Subscribe to Updates

    Get the latest creative news from FooBar about art, design and business.

    What's Hot

    ವಿನಮ್ರ ಇಡ್ಕಿದು ಹಾಡಿದ ದೃಶ್ಯ ಗೀತೆಗಳು ಬಿಡುಗಡೆ ಕಾರ್ಯಕ್ರಮ

    May 21, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ಪ್ರೇಕ್ಷಕರನ್ನು ರಂಜಿಸಿದ ‘ಶ್ರೀ ಕೃಷ್ಣ ಸಂಧಾನ’ ನಾಟಕ

    May 20, 2025

    ಸಹೋದಯ ಸಭಾಂಗಣದಲ್ಲಿ ಹಂಝ ಮಲಾರ್‌ರ ಬ್ಯಾರಿ ಪುಸ್ತಕಗಳು ಲೋಕಾರ್ಪಣೆ

    May 20, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರಿನಲ್ಲಿ ಚಿತ್ರ ಕಲಾವಿದ ಸಕು ಅವರ ‘ಹ್ಯುಮಾನೆ -2’ ಶಿಲ್ಪಕಲಾಕೃತಿ ಪ್ರದರ್ಶನ
    Exhibition

    ಮಂಗಳೂರಿನಲ್ಲಿ ಚಿತ್ರ ಕಲಾವಿದ ಸಕು ಅವರ ‘ಹ್ಯುಮಾನೆ -2’ ಶಿಲ್ಪಕಲಾಕೃತಿ ಪ್ರದರ್ಶನ

    April 15, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    14-04-2023,ಮಂಗಳೂರು: ಉಡುಪಿಯ ಚಿತ್ರ ಕಲಾವಿದ ಸಕು ಅವರ ಶಿಲ್ಪ ಕಲಾಕೃತಿ (ರಿಲೀಫ್‌)ಗಳ ಪ್ರದರ್ಶನ ಹ್ಯುಮಾನೆ -2 ಮಂಗಳೂರಿನ ಬಲ್ಲಾಳ್ ಬಾಗ್‌ನ ಪ್ರಸಾದ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 14-04-2023ರಂದು ಉದ್ಘಾಟನೆಗೊಂಡಿತು. ಈ ಶಿಲ್ಪಕಲಾ ಪ್ರದರ್ಶನವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಶ್ರೀ ಆನಂದ ಕೆ. ಉದ್ಘಾಟಿಸಿದರು. ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ| ತುಕರಾಮ್‌ ಪೂಜಾರಿ, ಡಾ| ಟಿ.ಡಿ. ರಾಮಮೂರ್ತಿ, ಪ್ರಸಾದ್ ಆರ್ಟ್ ಗ್ಯಾಲರಿಯ ನಿರ್ದೇಶಕರಾದ ಕೋಟಿ ಪ್ರಸಾದ್ ಆಳ್ವ, ಹಿರಿಯ ಚಿತ್ರ ಕಲಾವಿದರಾದ ಗಣೇಶ ಸೋಮಯಾಜಿ ಭಾಗವಹಿಸಿದರು
    ಚಿತ್ರ ಕಲಾವಿದ ಸಕು ಪಾಂಗಾಳ ಅವರು ಮಾತನಾಡಿ ’’ಈ ಶಿಲ್ಪ ಕಲಾಕೃತಿಗಳು ಕಪ್ಪೆ ಬೊಂಡಾಸ್‌ ಮೀನಿನ ಚಿಪ್ಪಿನಿಂದ (cuttlefish bone) ಮಾಡಲಾಗಿದೆ. 1997 ರಿಂದಲೇ ಕಡಲ ಬದಿಯಲ್ಲಿ ಸಿಗುವ ಈ ನಿರುಪಯುಕ್ತ ವಸ್ತುವಿನಿಂದ ಕಲಾಕೃತಿಗಳನ್ನು ರಚಿಸಲು ಪ್ರಾರಂಭಿಸಿದ್ದು ಇದರ ಮೊದಲ ಪ್ರದರ್ಶನ ಏಪ್ರಿಲ್ 3 ರಿಂದ 9 ರ ವರೆಗೆ ಉಡುಪಿಯಲ್ಲಿ ಯಶಸ್ವಿಯಾಗಿ ನಡೆದಿದೆ’’ ಎಂದರು. .
    ಈ ಪ್ರದರ್ಶನ ದಲ್ಲಿ 30 ಕಲಾಕೃತಿಗಳಿದ್ದು ಇದರಲ್ಲಿ ಮಾರಾಟವಾಗುವ ಕಲಾಕೃತಿಗಳಿಂದ ಬಂದ ಮೊತ್ತವನ್ನು ಕನ್ನಡ ಶಾಲೆಯ ಮಕ್ಕಳ ಕಲಿಕೆಗೆ ಉಪಯೋಗವಾಗುವಂತಹ ಶಬ್ಧಕೋಶಗಳನ್ನು ನೀಡುವ ಯೋಜನೆ ಹಮ್ಮಿಕೊಂಡಿದ್ದಾರೆ.
    ಈ ಪ್ರದರ್ಶನವು ಏಪ್ರಿಲ್ 14 ರಿಂದ 16ರ ವರೆಗೆ ನಡೆಯಲಿದೆ .

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನಲ್ಲಿ ‘ನಲಿ ಮನ’ದ ಮಕ್ಕಳ ಮನಸ್ಸು – ವಿಶೇಷ ಬೇಸಿಗೆ ಶಿಬಿರ
    Next Article ‘ಯಕ್ಷ ಯುವ ರತ್ನ’ – ಧೀರಜ್ ರೈ ಸಂಪಾಜೆ
    roovari

    Add Comment Cancel Reply


    Related Posts

    ಉಡುಪಿಯ ಬ್ರಾಹ್ಮಿ ಸಭಾಭವನದಲ್ಲಿ ಜಾನಪದ ನೃತ್ಯ ಸ್ಪರ್ಧೆ ‘ನೃತ್ಯ ಸಂಭ್ರಮ-2025’ | ಮೇ 18

    May 17, 2025

    ಸಿಂಧನೂರು ಸತ್ಯಾ ಗಾರ್ಡನ್ ನಲ್ಲಿ 11ನೇ ‘ಮೇ ಸಾಹಿತ್ಯ ಮೇಳ’ | ಮೇ 17 ಮತ್ತು 18

    May 16, 2025

    ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಸಿರಿಪರ್ಬ- 2025’ ತುಳು ಸಾಂಸ್ಕೃತಿಕ ಉತ್ಸವ

    May 10, 2025

    ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗೆ ಅವಕಾಶ

    May 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.