Subscribe to Updates

    Get the latest creative news from FooBar about art, design and business.

    What's Hot

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಟ್ರತನ ಮೊಟ್ಟೆಕೊಡಿ ಬಾಣೆಯಲ್ಲಿ ‘ಜಾನಪದ ಸಿರಿ’ ಕಾರ್ಯಕ್ರಮ
    Cultural

    ಕಟ್ರತನ ಮೊಟ್ಟೆಕೊಡಿ ಬಾಣೆಯಲ್ಲಿ ‘ಜಾನಪದ ಸಿರಿ’ ಕಾರ್ಯಕ್ರಮ

    February 1, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ನಾಪೋಕ್ಲು : ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಲಮುರಿಯ ನೆಬ್ಬೂರು ಗೌಡ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕಟ್ರತನ ಮೊಟ್ಟೆಕೊಡಿ ಬಾಣೆಯಲ್ಲಿ ‘ಜಾನಪದ ಸಿರಿ’ ಕಾರ್ಯಕ್ರಮವು ದಿನಾಂಕ 28-11-2023ರಂದು ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಇವರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು.

    ಈ ಕಾರ್ಯಕ್ರಮವನ್ನು ನೆಬ್ಬೂರು ಗೌಡ ಸಂಘದ ಅಧ್ಯಕ್ಷರಾದ ಕಟ್ರತನ ಬಿ. ಲೋಕನಾಥ ಅವರು ಪರೆಗೆ ಭತ್ತ ತುಂಬಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ವಕೀಲರಾದ ಕೊಟ್ಟಕೇರಿಯನ ಶ್ರೀ ಡಿ. ದಯಾನಂದ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ “ನೆಬ್ಬೂರು ಗೌಡ ಸಂಘ ನಾಲ್ಕು ತಲೆಮಾರಿನಿಂದ ನಡೆದುಕೊಂಡು ಬಂದಿದ್ದು, ಕೇವಲ ಮೂರು ಕುಟುಂಬಗಳು ಮಾತ್ರ ಸೇರಿ ಕಟ್ಟಿದ ಸಂಘವಾಗಿದೆ. ಯಾವುದೇ ಕಟ್ಟಡವಿಲ್ಲ ಕಚೇರಿ ಇಲ್ಲದೆ ವರ್ಷಕ್ಕೊಮ್ಮೆ ಗ್ರಾಮೀಣ ಕ್ರೀಡಾಕೂಟ ನಡೆಸಿಕೊಂಡು ಹಬ್ಬ ಹರಿದಿನಗಳನ್ನು ಒಂದಾಗಿ ಸೇರಿ ಆಚರಿಸಿಕೊಂಡು ಬರುತ್ತಿದ್ದೇವೆ, ಹಾಗೆಯೇ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದೇವೆ” ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

    ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಟಿ.ಪಿ. ರಮೇಶ್ ಅವರು ಮಾತನಾಡಿ “ಜಾನಪದ ಸಿರಿ ಸಂಪತ್ತು ಉಳಿಯಬೇಕಾದರೆ ಹಳ್ಳಿಗಳಲ್ಲಿ ಇಂತಹ ಸಂಘ-ಸಂಸ್ಥೆಗಳಿರಬೇಕು. ಜಾನಪದ ಸೊಗಡು ಚಿಗುರಬೇಕಾದರೆ ಮಕ್ಕಳಿಗೆ ಇಂತಹ ಗ್ರಾಮೀಣ ಕ್ರೀಡಾಕೂಟ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂತ ಕೆಲಸವನ್ನ ಇಂದು ನೆಬ್ಬೂರು ಗೌಡ ಸಂಘ ಅರ್ಥಪೂರ್ಣವಾಗಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಹಿಂದಿನ ಕಾಲದಲ್ಲಿ ಜಾನಪದ ಬದುಕು ತುಂಬಾ ಚೆನ್ನಾಗಿತ್ತು. ಜಾನಪದ ಕಲೆ ಸಂಸ್ಕೃತಿ ಹಿರಿಯರಿಂದ ಮಕ್ಕಳಿಗೆ ಪರಿಚಯವಾಗಿ ಪೀಳಿಗೆಯಿಂದ ಪೀಳಿಗೆಗೆ ಪಸರಿಸಿದೆ. ಕರ್ನಾಟಕ ಸುವರ್ಣ ಸಂಭ್ರಮಾಚರಣೆಯನ್ನು ಗ್ರಾಮಸಿರಿ ಕಾರ್ಯಕ್ರಮದ ಮೂಲಕ ವರ್ಷಪೂರ್ತಿ ಹಳ್ಳಿ ಹಳ್ಳಿಗಳಲ್ಲಿ ನಡೆಸಲಾಗುವುದು” ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಅವರು ಮಾತನಾಡಿ “ಕೇವಲ ಮೂರು ಕುಟುಂಬಗಳು ಸೇರಿಕೊಂಡು ಯಾವುದೇ ಕಟ್ಟಡದ ಸಹಕಾರವಿಲ್ಲದೆ ಕುಟುಂಬದ ಬಾಣೆಯೊಂದರಲ್ಲಿ ಪ್ರತಿ ವರ್ಷ ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಸೊಗಡನ್ನು ಪೋಷಿಸುತ್ತಿರುವ ನೆಬ್ಬೂರು ಸಂಘ ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸೇರಿಕೊಂಡು ನಡೆಸಿದ ಕಾರ್ಯಕ್ರಮ ಜಾನಪದ ಹಾಗೂ ಕನ್ನಡದ ಕಂಪು ಒಂದಾಗಿ ಬೆರೆತು ಅರ್ಥಪೂರ್ಣ ಯಶಸ್ವಿ ಜಾನಪದ ಸಿರಿ ಕಾರ್ಯಕ್ರಮ ಹೊರ ಸೂಸಿದೆ” ಎಂದರು.

    ಪೊನ್ನಚನ ರೋಹಿತ್ ತಂಡದಿಂದ ಸ್ವಾಗತ ಗೀತೆ, ಪಾರೆಮಜ್ಲು ದೇವಮ್ಮ ಶಿರಕಜೆ ಹೇಮಾವತಿ ಅವರಿಂದ ಸೋಬಾನೆ ಪದ, ಕೊಟ್ಟಕೇರಿಯನ ಲೀಲಾ ದಯಾನಂದ ಅವರಿಂದ ಕವನ ವಾಚನ, ಪುಟಾಣಿ ಯಶಿಕಾಳಿಂದ ದೇಶದ ರಾಜ್ಯ ರಾಜಧಾನಿಗಳ ಹೆಸರು ಹೇಳುವಿಕೆ, ಪೊನ್ನಚನ ದಿನೇಶ್ ಅವರಿಂದ ಕನ್ನಡ ಗೀತ ಗಾಯನ, ಕೊಟ್ಟಕೇರಿಯನ ದೀಕ್ಷಾ ಜಾನಪದ ನೃತ್ಯ, ಪೊನ್ನಚನ ಸೇಜಲ್ ಜಾನಪದ ನೃತ್ಯ, ನಂಗಾರು ಪುಣ್ಯಬಸವರಾಜ್ ಅವರಿಂದ ಕಂಸಾಳೆ ನೃತ್ಯ, ಪೊನ್ನಚನ ಅಂಜನಾ ತಂಡದಿಂದ ಜಾನಪದ ನೃತ್ಯ ವೈವಿಧ್ಯಗಳು ಜನಮನ ಸೂರೆಗೊಂಡವು.

    ಹಿರಿಯ ಕ್ರೀಡಾಪಟುಗಳಾದ ಪೊನ್ನಚನ ಕೆ. ಮಾದಪ್ಪನವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಕಾಳು ಹೆಕ್ಕುವುದು, ಮಹಿಳೆಯರಿಗೆ ನೀರು ಚೆಂಬಿನ ಓಟ, ಕಾಯಿಗೆ ಕಲ್ಲು ಹೊಡೆಯುವುದು, ಬಕೀಟಿಗೆ ಚೆಂಡು ಹಾಕುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯುವುದು ಹೀಗೆ ಹತ್ತು ಹಲವು ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಂಡಿದ್ದು ವಿಜೇತರಿಗೆ ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡಲಾಯಿತು.

