Subscribe to Updates

    Get the latest creative news from FooBar about art, design and business.

    What's Hot

    ನಾಮ ಸಂಕೀರ್ತನ (ಭಜನೆ) ಕಾರ್ಯಾಗಾರ, ಸ್ಪರ್ಧೆ ಮತ್ತು ಸಂಗೀತ ಕಛೇರಿ | ಜೂನ್ 18ರಿಂದ

    June 15, 2026

    ಡಾ. ಟಿ.ಎಂ.ಎ. ಪೈ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆ

    June 15, 2026

    ಕನಕದಾಸ ಸಾಹಿತ್ಯದ ತುಳು ಅನುವಾದ ಕೃತಿಗಳ ಅವಲೋಕನ

    June 15, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೆಂಗಳೂರಿನ ‘ಎಂಪ್ಟಿ ಸ್ಪೇಸ್’ ನಲ್ಲಿ ‘ಹುತ್ತವ ಬಡಿದರೆ’ | ಜುಲೈ 16ರಂದು
    Drama

    ಬೆಂಗಳೂರಿನ ‘ಎಂಪ್ಟಿ ಸ್ಪೇಸ್’ ನಲ್ಲಿ ‘ಹುತ್ತವ ಬಡಿದರೆ’ | ಜುಲೈ 16ರಂದು

    July 11, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು: ಜುಲೈ 17 ಸಂಚಾರಿ ವಿಜಯ್ ಅವರು ಹುಟ್ಟಿದ ದಿನದ ಸವಿನೆನಪಿಗೆ ಸಂಚಾರಿ ಥಿಯೇಟರ್ ಪ್ರಸ್ತುತ ಪಡಿಸುವ ‘ಹುತ್ತವ ಬಡಿದರೆ’ ನಾಟಕದ ಪ್ರದರ್ಶನವು ದಿನಾಂಕ 16-07-2023 ರಂದು ಬೆಂಗಳೂರಿನ ಎಂಪ್ಟಿ ಸ್ಪೇಸ್ ನಲ್ಲಿ ಪ್ರದರ್ಶನ ಗೊಳ್ಳಲಿದೆ.
    ವಾರಾಂತ್ಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ವಾರದ ಐದೂ ದಿನ ಪೂರ್ತಿ ಕೆಲಸ ಮಾಡಿ ವಾರಾಂತ್ಯದಲ್ಲಿ ಬಿಡುವಾಗುವ ಯುವ ರಂಗಾಸಕ್ತರಿಗಾಗಿ ಹಮ್ಮಿಕೊಂಡಿರುವಂತಹ ಅಭಿನಯ ಕಾರ್ಯಾಗಾರ ‘ಆದಿರಂಗ’. ಸಂಪೂರ್ಣವಾಗಿ ರಂಗಭೂಮಿಗೆ ಹೊಸಬರಾಗಿರುವವರಿಗೆ ರಂಗಭೂಮಿಯ ಪರಿಚಯ ಮಾಡಿಕೊಡುವ ಒಂದು ಅವಕಾಶ ಈ ಕಾರ್ಯಾಗಾರದಲ್ಲಿ ಇರುತ್ತದೆ. ಸುಮಾರು ಐದು ತಿಂಗಳ ಕಾಲ ನಡೆಯುವ ಈ ಶಿಬಿರದ ವಾರಾಂತ್ಯದಲ್ಲಿ ಇವರು ರಂಗಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಅಭಿನಯಕ್ಕೆ ಸಂಬಂಧಿಸಿದ ವಿಷಯಗಳನ್ನು ಅರ್ಥಮಾಡಿಕೊಳ್ಳುತ್ತಾ, ಅಭ್ಯಾಸಗಳಲ್ಲಿ ತೊಡಗಿಕೊಂಡು ನಾಟಕ ಪ್ರದರ್ಶನದ ಮೂಲಕ ಅನುಭವವನ್ನು ಪಡೆದುಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಇವರಿಗೆ ಈ ವರ್ಷ ‘ಹುತ್ತವ ಬಡಿದರೆ’ ನಾಟಕವನ್ನು ಅಭ್ಯಾಸಕ್ಕೆ ಆರಿಸಿಕೊಳ್ಳಲಾಗಿದೆ.
