Subscribe to Updates

    Get the latest creative news from FooBar about art, design and business.

    What's Hot

    ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ 17ನೇ ವಾರ್ಷಿಕೋತ್ಸವ | ಜುಲೈ 07

    June 30, 2025

    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ‘ಯಕ್ಷಮಂಗಳ ಪ್ರಶಸ್ತಿ’ ಮತ್ತು ‘ಯಕ್ಷಮಂಗಳ ಕೃತಿ ಪ್ರಶಸ್ತಿ’ ಪ್ರದಾನ

    June 30, 2025

    ಉಪ್ಪಿನಂಗಡಿಯ ಶ್ರೀರಾಮ ಶಾಲೆಯಲ್ಲಿ ‘ಯಕ್ಷ ಶಿಕ್ಷಣ’ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ

    June 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬೆಂಗಳೂರಿನಲ್ಲಿ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನದ ಉದ್ಘಾಟನೆ
    Drawing

    ಬೆಂಗಳೂರಿನಲ್ಲಿ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನದ ಉದ್ಘಾಟನೆ

    November 26, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಜಯನಗರದ ಯುವಕ ಸಂಘದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಹಯೋಗದೊಂದಿಗೆ ಉಡುಪಿಯ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನವು 25 ನವೆಂಬರ್ 2024ರಂದು ಉದ್ಘಾಟನೆಗೊಂಡಿತು.

    ಈ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಡನ್‌ ಆಂಡ್ ಪರ್ಟ್ ನರ್ಸ್ ಸಂಸ್ಥಾಪಕರಾದ ಅರವಿಂದ ಹೆಗಡೆಯವರು ಮಾತನಾಡಿ “ಪುರಾತನ ಕಟ್ಟಡಗಳಲ್ಲಿನ ಕಾವಿ ಕಲೆ ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯ ಭಾಗಗಳಲ್ಲೆಲ್ಲ ನೋಡಿದ ನೆನಪು ಇಂದು ಹಸಿರಾದಂತಾಯಿತು. ಅಳಿವಿನಂಚಿನಲ್ಲಿನ ನಮ್ಮ ಕರ್ನಾಟಕದ ಈ ಕಲೆಯನ್ನು ಕಾಪಿಡಲು ಹಾಗೂ ಅದನ್ನು ಈ ತೆರನಾದ ಕಲಾಪ್ರದರ್ಶನದ ಮೂಲಕ ಇನ್ನಷ್ಟು ಜನರಿಗೆ ಹಂಚಲು ಉತ್ಸುಕರಾಗಿರುವ ಕಲಾವಿದ ಜನಾರ್ದನ ಹಾವಂಜೆಯವರ ಶ್ರಮ ಅಭಿನಂದನೀಯ. ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಕರಾವಳಿಯ ಕಲೆಯನ್ನು ಬೆಳೆಸುವಂತಾಗಲಿ” ಎಂಬುದಾಗಿ ಆಶಿಸಿದರು.

    “ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಾಣವಾಗುವ ಕಾವಿ ಕಲೆ ಕರಾವಳಿ ಭಾಗದ ವಿಶೇಷತೆ. ಇದೊಂದು ದೇಶೀಯ ಕಲೆಯಾಗಿದ್ದು, ಇದರ ಒಳ ಹೊರಗನ್ನು ನನ್ನ ಸಂಶೋಧನೆಯ ಮೂಲಕ ಅರ್ಥೈಸಿಕೊಳ್ಳುತ್ತಿದ್ದೇನೆ. ಈ ಕಲಾ ಪ್ರದರ್ಶನ ಕರ್ನಾಟಕಕ್ಕೆ ಜಿಐಟ್ಯಾಗ್ (ಜಿಯಾಗ್ರಾಫಿಕಲ್‌ ಇಂಡಿಕೇಶನ್‌ ಟ್ಯಾಗ್) ಹೊಂದುವ ಪ್ರಯತ್ನದ ಸದುದ್ದೇಶವನ್ನೂ ಹೊಂದಿದ್ದು, ಕನ್ನಡ ರಾಜ್ಯೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ” ಎಂಬುದಾಗಿ ಈ ಕಲೆಯ ಮಹತ್ವವನ್ನು ಕಲಾವಿದ ಹಾವಂಜೆಯವರು ವಿವರಿಸಿದರು.

    ಪೌರಾಣಿಕ ಹಾಗೂ ಭಾಗವತ ಕಥಾ ಸಂಬಂಧಿತ ಕಲಾಕೃತಿಗಳು, ಮಂಡಲ ವಿನ್ಯಾಸಗಳು ಹಾಗೂ ನಿಸರ್ಗ ಜೀವನವೇ ಮೊದಲಾಗಿ ಸುಮಾರು ಅರುವತ್ತಕ್ಕೂ ಮಿಕ್ಕಿ ಗೀರು ಕಾವಿ ಕಲಾಕೃತಿಗಳು ಈ ಪ್ರದರ್ಶನದಲ್ಲಿರಲಿದೆ. ಮುಖ್ಯ ಅತಿಥಿಗಳಾಗಿ ಯುವಕ ಸಂಘದ ಯೋಜನಾ ನಿರ್ದೇಶಕರಾದ ಮಹೇಶ್, ಕಾವಿ ಆರ್ಟ್ ಫೌಂಡೇಶನ್‌ನ ನಿರ್ದೇಶಕರಲ್ಲೋರ್ವರಾದ ಬೇಬಿ ಎಂ. ರಾವ್ ಉಪಸ್ಥಿತರಿದ್ದರು. ಬೆಂಗಳೂರು ಕಲಾ ಗ್ಯಾಲರಿಯ ಸಂಯೋಜಕರಾದ ಶಿವಪ್ರಸಾದ್‌ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಕಲಾ ಪ್ರದರ್ಶನವು ದಿನಾಂಕ 08 ಡಿಸೆಂಬರ್ 2024ರವರೆಗೆ ಪೂರ್ವಾಹ್ನ 10-00ರಿಂದ ಸಂಜೆ 7-30ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಕೊಡಗು ಜಿಲ್ಲಾ ಕ.ಸಾ.ಪ.ದಿಂದ ನಾಡಗೀತೆಯ ನೂರನೆಯ ವರ್ಷ ಆಚರಣೆ | ಡಿಸೆಂಬರ್ 29
    Next Article ಉಪಾಸನಾ ಮೋಹನ್ ಮಾರ್ಗದರ್ಶನದಲ್ಲಿ ‘ಭಾವಗೀತೆಗಳ ಶಿಬಿರ ಮತ್ತು ಸಂಗೀತ ಸಂಜೆ’
    roovari

    Add Comment Cancel Reply


    Related Posts

    ಕಾಸರಗೋಡಿನಲ್ಲಿ ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 2ನೇ ಕಾರ್ಯಕ್ರಮ

    June 30, 2025

    ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ

    June 26, 2025

    ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ

    June 23, 2025

    ಬಿ.ಸಿ. ರೋಡಿನಲ್ಲಿ ‘ತುಳುವೆರೆನ ತುಳುನಾಡ ಸಂತೆ’ ತುಳು ಸಾಹಿತ್ಯ ಸಾಂಸ್ಕೃತಿಕ ರಂಗ | ಜೂನ್ 20, 21 ಮತ್ತು 22

    June 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.