Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುಸ್ತಕ ವಿಮರ್ಶೆ | ‘ಡಾ. ಜಿ.ಎಸ್. ಆಮೂರ ಅವರ ಸಮಗ್ರ ಬೇಂದ್ರೆ ವಿಮರ್ಶೆ’

    June 5, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಗೀತ ಪರಿಷತ್ತಿನಿಂದ ‘ಮಂಗಳೂರು ಸಂಗೀತೋತ್ಸವ 2024’ | ನವೆಂಬರ್ 29ರಿಂದ ಡಿಸೆಂಬರ್ 01
    Awards

    ಸಂಗೀತ ಪರಿಷತ್ತಿನಿಂದ ‘ಮಂಗಳೂರು ಸಂಗೀತೋತ್ಸವ 2024’ | ನವೆಂಬರ್ 29ರಿಂದ ಡಿಸೆಂಬರ್ 01

    November 28, 2024Updated:January 7, 2025No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸಂಗೀತ ಪರಿಷತ್ ಮಂಗಳೂರು ಇದರ ವತಿಯಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಇವುಗಳ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಮಂಗಳೂರು ಸಂಗೀತೋತ್ಸವ 2024’ವನ್ನು ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ದಿನಾಂಕ 29 ನವೆಂಬರ್ 2024ರಿಂದ 1 ಡಿಸೆಂಬರ್ 2024ರವರೆಗೆ ಆಯೋಜಿಸಲಾಗಿದೆ.

    ದಿನಾಂಕ 29 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶರವು ಮಹಾ ಗಣಪತಿ ದೇವಸ್ಥಾನದ ಟ್ರಸ್ಟಿ ಶ್ರೀ ರಾಘವೇಂದ್ರ ಶಾಸ್ತ್ರಿ ಇವರು ದೀಪ ಪ್ರಜ್ವಲನೆ ಮಾಡಲಿರುವರು. ಶ್ರೀ ಚೇರ್ತಲ ಕೆ.ಎನ್. ರಂಗನಾಥ ಶರ್ಮ ಇವರಿಂದ ಹಾಡುಗಾರಿಕೆಗೆ ಅವನೇಶ್ವರಂ ಎಸ್.ಆರ್. ವಿನು ಇವರು ವಯೋಲಿನ್, ಶ್ರೀ ಮನ್ನಾರಗುಡಿ ಎ. ಈಶ್ವರನ್ ಮೃದಂಗ ಮತ್ತು ಶ್ರೀ ವೆಲ್ಲನ್ ತ್ತಂಜೂರ್ ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ. ದಿನಾಂಕ 30 ನವೆಂಬರ್ 2024ರಂದು ಸಂಜೆ 5-00 ಗಂಟೆಗೆ ಶ್ರೀಮತಿ ಎನ್.ಜೆ. ನಂದಿನಿ ಇವರಿಂದ ಹಾಡುಗಾರಿಕೆಗೆ ಶ್ರೀ ವೈಭವ್ ರಮಣಿ ವಯೋಲಿನ್, ಶ್ರೀ ಬಾಲಕೃಷ್ಣ ಕಾಮತ್ ಮೃದಂಗ ಮತ್ತು ಶ್ರೀ ವಿಷ್ಣು ಕಾಮತ್ ಖಂಜೀರದಲ್ಲಿ ಸಹಕರಿಸಲಿದ್ದಾರೆ.

