Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಾಹಿತಿ ಕಮಲಾ ಹಂಪನಾ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ನುಡಿ ಗೌರವ’
    Literature

    ಸಾಹಿತಿ ಕಮಲಾ ಹಂಪನಾ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ನುಡಿ ಗೌರವ’

    July 14, 2024Updated:July 13, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು :  ಇತ್ತೀಚೆಗೆ ನಿಧನರಾದ ಸಾಹಿತಿ ಕಮಲಾ ಹಂಪನಾ ಇವರಿಗೆ ‘ನುಡಿ ಗೌರವ’ ಕಾರ್ಯಕ್ರಮವು ದಿನಾಂಕ 12-07-2024 ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಶ್ರೀಕೃಷ್ಣರಾಜ ಮಂದಿರದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ “ಕಮಲಾ ಹಂಪನಾ  ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯದಲ್ಲಿ ಒಂದು ಯುಗದ ಮುಕ್ತಾಯವಾಗಿದೆ ಎಂದರೆ ತಪ್ಪಾಗದು. ಕನ್ನಡ ಸಾಹಿತ್ಯಕ್ಕೆ  ಅವರ ಕೊಡುಗೆ ಅಷ್ಟು ದೊಡ್ಡದು. ಅವರ ಅಗಲುವಿಕೆಯಿಂದ ಮನೆಯ ಹಿರಿಯರನ್ನು ಕಳೆದುಕೊಂಡ ತಬ್ಬಲಿ ಭಾವವನ್ನು ಅನುಭವಿಸುತ್ತಿದ್ದೇನೆ. ಪತಿ ಡಾ. ಹಂಪನಾಗರಾಜಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುವ ಮೊದಲಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದ ಡಾ. ಕಮಲಾ ಹಂಪನಾ ಮೂಡಬಿದರೆಯಲ್ಲಿ  ನಡೆದ 71ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಜಿಲ್ಲಾ ಸಾಹಿತ್ಯ ಸಮ್ಮೇಳನ, ಲೇಖಕಿಯರ ಸಮ್ಮೇಳನ, ಅತ್ತಿಮಬ್ಬೆ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಹೀಗೆ ಹಲವು ಪ್ರಮುಖ ಸಮ್ಮೇಳನಗಳ ಅಧ್ಯಕ್ಷತೆಯ ಗೌರವ ಅವರಿಗೆ ದೊರಕಿದೆ. ಇದರ ಜೊತೆಗೆ ಹತ್ತಾರು ದೇಶ ವಿದೇಶಗಳಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ ಲೇಖಕಿಯರಲ್ಲಿ ಕಮಲಾ ಅವರೇ ಮೊದಲಿಗರು. 2012ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅವರಿಗೆ ತನ್ನ ಪ್ರತಿಷ್ಟಿತ ‘ಚಾವುಂಡ ರಾಯ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತ್ತು. ತೀರಾ ಇತ್ತೀಚೆಗೆ  ಕನ್ನಡ  ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕನ್ನಡ ತಾಯಿ ಭುವನೇಶ್ವೇರಿಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಬಹಳ ಮುಖ್ಯವಾಗಿ ಸದಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಿರಿಯಕ್ಕನಂತೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯಕ್ಕೂ ಕತ್ತಲು ಕವಿದಂತಾಗಿದೆ. ಕಮಲಾ ಹಂಪನಾ ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದವರು. ಅವರು ಶೈಕ್ಷಣಿಕ ವಲಯದಲ್ಲಿ  ಚಿರಪರಿಚಿತರು. ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅಚ್ಚಳಿಯದೆ ಉಳಿದ ಹೆಸರು. ಕಮಲಾ ಎಂದರೆ ತಾವರೆ, ಅದು ಕೆಸರಿನಲ್ಲಿ ಹುಟ್ಟಿದರೂ ಆಕಾಶದೆಡೆ ಮುಖ ಚಾಚಿದ್ದು ಕಮಲಾ ಹಂಪನಾ ಕೂಡ ಸಿರಿತನದಲ್ಲಿ ಹುಟ್ಟಿದ್ದರೂ ತಂದೆಯ ಸಾವಿನಿಂದ ಬಡತನದ ಬೆಂಕಿಗೆ ಬಿದ್ದು ನರಳಿದವರು. ಹೋರಾಟದಿಂದಲೇ ಸಿದ್ದಿಯನ್ನು ಪಡೆದವರು. ಕಥೆ, ಕಾವ್ಯ, ನಾಟಕ, ಸಂಶೋಧನೆ, ಸಂಪಾದನೆ, ವಿಮರ್ಶೆ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ  ಸಂಪಾದನೆ, ಸಂಶೋಧನಾ ಕ್ಷೇತ್ರಗಳಲ್ಲಿಯೂ ಮುನ್ನುಗ್ಗಿ ಹೆಸರನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ನಾಡೋಜ ಡಾ.ಮಹೇಶ ಜೋಶಿ ವಿಶ್ಲೇಷಿಸಿದರು.

