾಂಘಿಕ ಪ್ರಜ್ಷೆಯ ಕಳಕಳಿಯ ಬಗ್ಗೆ ಪ್ರಸ್ತಾಪಿಸಿದರು.
    ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಕು. ಆರಭಿ ಸಾಮಗ ಪ್ರಾರ್ಥಿಸಿ, ಡಾ. ಪ್ರದೀಪ ಸಾಮಗ ಪ್ರಾಸ್ತಾವಿಕ ನುಡಿಗಳನ್ನಾಡಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ವಂದಿಸಿದರು.
     ಈ ಸಂದರ್ಭದಲ್ಲಿ ‘ಯಕ್ಷ ರಸಾಯನ’ದಿಂದ ಆಯ್ದ ಭಾಗಗಳ ಪ್ರಸ್ತುತಿ ‘ಪಡಿನುಡಿ’ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಸಾಮಗರ ಪರಿಕಲ್ಪನೆಯ ವಿಶಿಷ್ಠ ಪ್ರಯೋಗ ‘ದುರಂತ ನಾಯಕಿ’ ಎಂಬ ಯಕ್ಷ ನಾಟಕವು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನ ಕಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಅಮೃತವರ್ಷಿಣಿ’ ಮ್ಯೂಸಿಕ್ ಅಕಾಡೆಮಿಯ ವಾರ್ಷಿಕೋತ್ಸವ
    Next Article ಸಾಲಿಗ್ರಾಮ ಮಕ್ಕಳ ಮೇಳದ ‘ಸುವರ್ಣ ಸಮ್ಮಿಲನ- 50’ ‘ಸುವರ್ಣ ಪುರಸ್ಕಾರ’ ಸಮಾರಂಭ | ಡಿಸೆಂಬರ್ 25
    roovari

    Add Comment Cancel Reply


    Related Posts

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    ಸಿರಿಬಾಗಿಲಿನಲ್ಲಿ ಯಕ್ಷಗಾನ ಪ್ರಸಂಗ ರಚನಾ ಕಮ್ಮಟ | ಜುಲೈ 06

    June 7, 2025

    ಯಕ್ಷಗಾನ ವೃತ್ತಿ ಮೇಳದ ಕಲಾವಿದರಿಗೆ ಮಾರ್ಗದರ್ಶಿ ಶಿಬಿರ | ಜುಲೈ 01

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.