ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆಯ ಪ್ರಯುಕ್ತ ಶ್ರೀ ಆಂಜನೇಯ ಮಂತ್ರಾಲಯದಲ್ಲಿ ‘ಭೀಷ್ಮಾರ್ಜುನ’ ಆಖ್ಯಾನವು ದಿನಾಂಕ 01 ಮಾರ್ಚ್ 2025ರಂದು ನಡೆಯಿತು.
ಹಿಮ್ಮೇಳದಲ್ಲಿ ಆನಂದ ಸವಣೂರು, ತಾರಾನಾಥ ಸವಣೂರು, ಪರೀಕ್ಷಿತ್ ಹಂದ್ರಟ್ಟ, ಶರಣ್ಯ ನೆತ್ತರಕೆರೆ ಸಹಕರಿಸಿದರು. ಮುಮ್ಮೇಳದಲ್ಲಿ ಭಾಸ್ಕರ್ ಬಾರ್ಯ (ಶ್ರೀ ಕೃಷ್ಣ), ಗುಂಡ್ಯಡ್ಕ ಈಶ್ವರ ಭಟ್ ಮತ್ತು ಗುಡ್ಡಪ್ಪ ಬಲ್ಯ (ಭೀಷ್ಮ), ಹರಿಣಾಕ್ಷಿ ಜೆ ಶೆಟ್ಟಿ (ಅರ್ಜುನ), ಅಚ್ಯುತ ಪಾಂಗಣ್ಣಾಯ (ಅಭಿಮನ್ಯು) ಸಹಕರಿಸಿದರು. ಶ್ರೀಮತಿ ಮತ್ತು ಶ್ರೀ ದುಗ್ಗಪ್ಪ ಯನ್. ಕಾರ್ಯಕ್ರಮ ಪ್ರಾಯೋಜಿಸಿದ್ದರು.