ಬೆಂಗಳೂರು : ಕನ್ನಡ ಸಂಶೋಧನ ಅಕಾಡೆಮಿ (ನೋಂ.) ಇದರ ವತಿಯಿಂದ 2025ನೇ ಸಾಲಿನ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರ ‘ಕಥನ ಸಾಹಿತ್ಯದ ತಾತ್ವಿಕತೆ’ ಎಂಬ ವಿಷಯದ ಬಗ್ಗೆ ಸಂಶೋಧನ ಲೇಖನಗಳಿಗೆ ಆಹ್ವಾನಿಸಲಾಗಿದೆ.
1. ಪಿ.ಎಚ್.ಡಿ. ಸಂಶೋಧನಾರ್ಥಿಗಳು, ಅಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಬರೆದು ಲೇಖನಗಳನ್ನು ಕಳುಹಿಸಿಕೊಡಬಹುದಾಗಿದೆ.
2. ಸಂಶೋಧನ ಲೇಖನವು ಕನ್ನಡ ಭಾಷೆಯಲ್ಲಿದ್ದು, 2000 ಪದಗಳ ಮಿತಿಯಲ್ಲಿರಬೇಕು.
3. ಸಂಶೋಧನ ಲೇಖನವು ಸ್ವಂತ ರಚನೆಯಾಗಿದ್ದು, ಕೃತಿ ಚೌರ್ಯ ಮಾಡಿರಬಾರದು.
4. ಸಂಶೋಧನ ಲೇಖನವು ಈ ಹಿಂದೆ ಯಾವುದೇ ಪತ್ರಿಕೆ ಮತ್ತು ಪುಸ್ತಕಗಳಲ್ಲಿ ಪ್ರಕಟವಾಗಿರಬಾರದು.
5. ಸಂಶೋಧನ ಲೇಖನವು ಶೀರ್ಷಿಕೆ, ವಿಷಯದ ವ್ಯಾಪ್ತಿ, ಪರಿಕಲ್ಪನೆ, ವಿಶ್ಲೇಷಣೆ, ವ್ಯಾಖ್ಯಾನ, ಸಮಾರೋಪ, ಫಲಿತಗಳಿಂದ ಕೂಡಿರಬೇಕು.
6. ಸಂಶೋಧನ ಲೇಖನದ ಕೊನೆಯಲ್ಲಿ ಅಡಿಟಿಪ್ಪಣಿಗಳು ಮತ್ತು ಪರಾಮರ್ಶನ ಗ್ರಂಥಗಳ ಮಾಹಿತಿ ಇರಬೇಕು.
7. ಕನ್ನಡ ನುಡಿ ವಿನ್ಯಾಸದಲ್ಲಿ 14 ಫಾಂಟ್ ಅಳತೆಯಲ್ಲಿ ಅಕ್ಷರ ದೋಷಗಳನ್ನು ತಿದ್ದುಪಡಿ ಮಾಡಿದ ವರ್ಡ್ ಫೈಲ್ನಲ್ಲಿ ಕಳುಹಿಸಿಕೊಡಬೇಕು.
೫. ಸಂಶೋಧನ ಲೇಖನದಲ್ಲಿ ಹೆಸರು, ಅಧ್ಯಯನ ಸಂಸ್ಥೆಯ ವಿಳಾಸ, ಪೋನ್ ನಂಬರ್, ಇ-ಮೇಲ್ ವಿಳಾಸ ಹಾಗೂ ಮಾರ್ಗದರ್ಶಕರ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿರಬೇಕು.
9. ಸಂಶೋಧನ ಲೇಖನದ ವಿಧಾನ, ಬರಹದ ಭಾಷೆ, ವಿಶ್ಲೇಷಣೆ/ವ್ಯಾಖ್ಯಾನ, ಗುಣಾತ್ಮಕತೆಯನ್ನು ಗಮನಿಸಿ ಆಯ್ಕೆ ಮಾಡಲಾಗುವುದು.
10. ಆಯ್ಕೆಯಾದ ಸಂಶೋಧನ ಲೇಖನಗಳನ್ನು ISBN ಪುಸ್ತಕ ರೂಪದಲ್ಲಿ ಹೊರತಂದು, ವಿಚಾರ ಸಂಕಿರಣವನ್ನು ಮಾಡುವ ಮೂಲಕ ಬಿಡುಗಡೆ ಮಾಡಲಾಗುವುದು.
11. ಸಂಶೋಧನ ಲೇಖನ ಕಳುಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುವುದು.
12. ಉತ್ತಮ ಲೇಖನಗಳಿಗೆ ಅಧ್ಯಾಪಕರ ವಿಭಾಗ, ಪಿಎಚ್.ಡಿ. ಸಂಶೋಧನಾರ್ಥಿಗಳ ವಿಭಾಗ, ಸ್ನಾತಕೋತ್ತರ ವಿದ್ಯಾರ್ಥಿಗಳ ವಿಭಾಗದಲ್ಲಿ ‘ಅತ್ಯುತ್ತಮ ಸಂಶೋಧನ ಲೇಖನ ಪ್ರಶಸ್ತಿ’ ನೀಡಲಾಗುವುದು.
13. ಸಂಶೋಧನ ಲೇಖನಗಳನ್ನು ಕಳುಹಿಸಿಲು ಯಾವುದೇ ಶುಲ್ಕವಿರುವುದಿಲ್ಲ.
14. ಸಂಶೋಧನ ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 20 ಜುಲೈ 2025.
15. ಲೇಖನಗಳನ್ನು ಕಳುಹಿಸಿಕೊಡಬೇಕಾದ ಇ-ಮೇಲ್ : [email protected]
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ರವಿಕುಮಾರ ಪಿ.ಜೆ. ಅಧ್ಯಕ್ಷರು : 9743566902
ಡಾ. ನಾಗೇಶ್ ಎನ್., ಪ್ರಧಾನ ಕಾರ್ಯದರ್ಶಿಗಳು 9964294231