    ದಿನಾಂಕ 01 ಡಿಸೆಂಬರ್ 2024ರಂದು ಬೆಳಿಗ್ಗೆ 10-00 ಗಂಟೆಗೆ ಶ್ರೀ ಕುನ್ನಕ್ಕುಡಿ ಯಂ. ಬಾಲ ಮುರಳೀಕೃಷ್ಣ ಇವರಿಂದ ಹಾಡುಗಾರಿಕೆಗೆ ಶ್ರೀ ಟ್ರಿವೆಂಡ್ರಮ್ ಸಂಪತ್ ವಯೋಲಿನ್, ಶ್ರೀ ತುಮಕೂರು ಬಿ. ರವಿಶಂಕರ್ ಮೃದಂಗ ಮತ್ತು ಶ್ರೀ ಶರತ್ ಕೌಶಿಕ್ ಘಟಂನಲ್ಲಿ ಸಹಕರಿಸಲಿದ್ದಾರೆ. ಮಧ್ಯಾಹ್ನ 2-00 ಗಂಟೆಗೆ ಕುಮಾರಿ ಪ್ರಾರ್ಥನಾ ಬಂಗಾರಡ್ಕ ಇವರಿಂದ ಹಾಡುಗಾರಿಕೆಗೆ ಕುಮಾರಿ ತನ್ಮಯೀ ಉಪ್ಪಂಗಳ ವಯೋಲಿನ್ ಹಾಗೂ ಶ್ರೀ ಅವಿನಾಶ್ ಬೆಳ್ಳಾರೆ ಇವರು ಮೃದಂಗದಲ್ಲಿ ಸಹಕರಿಸಲಿದ್ದಾರೆ. ಸಂಜೆ 4-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಗೀತ ಪರಿಷತ್ ಮಂಗಳೂರು ಇದರ ಅಧ್ಯಕ್ಷರಾದ ಎಂ.ವಿ. ಪ್ರದೀಪ್ ಇವರು ಅಧ್ಯಕ್ಷತೆ ವಹಿಸಲಿರುವರು. ಇದೇ ಸಂದರ್ಭದಲ್ಲಿ ಹರಿಹರಪುರದ ಮೃದಂಗ ವಿದ್ವಾಂಸರಾದ ಕರ್ನಾಟಕ ಕಲಾಶ್ರೀ ಶ್ರೀ ಸೂರಳಿ ಆರ್. ಗಣೇಶ್ ಮೂರ್ತಿ ಇವರಿಗೆ ‘ಸಂಗೀತೋತ್ಸವ 2024’ ಪ್ರಶಸ್ತಿ ಹಾಗೂ ಮಂಗಳೂರಿನ ಚಿ. ಸುಮುಖ ಕಾರಂತ ಮತ್ತು ಚಿ. ಗೌತಮ್ ಭಟ್ ಪಿ.ಜಿ. ಇವರುಗಳಿಗೆ ಯುವ ಪ್ರತಿಭಾ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಶ್ರೀ ಜೆ.ಎ. ಜಯಂತ್ ಇವರಿಂದ ನಡೆಯಲಿರುವ ಕೊಳಲು ವಾದನಕ್ಕೆ ಟ್ರಿವೆಂಡ್ರಮ್ ಸಂಪತ್ ವಯೋಲಿನ್, ಶ್ರೀ ಎನ್.ಸಿ. ಭಾರದ್ವಾಜ್ ಮೃದಂಗ ಮತ್ತು ಶ್ರೀ ಶರತ್ ಕೌಶಿಕ್ ಘಟಂನಲ್ಲಿ ಸಹಕರಿಸಲಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಗೆ ಆಗಮಿಸಿದ ಕನ್ನಡ ರಥ
    Next Article ‘ಗಣಕ ರಂಗ’ದ ನಮ್ಮ ಸಂವಿಧಾನ ಕಥಾ ಸ್ಪರ್ಧೆಯಲ್ಲಿ ಡಾ. ಸುರೇಶ ನೆಗಳಗುಳಿಗೆ ಪ್ರಥಮ ಸ್ಥಾನ
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನ ಮಂದಿರದಲ್ಲಿ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಜಯಂತ್ಯುತ್ಸವ

    June 5, 2025

    ಶ್ರೀ ಮಹಾಂತೇಶ ಎಂ. ಗಜೇಂದ್ರಗಡ ಇವರಿಗೆ “ಮೇಘರತ್ನ ಪ್ರಶಸ್ತಿ”

    June 5, 2025

    ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ‘ಹಲಸಿನ ಅರಿವಿನ ಹರಿವು’ ತಾಳಮದ್ದಲೆ | ಜೂನ್ 07

    June 5, 2025

    ಇಪ್ಪತ್ತನಾಲ್ಕು ಗಂಟೆಗಳ ಕಾಲ ನಿರಂತರ ಹಾಡಿ ವಿಶ್ವದಾಖಲೆ ನಿರ್ಮಿಸಿದ ಯಶವಂತ್ ಎಂ.ಜಿ.

    June 5, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.