Subscribe to Updates

    Get the latest creative news from FooBar about art, design and business.

    What's Hot

    ದೇಲಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ‘ಕನ್ನಡದ ನಡಿಗೆ ಶಾಲೆಯ ಕಡೆಗೆ’ ಕನ್ನಡ ಸಾಹಿತ್ಯ ಅಭಿಯಾನ

    June 23, 2025

    ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ‘ಸ್ಮರಣೆ ಸ್ವರಾಂಜಲಿ’ | ಜೂನ್ 28

    June 23, 2025

    ಬೆಂಗಳೂರಿನಲ್ಲಿ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರ | ಜುಲೈ 1ರಿಂದ 17

    June 23, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮೈಸೂರಿನ ಕಿರು ರಂಗಮಂದಿರ ದಲ್ಲಿ ‘ಮಥನ’ | ಜೂನ್ 29ರಂದು
    Drama

    ಮೈಸೂರಿನ ಕಿರು ರಂಗಮಂದಿರ ದಲ್ಲಿ ‘ಮಥನ’ | ಜೂನ್ 29ರಂದು

    June 26, 2023Updated:August 19, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ಶ್ರೀ ಗುರು ಕಲಾ ಶಾಲೆ ಅರ್ಪಿಸುವ ಎಚ್. ಎಸ್.ಕವಿತಾ ಧನಂಜಯ ಸಂಗೀತ ಮತ್ತು ನಿರ್ದೇಶನದ ‘ಮಥನ’ ನಾಟಕವು ದಿನಾಂಕ 29-06-2023 ರಂದು ಮೈಸೂರಿನ ಕಲಾಮಂದಿರ ಆವರಣದ ಕಿರು ರಂಗಮಂದಿರ ದಲ್ಲಿ ಪ್ರದರ್ಶನಗೊಳ್ಳಲಿದೆ.
    ನಾಟಕದ ಬಗ್ಗೆ:
    ಪ್ರಸ್ತುತ ನಾಟಕವು ಎರಡು ಪ್ರಮುಖ ಪಾತ್ರಗಳಾದ ಕುಂತಿ ಮತ್ತು ದ್ರೌಪದಿಯನ್ನು ಕೇಂದ್ರೀಕರಿಸಿ ರಚಿತವಾದ ನಾಟಕವಾಗಿದೆ. ಇಬ್ಬರ ಸಂಭಾಷಣೆಯಲ್ಲಿ ಮಹಾಭಾರತದ ಅನೇಕ ಸಂಗತಿಗಳು ಪ್ರಸ್ತಾಪವಾಗುತ್ತವೆ. ಇಬ್ಬರ ನಡುವಿನ ಮಾನಸಿಕ ಸಂಘರ್ಷವನ್ನು ನಾಟಕ ಸಶಕ್ತವಾಗಿ ತೆರೆದಿಡುತ್ತದೆ. ಕುಂತಿಗೆ ದ್ರೌಪದಿಯ ಮೇಲೆ ಬಹಳ ಪ್ರೀತಿ ಮತ್ತು ವಿಶ್ವಾಸ. ಐವರು ಪಾಂಡವರನ್ನು ಒಂದೇ ಸಮನಾಗಿ ಹಿಡಿದಿಟ್ಟಿದ್ದಾಳೆ ಪಾಂಚಾಲಿ ಎಂಬ ಹೆಮ್ಮೆ ಕುಂತಿಗೆ. ಕುರುಕ್ಷೇತ್ರ ಯುದ್ಧ ಆಗದಂತೆ ತಡೆಯುವ ದೊಡ್ಡ ಜವಾಬ್ದಾರಿ ದ್ರೌಪದಿಯ ಮೇಲಿದೆ. ಅವಳಿಂದ ಆರಂಭವಾದ ಯುದ್ಧದ ಕಾರ್ಮೋಡ ಅವಳಿಂದಲೇ ತಿಳಿಯಾಗಬೇಕು. ಅದಕ್ಕಾಗಿ ಅವಳು ಪಂಚ ಪಾಂಡವರ ಜೊತೆ ಆರನೆಯವನಾದ ಕರ್ಣನನ್ನೂ ಪತಿಯನ್ನಾಗಿ ಸ್ವೀಕರಿಸಬೇಕು ಎಂಬುದು ಕುಂತಿಯ ವಾದ. ಕೃಷ್ಣನಿಗೆ ಅಸಾಧ್ಯವಾದದ್ದು ಕೃಷ್ನೆಗೆ ಸಾಧ್ಯವಾಗುತ್ತದೆ ಎಂಬ ನಂಬಿಕೆ ಕುಂತಿಯದು. ಹೆಣ್ಣು ಎಲ್ಲರನ್ನೂ ಪೊರೆಯುವವಳು, ಕೊಲ್ಲುವ ಮನಸ್ಥಿತಿ ಅವಳದ್ದಲ್ಲ. ಭರತವರ್ಷದ ಭವಿಷ್ಯ ಪಾಂಚಾಲಿಯ ಕೈಯಲ್ಲಿದೆ ಎಂಬ ಕುಂತಿಯ ಮಾತು ಪರಿಣಾಮಕಾರಿ ಎನಿಸುತ್ತದೆ. ಹೀಗೆ ಯುದ್ಧವನ್ನು ನಿಲ್ಲಿಸುವ ಯೋಚನೆಯ ಹಿನ್ನೆಲೆಯಲ್ಲಿ ಅವರಿಬ್ಬರ ಬದುಕಿನ ಅನೇಕ ವಿಚಾರಗಳು ಇಬ್ಬರ ಮಧ್ಯೆ ಬಂದು ಹೋಗುತ್ತವೆ. ಇಬ್ಬರ ಸಮರ್ಥನೆಗಳು, ನಿರ್ಧಾರಗಳು ಮತ್ತು ಯೋಚನೆಗಳು ನಾಟಕದಲ್ಲಿ ಅತ್ಯಂತ ಸಮರ್ಥವಾಗಿ ಬಿಂಬಿತವಾಗಿವೆ.

    Share. Facebook Twitter Pinterest LinkedIn Tumblr WhatsApp Email
    Previous Articleಪ್ರಸಾರಾಂಗದಿಂದ ಏಳು ಕನ್ನಡ ಭಾಷಾ ಪಠ್ಯಪುಸ್ತಕ ಬಿಡುಗಡೆ
    Next Article ದುಬಾಯಿಯಲ್ಲಿ ಯಕ್ಷಗಾನ ಸಾಧಕರಿಗೆ ಸನ್ಮಾನ, ವಿಂಶತಿ ಉತ್ಸವ ಕಾರ್ಯಕ್ರಮ “ಯಕ್ಷ ಮದ್ದಳೆ”
    roovari

    Add Comment Cancel Reply


    Related Posts

    ಬೆಂಗಳೂರಿನಲ್ಲಿ ರಂಗ ನಟನಾ ಶಿಬಿರ ಮತ್ತು ಸಂಸ್ಕೃತಿ ನೆಲೆಯ ಕಾರ್ಯಾಗಾರ | ಜುಲೈ 1ರಿಂದ 17

    June 23, 2025

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಮಾಸದ ನೆನೆಪು’ ಸರಣಿ ಕಾರ್ಯಕ್ರಮದ ಉದ್ಘಾಟನೆ | ಜೂನ್ 27

    June 20, 2025

    ಮೈಸೂರಿನ ನಟನ ರಂಗಶಾಲೆಯಲ್ಲಿ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ | ಜೂನ್ 22

    June 20, 2025

    ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ | ಜೂನ್ 21

    June 19, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.