    ಕೆ.ವಿ.ನಾರಾಯಣರವರು ರಚಿಸಿರುವ ಈ ನಾಟಕವನ್ನು ಮಂಗಳಾ.ಎನ್ ನಿರ್ದೇಶಿಸಿದ್ದು, ಸಿ.ವೀರಣ್ಣ ನಾಟಕಕ್ಕೆ ಹಾಡುಗಳನ್ನು ರಚಿಸಿದ್ದಾರೆ. ಬಿ.ವಿ.ಕಾರಂತ ಸಂಗೀತ ನೀಡಿದ್ದು, ಹರಿಪ್ರಸಾದ್ ಸಂಗೀತದಲ್ಲಿ ಸಹಕರಿಸಿದ್ದಾರೆ ಹಾಗೂ ಸಂಗೀತ ನಿರ್ವಹಣೆಯನ್ನು ಗಜಾನನ ಟಿ.ನಾಯ್ಕ ಮಾಡಿದ್ದಾರೆ. ರಾಮಕೃಷ್ಣ ಕನ್ನರ್ಪಾಡಿ ಮತ್ತು ವಿಜಯ ಕುಮಾರ ಬೆಣಚ ಕಲಾವಿದರಿಗೆ ಪ್ರಸಾಧನ ಮಾಡಲಿದ್ದು, ಪವನಪುತ್ರ ನಾಟಕಕ್ಕೆ ಕುಸ್ತಿ ಸಂಯೋಜಿಸಿದ್ದಾರೆ. ಚುಕ್ಕಿರಮ ನೃತ್ಯ ಸಂಯೋಜಿಸಿರುವ ಈ ನಾಟಕದ ಬೆಳಕಿನ ಸಂಯೋಜನೆ ಅರುಣ್.ಡಿ.ಟಿ ಅವರದ್ದು. ಧನುಷ್.ಎಂ ಮತ್ತು ಮಧು ಇವರು ರಂಗಸಜ್ಜಿಕೆ ನಿರ್ವವಹಿಸಲಿದ್ದು, ಪ್ರಚಾರ ಸಾಮಗ್ರಿ ವಿನ್ಯಾಸ ಕಿರಣ್.ಟಿ.ಸಿ ಅವರದ್ದು.
    ಈ ನಾಟಕದಲ್ಲಿ ಕಲಾವಿದರಾಗಿ ರತನ್, ಅಕ್ಷಯ್ ಕುಮಾರ್ ಎನ್.ಪಿ, ಅಭಿಷೇಕ್ ನಾಯ್ಕ, ವೃಷಾಂಕ್ ನೀಲ್, ರಕ್ಷಾ ಪಿ.ರಾಜು, ಕೆ.ಆರ್.ಸುಹಾಸ್ ಗೌಡ, ಚೇತನ್, ಸೂರಜ್ ಎಸ್. ನಾಯ್ಕ, ಸ್ವರೂಪ್ ಸ್ವಾಸನ್, ಯೋಗೇಶ್ ಹೆಚ್.ಆರ್, ನಿಖಿಲ್ ಕೃಷ್ಣಾಜಿ, ಮನೋಜ್ ಎಸ್.ನಾಡಿಗ್ ಹಾಗೂ ಆದ್ಯ ಇವರೊಂದಿಗೆ ಸಂಚಾರಿ ಥಿಯೇಟರ್ ನ ಕಲಾವಿದರಾದ ಸತ್ಯಶ್ರೀ ಕೆ.ಎಸ್, ಚುಕ್ಕಿರಮ, ವಿದ್ಯಾ ಹೆಗಡೆ, ಆಭಾ ಶಿಗ್ಗಾಂವ್, ನೀಹಾರಿಕಾ ಮತ್ತು ಆರ್ಯಕ್ ನಟಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯಲ್ಲಿ ಮಹಿಳಾ ಕಾವ್ಯದ ಕಾವ್ಯಾಭಿವ್ಯಕ್ತಿ ‘ಕಾವ್ಯ ಕನ್ನಿಕಾ’
    Next Article ಕೊಂಬಾರಿನಲ್ಲಿ ಕುಣಿತ ಭಜನಾ ತರಬೇತಿ ಸಮಾರೋಪ ಸಮಾರಂಭ
    roovari

    Add Comment Cancel Reply


    Related Posts

    ಶರಣ ಸಾಹಿತ್ಯ ಸಮ್ಮೇಳನಕ್ಕೆ ಕಾರ್ಯಕ್ರಮಗಳಿಗೆ ಆಹ್ವಾನ | ಕೊನೆಯ ದಿನಾಂಕ ಜೂನ್ 15

    June 13, 2026

    ಬೆಳಗಾವಿಯಲ್ಲಿ ಪಯಣ ಪ್ರಸ್ತುತ ಪಡಿಸುವ ‘ತಲ್ಕಿ’ ನಾಟಕ ಪ್ರದರ್ಶನ | ಜೂನ್ 14

    June 13, 2026

    ಮೈಸೂರು ನಟನ ರಂಗಶಾಲೆಯಲ್ಲಿ ‘ಸಂಜೆ ಹಾಡು’ ನಾಟಕ | ಜೂನ್ 14

    June 12, 2026

    ಆದಿಮ ಸಾಂಸ್ಕೃತಿಕ ಕೇಂದ್ರದಿಂದ ಯುಜಿ ಡಿಪ್ಲೋಮಾ – ಡ್ರಾಮಾ ಕೋರ್ಸ್

    June 12, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.