Subscribe to Updates

    Get the latest creative news from FooBar about art, design and business.

    What's Hot

    ಸಾಗರ ತಾಲೂಕಿನಲ್ಲಿ ಯಕ್ಷಗಾನ ತರಬೇತಿ ಉದ್ಘಾಟನೆ | ಜೂನ್ 09

    June 3, 2025

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ಸಮಾರೋಪಗೊಂಡ ಯಕ್ಷಪಕ್ಷ – ರಜತ ಸರಯೂ ಕಾರ್ಯಕ್ರಮ

    June 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ಗೋವಿಂದದಾಸ್ ಕಾಲೇಜಿನಲ್ಲಿ ಶಿವರಾಜ್ ರಿಂದ 55 ನಿಮಿಷದ ಒಂದು ಪ್ರೇಮಕಥೆ
    Drama

    ಮಂಗಳೂರು ಗೋವಿಂದದಾಸ್ ಕಾಲೇಜಿನಲ್ಲಿ ಶಿವರಾಜ್ ರಿಂದ 55 ನಿಮಿಷದ ಒಂದು ಪ್ರೇಮಕಥೆ

    August 3, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಬೆಂಗಳೂರಿನ ರಂಗಪಯಣ ತಂಡ ತನ್ನ ನಿರಂತರ ರಂಗ ಚಟುವಟಿಕೆಗಳ ನಡುವೆ ಈ ಬಾರಿ 31-07-2023 ರಂದು ರಾಜ್ಯದ 31 ಜಿಲ್ಲೆಗಳಲ್ಲಿ ಏಕಕಾಲಕ್ಕೆ 55 ನಿಮಿಷಗಳ ಪ್ರೇಮಕಥೆ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಅದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ್ ಕಾಲೇಜಿನ ರಂಗಮಂದಿರದಲ್ಲಿ ಶಿವರಾಜ್.ಎನ್ ಅಭಿನಯಿಸಿದ ನಾಟಕ ಪ್ರದರ್ಶನಗೊಂಡಿತು. ಉಸ್ತಾದ್ ಬಿಸ್ಮಿಲ್ಲಾಖಾನ್ ಪ್ರಶಸ್ತಿ ಪುರಸ್ಕೃತ ಕಲಾವಿದ ದಂಪತಿಗಳಾದ ಶ್ರೀ ರಾಜಗುರು ಹೊಸಕೋಟೆ ಹಾಗೂ ಶ್ರೀಮತಿ ನಯನ ಸೂಡ ಇವರ ನೇತೃತ್ವದಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರಂಗಪಯಣದ ವಿಶಿಷ್ಟ ದಾಖಲೆಯ ಕಾರ್ಯಕ್ರಮ ಇದಾಗಿತ್ತು. ಕಳೆದ ಹಲವು ವರ್ಷಗಳಿಂದ ತಮ್ಮ ಹೊಸ ನಾಟಕಗಳೊಂದಿಗೆ ಕರಾವಳಿಗೆ ಭೇಟಿ ನೀಡುತ್ತಿರುವ ರಂಗಪಯಣ ಅರೆಹೊಳೆ ಪ್ರತಿಷ್ಠಾನ ಹಾಗೂ ಗೋವಿಂದದಾಸ್ ಕಾಲೇಜುಗಳ ಸಹಯೋಗದೊಂದಿಗೆ ಈ ನಾಟಕವನ್ನು ಆಯೋಜಿಸಿತ್ತು. ಸಂಜು ಎಂಬ ಯುವಕ ಶಾಂತಿ ಎಂಬ ತರುಣಿಯನ್ನು ಮೋಹಿಸಿ ಅವಳನ್ನು ಪಡೆಯಲು ಪ್ರಯತ್ನ ಪಡುವ ಒಂದು ಪ್ರೇಮ ಕಥೆಯೇ ಇದು. ಶಿವರಾಜ್ ನಾಟಕದ ಆರಂಭದಿಂದ ಕಡೆಯವರೆಗೂ ಅತ್ಯಂತ ಪರಿಣಾಮಕಾರಿಯಾಗಿ ವಿವಿಧ ಭಾವಗಳನ್ನ ಸಂದರ್ಭೋಚಿತವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. ಸರಳ ರಂಗಸಜ್ಜಿಕೆ ಸಾಮಾನ್ಯ ಬೆಳಕಿನ ವ್ಯವಸ್ಥೆಯೊಂದಿಗೆ ಅರ್ಥಪೂರ್ಣ ರಂಗಸಂಗೀತ ಈ ಯಶಸ್ಸಿಗೆ ಕಾರಣವಾಯಿತು. ನಯನ ಸೂಡ ಅವರ ನಿರ್ವಹಣೆಯ ಈ ನಾಟಕದ ರಚನೆ, ಸಂಗೀತ ಮತ್ತು ನಿರ್ದೇಶನ ರಾಜಗುರು ಅವರದ್ದು. ಸುಮಾರು ಒಂದೂವರೆ ದಶಕದಿಂದ ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಈ ತಂಡ ಗುಲಾಬಿ ಗ್ಯಾಂಗ್, ಚಂದ್ರಗಿರಿ ತೀರದಲ್ಲಿ, ಹೇ ರಾಮ್, ಭೂಮಿ ಮುಂತಾದ ಸ್ತ್ರೀಪರ ವಿಷಯಗಳ ವಿಶಿಷ್ಟ ನಾಟಕಗಳನ್ನ ದೇಶಾದ್ಯಂತ ಹಲವಾರು ಬಾರಿ ಪ್ರದರ್ಶಿಸಿದೆ. ಈ ಹಿಂದೆ ರಾಜಗುರು ಅವರ ಅಭಿನಯದಲ್ಲಿ ಬೆಂಗಳೂರಿನ ಪ್ರದರ್ಶನವಾಗಿ ಲಿಮ್ಕಾ ದಾಖಲೆ ಮಾಡಿದ್ದ ಈ 55 ನಿಮಿಷಗಳ ಪ್ರೇಮಕಥೆ ಇಂದು 31 ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಪ್ರೇಕ್ಷಕರ ಜೊತೆ ಗೆಜಿಟೆಡ್ ಅಧಿಕಾರಿಗಳ ಸಮಕ್ಷಮದಲ್ಲಿ ಪ್ರದರ್ಶನಗೊಂಡು ಇನ್ನೊಂದು ದಾಖಲೆ ನಿರ್ಮಿಸಿತು. ವಿಶೇಷವೆಂದರೆ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರು ನಾಟಕವನ್ನು ವೀಕ್ಷಿಸಿದ್ದು, ಇದಕ್ಕೆ ಕಾರಣವಾದ ಅರೆಹೊಳೆ ಪ್ರತಿಷ್ಠಾನ ಹಾಗೂ ಗೋವಿಂದದಾಸ್ ಕಾಲೇಜು ಸಹಜವಾಗಿ ಅಭಿನಂದನೀಯವಾಗಿದೆ.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಪ್ರಸ್ತುತಿ – ನೃತ್ಯಾಂತರಂಗ 102 
    Next Article ಸಂಗೀತದಲ್ಲಿ ಅರಳುತ್ತಿರುವ ಪ್ರತಿಭೆಗಳಿಗೆ ಅಪರೂಪದ ರಸಪ್ರಶ್ನೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಬೆಂಗಳೂರಿನ ಶ್ರೀ ಸಿ. ಅಶ್ವಥ್ ಕಲಾ ಭವನದಲ್ಲಿ ‘ಕಾವ್ಯ ಕಾಮಧೇನು ಎಚ್.ಎಸ್.ವಿ.’ | ಜೂನ್ 08

    June 3, 2025

    ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 25

    June 3, 2025

    ಮಂಗಳೂರು ರೋಟರಿಯಲ್ಲಿ ಕಾಸರಗೋಡು ಚಿನ್ನಾರ ನಗೆಯ ಸಂಜೆ

    June 3, 2025

    “ಪ್ರತಿಯೊಬ್ಬ ವ್ಯಕ್ತಿಯ ಒಳಗೊಬ್ಬ ಕಲಾವಿದನಿರ್ತಾನೆ” – ಕಾಸರಗೋಡು ಚಿನ್ನಾ

    June 2, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.