Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪರಿಚಯ ಲೇಖನ | ‘ಮನೋಹರ ಯಕ್ಷ’ ಮನೋಹರ್ ರೈ ಬೆಳ್ಳಾರೆ
    Article

    ಪರಿಚಯ ಲೇಖನ | ‘ಮನೋಹರ ಯಕ್ಷ’ ಮನೋಹರ್ ರೈ ಬೆಳ್ಳಾರೆ

    June 1, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಗುರಿಕ್ಕಾನದ ಸುಂದರ ರೈ ಹಾಗೂ ಗುಲಾಬಿ ರೈ ಇವರ ಮಗನಾಗಿ 1.06.1984ರಂದು ಮನೋಹರ್ ರೈ ಬೆಳ್ಳಾರೆ ಅವರ ಜನನ. ಪದ್ಮನಾಭ ಪೂಜಾರಿ ಇವರ ನಾಟ್ಯ ಗುರುಗಳು, ಸುಣ್ಣoಬಳ ವಿಶ್ವೇಶ್ವರ ಭಟ್ ಹಾಗೂ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಇವರ ಅರ್ಥಗಾರಿಕೆ ಗುರುಗಳು. ತಂದೆ ಹಾಗೂ ತಾಯಿ ಬೆಳ್ಳಾರೆಯವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ.

    ಕಥೆಯ ಸಾರಾಂಶ ಕೇಳಿಕೊಂಡು ಪದ್ಯ ನೋಡಿಕೊಂಡು ಅರ್ಥಗಾರಿಕೆ ತಿಳಿದುಕೊಂಡು ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಬೆಳ್ಳಾರೆ.

    ನಳ ದಮಯಂತಿ, ಸತ್ಯ ಹರಿಶ್ಚಂದ್ರ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.
    ದಮಯಂತಿ, ಮಾನಿಷಾದದ ಸೀತೆ, ಅಂಬೆ, ಯಶೋಮತಿ, ವಸ್ತ್ರಾಪಹಾರ ದ್ರೌಪದಿ, ದೇವಿ ಇತ್ಯಾದಿ ಇವರ ನೆಚ್ಚಿನ ವೇಷಗಳು.

    ಯಕ್ಷಗಾನದ ಇಂದಿನ ಸ್ಥಿತಿ ಗತಿ:-
    ಯಕ್ಷಗಾನದ ಇಂದಿನ ಸ್ಥಿತಿ ಒಳ್ಳೆಯ ರೀತಿಯಲ್ಲಿ ಇದೆ. ಕಾಲಮಿತಿ ಆದ ಕಾರಣ ಕಲಾವಿದರು ಸಿಗುತ್ತಾರೆ. ಯಾಕಂದ್ರೆ ತಂದೆ ತಾಯಂದಿರು ಮಕ್ಕಳಿಗೆ ಒಳ್ಳೆ ವಿದ್ಯೆ ನೀಡಿ ಒಳ್ಳೆ ಕೆಲಸಕ್ಕೆ ಹೋಗಬೇಕು ತನ್ನ ಮಕ್ಕಳು ಎಂದು ಬಯಸುತ್ತಾರೆ. ಅಂತಹ ಮಕ್ಕಳು ಕಲೆಯ ಮೇಲೆ ಅಭಿಮಾನದಿಂದ ಅತ್ತ ಉದ್ಯೋಗನೂ ಮಾಡುತ್ತಾರೆ ಇತ್ತ ವೇಷನೂ ಮಾಡುತ್ತಾರೆ. ನಿದ್ದೆಗೂ ಸಮಸ್ಯೆ ಆಗುವುದಿಲ್ಲ. ಆದ್ದರಿಂದ ಈಗಿನ ಕಾಲಘಟ್ಟದಲ್ಲಿ ಯಕ್ಷಗಾನ ಸ್ಥಿತಿ ಒಳ್ಳೆಯದು ಎಂದು ಕಾಣುತ್ತಿದೆ.

    ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
    ಕಾಲಮಿತಿ ಯಕ್ಷಗಾನ ಆದ್ದರಿಂದ ಪ್ರೇಕ್ಷಕರು ಬಹುತೇಕ ಮಂದಿ ಸೇರುತ್ತಾರೆ. ಬೆಳಗ್ಗಿನ ಜಾವದ ತನಕ ಆಟ ನೋಡುವ ತಾಳ್ಮೆ ಯಾರಿಗೂ ಇಲ್ಲ. ಈಗ ಅರ್ಧ ರಾತ್ರೀಯಲ್ಲೇ ಸಭೆ ಖಾಲಿ ಆಗುತ್ತದೆ. ಯಾಕಂದ್ರೆ ಮರುದಿನ ಅವರ ಉದ್ಯೋಗಕ್ಕೆ ಕೊರತೆ ಆಗಬಾರದಲ್ಲ. ಒಂದು ಲೆಕ್ಕದಲ್ಲಿ ಪ್ರೇಕ್ಷಕರಿಗೂ ಕಲಾವಿದರಿಗೂ ಈ ಕಾಲ ಘಟ್ಟದ ಕಾಲಮಿತಿ ಯಕ್ಷಗಾನವೇ ಸರಿ.

    ಕಲಾಭಿಮಾನಿಗಳು “ಮನೋಹರ ಯಕ್ಷ ಚಿರ ಕನ್ನಿಕೆ” ಎಂಬ ಬಿರುದು ಕೊಟ್ಟಿರುತ್ತಾರೆ.
    17 ವರ್ಷ ಕಟೀಲು ಮೇಳ, 2 ವರ್ಷ ಕುಂಟಾರು ಮೇಳ, 2 ವರ್ಷ ಮಂಗಳಾದೇವಿ ಮೇಳ, 2 ವರ್ಷ ಬೆಂಕಿನಾಥೇಶ್ವರ ಮೇಳದಲ್ಲಿ ತಿರುಗಾಟ ನಡೆಸಿ, ಪ್ರಸ್ತುತ 2 ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ತಿರುಗಾಟವನ್ನು ಮಾಡುತ್ತಿದ್ದಾರೆ ಮನೋಹರ್ ರೈ ಬೆಳ್ಳಾರೆ.

    ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಮನೋಹರ್ ರೈ ಬೆಳ್ಳಾರೆ.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು.

    Share. Facebook Twitter Pinterest LinkedIn Tumblr WhatsApp Email
    Previous Articleಪರಿಚಯ ಲೇಖನ | ‘ಸಹೃದಯಿ ಯಕ್ಷನಿಧಿ’ ವೆಂಕಟೇಶ್ ಗುಡ್ಡೆಯಂಗಡಿ
    Next Article 2024ನೇ ಸಾಲಿನ ‘ವಿಭಾ ಸಾಹಿತ್ಯ ಪ್ರಶಸ್ತಿ’ಗೆ ಕಾವ್ಯ ಹಸ್ತಪ್ರತಿಗಳ ಆಹ್ವಾನ
    roovari

    Add Comment Cancel Reply


    Related Posts

    ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ

    May 7, 2025

    ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ಪಾರ್ತಿಸುಬ್ಬ ವಿರಚಿತ ‘ಪಂಚವಟಿ’ ಯಕ್ಷಗಾನ ತಾಳಮದ್ದಳೆ

    May 7, 2025

    ಕನ್ನರ್ಪಾಡಿಯಲ್ಲಿ ನೂತನ ‘ಶ್ರೀ ಜಯದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾಮಂಡಳಿ’ ಉದ್ಘಾಟನೆ

    May 6, 2025

    ಪರಿಚಯ ಲೇಖನ | ‘ಬೆಳೆಯುವ ಯಕ್ಷಸಿರಿ’ ಸಚಿನ್ ಶೆಟ್ಟಿ ನಾಗರಕೊಡಿಗೆ

    May 6, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.