ಇಳಕಲ್ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಇದರ ವತಿಯಿಂದ 2025ನೇ ಸಾಲಿನ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ದಿನಾಂಕ 21 ಜೂನ್ 2025ರಂದು ಸಂಜೆ 5-00 ಗಂಟೆಗೆ ಇಳಕಲ್ ಸ್ನೇಹರಂಗ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಲಾಗಿದೆ.
ರಂಗ ಸಂಘಟಕರಾದ ಡಾ. ವಿಶ್ವನಾಥ ಕೆ. ವಂಶಾಕೃತಮಠ ಇವರ ಅಧ್ಯಕ್ಷತೆಯಲ್ಲಿ ವಿಶ್ರಾಂತ ನಿರ್ದೇಶಕರಾದ ಎಸ್.ಆರ್. ಮನಹಳ್ಳಿ ಇವರು ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಮಾಡಲಿರುವರು. ಹಿರಿಯ ರಂಗಕರ್ಮಿ ಹಾಗೂ ಕಲಾವಿದರಾದ ಮಹಾಂತೇಶ ಮಹಾಂತಪ್ಪ ಗಜೇಂದ್ರಗಡ ಇವರಿಗೆ ‘ಮೇಘರತ್ನ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಮಹಾಂತಪ್ಪ ವೀರಪ್ಪ ಅದ್ರಸನ್ನವರ್, ಮಹಾಂತೇಶ ಹಳ್ಳೂರ, ಶ್ರೀಮತಿ ರೇಣವ್ವ ನಾಗಪ್ಪ, ಶ್ರೀಮತಿ ನೀಲಮ್ಮ ಬಸನಗೌಡ ಹಿರೇಗೌಡರ, ಕು. ಮಲಿಕ್ ಶಬೀಲ್ ನಾಗನೂರ ಇವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಚಾಮರಾಜ ನೃತ್ಯ ಕಲೆ ಮತ್ತು ಸಾಂಸ್ಕೃತಿಕ ಸಂಘ (ರಿ.) ಇವರಿಂದ ವಚನ ನೃತ್ಯ ಮತ್ತು ಕುಮಾರಿ ಸನ್ನಿಧಿ ಚಂದ್ರ ಶೇಖರ ಕಲ್ಮನಿ ಇವರಿಂದ ಏಕಾ ಪಾತ್ರ ಭಿನಯ ಪ್ರಸ್ತುತಗೊಳ್ಳಲಿದೆ.