Subscribe to Updates

    Get the latest creative news from FooBar about art, design and business.

    What's Hot

    ‘ಭಾವ ಸ್ಮೃತಿ’ ಆತ್ಮಕಥನ ಕೃತಿಗೆ ಮೊಗೇರಿ ಸಮಷ್ಟಿ ಪುಸ್ತಕ ಪುರಸ್ಕಾರ

    August 25, 2025

    ಕನ್ನಡ ಚುಟುಕು ಸಾಹಿತ್ಯ ಅಭಿಯಾನದ 5ನೇ ಕಾರ್ಯಕ್ರಮ

    August 25, 2025

    ಬಹುಮುಖ ಪ್ರತಿಭೆ ಕುಮಾರಿ ಶ್ರೇಯಾ ಹಿರೇಮಠ್ ರಂಗಪ್ರವೇಶ | ಆಗಸ್ಟ್ 30

    August 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಿರಿವಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಶಿಕ್ಷಕರಿಗೆ ಯಕ್ಷ ಶಿಕ್ಷಣಕ್ಕೆ ಚಾಲನೆ
    Yakshagana

    ಸಿರಿವಾಗಿಲು ಪ್ರತಿಷ್ಠಾನದಲ್ಲಿ ಯಕ್ಷಗಾನ ಶಿಕ್ಷಕರಿಗೆ ಯಕ್ಷ ಶಿಕ್ಷಣಕ್ಕೆ ಚಾಲನೆ

    September 21, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾಸರಗೋಡು : ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರಿಯ ನಾಟ್ಯ ಗುರುಗಳಾದ ಶ್ರೀ ಕರ್ಗಲ್ಲು ವಿಶ್ವೇಶ್ವರ ಭಟ್ ಇವರಿಂದ ಯಕ್ಷಗಾನ ಶಿಕ್ಷಕರಿಗೆ ಯಕ್ಷ ಶಿಕ್ಷಣವನ್ನು ಸಿರಿ ಬಾಗಿಲು ಪ್ರತಿಷ್ಠಾನದಲ್ಲಿ ದಿನಾಂಕ 20 ಸೆಪ್ಟೆಂಬರ್ 2024ರಂದು ಆರಂಭಿಸಲಾಯಿತು. ಕಾರ್ಯಕ್ರಮಕ್ಕೆ ಅಮೇರಿಕಾದಿಂದ ಆಗಮಿಸಿದ ಕಲಾಪೋಷಕರಾದ ಶ್ರೀ ದಿನೇಶ ಶ್ರೀನಿವಾಸರಾವ್ ಮತ್ತು ಪಣಂಬೂರು ವೆಂಕಟರಾಯ ಐತಾಳರ ಪುತ್ರಿ ಶ್ರೀಮತಿ ಮನೋರಮಾ ದಿನೇಶ ಶ್ರೀನಿವಾಸರಾವ್ ಹಾಗೂ ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ. ಶ್ರೀ ವಸಂತ ಹೇರ್ಳೆ ಇವರುಗಳು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿದರು.

    ಶ್ರೀಮತಿ ಮನೋರಮಾ ದಿನೇಶ ಶ್ರೀನಿವಾಸರಾವ್ ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ಯಕ್ಷಗಾನ ಕ್ಷೇತ್ರಕ್ಕೆ ಬೃಹತ್ ಕೊಡುಗೆ ನೀಡಿದ ಪ್ರತಿಷ್ಠಾನ ಮತ್ತು ಪ್ರತಿಷ್ಠಾನದಲ್ಲಿರುವ ಪಣಂಬೂರು ವೆಂಕಟ್ರಾಯ ಐತಾಳರ ಹೆಸರಿನ ತೆಂಕುತಿಟ್ಟು ಯಕ್ಷಗಾನ ಮ್ಯೂಸಿಯಂ ಯಕ್ಷಗಾನ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯಾಗಿದೆ. ಸಾಂಸ್ಕೃತಿಗೆ ಭವನಕ್ಕೆ ಅಧ್ಯಯನಕ್ಕೆ ಬರುವವರಿಗೆ ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿ. ಇದರ ಸದುಪಯೋಗವನ್ನು ಎಲ್ಲರೂ ಪಡೆಯುವಂತಾಗಲಿ” ಎಂದು ತಿಳಿಸಿದರು.

