Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಾಸರಗೋಡು ‘ರಂಗ ಚಿನ್ನಾರಿ’ಯಿಂದ ಸುಬ್ರಹ್ಮಣ್ಯ ಬಾಡೂರು ಇವರಿಗೆ ಹುಟ್ಟೂರ ಗೌರವ | ಡಿಸೆಂಬರ್ 1
    Awards

    ಕಾಸರಗೋಡು ‘ರಂಗ ಚಿನ್ನಾರಿ’ಯಿಂದ ಸುಬ್ರಹ್ಮಣ್ಯ ಬಾಡೂರು ಇವರಿಗೆ ಹುಟ್ಟೂರ ಗೌರವ | ಡಿಸೆಂಬರ್ 1

    November 27, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ಕರಂದಕ್ಕಾಡು ಪದ್ಮಗಿರಿಯಲ್ಲಿರುವ ರಂಗ ಚಿನ್ನಾರಿ ಕಾಸರಗೋಡು (ರಿ.) ಇದರ ಘಟಕಗಳಾದ ನಾರಿ ಚಿನ್ನಾರಿ (ಮಹಿಳಾ ಘಟಕ) ಸ್ವರ ಚಿನ್ನಾರಿ (ಸಂಗೀತ ಘಟಕ) ನೇತೃತ್ವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಇವರಿಗೆ ಹುಟ್ಟೂರ ಗೌರವ ಕಾರ್ಯಕ್ರಮವು ದಿನಾಂಕ 01-12-2023ರಂದು ಸಂಜೆ ಗಂಟೆ 5ಕ್ಕೆ ಕಾಸರಗೋಡಿನ ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ನಮ್ಮೊಂದಿಗೆ ಶ್ರೀ ಎಡನೀರು ಮಠದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಕಾಸರಗೋಡಿನ ಶಾಸಕರಾದ ಶ್ರೀ ಎನ್.ಎ. ನೆಲ್ಲಿಕುನ್ನು, ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಶ್ರೀಮತಿ ಉಮಾಶ್ರೀ, ರಾಷ್ಟ್ರ ಪ್ರಶಸ್ತಿ ವಿಜೇತ ನಿದೇಶಕ ಶ್ರೀ ಶಿವಧ್ವಜ್ ಶೆಟ್ಟಿ ಮತ್ತು ಖ್ಯಾತ ಪತ್ರಕರ್ತರಾದ ಶ್ರೀ ರವೀಂದ್ರ ಜೋಶಿ ಇವರುಗಳು ಭಾಗವಹಿಸಲಿದ್ದಾರೆ.

    2021ರ ಸಾಲಿನ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ತೀರ್ಪುಗಾರರ ವಿಶೇಷ ಉಲ್ಲೇಖ) ಪ್ರಶಸ್ತಿಗೆ ಶ್ರೀ ಸುಬ್ರಹ್ಮಣ್ಯ ಬಾಡೂರು ಭಾಜನರಾಗಿದ್ದಾರೆ. ಚಲನಚಿತ್ರ ಪತ್ರಕರ್ತರೊಬ್ಬರು ಕರ್ನಾಟಕದಲ್ಲಿ ಈ ರಾಷ್ಟ್ರೀಯ ಗೌರವ ಪಡೆದಿದ್ದು ಇದೇ ಮೊದಲು. ಈ ಪ್ರಶಸ್ತಿಯನ್ನು ಪಡೆದ ಇವರು ಕಾಸರಗೋಡಿನವರು ಎನ್ನುವುದು ನಮಗೆ ಹೆಮ್ಮೆ. ಕಾಸರಗೋಡಿನ ರಂಗ ಚಿನ್ನಾರಿ ಸಂಸ್ಥೆಯು ಕನ್ನಡಪರ ಸಂಘಟನೆಗಳಾದ ಕರ್ನಾಟಕ ಸಮಿತಿ ಕಾಸರಗೋಡು, ಕನ್ನಡ ಸಾಹಿತ್ಯ ಪರಿಷತ್ತು (ಕೇರಳ ಘಟಕ), ಕೂಡ್ಲು ಯುವಜನ ಸಂಘ (ರಿ), ಕನ್ನಡ ಭವನ ಮತ್ತು ಗ್ರಂಥಾಲಯ (ರಿ), ಯವನಿಕಾ ಕಾಸರಗೋಡು (ರಿ), ಗಮಕ ಕಲಾ ಪರಿಷತ್ತು, ತರುಣ ಕಲಾ ವೃಂದ ಉಪ್ಪಳ (ರಿ), ಗೀತಾ ವಿಹಾರ ಕಾಸರಗೋಡು (ರಿ), ಗಡಿನಾಡ ಕಲಾವಿದರು (ರಿ), ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ), ನೃತ್ಯ ನಿಕೇತನ (ರಿ), ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಆರ್ಯ ಕಾತ್ಯಾಯಿನಿ ಕಲಾ ಸಂಘ (ರಿ), ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು (ರಿ), ಶ್ರೀ ದುರ್ಗಾ ಯುವಕ ಸಂಘ ಬಾಡೂರು (ರಿ), ತುಳು ಕೂಟ ಕಾಸರಗೋಡು (ರಿ), ಶ್ರೀ ಗೋಪಾಲಕೃಷ್ಣ ಸಂಗೀತ ವಿದ್ಯಾಲಯ, ಮೇಘ ರಂಜನಾ ಚಂದ್ರಗಿರಿ (ರಿ), ವಿಕಾಸ ಮೀಯಪದವು (ರಿ), ನೆಲ್ಲಿಕುಂಜೆ ಫ್ರೆಂಡ್ಸ್ ಸರ್ಕಲ್, ಮಾಸ್ಟರ್ ಪ್ಯೂಶನ್, ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ), ಸ್ವರ ಚಿನ್ನಾರಿ ಮತ್ತು ನಾರಿ ಚಿನ್ನಾರಿ ಜೊತೆ ಸೇರಿ ಪ್ರಚಾರದ ಬೆನ್ನು ಬೀಳದೆ, ಪ್ರಾಮಾಣಿಕವಾಗಿ ಕಳೆದ ನಾಲ್ಕು ದಶಕಗಳಿಂದ ವೃತ್ತಿಪರರಾಗಿರುವ ಇವರನ್ನು ಅಭಿನಂದಿಸುವ ಸಮಾರಂಭವನ್ನು ಆಯೋಜಿಸಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರಿನಲ್ಲಿ ‘ದಿವ್ಯಾಂಗಜನ ಸಾಹಿತ್ಯ ಸಂಭ್ರಮ’ | ಡಿಸೆಂಬರ್ 3
    Next Article ಶ್ರೀ ರಾಮಕೃಷ್ಣ ಮಠದ ವಿವೇಕಾನಂದ ಸಭಾಂಗಣದಲ್ಲಿ ‘ಯಕ್ಷಾಮೃತ’ | ಡಿಸೆಂಬರ್ 10
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.