Subscribe to Updates

    Get the latest creative news from FooBar about art, design and business.

    What's Hot

    ಶಾರದಾ ವಿದ್ಯಾಲಯದಲ್ಲಿ 111ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ.

    July 31, 2025

    ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಹರಿ ಹರ ಸುತ’ ಮತ್ತು ‘ನಾಟ್ಯ ದಾಸೋಹಂ’ | ಆಗಸ್ಟ್ 02

    July 31, 2025

    ಕಿಶೋರ ಕನಕ ಕಾವ್ಯ ಸ್ಪರ್ಧೆ | 16 ಸೆಪ್ಟೆಂಬರ್

    July 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮೋಹನಪ್ಪ ತಿಂಗಳಾಯರ ಸಂಸ್ಮರಣೆ
    Commemoration

    ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮೋಹನಪ್ಪ ತಿಂಗಳಾಯರ ಸಂಸ್ಮರಣೆ

    July 31, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ತುಳುನಾಡಿನ ನಾಡಗೀತೆ ಪ್ರಕಟಣೆಗೊಂಡ ಆಟಿಯ 12ನೇ ದಿನದಂದು ದಿನಾಂಕ 28 ಜುಲೈ 2025ರಂದು ನಾಡ ಗೀತೆಯನ್ನು ಹಾಡುವ ಜೊತೆಗೆ ಮೋಹನಪ್ಪ ತಿಂಗಳಾಯರನ್ನು ಸ್ಮರಣೆ ಮಾಡುವ ಕಾರ್ಯವನ್ನು ಐತಿಹಾಸಿಕ ಶ್ರೀ ಜ್ಞಾನೋದಯ ಸಮಾಜ ಮಂದಿರದಲ್ಲಿ ಮಂಗಳೂರು ವಿ.ವಿ. ಕಾಲೇಜಿನ ತುಳು ಎಂ.ಎ. ವಿದ್ಯಾರ್ಥಿಗಳು ಮಾಡಿದರು.

    ಶ್ರೀ ಜ್ಞಾನೋದಯ ಸಮಾಜದ ಅಧ್ಯಕ್ಷ ಪ್ರೇಮ ಚಂದ್ರ ತಿಂಗಳಾಯ ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸುಧಾರಣೆಯ ಕಾರ್ಯಗಳನ್ನು ವಿವರಿಸಿದರು. ಪ್ರಫುಲ್ಲ ಚಂದ್ರ ತಿಂಗಳಾಯರು ಶುಭ ಹಾರೈಸಿದರು. ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ “ಸ್ವಾತಂತ್ರ್ಯ ಚಳುವಳಿ, ಏಕೀಕರಣ ಹೋರಾಟ, ನವೋದಯ ಕಾಲದ ಸಾಹಿತ್ಯ ರಚನೆಯ ಕಾಲಘಟ್ಟದ ಹಿನ್ನೆಲೆಯೊಂದಿಗೆ ತಿಂಗಳಾಯರು ಮತ್ತು ಇತರ ತುಳುನಾಡ ಸಾಹಿತಿಗಳ ಕಾರ್ಯ ಚಟುವಟಿಕೆಗಳನ್ನು ಅಧ್ಯಯನ ಮಾಡಬೇಕಾಗಿದೆ” ಎಂದರು.

    ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ಮಾತನಾಡಿ “ಸಾಮಾಜಿಕ ಚಳುವಳಿಗಳಿಗೆ ರಂಗಭೂಮಿಯನ್ನು ಸಮರ್ಥವಾಗಿ ಬಳಕೆ ಮಾಡಲಾಗಿದ್ದು, ತುಳುನಾಡ ರಂಗಭೂಮಿಯಲ್ಲಿ ಶ್ರೀ ಜ್ಞಾನೋದಯ ಸಮಾಜಕ್ಕೆ ಮಹತ್ವದ ಸ್ಥಾನ ನೀಡಬೇಕು” ಎಂದರು. ತುಳು ವಿಭಾಗದ ಉಪನ್ಯಾಸಕರಾದ ಮಣಿ ಎಂ. ರೈ, ಗೀತಾ ಜೈನ್, ಜಯಲಕ್ಷ್ಮಿ ಆರ್. ಶೆಟ್ಟಿ ಮತ್ತು ವರ್ಷ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು. ತುಳು ಎಂ.ಎ. ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಶ್ರೀ ಜ್ಞಾನೋದಯ ಸರಕಾರಿ ಪ್ರಾಥಮಿಕ ಶಾಲೆಯನ್ನು ವೀಕ್ಷಿಸಲಾಯಿತು.

