Subscribe to Updates

    Get the latest creative news from FooBar about art, design and business.

    What's Hot

    ಆತ್ತಾವರದಲ್ಲಿ 109ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ | ಜುಲೈ 18

    July 16, 2025

    ಸಾಗರದಲ್ಲಿ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ | ಜುಲೈ 19

    July 16, 2025

    ರಂಗಭೂಮಿ ಕಲಾವಿದ ಮೌನೇಶ ಆಚಾರ್ಯ ನಿಧನ

    July 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸಮ್ಮೇಳನ 2025’ | ಜನವರಿ 19
    Harikathe

    ಮಂಗಳೂರಿನ ರಾಮಕೃಷ್ಣ ಮಠದಲ್ಲಿ ‘ಹರಿಕಥಾ ಸಮ್ಮೇಳನ 2025’ | ಜನವರಿ 19

    January 17, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು, ರಾಮಕೃಷ್ಣ ಮಠ ಮಂಗಳೂರು ಮತ್ತು ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಟ್ರಸ್ಟ್ (ರಿ.) ಇವುಗಳ ಸಂಯುಕ್ತ ಸಹಯೋಗದಲ್ಲಿ ಹರಿಕಥಾ ಸಮ್ಮೇಳನ ಸಮಿತಿ ಮಂಗಳೂರು ಆಯೋಜಿಸುವ ‘ಹರಿಕಥಾ ಸಮ್ಮೇಳನ-2025’ ದಿನಾಂಕ 19 ಜನವರಿ 2025ರಂದು ಮಂಗಳಾದೇವಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.

    ‘ಹರಿಕಥಾ ಪರಂಪರೆಯ ಪುನರುತ್ಥಾನ’ ಧ್ಯೇಯದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 8-00 ಗಂಟೆಗೆ ಸಂಕೀರ್ತನಾ ಮೆರವಣಿಗೆ, ದಾಸ ಸಂಕೀರ್ತನೆ, ಮತ್ತು ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಡಾ. ಎಂ. ಪ್ರಭಾಕರ ಜೋಷಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸಂಸದರು, ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀದೇವಕೀತನಯ ಕೂಡ್ಲು ಇವರ ಕುರಿತಾದ ‘ಮಹಾಪರ್ವ’ ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ.

