Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಶಾಸ್ತ್ರೀಯ ಶೈಲಿಯ ವಿಶೇಷ ಕಲಾವಿದ ರಥ ಶಿಲ್ಪಿ ಪರಮೇಶ್ವರಾಚಾರ್ಯ

    June 24, 2025

    ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ಮತ್ತು ಸಂಗೀತ ದಿನಾಚರಣೆ

    June 23, 2025

    ಮಂಗಳೂರಿನ ಅಮೃತ ಕಾಲೇಜಿನಲ್ಲಿ ತುಳು ನಾಟಕ ಕಾರ್ಯಾಗಾರ | ಜೂನ್ 24

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸುಜಯೀಂದ್ರ ಹಂದೆಯವರ ‘ಯಕ್ಷ ದೀವಟಿಗೆ’ ಕೃತಿ ಅನಾವರಣ.
    Book Release

    ಸುಜಯೀಂದ್ರ ಹಂದೆಯವರ ‘ಯಕ್ಷ ದೀವಟಿಗೆ’ ಕೃತಿ ಅನಾವರಣ.

    August 24, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

     

    ಮಂಗಳೂರು : ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಮೈಸೂರಿನ ಅಂಬಾರಿ ಪ್ರಕಾಶನ ಪ್ರಕಟಿಸಿದ ಉಪನ್ಯಾಸಕ ಕೋಟ ಸುಜಯೀಂದ್ರ ಹಂದೆಯವರ ಯಕ್ಷ ಪ್ರಬಂಧಗಳ ಸಂಕಲನ “ಯಕ್ಷ ದೀವಟಿಗೆ” ದಿನಾಂಕ 14-08-2023ರ ಸೋಮವಾರದಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಕಚೇರಿಯಲ್ಲಿ ಅನಾವರಣಗೊಂಡಿತು.
    ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಲೇಖಕರು, ಅರ್ಥಧಾರಿಗಳು ಹಾಗೂ ಯಕ್ಷಗಾನ ವಿದ್ವಾಂಸರೂ ಆದ ಡಾ.ಎಂ.ಪ್ರಭಾಕರ ಜೋಷಿಯವರು “ಯಕ್ಷಗಾನವು ರೂಪ ಪ್ರಧಾನವಾದ ಕಲೆ. ಯಾವುದೇ ಕಲೆಯ ಸ್ವರೂಪ ಪ್ರಜ್ಞೆಯ ಅರಿವಿಲ್ಲದೆ ಮಾಡುವ ವಿಮರ್ಶೆ ಸಾಧುವಾದುದಲ್ಲ. ಕಲಾ ವಿಮರ್ಶೆಗೆ ಅನೇಕ ಮುಖಗಳಿವೆ. ಯಕ್ಷಗಾನದ ವಿಮರ್ಶೆಗೆ ಕಾರಂತರು, ಸೇಡಿಯಾಪು ಹಾಗೂ ರಾಘವನ್ ಮೊದಲಾದ ಹಿರಿಯರ ಪರಂಪರೆಯಿದೆ. ವಿಮರ್ಶೆಯು ಯಾವುದೇ ಕಲೆಯಲ್ಲಿ ಪ್ರೀತಿಯನ್ನು ಮತ್ತು ತಿಳುವಳಿಕೆಯನ್ನು ಬೆಳೆಸಬೇಕು. ಆಳಕ್ಕಿಳಿಯದೆ ತಳಮಟ್ಟದ ಅಧ್ಯಯನ ಇಲ್ಲದೆ ಸರಿ ತಪ್ಪುಗಳ ವಿವೇಚನೆ ಕೂಡದು. ಕನ್ನಡ ಸಾಹಿತ್ಯದ ಸಮಗ್ರ ಅಧ್ಯಯನವೆಂದರೆ ಅದು ಯಕ್ಷಗಾನವನ್ನು ಬಿಟ್ಟಿರಲು ಸಾಧ್ಯವಿಲ್ಲ. ಮುಖ್ಯವಾಗಿ ಇತ್ತೀಚೆಗೆ ಯಕ್ಷಗಾನದ ಹಿಮ್ಮೇಳ ಮುಮ್ಮೇಳಗಳಲ್ಲಿ ಅಸಮತೋಲನದ ಸಮಸ್ಯೆಯಿದೆ. ‘ಯಕ್ಷಗಾನ’ ಎಂಬುದು ಒಂದು ಸಮಷ್ಠಿ ಕಲೆ. ಗಾನ, ಆಹಾರ್ಯ ಹಾಗೂ ಆಂಗಿಕಾಭಿನಯಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ನೋಡದೆ ಅದನ್ನು ಸಮಗ್ರವಾಗಿ ಸ್ವೀಕರಿಸುವುದೇ ಅದರ ಸೌಂದರ್ಯ. ಸ್ವತಃ ಕಲಾವಿದ ಮತ್ತು ನಿರ್ದೇಶಕರಾಗಿ ರಂಗಾನುಭವವನ್ನು ಹೊಂದಿರುವ ಹಂದೆಯವರ ‘ಯಕ್ಷ ದೀವಟಿಗೆ’ಯಲ್ಲಿ ಯಕ್ಷಗಾನ ರಂಗದ ಉನ್ನತಿಯ ಕಾಳಜಿ ಮತ್ತು ವ್ಯವಸ್ಥಿತವಾಗಿ ಕಲೆ ಉಳಿಯಬೇಕೆಂಬ ತುಡಿತವಿದೆ” ಎಂದು ಹೇಳಿದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ “ಕಲೆ ಸಾಹಿತ್ಯ ನಮ್ಮ ಬದುಕನ್ನು ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲುದು. ಎಳವೆಯಲ್ಲೇ ಕೊಟ್ಟ ಸಂಸ್ಕಾರವು ಮುಂದೆ ಬಾಳಿನ ಬೆಳಕಾಗಿ ಮೂಡಿಬರುತ್ತವೆ. ಯಕ್ಷಗಾನ ನಮ್ಮನ್ನು ಮೌಲ್ಯವಂತರನ್ನಾಗಿ ಮಾಡಿವೆ” ಎಂದು ಶುಭಹಾರೈಸಿದರು.
    ಕೃತಿಯ ಲೇಖಕರಾದ ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಲಾವಿದ ಹಾಗೂ ಸಾಹಿತಿ ಜನಾರ್ದನ ಹಂದೆಯವರು ವಂದಿಸಿದರು. ಕುಮಾರಿ ಕಾವ್ಯ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉಳ್ಳಾಲ ಕಸಾಪ ವತಿಯಿಂದ ‘ಕನ್ನಡ ಸಂಭ್ರಮ : ಕುವೆಂಪು ಕಂಪು’ – ಉಪನ್ಯಾಸ, ವಿಮರ್ಶೆ ಹಾಗೂ ಭಾವಗೀತೆ
    Next Article ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ʻಅಂಕಿತ ಪುಸ್ತಕ ಪುರಸ್ಕಾರʼ ಪ್ರಶಸ್ತಿ ಪ್ರದಾನ ಸಮಾರಂಭ
    roovari

    Add Comment Cancel Reply


    Related Posts

    ಲೋಕಾರ್ಪಣೆಗೊಂಡ ‘ನಡುರಾತ್ರಿಯ ಸ್ವಾತಂತ್ರ್ಯ’ ಕವನ ಸಂಕಲನ

    June 23, 2025

     ಲೋಕಾರ್ಪಣೆಗೊಂಡ ‘ತತ್ತ್ವಭಾಗವತಮ್’ ನಾಲ್ಕು ಕೃತಿಗಳು

    June 23, 2025

    ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ

    June 23, 2025

    ಲೋಕಾರ್ಪಣೆಗೊಂಡ “ಜೀವನಯಾನ” ಕವನ ಸಂಕಲನ

    June 20, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.