Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಕೊಗ್ಗ ದೇವಣ್ಣ ಕಾಮತ್‌’ ಪ್ರಶಸ್ತಿಗೆ ಏಳ್ ಜಿತ್ ಸದಾನಂದ ಪ್ರಭು ಆಯ್ಕೆ | ಪ್ರಶಸ್ತಿ ಪ್ರದಾನ ಜನವರಿ 28
    Awards

    ‘ಕೊಗ್ಗ ದೇವಣ್ಣ ಕಾಮತ್‌’ ಪ್ರಶಸ್ತಿಗೆ ಏಳ್ ಜಿತ್ ಸದಾನಂದ ಪ್ರಭು ಆಯ್ಕೆ | ಪ್ರಶಸ್ತಿ ಪ್ರದಾನ ಜನವರಿ 28

    December 21, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಗಂಗೊಳ್ಳಿ : ಉಪ್ಪಿನಕುದ್ರು ಗೊಂಬೆಯಾಟ ರಂಗಭೂಮಿಯ ಹರಿಕಾರ, ಸೂತ್ರ ಕ್ರೀಡೆಯ ಗಾರುಡಿಗ ‘ಕೊಗ್ಗ ದೇವಣ್ಣ ಕಾಮತ್‌’ ಅವರ ಹೆಸರಿನಲ್ಲಿ ನೀಡುವ 2023-24ರ ಸಾಲಿನ ಪ್ರಶಸ್ತಿಗೆ ಯಕ್ಷಗಾನ ಕ್ಷೇತ್ರದ ಹಿರಿಯ ಮದ್ದಳೆ ಕಲಾವಿದ ಏಳ್ ಜಿತ್ ಸದಾನಂದ ಪ್ರಭು ಅವರನ್ನು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಸಮಿತಿ ಆಯ್ಕೆ ಮಾಡಿದೆ. ದಿನಾಂಕ 28-01-2024ರಂದು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ 9ನೇ ವಾರ್ಷಿಕೋತ್ಸವದಲ್ಲಿ ಗಣ್ಯರಿಂದ ಈ ಪ್ರಶಸ್ತಿ ಪ್ರದಾನವಾಗಲಿದೆ.

    ತೆಕ್ಕಟ್ಟೆ ರಾಮಚಂದ್ರ ಪ್ರಭು ಸರಸ್ವತಿ ದಂಪತಿಯ ಪುತ್ರರಾಗಿ 1935ರಲ್ಲಿ ಜನಿಸಿದ ಇವರು ಏಳ್ ಜಿತ್‌ನಲ್ಲಿ 5ನೇ ತರಗತಿಯವರೆಗೆ ಹಾಗೂ ಬೈಂದೂರು ಹೈಸ್ಕೂಲಿನಲ್ಲಿ 8ನೇ ತರಗತಿಯವರೆಗೆ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು. ಬಾಲ್ಯದಿಂದಲೇ ಯಕ್ಷಗಾನದ ಒಲವು ಹೊಂದಿದ್ದ ಅವರು ತಮ್ಮ ದೊಡ್ಡಪ್ಪನವರಾದ ದಾಸಪ್ಪ ಪ್ರಭುಗಳಲ್ಲಿ ಮದ್ದಳೆಯ ಪ್ರಾಥಮಿಕ ಅಭ್ಯಾಸ ಪಡೆದರು. ನಂತರ ಗುರು ವೀರಭದ್ರ ನಾಯ್ಕರ ಯಜಮಾನಿಕೆಯ ಪ್ರಸಿದ್ಧ ಮೃದಂಗ ವಾದಕ ಬೇಳಂಜೆ ತಿಮ್ಮಪ್ಪ ನಾಯ್ಕರ ಒಡನಾಟ ಮಾಡಿ ಮದ್ದಲೆ ಹಾಗೂ ಚಂಡೆ ಎರಡನ್ನೂ ಕಲಿತುಕೊಂಡರು. ಈ ನಡುವೆ ಇವರು ಏಳ್ ಜಿತ್‌ ಅಂಚೆ ಕಚೇರಿಯಲ್ಲಿ ಇ.ಡಿ.ಡಿ.ಪಿ.ಯಾಗಿ ಸೇರ್ಪಡೆಗೊಂಡು ಬಳಿಕ ಪೋಸ್ಟ್ ಮನ್ ಆಗಿ ಭಡ್ತಿ ಹೊಂದಿ ಕುಂದಾಪುರ, ತೆಕ್ಕಟ್ಟೆ ಕೋಟೇಶ್ವರ, ಬೈಂದೂರು, ಶಿರೂರು ಹಾಗೂ ಕೊಲ್ಲೂರು ಮುಂತಾದ ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

    ಬಳಿಕ ತಮ್ಮನ್ನು ಸಂಪೂರ್ಣ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಮಾರಣಕಟ್ಟೆ ಕಮಲಶಿಲೆ, ಅಮೃತೇಶ್ವರೀ, ಬಗ್ವಾಡಿ, ನಾಗರಕೊಡಿಗೆ, ಗೋಳಿಗರಡಿ, ಬೈಂದೂರು, ಕಳವಾಡಿ, ಕೊಲ್ಲೂರು ಮೇಳ, ಚಿಕ್ಕ ಹೊನ್ನೇಸರ ಮೇಳ, ಕೊಡವೂರು ಮೇಳಗಳಲ್ಲಿಯೂ ತಮ್ಮ ಸೇವೆ ಸಲ್ಲಿಸಿದ್ದರು. ಮರವಂತೆ ನರಸಿಂಹ ದಾಸರು ಹಾಗೂ ಶ್ರೀನಿವಾಸ ದಾಸರ ಜೊತೆಗೆ ತಿರುಗಾಟವನ್ನೂ ನಡೆಸಿದರು. ನವರಾತ್ರಿಯಲ್ಲಿ ಹೂವಿನಕೋಲು ಹಾಗೂ ಚಿಕ್ಕ ಮೇಳಗಳಲ್ಲಿಯೂ ಇವರು ಸೇವೆ ಸಲ್ಲಿಸಿದ್ದು, ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವರ್ಷಂಪ್ರತಿ ಆಷಾಢ ಏಕಾದಶಿಯಂದು ನಡೆಯುವ ತಾಳಮದ್ದಳೆಯಲ್ಲಿ ಮದ್ದಲೆಗಾರರಾಗಿ ತಮ್ಮ ಸಹಕಾರ ನೀಡುತ್ತಾ ಬಂದಿದ್ದಾರೆ. 30 ವರ್ಷಗಳ ಸುಧೀರ್ಘ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ಚೇತನಾ ಬಾಲವಿಕಾಸ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
    Next Article ಮಂಗಳೂರಿನಲ್ಲಿ ವಿಶ್ವಂ ಸ್ಕೂಲ್ ಅಫ್ ಆರ್ಟ್ ಉದ್ಘಾಟನೆ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ‘ಶ್ರೀಮತಿ ವಿಜಯ ವಿಷ್ಣುಭಟ್ ದತ್ತಿ ಪ್ರಶಸ್ತಿ’ಗೆ ಕಥಾ ಸಂಕಲನ ‘ಹಾಯ್ ಮೆಟಾಯ್’ ಕೃತಿ ಆಯ್ಕೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.