     

    ಕಾರ್ಯಕ್ರಮದಲ್ಲಿ ಮಾತನಾಡಿದ  ಹಿರಿಯ ಬರಹಗಾರ ಹಾಗೂ ಸಂಶೋಧಕ ನಾಡೋಜ ಡಾ.ಹಂಪನಾಗರಾಜಯ್ಯ ತಮ್ಮ 71  ವರ್ಷಗಳ ಸ್ನೇಹದ ಕುರಿತು ಹೇಳಿ “ಕಮಲಾ ಹಂಪನಾ ಅವರ ಧೀಶಕ್ತಿ ಬಹಳ ದೊಡ್ಡದು, ಹೋರಾಟದ ಹಾದಿಯಲ್ಲಿ ಅವರು ಸದಾ ಮುಂದಿದ್ದರು. ಹುಂಬಚದಲ್ಲಿ ಅವರಿಗೆ ಸನ್ಮಾನ ನಡೆದಾಗ ಸಮಾಜಕ್ಕೆ ಮರಳಿ ಕೊಡ ಬೇಕು ಎಂಬ ನಿಶ್ಚಯದಲ್ಲಿ ಜೈನ ಸಾಹಿತ್ಯದ  ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಹತ್ವದ ಹೊಣೆಗಾರಿಕೆ ಬಂದಾಗ ಜವಬ್ದಾರಿಯಿಂದ ನಿರ್ವಹಿಸಿದರು. ಸೃಜನಶೀಲತೆ ಮತ್ತು ಸಂಶೋಧನೆ ಎರಡಕ್ಕೂ ಸಮಾನ ಮಹತ್ವ ನೀಡಿದ್ದ ಕಮಲಾ ಹೊರದೇಶಗಳಿಗೆ ಹೋದಾಗ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಆಸಕ್ತರಾಗಿದ್ದರು.” ಎಂದರು.

     

    ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ “’ಏನಾದರೂ ಆಗು ಮಗುವಿನ ಮುಗ್ಧತೆಯನ್ನು ಕಳೆದು ಕೊಳ್ಳ ಬೇಡ’ ಎಂಬ ಗ್ಯಾಬ್ರಿಯಲ್ ರ್ಮಾಕ್ವಜ್ನ ಮಾತಿಗೆ ಕಮಲಾ ಹಂಪನಾ ನಿದರ್ಶನದಂತಿದ್ದರು ಪರಂಪರೆಯನ್ನು ಮುಂದುವರೆಸಬೇಕು ಎನ್ನುವುದು ಅವರ ಆಶಯವಾಗಿತ್ತು. ಸಂಶೋಧನೆಯ ನಿರಂತರತೆ, ಪರಿಶ್ರಮ, ವ್ಯಾಪಕತೆ, ಮೌಲಿಕತೆ ಮತ್ತು ಹೊಸತನವನ್ನು ನೀಡುವುದು ಮುಖ್ಯ ಎನ್ನುವುದು ಕಮಲಾ ಹಂಪನಾ ಅವರ ಚಿಂತನೆಯಾಗಿತ್ತು.  ಸಂಶೋಧನೆಗೆ ಎಂದಿಗೂ ಪೂರ್ಣ ವಿರಾಮ ನೀಡಬಾರದು ಎಂದು ಅವರು ಪ್ರತಿಪಾದಿಸಿದ್ದರು. ಗ್ರಂಥ ಸಂಪಾದನೆ ಮತ್ತು ಉಪೇಕ್ಷಿತ ಬರಹಗಾರರ ಅಧ್ಯಯನದ ಕುರಿತು ಕಮಲಾ ವಿಶೇಷ ಮಹತ್ವ ನೀಡಿದ್ದರು. ಈ ಹಾದಿಯಲ್ಲಿ ಮುಂದೆ ಹೋಗುವುದೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ.” ಎಂದು ಹೇಳಿದರು.

