ಬೆಂಗಳೂರು : ಕರ್ಣಾಟಕ ಯಕ್ಷಧಾಮ ಮಂಗಳೂರು, ಸಾಲಿಗ್ರಾಮ ಮಕ್ಕಳ ಮೇಳ ಕೋಟ, ಪದ್ಮಕಮಲ ಟ್ರಸ್ಟ್ ಬೆಂಗಳೂರು ಮತ್ತು ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ವತಿಯಿಂದ ‘ಲಲಿತ ಕಲೋತ್ಸವ, ಸಮ್ಮಾನ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ದಿನಾಂಕ 08 ಜೂನ್ 2025ರಂದು ಮುಂಜಾನೆ 10-00 ಗಂಟೆಗೆ ಬೆಂಗಳೂರಿನ ಪರಂಪರಾ ಅಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ.
ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಸೋಮಯಾಜಿ ಇವರನ್ನು ಸನ್ಮಾನಿಸಲಾಗುವುದು ಹಾಗೂ ಮಿಜಾರು ಬಾಲಕೃಷ್ಣ ಗೌಡ ಇವರಿಗೆ ‘ಯಕ್ಷಕಲಾ ಗೌರವ’ ನೀಡಲಾಗುವುದು. ಲಲಿತ ಕಾಲೋತ್ಸವದಲ್ಲಿ ಕಲಾಕುಸುಮಗಳಾದ ಶ್ರೀಮತಿ ಅನಸೂಯ ಹೊಳ್ಳ, ಶ್ರೀಮತಿ ಜಯಶ್ರೀ ಅರವಿಂದ, ಕು. ನಿಧಿ ರವಿರಾಜ್ ಭಟ್, ಕು. ನಿಧಿ ಕೆದಿಲಾಯ, ಕು. ನಿಭ ಕೆದಿಲಾಯ, ಕು. ಈಶ್ವರಿ ಪ್ರವೀಣ, ಕು. ಪ್ರಣತಿ ಸಂತೋಷ್, ಕು. ಕಾವ್ಯ ಹಂದೆ, ಶ್ರೀಮತಿ ಪ್ರಣೀತ ಅನುಪ್, ಶ್ರೀ ಅಭಿಜಿತ್ ಮೈಸೂರು, ಶ್ರೀಮತಿ ಶಮ ಭಾಗವಹಿಸಲಿದ್ದು, ಬೆಂಗಳೂರಿನ ಶಂಕರ ಫೌಂಡೇಶನ್ ಇದರ ವಿದುಷಿ ಸುಪ್ರಿಯ ಶಿವರುದ್ರಪ್ಪ ಇವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಬೆಂಗಳೂರಿನ ‘ಯಕ್ಷ ದೇಗುಲ’ ತಂಡ ದವರಿಂದ ಯಕ್ಷಗಾನ ಅಪೂರ್ವರಂಗ ಪ್ರಸ್ತುತಗೊಳ್ಳಲಿದೆ. ಕಾರ್ಕಳದ ಶ್ರೀ ದೇವಿ ಲಲಿತಕಲಾ ವೃಂದ ಇವರಿಂದ ‘ಶಾಂಭವಿ ವಿಜಯ – ಶ್ರೀದೇವಿ ಮಹಿಮೆ’ ಎಂಬ ಪ್ರಸಂಗದ ತೆಂಕುತಿಟ್ಟು ಯಕ್ಷಗಾನ ಬಯಲಾಟ ನಡೆಯಲಿದೆ.