    ಸಾಹಿತ್ಯ, ಶಿಕ್ಷಣ, ಕ್ರೀಡೆ, ಸೇನೆ, ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಕಟ್ಟರತನ ಲಲಿತ ಅಯ್ಯಣ್ಣ, ಶಿಕ್ಷಣ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಶ್ರೀಜಾ ದಯಾನಂದ, ಪೊನ್ನಚನ ತ್ರಿನೇಶ್ ಅಪ್ಪಯ್ಯ, ಕೊಟ್ಟಕೇರಿಯನ ಚಂದ್ರಿಕ ಧಮೇಂದ್ರ, ಆರೋಗ್ಯ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಸುಲೋಚನಾ ಬಾಲಕೃಷ್ಣ, ಶಿಕ್ಷಣ ಕ್ಷೇತ್ರದಲ್ಲಿ ಕಟ್ರತನ ಪ್ರೇಮ ಮಧುರಾಜ್, ಕಟ್ರತನ ಕುಸುಮ ಸುಲೋಚನ, ಕ್ರೀಡಾ ಕ್ಷೇತ್ರದಲ್ಲಿ ಪೊನ್ನಚನ ಬೃಂದಾ ದಿನೇಶ್, ಸೇನಾ ಕ್ಷೇತ್ರದಲ್ಲಿ ಪೊನ್ನಚನ ಪ್ರಶಾಂತ್ ಪೂಣಚ್ಚ, ಪೊನ್ನಚನ ಹಿತನ್ ಕರುಂಬಯ್ಯ ಇವರು ಸನ್ಮಾನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಬಲಮುರಿ ದೇವನೂರು ಗೌಡ ಒಕ್ಕೂಟದ ಅಧ್ಯಕ್ಷರಾದ ಪೊನ್ನಚನ ಜಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮಿತಿ ಸದಸ್ಯರಾದ ರಮ್ಯಾ ಕೆ.ಜಿ., ತಾಲೂಕು ಕಾರ್ಯದರ್ಶಿಗಳಾದ ಪುದಿಯ ನೆರವನ ರಿಶಿತ್ ಮಾದಯ್ಯ, ಬಾಳೆಯಡ ದಿವ್ಯ ಮಂದಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಚೊಕ್ಕಡಿ ಪ್ರೇಮ ರಾಘವಯ್ಯ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆಕರೆಯುವರು ಸೇರಿದ್ದರು. ಪೊನ್ನಚನ ಡೈನ ಸರ್ವರನ್ನು ಸ್ವಾಗತಿಸಿ, ಕೊಟ್ಟಕೇರಿಯನ ಧಮೇಂದ್ರ ಕಾರ್ಯಕ್ರಮ ನಿರೂಪಿಸಿ, ಕಟ್ರತನ ರೋಹಿಣಿ ವಂದಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಕರಾವಳಿ ಸಂಗೀತ ಕಲಾವಿದರ ಒಕ್ಕೂಟದ 16ನೇ ಮಹಾಸಭೆ
    Next Article ವಿರಾಜಪೇಟೆಯಲ್ಲಿ ‘ನುಡಿ ನೃತ್ಯ ಸಂಭ್ರಮ-2023’ ಕಾರ್ಯಕ್ರಮ
    roovari

    Add Comment Cancel Reply


    Related Posts

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    ಕರುಂಬಿತ್ತಿಲ್ ಸಂಗೀತ ಶಿಬಿರದ ಸಮಾರೋಪ ಸಮಾರಂಭ

    May 30, 2025

    ಖ್ಯಾತ ಸಾಹಿತಿ ಎಚ್. ಎಸ್. ವೆಂಕಟೇಶಮೂರ್ತಿ ನಿಧನ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.