    ಸಾಂಸ್ಕೃತಿಕ ವಲಯಕ್ಕೆ, ಶಿಕ್ಷಣ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ತಮ್ಮಿಂದಾಗುವ ಸಹಕಾರದ ಕೊಡುಗೆ ನೀಡುತ್ತಿದೆ. ಕರ್ನಾಟಕ ಬ್ಯಾಂಕಿನ ಹೊಸ ಯೋಜನೆಗಳನ್ನು ಗ್ರಾಹಕರಿಗೆ ಶ್ರೀ ವಸಂತ ಹೇರ್ಳೆಯವರು ಮನವರಿಕೆ ಮಾಡಿದರು. ಶ್ರೀ ದಿನೇಶ ಶ್ರೀನಿವಾಸರಾವ್ ಮತ್ತು ಮನೋರಮಾ ರಾವ್ ಅವರನ್ನು ಸಿರಿಬಾಗಿಲು ಪ್ರತಿಷ್ಠಾನದ ಮಹಾಪೋಷಕವಾಗಿ ಗೌರವಿಸಲಾಯಿತು. ಶ್ರೀ ವಸಂತ ಹೇರ್ಳೆಯವರನ್ನು ವಿಶೇಷವಾಗಿ ಅಭಿನಂದಿಸಲಾಯಿತು. ಕಲಾಪೋಷಕರು ಆಗಿರುವ ಪಣಂಬೂರು ವಾಸುದೇವ ಐತಾಳರು ಶಿಕ್ಷಕರಿಗೆ ಶಿಕ್ಷಣ ಯೋಜನೆಯ ಪ್ರಾಯೋಜಕತ್ವ ವಹಿಸಿದ್ದಾರೆ. ಅವರಿಗೆ ಪ್ರತಿಷ್ಠಾನ ವತಿಯಿಂದ ಧನ್ಯವಾದ ಸೂಚಿಸಲಾಯಿತು. ತೆಂಕುತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್, ಶ್ರೀ ಲಕ್ಷ್ಮಿನಾರಾಯಣ ತಂತ್ರಿ ಕಾವು ಮಠ, ಶ್ರೀ ಜಗದೀಶ್ ಕೂಡ್ಲು, ಸುಮಿತ್ರಾ ಮಯ್ಯ ಮುಂತಾದವರು ಉಪಸ್ಥಿತರಿದ್ದರು. ಡಾ. ಶ್ರುತಕೀರ್ತಿ ರಾಜ್ ನಿರೂಪಿಸಿದರೆ, ರಾಮಕೃಷ್ಣಯ್ಯ ಅತಿಥಿಗಳನ್ನು ಸ್ವಾಗತಿಸಿದರು. ಆ ಬಳಿಕ 20ಕ್ಕೂ ಹೆಚ್ಚು ಶಿಕ್ಷಕರಿಗೆ ಪ್ರಥಮ ಹಂತದಲ್ಲಿ ಕರ್ಗಲ್ಲು ಗುರುಗಳಿಂದ ಯಕ್ಷ ಶಿಕ್ಷಣ ನಡೆಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleರಂಗಭೂಮಿ (ರಿ.) ಉಡುಪಿ ಆಯೋಜಿಸುವ 45ನೇ ರಾಜ್ಯಮಟ್ಟದ ಕನ್ನಡ ನಾಟಕ ಸ್ಪರ್ಧೆ 2024 | ಕೊನೆಯ ದಿನಾಂಕ ಅಕ್ಟೋಬರ್ 18
    Next Article ಚಂದ್ರಹಾಸ ಕಣಂತೂರು ಇವರ ‘ಪಡಿಯಕ್ಕಿ’ ಕೃತಿ ಲೋಕಾರ್ಪಣೆ ಸಮಾರಂಭ | ಸೆಪ್ಟೆಂಬರ್ 28
    roovari

    Comments are closed.

    Related Posts

    ವಂಡ್ಸೆಯ ಉಪಾಧ್ಯಾಯರ ಗದ್ದೆಯಲ್ಲಿ ‘ಯಕ್ಷ ಹೆಜ್ಜೆ’ | ಆಗಸ್ಟ್ 24

    August 23, 2025

    ಶ್ರೀ ಭಗವತೀ ಯಕ್ಷಕಲಾ ಬಳಗದಿಂದ ಯಕ್ಷಗಾನಾರ್ಪಣೆ

    August 22, 2025

    ಕೋಟೇಶ್ವರದಲ್ಲಿ ಶ್ರೀ ಹಟ್ಟಿಯಂಗಡಿ ಮೇಳ ತಿರುಗಾಟದ ದಶಮಾನೋತ್ಸವ

    August 22, 2025

    ಶ್ರೀ ಎಡನೀರು ಮಠದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನ ಪ್ರದರ್ಶನ | ಆಗಸ್ಟ್ 22       

    August 21, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.