Subscribe to Updates

    Get the latest creative news from FooBar about art, design and business.

    What's Hot

    ಸೋಮವಾರಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಅನಾವರಣ

    October 25, 2025

    ಶ್ರೀ ವೀರಾಂನೇಯ ಸ್ವಾಮಿ ದೇವಸ್ಥಾನದಲ್ಲಿ ‘ದೀಪಾವಳಿ ಕುಟುಂಬ ಮಿಲನ’ | ಅಕ್ಟೋಬರ್ 31

    October 25, 2025

    ಉಪ್ಪಿನಂಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ‘ಕನ್ನಡ ಕಲರವ -3’ | ನವೆಂಬರ್ 01

    October 25, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಕಣಿವೆಯ ಹಾಡು’
    Drama

    ತೆಕ್ಕಟ್ಟೆಯ ಹಯಗ್ರೀವದಲ್ಲಿ ‘ಕಣಿವೆಯ ಹಾಡು’

    December 30, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ: ಯಶಸ್ವೀ ಕಲಾವೃಂದ (ರಿ.)ಕೊಮೆ ತೆಕ್ಕಟ್ಟೆ, ರಂಗಸಂಪದ ಕೋಟ, ಧಮನಿ ಟ್ರಸ್ಟ್ ತೆಕ್ಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ‘ಸಿನ್ಸ್ 1999 ಶ್ವೇತಯಾನ-91’ ಕಾರ್ಯಕ್ರಮದಡಿಯಲ್ಲಿ ‘ನಾಟಕಾಷ್ಟಕ’ದ ಮೂರನೇ ದಿನದ ಕಾರ್ಯಕ್ರಮ ದಿನಾಂಕ 28 ಡಿಸೆಂಬರ್ 2024ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ಕಲಾಪೋಷಕ ಡಾ. ಆದರ್ಶ ಹೆಬ್ಬಾರ್‌ ಇವರನ್ನು ಗೌರವಿಸಿದ ಗುರುರಾಜ್ ಮಾತನಾಡಿ “ಗಳಿಸಿದ ಒಂದಂಶವನ್ನು ಕಲೆಗಾಗಿ ಮುಡಿಪಾಗಿಡುವ ಗುಣ ಹಲವರಲ್ಲಿರುವುದಿಲ್ಲ. ಪ್ರತಿಭಾನ್ವಿತ ಯಕ್ಷಗಾನಾಸಕ್ತ ಹಾಗೂ ಸಂಗೀತಾಸಕ್ತ ಡಾ. ಆದರ್ಶ ಹೆಬ್ಬಾರ್ ಕಲಾ ಪೋಷಕರಾಗಿ ಹೆಸರಾದವರು. ಶ್ವೇತಯಾನದಲ್ಲಿ ‘ಭೀಷ್ಮ ವಿಜಯ’ ಪ್ರಸಂಗದಲ್ಲಿ ಸಾಲ್ವನ ಪಾತ್ರವನ್ನು ವಿಭಿನ್ನವಾಗಿ ರಂಗದಲ್ಲಿ ಕಟ್ಟಿಕೊಟ್ಟವರು. ಎಳವೆಯಲ್ಲಿ ಕಲಿತ ಹೆಜ್ಜೆಯನ್ನು ನಲವತ್ತು ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಿ ರಂಗವೇರಿ ಸೈ ಎನಿಸಿಕೊಂಡವರು. ಅವರ ಕಲೋತ್ಸಾಹ ನಿಜಕ್ಕೂ ಕಲಾಪ್ರಪಂಚಕ್ಕೆ ಆಸ್ತಿ ಎಂಬುದು ಜನಜನಿತವಾಗಿದೆ.” ಎಂದರು.
    ಖ್ಯಾತ ರಂಗ ತಜ್ಞ ರಾಮಕೃಷ್ಣ ಹೇರ್ಳೆ, ನಟನ ರಂಗಶಾಲೆಯ ಚೇತನ್, ಬಿ. ವಿ. ಕಾರಂತ್ ಕೋಣಿ, ಸತ್ಯನಾರಾಯಣ ಅರಸರು, ರಂಗ ನಿರ್ದೇಶಕ ವಾಸು ಗಂಗೇರ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ನಟನಾ ರಂಗ ಶಾಲೆ ಮೈಸೂರು ತಂಡದ ನಾಟಕ ‘ಕಣಿವೆಯ ಹಾಡು’ ಪ್ರಸ್ತುತಿಗೊಂಡಿತು.

    Share. Facebook Twitter Pinterest LinkedIn Tumblr WhatsApp Email
    Previous Articleರಂಗಭೂಮಿಯ ಪ್ರಸಿದ್ಧ ಕಲಾವಿದ ನವೀನ್ ಡಿ. ಪಡೀಲ್ ಇವರಿಗೆ ‘ವಿಶ್ವಪ್ರಭಾ ಪುರಸ್ಕಾರ 2025’
    Next Article ಪರಿಚಯ ಲೇಖನ | ‘ಯಕ್ಷ ಕಲಾ ಕನ್ಯೆ’ ಶ್ರೀರಕ್ಷಾ ಬಿ.
    roovari

    Add Comment Cancel Reply


    Related Posts

    ಯಕ್ಷ ರಂಗಾಯಣದಲ್ಲಿ ‘ನಾಟಕದ ಮಾತು ಕತೆ’ ಕಥನ-6 | ಅಕ್ಟೋಬರ್ 25

    October 24, 2025

    ಉಡುಪಿಯಲ್ಲಿ ‘ಛತ್ರಪತಿ ಶಿವಾಜಿ’ | ಅಕ್ಟೋಬರ್ 25

    October 24, 2025

    ಉಡುಪಿಯ ಐ.ವೈ.ಸಿ. ಸಭಾಂಗಣದಲ್ಲಿ ‘ಛತ್ರಪತಿ ಶಿವಾಜಿ’ ಕನ್ನಡ ಐತಿಹಾಸಿಕ ನಾಟಕ | ಅಕ್ಟೋಬರ್ 25

    October 24, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಅಂಧಯುಗ’ ನಾಟಕ ಪ್ರದರ್ಶನ | ಅಕ್ಟೋಬರ್ 26

    October 24, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.