Subscribe to Updates

    Get the latest creative news from FooBar about art, design and business.

    What's Hot

    ಬದಿಯಡ್ಕ ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಸಾರ್ವಜನಿಕ ಗ್ರಂಥಾಲಯದಲ್ಲಿ ಕವಿ ನಮನ ಕಾರ್ಯಕ್ರಮ

    June 10, 2025

    ನೃತ್ಯ ಶಂಕರ ಸರಣಿಯ ‘ಶತ ಸಂಭ್ರಮ’

    June 10, 2025

    ಕಥೆ – ‘ತೊರೆದು ಹೋಗುವ ಮುನ್ನ’

    June 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನ ‘ಎಂಪ್ಟಿ ಸ್ಪೇಸ್’ ನಲ್ಲಿ ‘ಹುತ್ತವ ಬಡಿದರೆ’ | ಜುಲೈ 16ರಂದು
    Drama

    ಬೆಂಗಳೂರಿನ ‘ಎಂಪ್ಟಿ ಸ್ಪೇಸ್’ ನಲ್ಲಿ ‘ಹುತ್ತವ ಬಡಿದರೆ’ | ಜುಲೈ 16ರಂದು

    July 11, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಜುಲೈ 17 ಸಂಚಾರಿ ವಿಜಯ್ ಅವರು ಹುಟ್ಟಿದ ದಿನದ ಸವಿನೆನಪಿಗೆ ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ಹುತ್ತವ ಬಡಿದರೆ’ ನಾಟಕದ ಪ್ರದರ್ಶನವು ದಿನಾಂಕ 16-07-2023 ರಂದು ಬೆಂಗಳೂರಿನ ಎಂಪ್ಟಿ ಸ್ಪೇಸ್ ನಲ್ಲಿ ಪ್ರದರ್ಶನ ಗೊಳ್ಳಲಿದೆ.
    ವಾರಾಂತ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಾರದ ಐದೂ ದಿನ ಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ಬಿಡುವಾಗುವ ಯುವ ರಂಗಾಸಕ್ತರಿಗಾಗಿ ಹಮ್ಮಿಕೊಂಡಿರುವಂತಹ ಅಭಿನಯ ಕಾರ್ಯಾಗಾರ ‘ಆದಿರಂಗ’. ಸಂಪೂರ್ಣವಾಗಿ ರಂಗಭೂಮಿಗೆ ಹೊಸಬರಾಗಿರುವವರಿಗೆ ರಂಗಭೂಮಿಯ ಪರಿಚಯ ಮಾಡಿಕೊಡುವ ಒಂದು ಅವಕಾಶ ಈ ಕಾರ್ಯಾಗಾರದಲ್ಲಿ ಇರುತ್ತದೆ. ಸುಮಾರು ಐದು ತಿಂಗಳ ಕಾಲ ನಡೆಯುವ ಈ ಶಿಬಿರದ ವಾರಾಂತ್ಯದಲ್ಲಿ ಇವರು ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಅಭಿನಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾ, ಅಭ್ಯಾಸಗಳಲ್ಲಿ ತೊಡಗಿಕೊಂಡು ನಾಟಕ ಪ್ರದರ್ಶನದ ಮೂಲಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಇವರಿಗೆ ಈ ವರ್ಷ ‘ಹುತ್ತವ ಬಡಿದರೆ’ ನಾಟಕವನ್ನು ಅಭ್ಯಾಸಕ್ಕೆ ಆರಿಸಿಕೊಳ್ಳಲಾಗಿದೆ.