    ಪೂರ್ವಾಹ್ನ 10-40 ಗಂಟೆಗೆ ‘ತುಳುನಾಡಿನ ಹರಿಕಥಾ ಪರಂಪರೆ’ ಎಂಬ ವಿಷಯದಲ್ಲಿ ಪ್ರಥಮ ಗೋಷ್ಠಿ ನಡೆಯಲಿದೆ. 11-45 ಗಂಟೆಗೆ ಕುಮಾರಿ ಪ್ರಣಮ್ಯ ಕೆ.ಎಸ್. ಅವರಿಂದ ಹರಿಕಥೆ, ಗಂಟೆ 12-15ಕ್ಕೆ ‘ಹರಿಕಥೆಯಲ್ಲಿ ಪೀಠಿಕೆ, ಉಪಕಥೆ, ಸಂಗೀತ ಮತ್ತು ಜೀವನ ಮೌಲ್ಯಗಳು’ ಎಂಬ ವಿಷಯದಲ್ಲಿ ದ್ವಿತೀಯ ಗೋಷ್ಠಿ, ಅಪರಾಹ್ನ ಗಂಟೆ 1-45ಕ್ಕೆ ಕುಮಾರಿ ಪೂಜಾ ವಾಸುದೇವ ಐಲ ಇವರಿಂದ ಹರಿಕಥೆ, ಗಂಟೆ 2-15ಕ್ಕೆ ‘ಹಳೆಬೇರು-ಹೊಸಚಿಗುರು’ ಹಿರಿಯ ಹರಿದಾಸಹೊಂದಿಗೆ ಯುವ ಹರಿಕಥಾಭ್ಯಾಸಿಗಳ ಸಂವಾದ, ಬಳಿಕ ಹಿರಿಯ ಹರಿದಾಸರಾದ ಆಚಾರ್ಯ ಡಾ. ಶ್ರೀಧರ ದಾಸ್ ಜೀ ಕುಂಭಾಶಿ, ಹಿರಿಯ ಮಹಿಳಾ ಹರಿದಾಸರಾದ ಶ್ರೀಮತಿ ರುಕ್ಕಿಣಿ ಹಂಡೆ ಉಡುಪಿ, ಹಿರಿಯ ತಬ್ಲಾ ವಾದಕ ಎಂ. ಲಕ್ಷ್ಮೀನಾರಾಯಣ ಭಟ್ ಮಂಗಳೂರು, ಹಿರಿಯ ಹಾರ್ಮೋನಿಯಂ ವಾದಕಿ ಶೈಲಶ್ರೀ ಕಾಮತ್ ಬಿಜೈ ಮತ್ತು ಕೀರ್ತನ ಕುಟೀರ ಕುಂಬ್ಳೆ ಇವರುಗಳಿಗೆ ಗೌರವಾಭಿನಂದನೆ, ಅಪರಾಹ್ನ ಗಂಟೆ 3-15ಕ್ಕೆ ‘ಹರಿಕಥಾ ಕಲೆಯ ಪುನರುತ್ಥಾನದ ಸವಾಲುಗಳು’ ತೃತೀಯ ಗೋಷ್ಠಿ, 4-30 ಗಂಟೆಗೆ ಕಲಾಶ್ರೀ ಡಾ.ಲಕ್ಷ್ಮಣದಾಸ ತುಮಕೂರು ಇವರಿಂದ ಹರಿಕಥೆ ನಡೆಯಲಿದೆ. ಸಂಜೆ ಗಂಟೆ 5-30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಇವರು ಸಮ್ಮೇಳನದ ನಡಾವಳಿ ಕೈಪಿಡಿ ‘ಅರ್ಪಣೆ’ ಬಿಡುಗಡೆಗೊಳಿಸಲಿದ್ದಾರೆ.

    Harikathe Music
    Share. Facebook Twitter Pinterest LinkedIn Tumblr WhatsApp Email
    Previous Articleಕೋರಂಗಾಲದಲ್ಲಿ ದತ್ತಿನಿಧಿ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮ | ಜನವರಿ 20
    Next Article ಮಡಿಕೇರಿಯಲ್ಲಿ ಕೊಡಗಿನ ಗೌರಮ್ಮ ದತ್ತಿ ಕಾರ್ಯಕ್ರಮದ ಅಂಗವಾಗಿ ಸಣ್ಣ ಕಥೆ ಬರೆಯುವ ಸ್ಪರ್ಧೆ |
    roovari

    Add Comment Cancel Reply


    Related Posts

    ಅಂಬ್ಲಮೊಗರು ಸರಕಾರಿ ಪ್ರೌಢ ಶಾಲೆಯಲ್ಲಿ ‘ಕನ್ನಡ ನವೋದಯ ಸಂಭ್ರಮ’ | ಜುಲೈ 17

    July 16, 2025

    ಉಡುಪಿಯಲ್ಲಿ ‘ನೃತ್ಯ ರಂಗದಲ್ಲಿ ಬೆಳಕಿನ ವಿನ್ಯಾಸ’ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ | ಜುಲೈ 20

    July 16, 2025

    ಬೆಂಗಳೂರಿನಲ್ಲಿ ಯಕ್ಷಗಾನ ಪ್ರಸಂಗಕರ್ತ ದಿನೇಶ್ ಉಪ್ಪೂರ ಇವರಿಗೆ ಸನ್ಮಾನ

    July 16, 2025

    ವಿಶ್ವದಾಖಲೆ ಮೂಡಿಸಿರುವ ಗಾಯಕನಿಗೆ ‘ಯಶೋಭಿನಂದನೆ’ ಸನ್ಮಾನ ಸಮಾರಂಭ

    July 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.