Subscribe to Updates

    Get the latest creative news from FooBar about art, design and business.

    What's Hot

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಗಾನ ನೃತ್ಯ ಅಕಾಡೆಮಿ ಮಂಗಳೂರು ವತಿಯಿಂದ ಸುಳ್ಯದಲ್ಲಿ ‘ಆರೋಹಣ 2023’
    Bharathanatya

    ಗಾನ ನೃತ್ಯ ಅಕಾಡೆಮಿ ಮಂಗಳೂರು ವತಿಯಿಂದ ಸುಳ್ಯದಲ್ಲಿ ‘ಆರೋಹಣ 2023’

    June 29, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುಳ್ಯ : ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ಸುಳ್ಯ ಶಾಖೆಯ ವಾರ್ಷಿಕ ನೃತ್ಯೋತ್ಸವ ‘ಆರೋಹಣ 2023’ ಕಾರ್ಯಕ್ರಮವು ಸುಳ್ಯದ ರಂಗ ಮನೆಯಲ್ಲಿ ಮೇ 27 ಶನಿವಾರದಂದು ನಡೆಯಿತು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಕಿರಿಯ ಹಿರಿಯ ವಿದ್ಯಾರ್ಥಿನಿಯರು ನೃತ್ಯ ಪ್ರಸ್ತುತಿ ಜೊತೆಗೆ ಮಂಗಳೂರು ಶಾಖೆಯ ಮಾಧ್ಯಮಿಕ ಹಂತದ ವಿದ್ಯಾರ್ಥಿನಿಯರಿಂದ ನೃತ್ಯ ಪ್ರದರ್ಶನವು ನಡೆಯಿತು.

    ಸುಳ್ಯದಂತಹ ಪ್ರದೇಶದಲ್ಲಿ ಭರತನಾಟ್ಯದಂತಹ ಕಲೆಯನ್ನು ಕಲಿಯುತ್ತಿರುವ ವಿದ್ಯಾರ್ಥಿನಿಯರಿಗೆ ವೇದಿಕೆಯೇರಲು ಅವಕಾಶ ನೀಡಿದ್ದು ಶ್ಲಾಘನೀಯ. ಪ್ರಥಮ ಬಾರಿ ವೇದಿಕೆ ಏರಿದ ಪುಟಾಣಿ ಕಲಾವಿದೆಯರ ಜೊತೆಗೆ ಮಾಧ್ಯಮಿಕ ಹಂತದ ಕಲಾವಿದೆಯರ ನೃತ್ಯ ಕಾರ್ಯಕ್ರಮವು ಅತ್ಯಂತ ಮನೋಜ್ಞವಾಗಿ ಮೂಡಿ ಬಂತು. ಜೊತೆಗೆ ಕರ್ನಾಟಕ ಸರಕಾರದಿಂದ ನಡೆಸಲ್ಪಟ್ಟ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿತ್ತು. ನೃತ್ಯ ಗುರುಗಳ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ ಭಟ್ ಹಾಗೂ ಪದ್ಮನಾಭ ಭಟ್ ದಂಪತಿಗಳ ವತಿಯಿಂದ ದತ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು. ಜೊತೆಗೆ ಸುಳ್ಯ ಶಾಖೆಯ ಸಹ ಶಿಕ್ಷಕಿಯರಾದ ವಿದುಷಿ ಅಂಕಿತಾ ರೈ, ವಿದುಷಿ ಮಂಜುಶ್ರೀ ರಾಘವ್, ಕು. ಅನ್ವಿತಾ ಎನ್, ಕು. ಅನಘ ಆರ್.ಯು. ಮತ್ತು ಕು. ಜಯಶ್ರೀ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಯ ಭಾಗದಲ್ಲಿ ಮಂಗಳೂರಿನ ಮಯೂರ ತಂಡದ ಕಲಾವಿದೆಯರಿಂದ ಪ್ರಸ್ತುತ ಪಡಿಸಲಾದ ನಾಲ್ಕು ನೃತ್ಯಬಂಧಗಳು ಪ್ರೇಕ್ಷಕರನ್ನು ಮೈ ನವಿರೇಳಿಸುವಂತಿತ್ತು.

    ಕಾರ್ಯಕ್ರಮದಲ್ಲಿ ಗಾನ ನೃತ್ಯ ಅಕಾಡೆಮಿಯ ನಿರ್ದೇಶಕಿಯಾದ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಕಾರ್ಯದರ್ಶಿಗಳಾದ ರಾಧಾಕೃಷ್ಣ ಭಟ್ ಹಾಗೂ ರಂಗಮನೆಯ ರೂವಾರಿ ಜೀವನ್ ರಾಮ್ ಸುಳ್ಯ ಉಪಸ್ಥಿತರಿದ್ದರು. ಕು. ಮಹಿಮಾ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರು ಪುರಭವನದಲ್ಲಿ ‘ಸೀನು ಸೀನರಿಯ ಯಕ್ಷಗಾನ’ | ಜುಲೈ 3ರಂದು
    Next Article ಮಂಗಳೂರು ಪುರಭವನದಲ್ಲಿ ‘ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮ | ಜುಲೈ 1ರಂದು
    roovari

    Add Comment Cancel Reply


    Related Posts

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ನೃತ್ಯ ವಿಮರ್ಶೆ | ಲಯಾತ್ಮಕ ನರ್ತನ – ವೈಷ್ಣವಿ ಹೆಜ್ಜೆ-ಗೆಜ್ಜೆಗಳ ವೈಶಿಷ್ಟ್ಯ 

    June 13, 2026

    ಮಂಗಳೂರಿನ ಪುರಭವನದಲ್ಲಿ ‘ಷಡೈಕ್ಯ ಉತ್ಕರ್ಷ’ ಭರತನಾಟ್ಯ ರಂಗಪ್ರವೇಶ | ಜೂನ್ 13

    June 12, 2026

    ಕಲಾತಂಡ, ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 12

    June 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.