Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮದಲ್ಲಿ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ | ಅಕ್ಟೋಬರ್ 17

    October 16, 2025

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಗಮಕ ಸಮ್ಮೇಳನ’ | ಅಕ್ಟೋಬರ್ 17 ಮತ್ತು 18

    October 16, 2025

    ಮಾಣಿಕ್ಯ ಪ್ರಕಾಶನದ ದಶಮಾನೋತ್ಸವ ಸಂಭ್ರಮದ ಸರ್ವಾಧ್ಯಕ್ಷರಾಗಿ ಮುಂಬಯಿಯ ಸಾಹಿತಿ ವಾಣಿ ಶೆಟ್ಟಿ ಆಯ್ಕೆ

    October 16, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶಿರಸಿಯಲ್ಲಿ ಕದಂಬ ಕಲಾರಾಧಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ
    Awards

    ಶಿರಸಿಯಲ್ಲಿ ಕದಂಬ ಕಲಾರಾಧಕ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

    October 16, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಚಾಮರಾಜನಗರ : ಶಿರಸಿಯ ಸುಪ್ರಸಿದ್ಧ ಪಂಚತಾರಾ ಹೋಟೆಲ್ ಸುಪ್ರಿಯಾ ಇಂಟರ್ನ್ಯಾಷನಲ್ ಸಭಾಂಗಣದಲ್ಲಿ ದಿನಾಂಕ 12 ಅಕ್ಟೋಬರ್ 2025ರಂದು ಕದಂಬ ಕಲಾ ಸಾಂಸ್ಕೃತಿಕ ಪರಿಷತ್ತು ಕರ್ನಾಟಕ ಸಾರಥ್ಯದಲ್ಲಿ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಉ.ಕ. ಘಟಕ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನಾಡಿನ ಖ್ಯಾತ ಕವಿ ಡಾ. ಕಾವೆಂಶ್ರೀ ಕಾವ್ಯಯಾನ-ಭಾವಗಾನ 1, ಶತಕಂಠ ಗೀತಗಾಯನ, ಕದಂಬ ರತ್ನಾಕರರ ಹೊನ್ನುಡಿ ಕವನ ಸಂಕಲನ ಲೋಕಾರ್ಪಣೆ ಹಾಗೂ ಕದಂಬ ಕಲಾರಾಧಕ -2025 ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

    ಸಮಾರಂಭದಲ್ಲಿ ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕದಂಬ ರತ್ನಾಕರ, ತಹಶೀಲ್ದಾರ ಪಟ್ಟರಾಜ ಗೌಡ ಹಾಗೂ ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ಜಾನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಇವರ ಜೊತೆಗೆ ಡಾ. ನಾಗರಾಜ ಬೈರಿ -ಮೈಸೂರು, ಪ್ರತಿಭಾಂಜಲಿ ಡೇವಿಡ್ – ಮಂಡ್ಯ, ಶಾಂತಾ ಶೆಟ್ಟಿ- ಶಿವಮೊಗ್ಗ, ಗಣೇಶ್ ಶೆಣೈ- ದಾವಣಗೆರೆ ಹಾಗೂ ಎರ್ರಿಸ್ವಾಮಿ ಎಚ್. – ಬೆಂಗಳೂರು ಇವರಿಗೂ ಇವರ ಸಾಂಸ್ಕೃತಿಕ ಸೇವೆಯನ್ನ ಪರಿಗಣಿಸಿ ಕದಂಬ ಕಲಾರಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದುದ್ದಕ್ಕೂ ಡಾ. ಕಾವೆಂಶ್ರೀ ಗೀತೆಗಳು ಶತಕಂಠದನಿಯಲ್ಲಿ ಝೇಂಕರಿಸಿತು. ಬೇರೆ ಬೇರೆ ಜಿಲ್ಲೆಯಿಂದ ಬಂದಿದ್ದ ಗಾಯಕರು ಹಾಡಿ ಮೋಡಿ ಮಾಡಿದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ಕೆ.ಎನ್. ಹೊಸ್ಮನಿ, ಡಾ. ವೆಂಕಟೇಶ ನಾಯ್ಕ, ಭೀಮಾಶಂಕರ್ ಕುಲಕರ್ಣಿ, ದಿವ್ಯಾ ಶೇಟ್ ಕದಂಬ ಹಾಗೂ ಜ್ಯೋತಿ ರತ್ನಾಕರ ಮುಂತಾದವರು ಉಪಸ್ಥಿತರಿದ್ದರು.

    award baikady Book release felicitation Literature Music roovari
    Share. Facebook Twitter Pinterest LinkedIn Tumblr WhatsApp Email
    Previous Articleಮುಂಬಯಿ ವಿಶ್ವವಿದ್ಯಾಲಯದಲ್ಲಿ ಕುಸುಮೋತ್ಸವ 2025 ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮ
    Next Article ಖ್ಯಾತ ತೆಂಕುತಿಟ್ಟು ಭಾಗವತ ದಿನೇಶ್ ಅಮ್ಮಣ್ಣಾಯ ನಿಧನ
    roovari

    Add Comment Cancel Reply


    Related Posts

    ಬೆಂಗಳೂರಿನ ಕಲಾಗ್ರಾಮದಲ್ಲಿ ಸಂತ ಕವಿ ಕನಕದಾಸರ ಅನನ್ಯ ಕಾವ್ಯ ಆಧಾರಿತ ‘ರಾಮಧಾನ್ಯ’ ನಾಟಕ | ಅಕ್ಟೋಬರ್ 17

    October 16, 2025

    ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ‘ಗಮಕ ಸಮ್ಮೇಳನ’ | ಅಕ್ಟೋಬರ್ 17 ಮತ್ತು 18

    October 16, 2025

    ಮಾಣಿಕ್ಯ ಪ್ರಕಾಶನದ ದಶಮಾನೋತ್ಸವ ಸಂಭ್ರಮದ ಸರ್ವಾಧ್ಯಕ್ಷರಾಗಿ ಮುಂಬಯಿಯ ಸಾಹಿತಿ ವಾಣಿ ಶೆಟ್ಟಿ ಆಯ್ಕೆ

    October 16, 2025

    ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ‘ಸೃಜನೇತರ ಬರೆವಣಿಗೆ’ ಕಾರ್ಯಾಗಾರ | ಅಕ್ಟೋಬರ್ 17 ಮತ್ತು 18

    October 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.