    ಮೋಹನಪ್ಪ ತಿಂಗಳಾಯರು (21-09-1878ರಿಂದ 09-04-1963) ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ಸುಧಾರಣೆಗಾಗಿ ತಮ್ಮ ಬದುಕನ್ನು ಸಮರ್ಪಿಸಿದವರು. 1910ನೇ ಸೌರಮಾನ ಯುಗಾದಿಯಂದು ಶ್ರೀ ಜ್ಞಾನೋದಯ ಸಮಾಜವನ್ನು ಸ್ಥಾಪಿಸಿದರು. 1919ರಂದು ಸಮಾಜದ ಚಟುವಟಿಕೆಗಳಿಗಾಗಿ ಶ್ರೀ ಜ್ಞಾನೋದಯ ಸಮಾಜದ ಸಭಾ ಮಂದಿರ ಸ್ಥಾಪನೆ ಆಯಿತು. ಕೃಷ್ಣಪ್ಪ ತಿಂಗಳಾಯ, ಮಾಧವ ತಿಂಗಳಾಯ ಮೊದಲಾದವರು ನಾಟಕ, ಸಾಹಿತ್ಯ ರಚನೆ, ಸಾಮಾಜಿಕ ಚಟುವಟಿಕೆಗಳ ಮೂಲಕ ಸಕ್ರಿಯರಾಗಿದ್ದರು. ಮೋಹನಪ್ಪ ತಿಂಗಳಾಯರು ಬರೆದ ತುಳು ಭಜನೆಯ ಸಂಗ್ರಹ, ತುಳು ಪದ್ಯಾವಳಿ 1930 ಇಸವಿಯಲ್ಲಿ ಆಟಿಯ 12ನೇ ದಿನ ಬಿಡುಗಡೆಗೊಂಡಿತು. ತುಳುನಾಡಿನ ನಾಡಗೀತೆ ಈ ಸಂಕಲನದಲ್ಲಿದ್ದು, ತುಳುನಾಡಿನ ಸಮಗ್ರ ವರ್ಣನೆಯ ನಾಡಗೀತೆ ಇದಾಗಿದೆ.

    baikady commemoration Literature roovari Tulu
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ‘ಯಕ್ಷ ವೈಭವ 2025’ | ಆಗಸ್ಟ್ 02
    Next Article ಮೈಸೂರು ಕಿರುರಂಗಮಂದಿರದಲ್ಲಿ ‘ಮೂರನೇ ಕಿವಿ’ ನಾಟಕ ಪ್ರದರ್ಶನ | ಆಗಸ್ಟ್ 02 ಮತ್ತು 03
    roovari

    Add Comment Cancel Reply


    Related Posts

    ಶಾರದಾ ವಿದ್ಯಾಲಯದಲ್ಲಿ 111ನೇ ಸಾಹಿತ್ಯ ಅಭಿರುಚಿ ಕಾರ್ಯಕ್ರಮ.

    July 31, 2025

    ಹಾಸನಾಂಬ ಕಲಾಕ್ಷೇತ್ರದಲ್ಲಿ ‘ಹರಿ ಹರ ಸುತ’ ಮತ್ತು ‘ನಾಟ್ಯ ದಾಸೋಹಂ’ | ಆಗಸ್ಟ್ 02

    July 31, 2025

    ಕಿಶೋರ ಕನಕ ಕಾವ್ಯ ಸ್ಪರ್ಧೆ | 16 ಸೆಪ್ಟೆಂಬರ್

    July 31, 2025

    ತುಳುವ ಮಹಾಸಭೆ – ಹೆಬ್ರಿ ತಾಲೂಕು ಸಂಚಾಲಕರಾಗಿ ಡಾ. ಶರತ್ ಕುಮಾರ್ ಶೆಟ್ಟಿ ನೇಮಕ

    July 31, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.