     

    ಹಿರಿಯ ಬರಹಗಾರ್ತಿ  ಡಾ. ಕೆ. ಆರ್.ಸಂಧ್ಯಾ ರೆಡ್ಡಿ ಮಾತನಾಡಿ “ಡಾ. ಕಮಲಾ ಹಂಪನಾ ಅವರ ಆತ್ಮಕತೆ ‘ಬೇರು-ಬೆಂಕಿ-ಬಿಳಲು’ ಓದಿದರೆ ಅವರ ಪರಿಶ್ರಮದ ಹಾದಿ ಅರ್ಥವಾಗುತ್ತದೆ. ನಿರಂತರ ಅಧ್ಯಯನ ಮತ್ತು ಸ್ನೇಹಶೀಲತೆ ಅವರ ಹಿರಿಮೆ.” ಎಂದು ಬಣ್ಣಿಸಿದರು. ಸಪ್ನ ಬುಕ್ ಹೌಸ್ ಇದರ ಆರ್. ದೊಡ್ಡೇಗೌಡರು ತಮ್ಮ ಸಂಸ್ಥೆಯ ಜೊತೆಗೆ ಹಂಪನಾ ದಂಪತಿಗಳಿಗಿದ್ದ 35 ವರ್ಷಗಳ ಸಂಬಂಧವನ್ನು ವರ್ಣಿಸಿ ಅವರನ್ನು ಜಕ್ಕವಕ್ಕಿಗಳು ಎಂದು ಕರೆದು ಈ ಜೋಡಿಯನ್ನು ನೋಡುವುದೇ ಸಂಭ್ರಮವಾಗಿತ್ತು ಎಂದು ಹೇಳಿ ಡಾ.ಕಮಲಾ ಹಂಪನಾ ಅವರ ಹದಿನಾಲ್ಕು ಸಂಪುಟಗಳ ಕೃತಿ ಶ್ರೇಣಿಯನ್ನು ಪ್ರಕಟಿಸುವಲ್ಲಿ ತಮಗಾದ ಅನುಭವಗಳನ್ನು ಹಂಚಿ ಕೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾದ ಬಿ. ಎಂ. ಪಟೇಲ್ ಪಾಂಡು ಕಾರ್ಯಕ್ರಮವನ್ನು ನಿರ್ವಹಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Article‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ | ಜುಲೈ 14  
    Next Article ಯು.ಎನ್. ಉಮೆನ್ ಏಷ್ಯಾ-ಪೆಸಿಫಿಕ್ ‘ಲೀಡಿಂಗ್ ಫ್ರಂ ದಿ ಫ್ರಂಟ್’ ಎಂಬ ‘ಹಮ್’ ಕಥಾ ಸಂಗ್ರಹ ಪುಸ್ತಕದಲ್ಲಿ ಸ್ಥಾನ ಪಡೆದ ಯಕ್ಷಗುರು ಪ್ರಿಯಾಂಕ ಕೆ. ಮೋಹನ್
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಮಾಣಿಕ್ಯ ಪ್ರಕಾಶನದ 2025ನೇ ಸಾಲಿನ ರಾಜ್ಯಮಟ್ಟದ ವಿವಿಧ ದತ್ತಿ ಪ್ರಶಸ್ತಿಗಳಿಗೆ ಕೃತಿಗಳ ಆಹ್ವಾನ

    May 10, 2025

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.