Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಸಂಪೆಕಟ್ಟೆಯಲ್ಲಿ ಯಶಸ್ವಿ ಕಲಾವೃಂದದ ಮಕ್ಕಳ ಮೇಳದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ

    May 13, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆಯ ಹಯಗ್ರೀವದಲ್ಲಿ ಉದ್ಘಾಟನೆಗೊಂಡ “ನಾಟಕಾಷ್ಟಕ”
    Drama

    ತೆಕ್ಕಟ್ಟೆಯ ಹಯಗ್ರೀವದಲ್ಲಿ ಉದ್ಘಾಟನೆಗೊಂಡ “ನಾಟಕಾಷ್ಟಕ”

    December 28, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ, ರಂಗ ಸಂಪದ ಕೋಟ, ಧಮನಿ ಟ್ರಸ್ಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-89’ ಕಾರ್ಯಕ್ರಮದಡಿಯಲ್ಲಿ “ನಾಟಕಾಷ್ಟಕ” ಇದರ ಉದ್ಘಾಟನಾ ಸಮಾರಂಭವು ದಿನಾಂಕ 26 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.

    ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್ ಮಾತನಾಡಿ “ಸಮಾಜದ ಕುಂದು ಕೊರತೆಗಳನ್ನು ಜನರಿಗೆ ಮನ ಮುಟ್ಟುವಂತೆ ರಂಗರೂಪಕ್ಕಿಳಿಸಿ ಅಭಿನಯಿಸುವ ಕಲೆಯೇ ರಂಗಭೂಮಿ ನಾಟಕ. ಹಲವಾರು ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡು ಯಶಸ್ವೀ ಕಲಾವೃಂದದ ವೇದಿಕೆಯಲ್ಲಿ ಅನಾವರಣಗೊಳಿಸುತ್ತಿರುವುದು ಈ ಭಾಗದ ಜನಕ್ಕೆ ಬಹಳ ಉಪಯುಕ್ತವಾಗಿದೆ. ಕಲಾಸಕ್ತ ಮನಸ್ಸುಗಳಿಗೆ ಹತ್ತಿರವಾಗಿ ಬೆಳಗುತ್ತಿರುವ ಸಂಸ್ಥೆ ನೂರು ವರ್ಷ ಬದುಕಿ ಬಾಳಲಿ.” ಎಂದು ಹಾರೈಸಿದರು.

    ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ವೀರಯೋಧ ಅನೂಪ್ ಪೂಜಾರಿ ಇವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಟಿ. ಶ್ರೀಯಾನ್ “ಕರಾವಳಿಯ ಉದ್ದಗಲಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದು ಪುಷ್ಪನಮನ ಸಲ್ಲಿಸಿ, ಅಶ್ರು ತರ್ಪಣ ನೀಡುವ ಮುಖೇನ ತಮ್ಮ ಮನೆಯ ಮಗನಂತೆ ಸಾರ್ವಜನಿಕರು ಭಾಗವಹಿಸಿರುವುದು ಮರೆಯಲಾರದ ಸಂಗತಿ. ವೀರಯೋಧ ಅನೂಪ್ ಪೂಜಾರಿಯ ಸಾವು ಕರಾವಳಿಗೆ ಕರಾಳದಿನ.” ಎಂದರು.

    “ಸಮಾಜದ ಸಮಸ್ಯೆಯನ್ನು ನಾಟಕದ ಮೂಲಕ ಮನ ಮುಟ್ಟುವಂತೆ ಅಭಿನಯಿಸಿ ಗೆಲ್ಲುವುದು ನಾಟಕದ ಉದ್ದೇಶ.” ಎಂದು ಡಾ. ಆದರ್ಶ ಹೆಬ್ಬಾರ್, “ರಂಗದ ಎಲ್ಲಾ ಆಯಾಮಗಳನ್ನು ರಂಗದ ಮೂಲಕ ಸಮಾಜಕ್ಕೆ ನೀಡುವ ಸಂಸ್ಥೆ ಯಶಸ್ವೀ ಕಲಾವೃಂದ.” ಎಂದು ಪತ್ರಕರ್ತ ಯು. ಎಸ್. ಶಣೈ, “ಜೀವನದ ಸತ್ಯಾಸತ್ಯತೆಗಳನ್ನು ರಂಗದಲ್ಲಿ ಅನಾವರಣ ಮಾಡುವ ಕಲೆ ನಾಟಕ.” ಎಂದು ಜನಾರ್ದನ ಹಂದೆ ಅಭಿಪ್ರಾಯಪಟ್ಟರು.

    ಉಪನ್ಯಾಸಕ ಸುಜಯೀಂದ್ರ ಹಂದೆ ಉಪಸ್ಥಿತರಿದ್ದ ಈ ಕಾರ್ಯಕ್ರಮವನ್ನು ಹೆರಿಯ ಮಾಸ್ಟರ್ ನಿರೂಪಿಸಿದರು. ಬಳಿಕ ನೀನಾಸಂ ಹೆಗ್ಗೋಡು ತಂಡದವರಿಂದ ಭವಭೂತಿ ರಚನೆಯ ಹಾಗೂ ಅಕ್ಷರ ಕೆ. ವಿ. ನಿರ್ದೇಶನದ ನಾಟಕ ‘ಮಾಲತಿ ಮಾಧವ’ ಪ್ರದರ್ಶನಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleಲೀಲಾವತಿ ಬೈಪಾಡಿತ್ತಾಯರಿಗೆ ‘ಗಾನ ನಮನ’
    Next Article ಬಹುಮುಖ ಪ್ರತಿಭೆ ಓಂ ಗಣೇಶ್, ಉಪ್ಪುಂದ ಇವರಿಗೆ ಉಪ್ಪಿನಕುದ್ರು “ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ -2025”| ಜನವರಿ 19
    roovari

    Add Comment Cancel Reply


    Related Posts

    ಬೆಂಗಳೂರಿನ ರಂಗಶಂಕರದಲ್ಲಿ ‘ರೊಶೊಮನ್’ ನಾಟಕ ಪ್ರದರ್ಶನ | ಮೇ 17

    May 13, 2025

    ಬೆಳಗಾವಿಯ ಲೋಕಮಾನ್ಯ ರಂಗಮಂದಿರದಲ್ಲಿ ವಿಶ್ವಾವಸು ನಾಟಕ ಪ್ರಾರಂಭೋತ್ಸವ | ಮೇ 17 ಮತ್ತು 18

    May 12, 2025

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.