Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನಲ್ಲಿ ಉದ್ಘಾಟನೆಗೊಂಡ ‘ನಿರಂತರ ಸಹಜ ರಂಗ – 2025’ ಶಿಬಿರ

    August 18, 2025

    ವಿವೇಕಾನಂದ ಕಾಲೇಜಿನಲ್ಲಿ ವಿವೇಕ ಸ್ಮೃತಿ 19ನೇ ಅವತರಣಿಕೆ

    August 18, 2025

    ಸಂಸ್ಕಾರ ಭಾರತೀ ವತಿಯಿಂದ ‘ನಟರಾಜ ಪೂಜನ್’ | ಆಗಸ್ಟ್ 19

    August 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಂದಾಪುರದಲ್ಲಿ ‘ಮಲ್ಯಾಡಿ ಯಕ್ಷೋತ್ಸವ’ | ಡಿಸೆಂಬರ್ 9
    Yakshagana

    ಕುಂದಾಪುರದಲ್ಲಿ ‘ಮಲ್ಯಾಡಿ ಯಕ್ಷೋತ್ಸವ’ | ಡಿಸೆಂಬರ್ 9

    December 8, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕುಂದಾಪುರ: “ಮಲ್ಯಾಡಿ ಯಕ್ಷೋತ್ಸವ” ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಹಲವು ಜನರ what’s up ಸ್ಟೇಟಸ್ ನಲ್ಲಿ ರಾರಾಜಿಸುತ್ತಿರುವ ಯಕ್ಷಗಾನದ ಪೋಸ್ಟರ್. ಪ್ರಶಾಂತ ಮಲ್ಯಾಡಿ – ಇಂದು ಯಕ್ಷವಲಯದಲ್ಲಿ ಚಿರಪರಿಚಿತ ಹೆಸರು. ಮಲ್ಯಾಡಿ ಅವರ ಕ್ಯಾಮರಾ ಕಣ್ಣುಗಳು ಅದೆಷ್ಟೊ ವೇಷಗಳನ್ನು ರಂಗಸ್ಥಳದ ಹೊರಗೆ ನಿಂತು ಸೆರೆಹಿಡಿದಿವೆ ಹಾಗೂ ೨ ವರ್ಷಗಳಿಂದ ಮಲ್ಯಾಡಿ ಲೈವ್ ಎಂಬ ವಾಹಿನಿಯಿಂದ ಅನೇಕ ಯಕ್ಷಗಾನವನ್ನು ಲೈವ್ ಮೂಲಕ ನೀಡಿ ಯಕ್ಷಗಾನದ ಕಂಪನ್ನು ಪ್ರೇಕ್ಷಕರಿಗೆ ಇನ್ನೂ ಹತ್ತಿರದಿಂದ ನೋಡುವ ಹಾಗೆ ಮಾಡಿದ ಕೀರ್ತಿ ಪ್ರಶಾಂತ ಮಲ್ಯಾಡಿ ಅವರಿಗೆ ಸಲ್ಲುತ್ತದೆ.

    2015ರಲ್ಲಿ ಪೆರ್ಡೂರು ಮೇಳದ ಯಕ್ಷಗಾನವನ್ನು ಪ್ರಥಮ ಬಾರಿಗೆ ಸಂಘಟನೆ ಮಾಡಿ, 2017ರಲ್ಲಿ ಸಾಲಿಗ್ರಾಮ ಮೇಳ ಹಾಗೂ ತೆಂಕು ಬಡಗಿನ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಸಂಘಟನೆ ಮಾಡಿ, ಇದೀಗ ತೃತೀಯ ಬಾರಿಗೆ ಸಾಲಿಗ್ರಾಮ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಪೌರಾಣಿಕ ಯಕ್ಷಗಾನವನ್ನು ಕಲಾರಸಿಕರಿಗೆ ಒಂದು ಸುಂದರ ಯಕ್ಷ ರಾತ್ರಿಯನ್ನು ಸವಿಯಲು ಮತ್ತೆ ನಿಮ್ಮ ಮುಂದೆ ಬಂದಿದ್ದಾರೆ.
    ♦ ತಾಮ್ರಧ್ವಜ ಕಾಳಗ
    ♦ ಶ್ರೀ ಕೃಷ್ಣ ತುಲಾಭಾರ
    ♦ ಮೀನಾಕ್ಷಿ ಕಲ್ಯಾಣ

