Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಡ್ಡನ ಕಲಾವಿದೆ ಶತಾಯುಷಿ ಗಿಡಿಗೆರೆ ರಾಮಕ್ಕ ನಿಧನ
    Cultural

    ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾಡ್ಡನ ಕಲಾವಿದೆ ಶತಾಯುಷಿ ಗಿಡಿಗೆರೆ ರಾಮಕ್ಕ ನಿಧನ

    April 16, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬಜಪೆ : ‘ಪಾಡ್ಡನ ಕೋಗಿಲೆ’ ಎಂದೇ ಪ್ರಸಿದ್ಧಿ ಪಡೆದ ಹಿರಿಯ ಜಾನಪದ ಕಲಾವಿದೆ, ಕರ್ನಾಟಕ ರಾಜ್ಯ ಸರಕಾರದಿಂದ 2015ರಲ್ಲಿ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದ ಶತಾಯುಷಿ ಗಿಡಿಗೆರೆ ರಾಮಕ್ಕ ಮುಗೇರ್ತಿ(102) ಅವರು ಅನಾರೋಗ್ಯದಿಂದ ಕಟೀಲು ಗಿಡಿಗೆರೆಯ ತನ್ನ ನಿವಾಸದಲ್ಲಿ ದಿನಾಂಕ 15-04-2024ರಂದು ನಿಧನರಾದರು. ಮಂಗಳೂರು ತಾಲೂಕಿನ ವಾಮಂಜೂರಿನ ಕೂಕ್ರ ಮುಗ್ಗೇರ ಮತ್ತು ದುಗ್ಗಮ್ಮ ದಂಪತಿಯ ಸುಪುತ್ರಿಯಾಗಿದ್ದ ರಾಮಕ್ಕ 17ನೇ ವಯಸ್ಸಿನಲ್ಲಿ ಕಟೀಲು ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ಮದುವೆಯಾದರು.

    ಸತ್ಯದ ಸಿರಿ ಪಾಡ್ಡನ ಗಾಯನದಿಂದ ಖ್ಯಾತರಾಗಿದ್ದ ಅವರು ಓ ಬೇಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ ಕಾನಡ, ಮಾಲ್ಂಡ್ ಮರ, ಕುಮಾರ, ಸಿರಿ, ಅಬ್ಬಗ-ದಾರಗ, ಬಂಟರು ಹಾಗೂ ಅನೇಕ ದೈವ ಪಾಡ್ಡನಗಳಲ್ಲದೆ ಬೇಸಾಯದ ಸಂದರ್ಭ ಹಾಡುವ ಹತ್ತಾರು ಕೃಷಿ ಗೀತೆಗಳನ್ನು ನಿರರ್ಗಳವಾಗಿ ತನ್ನ ನೆನಪಿನಾಳದಿಂದ ಸುಶ್ರಾವ್ಯವಾಗಿ ಹಾಡಬಲ್ಲವರಾಗಿದ್ದರು. ಅಕ್ಷರಾಭ್ಯಾಸ ಇಲ್ಲದಿದ್ದರೂ ಕವಿತೆಗಳನ್ನು ರಚಿಸಿದ್ದರು. ಜಾನಪದ, ದೈವಿಕ ಆಚರಣೆ, ಶ್ರಮಿಕ ಸಂಸ್ಕೃತಿಯ ಸಂಧಿ, ಸಂಧಿ-ಪಾಡ್ಡನಗಳು ಕಂಠಪಾಠವಾಗಿತ್ತು.

    ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಮಕ್ಕ ಮುಗೇರ್ತಿ ಅವರು ಕಟ್ಟಿದ, ಸುದೀರ್ಘವಾಗಿ ಹಾಡಿದ ಸಿರಿಪಾಡ್ದನವನ್ನು ಎ.ವಿ. ನಾವಡ ಅವರ ಸಂಪಾದಕತ್ವದಲ್ಲಿ ದಾಖಲೀಕರಣ ಮಾಡಿ ‘ರಾಮಕ್ಕ ಮುಗೇರ್ತಿ ಕಟ್ಟಿದ ಸಿರಿಪಾಡ್ಡನ’ ಎಂಬ ಗ್ರಂಥ ರೂಪದಲ್ಲಿ ಪ್ರಕಟಿಸಿತ್ತು. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಅಪರೂಪದ ಕೃಷಿ ಗೀತೆಗಳು, ಸಂಧಿ-ಪಾಡ್ಡನ, ತುಳು ಕವಿತೆ, ಕಟ್ಟಿ ಹಾಡುತ್ತಾ ಕೃಷಿ ಸಂಸ್ಕೃತಿಗೆ ಜೀವ ತುಂಬಿದ್ದರು.

    ಹಿರಿಯ ಜನಪದ ಕಲಾವಿದೆಗೆ 2000ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಳದಿಂದ ‘ಪಾಡ್ದನ ಕೋಗಿಲೆ’ ಬಿರುದು ಪ್ರದಾನ, 2001ರಲ್ಲಿ ಜಿಲ್ಲಾಮಟ್ಟ ಹಾಗೂ 2015ರಲ್ಲಿ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಲವೆಡೆ ಗೌರವ ಸನ್ಮಾನಗಳಿಗೆ ಪಾತ್ರರಾಗಿದ್ದರು. 2004-05ನೇ ಸಾಲಿನಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯತ್ವದ ಗೌರವ ನೀಡಲಾಗಿತ್ತು. ಅಕ್ಷರ ತಿಳಿಯದ ಗಿಡಿಗೆರೆ ರಾಮಕ್ಕ ನಾಡಿನ ಹಲವು ವಿದ್ವಾಂಸರಿಗೆ ಪ್ರಮುಖ ಅಧ್ಯಯನ, ಡಾಕ್ಟರೇಟ್‌ನ ಹಿಂದಿನ ಆಕರ ಗ್ರಂಥವೆಂಬಷ್ಟು ಜ್ಞಾನದ ಭಂಡಾರವೇ ಅವರಲ್ಲಿತ್ತು.

    Share. Facebook Twitter Pinterest LinkedIn Tumblr WhatsApp Email
    Previous Articleಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಚತುರ್ಥ ವಾರ್ಷಿಕೋತ್ಸವ
    Next Article ಚೆನ್ನೈಯಲ್ಲಿ ಮಹಿಷಾಸುರ ವಧೆ
    roovari

    Add Comment Cancel Reply


    Related Posts

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ಮಣಿಪಾಲದಲ್ಲಿ ‘ಕಲಾಮಯಂ’ ಸಾಂಸ್ಕೃತಿಕ ಸಂಘಟನೆ ಉದ್ಘಾಟನೆ

    May 6, 2025

    ಹಂದೆ ಶ್ರೀ ವಿಷ್ಣುಮೂರ್ತಿ ಶ್ರೀ ವಿನಾಯಕ ದೇವಳದಲ್ಲಿ ಉದ್ಘಾಟನೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ

    May 2, 2025

    ಉದ್ಘಾಟನೆಗೊಂಡ ‘ಸುಕೃತಿ’ 17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

    May 1, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.