    ಕೆ.ವಿ.ನಾರಾಯಣರವರು ರಚಿಸಿರುವ ಈ ನಾಟಕವನ್ನು ಮಂಗಳಾ.ಎನ್ ನಿರ್ದೇಶಿಸಿದ್ದು, ಸಿ.ವೀರಣ್ಣ ನಾಟಕಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಬಿ.ವಿ.ಕಾರಂತ ಸಂಗೀತ ನೀಡಿದ್ದು, ಹರಿಪ್ರಸಾದ್ ಸಂಗೀತದಲ್ಲಿ ಸಹಕರಿಸಿದ್ದಾರೆ ಹಾಗೂ ಸಂಗೀತ ನಿರ್ವಹಣೆಯನ್ನು ಗಜಾನನ ಟಿ.ನಾಯ್ಕ ಮಾಡಿದ್ದಾರೆ. ರಾಮಕೃಷ್ಣ ಕನ್ನರ್ಪಾಡಿ ಮತ್ತು ವಿಜಯ ಕುಮಾರ ಬೆಣಚ ಕಲಾವಿದರಿಗೆ ಪ್ರಸಾಧನ ಮಾಡಲಿದ್ದು, ಪವನಪುತ್ರ ನಾಟಕಕ್ಕೆ ಕುಸ್ತಿ ಸಂಯೋಜಿಸಿದ್ದಾರೆ. ಚುಕ್ಕಿರಮ ನೃತ್ಯ ಸಂಯೋಜಿಸಿರುವ ಈ ನಾಟಕದ ಬೆಳಕಿನ ಸಂಯೋಜನೆ ಅರುಣ್.ಡಿ.ಟಿ ಅವರದ್ದು. ಧನುಷ್.ಎಂ ಮತ್ತು ಮಧು ಇವರು ರಂಗಸಜ್ಜಿಕೆ ನಿರ್ವವಹಿಸಲಿದ್ದು, ಪ್ರಚಾರ ಸಾಮಗ್ರಿ ವಿನ್ಯಾಸ ಕಿರಣ್.ಟಿ.ಸಿ ಅವರದ್ದು.
    ಈ ನಾಟಕದಲ್ಲಿ ಕಲಾವಿದರಾಗಿ ರತನ್, ಅಕ್ಷಯ್ ಕುಮಾರ್ ಎನ್.ಪಿ, ಅಭಿಷೇಕ್ ನಾಯ್ಕ, ವೃಷಾಂಕ್ ನೀಲ್, ರಕ್ಷಾ ಪಿ.ರಾಜು, ಕೆ.ಆರ್.ಸುಹಾಸ್ ಗೌಡ, ಚೇತನ್, ಸೂರಜ್ ಎಸ್. ನಾಯ್ಕ, ಸ್ವರೂಪ್ ಸ್ವಾಸನ್, ಯೋಗೇಶ್ ಹೆಚ್.ಆರ್, ನಿಖಿಲ್ ಕೃಷ್ಣಾಜಿ, ಮನೋಜ್ ಎಸ್.ನಾಡಿಗ್ ಹಾಗೂ ಆದ್ಯ ಇವರೊಂದಿಗೆ ಸಂಚಾರಿ ಥಿಯೇಟರ್ ನ ಕಲಾವಿದರಾದ ಸತ್ಯಶ್ರೀ ಕೆ.ಎಸ್, ಚುಕ್ಕಿರಮ, ವಿದ್ಯಾ ಹೆಗಡೆ, ಆಭಾ ಶಿಗ್ಗಾಂವ್, ನೀಹಾರಿಕಾ ಮತ್ತು ಆರ್ಯಕ್ ನಟಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಮಹಿಳಾ ಕಾವ್ಯದ ಕಾವ್ಯಾಭಿವ್ಯಕ್ತಿ ‘ಕಾವ್ಯ ಕನ್ನಿಕಾ’
    Next Article ಕೊಂಬಾರಿನಲ್ಲಿ ಕುಣಿತ ಭಜನಾ ತರಬೇತಿ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಶ್ವತ್ಥಾಮ’ | ಜೂನ್ 12

    June 10, 2025

    ಪ್ರವರ ಮತ್ತು ಅಶ್ವಘೋಷ ಥಿಯೇಟರ್ ವತಿಯಿಂದ ‘ಬೆಂಗಳೂರು ಕಿರುನಾಟಕೋತ್ಸವ’ | ಕೊನೆಯ ದಿನಾಂಕ ಜೂನ್ 27

    June 10, 2025

    ಶಿವಗಂಗೆಯ ಆದಿಮದಲ್ಲಿ ‘ಹುಣ್ಣಿಮೆ ಹಾಡು 218’ | ಜೂನ್ 11

    June 9, 2025

    ಮೈಸೂರಿನ ಸ್ವರಕುಟೀರದಲ್ಲಿ ‘ಭಿನ್ನಧ್ವನಿ’ ಮಕ್ಕಳ ರಂಗಕೂಟ

    June 9, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.