Subscribe to Updates

    Get the latest creative news from FooBar about art, design and business.

    What's Hot

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ‘ದಾಸವಾಣಿ’ ಹವಲ್ದಾರ್ ತಂಡದವರಿಂದ ದಾಸರ ಕೃತಿಗಳ ಅಮೋಘ ಗಾಯನ ಕಾರ್ಯಕ್ರಮ | ಜೂನ್ 01

    May 31, 2025

    ನಟನ ರಂಗಶಾಲೆಯಲ್ಲಿ ಮಕ್ಕಳ ‘ಅಭಿನಯ ಮತ್ತು ರಂಗ ತರಬೇತಿ’ | ಜೂನ್ 08

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಇಂಟಾಕ್ ಮಂಗಳೂರು ‘ವಿಶ್ವ ಪರಂಪರೆಯ ಸಪ್ತಾಹ’ದಲ್ಲಿ ಕರಾವಳಿಯ ವಿಶಿಷ್ಟ ಕಲೆಯಾದ ‘ಕಾವಿ ಕಲೆ’ಯ ಕುರಿತು ಉಪನ್ಯಾಸ
    Drawing

    ಇಂಟಾಕ್ ಮಂಗಳೂರು ‘ವಿಶ್ವ ಪರಂಪರೆಯ ಸಪ್ತಾಹ’ದಲ್ಲಿ ಕರಾವಳಿಯ ವಿಶಿಷ್ಟ ಕಲೆಯಾದ ‘ಕಾವಿ ಕಲೆ’ಯ ಕುರಿತು ಉಪನ್ಯಾಸ

    November 27, 2024Updated:January 7, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ವಿಭಾಗವು ವಿಶ್ವ ಪರಂಪರೆಯ ಸಪ್ತಾಹದ ಆಚರಣೆಯ ಅಂಗವಾಗಿ ಸಪ್ತಾಹದ ಸರಣಿಯಲ್ಲಿ ನಾಲ್ಕನೇ ಕಾರ್ಯಕ್ರಮವಾಗಿ ಆಯೋಜಿಸಿದ ಕಾವಿ ಕಲಾ ಪರಂಪರೆ ಕುರಿತು ಉಪನ್ಯಾಸವು ದಿನಾಂಕ 22 ನವೆಂಬರ್ 2024ರಂದು ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.

    ಈ ಸ್ಥಳೀಯ ಮತ್ತು ಬಹುಮುಖ ಕಲಾ ಪ್ರಕಾರದ ಐತಿಹಾಸಿಕ ವಿಕಸನದ ಕುರಿತು ಖ್ಯಾತ ಕಲಾವಿದ ಮತ್ತು ಕಾವಿ ಕಲೆ ಕ್ಷೇತ್ರದ ಸಂಶೋಧಕ ಡಾ. ಜನಾರ್ದನ ರಾವ್ ಹಾವಂಜೆಯವರು ವಿವರವಾದ ಪ್ರಸ್ತುತಿಯನ್ನು ನೀಡಿದರು. ಸುಣ್ಣ, ಕೆಂಪು ಮಣ್ಣು ಮತ್ತು ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ, ವಿಭಿನ್ನ ಶೈಲಿಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಡಾ. ಹಾವಂಜೆಯವರ ಪ್ರಸ್ತುತಿಯು ಕೊಂಕಣ ಕರಾವಳಿಯಾದ್ಯಂತ ದೇವಾಲಯಗಳು, ಚರ್ಚ್ ಮತ್ತು ಖಾಸಗಿ ಮನೆಗಳಲ್ಲಿ ಕಾವಿ ಕಲೆಯನ್ನು ಪ್ರದರ್ಶಿಸುವ ಛಾಯಾಚಿತ್ರಗಳನ್ನು ಒಳಗೊಂಡಿತ್ತು. ಕಾವಿ ಕಲೆ ನಿಯಮಿತ ರೂಪರೇಷೆಗಳಿಲ್ಲದ ವಿಧಾನ ಆಧಾರಿತ ಕಲೆ, ಇದು ವಿಭಿನ್ನ ಕಲಾಶೈಲಿಗಳನ್ನು ಸೇರಿಸಲು ಅನುಕೂಲಕರವಾಗಿದೆ ಎಂದು ಅವರು ವಿವರಿಸಿದರು. ತಮ್ಮ ವ್ಯಾಪಕವಾದ ಪಿಎಚ್‌ಡಿ ಸಂಶೋಧನೆಯನ್ನು ಆಧರಿಸಿ ಮಾತನಾಡಿದ ಅವರು ಈ ಕಲೆಯನ್ನು ಉಳಿಸಿಕೊಳ್ಳುವ ಅಗತ್ಯವನ್ನು ವಿಶ್ಲೇಷಿಸಿದರು, ಆಧುನಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಅನೇಕ ಕಾವಿ ಕಲಾಕೃತಿಗಳು ಕಳೆದುಹೋಗಿವೆ ಎಂದು ವಿಷಾದಿಸಿದರು. ಇಂದು ಕಾವಿ ಕಲೆಗಾಗಿ ಭೌಗೋಳಿಕ ಸೂಚಕ ಟ್ಯಾಗ್‌ಗಾಗಿ ಹೋರಾಟ ನಡೆಯುತ್ತಿದೆ, ಆದರೆ ಕಾವಿ ಕಲೆ ಸಂಪೂರ್ಣ ಕರಾವಳಿಯ ಪರಂಪರೆಯಾಗಿದ್ದು, ಅದರ ಮಹತ್ವವನ್ನು ಸಂರಕ್ಷಿಸಲು ಮತ್ತು ಗುರುತಿಸಲು ಸಾಮೂಹಿಕ ಪ್ರಯತ್ನ ಅತ್ಯಗತ್ಯ ಎಂದು ಹೇಳಿದರು.

    ಇಂಟಾಕ್ ಮಂಗಳೂರು ವಿಭಾಗದ ಸಂಚಾಲಕ ಸುಭಾಸ್ ಚಂದ್ರ ಬಸು ಸ್ವಾಗತಿಸಿ, ಉಪನ್ಯಾಸಕರನ್ನು ಪರಿಚಯಿಸಿದರು. ಇಂಟಾಕ್ ಸದಸ್ಯೆ ಕ್ಯಾರೋಲಿನ್ ಡಿಸೋಜಾ ವಂದಿಸಿದರು. ಡಾ. ಹಾವಂಜೆಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮಂಡ್ಯದಲ್ಲಿ ಅಯೋಜಿತವಾಗಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಬರಹಗಾರ ಗೊ.ರು. ಚನ್ನಬಸಪ್ಪನವರ ಆಯ್ಕೆ
    Next Article ತೀರ್ಥಹಳ್ಳಿಯಲ್ಲಿ ‘ಶ್ರೀ ಹರಿ ಲೀಲಾಮೃತ’ ಯಕ್ಷಗಾನ ಪ್ರದರ್ಶನ | ನವೆಂಬರ್ 29
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.