    ತಾಮ್ರಧ್ವಜ ಕಾಳಗ :-
    ಈ ಪ್ರಸಂಗದಲ್ಲಿ ಯಾಜಿಯವರು ಮೊತ್ತಮೊದಲ ಬಾರಿಗೆ ತಾಮ್ರಧ್ವಜನಾಗುತ್ತಿದ್ದಾರೆ. ಅದೊಂದು ವಿಶೇಷ ಕುತೂಹಲ ಎಲ್ಲರಿಗೂ ಇದೆ. ತೀರ್ಥಹಳ್ಳಿ, ಕೋಟ, ಹಂದೆಯವರು… ಹೀಗೆ ಪ್ರಸಂಗ ನಿಷ್ಠ ತಾರಾಗಣವಿದೆ.
    ಶ್ರೀ ಕೃಷ್ಣ ತುಲಾಭಾರ:-
    ಈ ಪ್ರಸಂಗದಲ್ಲಿ ಕಾರ್ಕಳ ಅವರ ಸತ್ಯಭಾಮೆ, ಪ್ರಸನ್ನ ಅವರ ಕೃಷ್ಣ, ಪ್ರದೀಪ್ ಸಾಮಗ ಅವರ ನಾರದ, ಪ್ರವೀಣ್ ಗಾಣಿಗ ಕೆಮ್ಮಣ್ಣು ಅವರ ಬಲರಾಮ, ಕುಂಕಿಪಾಲ್ ಅವರ ರುಕ್ಮಿಣಿ.
    ಇನ್ನೂ ಕೊನೆಯ ಪ್ರಸಂಗದಲ್ಲಿ ಮೀನಾಕ್ಷಿ ಕಲ್ಯಾಣವೂ ಯುವ ಪಡೆಯ ಮಿಂಚುಗೊಂಚಲಾಗಿದೆ.

    ಪೌರಾಣಿಕ ಪ್ರಸಂಗಗಳನ್ನು ರಸಾತ್ಮಕವಾಗಿ ಪ್ರದರ್ಶಿಸುವ ಸಂಘಟಕ ಪ್ರಶಾಂತ ಮಲ್ಯಾಡಿಯವರ ಸಂಘಟನೆಗೆ ಅವರ ಯಕ್ಷಗಾನ ಸಂಘಟನೆ ಗೆಲ್ಲಬೇಕು. ಇವರಿಗೆ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ ಹಾಗೂ ಇನ್ನೂ ಅನೇಕ ಯಕ್ಷಗಾನ ಸಂಘಟನೆ ಮಾಡುವ ಶಕ್ತಿ ನೀಡಿ ಸಕಲ ಭಾಗ್ಯಗಳನ್ನೂ ನೀಡಿ ಅನುಗ್ರಹಿಸಲಿ.

    ದಿನಾಂಕ:- 09.12.2023
    ಸ್ಥಳ:- ಯಕ್ಷ ಕಾಶಿ ಕುಂದಾಪುರ ನೆಹರು ಮೈದಾನದಲ್ಲಿ, ಶನಿವಾರ ರಾತ್ರಿ 9:30ರಿಂದ.
    ಪ್ರಶಾಂತ ಮಲ್ಯಾಡಿಯವರ ಪೌರಾಣಿಕ ಯಕ್ಷ ರಾತ್ರಿ ಹೌಸ್ ಫುಲ್ ಪ್ರದರ್ಶನ ಕಾಣಲಿ ಹಾಗೂ ಮಲ್ಯಾಡಿ ಯಕ್ಷೋತ್ಸವದ ಗಲ್ಲಾಪೆಟ್ಟಿಗೆ ತುಂಬಿ ತುಳುಕಲಿ.
    ಯಕ್ಷಗಾನ ವಿಶ್ವಗಾನ.

    • ಶ್ರವಣ್ ಕಾರಂತ್ ಕೆ., ಶಕ್ತಿನಗರ, ಮಂಗಳೂರು

    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಪಾಂಡಿಚೇರಿಯ ಜಗತ್ಪ್ರಸಿದ್ಧ ಆದಿಶಕ್ತಿ ರಂಗತಂಡದ ಭೂಮಿ ನಾಟಕ ಪ್ರದರ್ಶನ
    Next Article ಉದಯೋನ್ಮುಖ ನೃತ್ಯ ಕಲಾವಿದ ಜಷ್ವಂತ್ ರಂಗಪ್ರವೇಶ
    roovari

    Add Comment Cancel Reply


    Related Posts

    ಮುಂಬೈಯಲ್ಲಿ ಯಕ್ಷಗಾನ ಪ್ರದರ್ಶನ ಮತ್ತು ಕಲಾವಿದರ ಸನ್ಮಾನ ಕಾರ್ಯಕ್ರಮ

    August 18, 2025

    ಯುಎಇ ಯಕ್ಷಗಾನ ಕೇಂದ್ರದಿಂದ ಯಕ್ಷಗಾನಾರ್ಚಣೆ, ಯಕ್ಷದರ್ಪಣ ಬಿಡುಗಡೆ ಮತ್ತು ಸಾಧಕರಿಗೆ ಗೌರವಾರ್ಪಣೆ

    August 18, 2025

    ಪಾವಂಜೆಯಲ್ಲಿ ‘ಯಕ್ಷಾಂತರಂಗ’ ಯಕ್ಷಗಾನ ಪ್ರಸಂಗ ಸಾಹಿತ್ಯ ಮತ್ತು ರಂಗ ನಡೆಗಳ ಮಾಹಿತಿ ಕಾರ್ಯಾಗಾರ | ಆಗಸ್ಟ್ 20ರಿಂದ 24

    August 16, 2025

    ಅರ್ಥಪೂರ್ಣವಾಗಿ ಜರಗಿದ ಹಂದಾಡಿ ಬಾಲಕೃಷ್ಣ ನಾಯಕ್ ಇವರ ಪ್ರಥಮ ಪುಣ್ಯತಿಥಿ

    August 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.