Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕಿನ್ನಿಗೋಳಿಯಲ್ಲಿ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಮತ್ತು ಬಿ. ಜನಾರ್ದನ ಭಟ್ ಇವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ
    Book Release

    ಕಿನ್ನಿಗೋಳಿಯಲ್ಲಿ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಮತ್ತು ಬಿ. ಜನಾರ್ದನ ಭಟ್ ಇವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ

    October 22, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಿನ್ನಿಗೋಳಿ : ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕ ಇದರ ವತಿಯಿಂದ ಕಿನ್ನಿಗೋಳಿ ಮೇರಿವೆಲ್ ಶಾಲೆ ಬಳಿಯಿರುವ ಶ್ರೀಗಂಧ ನಿವಾಸದಲ್ಲಿ ಆಯೋಜಿಸಿದ ಸಾಹಿತಿ ಅ.ಗೌ. ಕಿನ್ನಿಗೋಳಿ ಇವರ ಶತಮಾನೋತ್ಸವ ಆಚರಣೆ ಹಾಗೂ ಖ್ಯಾತ ಸಾಹಿತಿ ಬಿ. ಜನಾರ್ದನ ಭಟ್ಟರ 99, 100, 101 ಕೃತಿಗಳ ಬಿಡುಗಡೆ ಸಮಾರಂಭವು ದಿನಾಂಕ 20 ಅಕ್ಟೋಬರ್ 2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೃತಿ ಬಿಡುಗಡೆ ಮಾಡಿದ ಕ.ಸಾ.ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇವರು ಮಾತನಾಡಿ “ಕನ್ನಡ ಸಾಹಿತ್ಯಕ್ಕೆ ಬಹು ದೊಡ್ಡ ಕೊಡುಗೆ ಕೊಟ್ಟ ಅ.ಗೌ. ಕಿನ್ನಿಗೋಳಿ ಇವರ ಸಾಹಿತ್ಯ ಹೆಚ್ಚು ಪ್ರಚಾರಕ್ಕೆ ಬಂದು ಎಲ್ಲರೂ ಓದುವಂತಾಗಬೇಕು. ನೂರು ಪುಸ್ತಕಗಳನ್ನು ಬರೆದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರುವ ಬಿ. ಜನಾರ್ದನ ಭಟ್ಟರಿಗೆ ಸರಕಾರ ಹಾಗೂ ಸಾರ್ವಜನಿಕ ವಲಯದಿಂದ ಹೆಚ್ಚಿನ ಗೌರವಗಳು ಸಿಗುವಂತಾಗಲಿ” ಎಂದು ಹೇಳಿದರು.

    ಈ ಸಂದರ್ಭದಲ್ಲಿ ಡಾ. ಬಿ. ಜನಾರ್ದನ ಭಟ್ ಇವರ 99ನೆಯ ಕೃತಿ ‘ಕಪ್ಪೆ ಹಿಡಿಯುವವನು’ ಕಥಾ ಸಂಕಲನವನ್ನು ಸಾಹಿತಿ ಮೂಡುಬಿದ್ರೆ ಬಿ. ರಾಮಚಂದ್ರ ಆಚಾರ್ಯ, 100ನೆಯ ಕೃತಿ ‘ಕನ್ನಡ ಕಾದಂಬರಿ ಮಾಲೆ’ಯನ್ನು ಡಾ. ಹರಿಕೃಷ್ಣ ಪುನರೂರು, 101ನೆಯ ಕೃತಿ ‘ಹೊಸನೋಟಗಳ ಸಮಾಜ ವಿಮರ್ಶಕ ಅ.ಗೌ. ಕಿನ್ನಿಗೋಳಿ’ ಕೃತಿಯನ್ನು ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಇವರುಗಳು ಬಿಡುಗಡೆಗೊಳಿಸಿದರು.

    ಅ.ಗೌ. ಕಿನ್ನಿಗೋಳಿ ಇವರ ಸಂಸ್ಮರಣೆ ಮಾತುಗಳನ್ನಾಡಿದ ಜನಾರ್ದನ ಭಟ್ “ತನ್ನ ಊರಿನ ಹೆಸರನ್ನು ಇಟ್ಟುಕೊಂಡು ಪ್ರಸಿದ್ಧರಾದ ಅಚ್ಯುತ ಗೌಡರ ಕಾವ್ಯಗಳು, ಕಾದಂಬರಿಗಳು ಸಾಹಿತ್ಯ ವಲಯದಲ್ಲಿ ದೊಡ್ಡ ಹೆಸರನ್ನು ತಂದುಕೊಟ್ಟಿವೆ. ತನ್ನ ಕಾದಂಬರಿ ಮಾಲೆ ಕೃತಿಯಲ್ಲಿ ಕನ್ನಡ ಸಾಹಿತ್ಯದ ನೂರು ಕಾದಂಬರಿಗಳ ಕುರಿತು ಬರೆಯಲಾಗಿದೆ” ಎಂದರು.

    ಡಾ. ಎಂ.ಪಿ. ಶ್ರೀನಾಥ್ ಮಾತನಾಡಿ “ಸಾಹಿತ್ಯ ಪರಿಷತ್ತು ಶಾಲೆಗಳಲ್ಲಿ, ಮನೆ ಮನೆಗೆಳಲ್ಲಿ ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆಯ ಜೊತೆಗೆ ಎಲೆಮರೆ ಕಾಯಿಗಳಂತೆ ಸಾಧನೆ ಮಾಡಿದರೂ ಗುರುತಿಸಲ್ಪಡದ ಸಾಹಿತಿಗಳ ಗುರುತಿಸುವ ಕಾರ್ಯ ಮಾಡಲಿದೆ” ಎಂದರು.

    ಅ.ಗೌ. ಕಿನ್ನಿಗೋಳಿ ಅವರ ಪುತ್ರಿ ಜಯಂತಿ, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ಸುಧಾಕರ ಶೆಟ್ಟಿ ಕ.ಸಾ.ಪ. ಮೂಲ್ಕಿ ತಾಲೂಕು ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ವೇದಿಕೆಯಲ್ಲಿದ್ದರು. ಅ.ಗೌ. ಕಿನ್ನಿಗೋಳಿಯವರನ್ನು ತಾವು ಕಂಡ ಬಗೆಯನ್ನು ಬಾಲಕೃಷ್ಣ ಉಡುಪ ಮತ್ತು ಪಾಂಡುರಂಗ ಭಟ್ ಕಟೀಲು ಹೇಳಿದರು. ಆಶ್ವೇಜಾ ಉಡುಪ ಇವರು ಅಚ್ಯುತ ಗೌಡರ ಕಾವ್ಯಗಾಯನ ಮಾಡಿದರು. ಜೊಸ್ಸಿ ಪಿಂಟೋ ಸ್ವಾಗತಿಸಿ, ಪ್ರಕಾಶ್ ಆಚಾರ್ ನಿರೂಪಿಸಿದರು.

    Share. Facebook Twitter Pinterest LinkedIn Tumblr WhatsApp Email
    Previous Articleಉದ್ಘಾಟನೆಗೊಂಡ ನೃತ್ಯಾಂಗನ್ ಸಂಸ್ಥೆಯ ‘ನೃತ್ಯಲಹರಿ’ ಸರಣಿ ಕಾರ್ಯಕ್ರಮ
    Next Article ಕಲಾಕುಂಚದಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.