Subscribe to Updates

    Get the latest creative news from FooBar about art, design and business.

    What's Hot

    ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ.ಸಾ.ಪ. ವತಿಯಿಂದ ಪುಸ್ತಕಗಳ ಕೊಡುಗೆ

    September 17, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಯಕ್ಷ ಸಂಕ್ರಾಂತಿ’ | ಸೆಪ್ಟೆಂಬರ್ 20

    September 17, 2025

    ತಿಂಗಳ ನಾಟಕ ಸಂಭ್ರಮದಲ್ಲಿ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 20

    September 17, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಸಂಧ್ಯಾ ಕಲಾವಿದರು ಅಭಿನಯಿಸುವ ಹೊಸ ನಾಟಕ ‘ಮುಖವಾಡ’ | ಸೆಪ್ಟೆಂಬರ್ 2ರಂದು
    Drama

    ಸಂಧ್ಯಾ ಕಲಾವಿದರು ಅಭಿನಯಿಸುವ ಹೊಸ ನಾಟಕ ‘ಮುಖವಾಡ’ | ಸೆಪ್ಟೆಂಬರ್ 2ರಂದು

    August 29, 2023No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕಳೆದ 46 ವರ್ಷಗಳಿಂದ ಕನ್ನಡ ನಾಟಕರಂಗದಲ್ಲಿ ಸಕ್ರಿಯವಾಗಿರುವ ಬೆಂಗಳೂರಿನ ‘ಸಂಧ್ಯಾ ಕಲಾವಿದರು’ ಹವ್ಯಾಸಿ ನಾಟಕ ತಂಡವು ದಿನಾಂಕ 02-09-2023 ಶನಿವಾರದಂದು ಸಂಜೆ 7.30 ಗಂಟೆಗೆ ಹನುಮಂತ ನಗರದ ಕೆ.ಹೆಚ್.ಕಲಾಸೌಧದಲ್ಲಿ ಹಿರಿಯ ನಾಟಕಕಾರ ಶ್ರೀ ಎಸ್.ವಿ. ಕೃಷ್ಣ ಶರ್ಮ ವಿರಚಿತ ‘ಮುಖವಾಡ’ ಒಂದು ನಿಗೂಢ ಕಥನ ನಾಟಕದ ಪ್ರದರ್ಶನವನ್ನು ನೀಡುತ್ತಿದೆ. ನಿರ್ದೇಶನ ಪ್ರದೀಪ್ ಅಂಚೆ ಹಾಗೂ ನಿರ್ವಹಣೆ ವೈ.ಕೆ.ಸಂಧ್ಯಾ ಶರ್ಮ.

    ಅಭಿನಯಿಸುವ ಕಲಾವಿದರು- ಪೂಜಾ ರಾವ್, ರಾಘವೇಂದ್ರ ನಾಯಕ್, ಶ್ರೀಕಾಂತ್ ಶ್ರೌತಿ, ಸುನಿಲ್ ನಾಗರಾಜ ರಾವ್ ಮತ್ತು ವಿಜಯ ಕಶ್ಯಪ್. ಬೆಳಕು- ಮಹದೇವಸ್ವಾಮಿ, ರಂಗಸಜ್ಜಿಕೆ- ವಿಶ್ವನಾಥ ಮಂಡಿ. ಹಿನ್ನಲೆ ಸಂಗೀತ ನಿರ್ವಹಣೆ-ನರೇಂದ್ರ ಕಶ್ಯಪ್

    ಮುಖವಾಡ ನಾಟಕದ ಸಾರಾಂಶ
    ಮನದಾಳದಲ್ಲೆಲ್ಲೋ ಹುದುಗಿರುವ ಮಾನವನ ಕ್ರೌರ್ಯ, ಸಜ್ಜನಿಕೆಯ ಮುಖವಾಡವನ್ನು ಕಳಚಿ, ಒಮ್ಮೆಲೆ ಅವನ ನೈಜ ಸ್ವಭಾವವನ್ನು ಅನಾವರಣಗೊಳಿಸುವ ಕಥೆಯೇ ‘ಮುಖವಾಡ’ ನಾಟಕದ ವಸ್ತು. ಬರಹಗಾರನೊಬ್ಬನ ಬರವಣಿಗೆಗೂ, ಅವನ ಚಿಂತನೆಗಳಿಗೂ, ಸ್ವಭಾವಗಳಿಗೂ ಇರುವ ಅಂತರ, ಸಮನ್ವಯವಿಲ್ಲದ ಅವನ ನೈಜ ನಡವಳಿಕೆಗಳನ್ನು ಎತ್ತಿ ತೋರಿಸುವ ನಾಟಕವಾಗಿ ‘ಮುಖವಾಡ’ ಮೂಡಿಬಂದಿದೆ. ಆದರೆ ಆತನ ಸಂಚುಗಳನ್ನು ಮೀರಿ ಪ್ರತಿಸಂಚೊಂದು ಸಹಜವಾಗಿ ಘಟಿಸುವುದನ್ನು ಅವನೆಂದೂ ತಿಳಿಯಲಾರ ಎಂಬ ಸತ್ಯವನ್ನು ತಿಳಿಸುವ ಸನ್ನಿವೇಶವನ್ನು ಈ ನಾಟಕದಲ್ಲಿ ಬಳಸಲಾಗಿದೆ.

    ಮನುಷ್ಯನ ತನ್ನ ಅಂತರಂಗದಲ್ಲಿ ಹುದುಗಿರುವ ಆಸೆ-ಅಭೀಷ್ಟೆಗಳ ಈಡೇರಿಕೆಗಾಗಿ, ಯಾವ ಹಂತಕ್ಕೂ ಹೋಗಬಲ್ಲ, ಯಾವ ಹೇಯ ಕೃತ್ಯ-ಕ್ರೌರ್ಯಕ್ಕೂ ಹಿಂಜರಿಯಲಾರ. ಈ ಅಂಶವನ್ನು, ಬರಹಗಾರನೊಬ್ಬನ ಜೀವನದ ಕಥೆಯ ಸನ್ನಿವೇಶಗಳಲ್ಲಿ ಅನ್ವೇಷಿಸಲಾಗಿದೆ. ಲೇಖಕನೊಬ್ಬನ ಬರಹಕ್ಕೂ, ಆತನ ನಿಜ ಸ್ವಭಾವಕ್ಕೂ ಇರುವ ಅಂತರದ ವಿಡಂಬನಾತ್ಮಕ ಸತ್ಯಕ್ಕೆ ಕನ್ನಡಿ ಹಿಡಿಯುವ ‘ಮುಖವಾಡ’ ನಾಟಕ ಕೌತುಕತೆಯೊಂದಿಗೆ ಸ್ವಾರಸ್ಯವನ್ನು ಕಾಯ್ದಿಟ್ಟುಕೊಂಡಿದೆ.

    ರಚನೆ: ಶ್ರೀ ಎಸ್.ವಿ. ಕೃಷ್ಣ ಶರ್ಮ

    ನಿರ್ದೇಶನ: ಪ್ರದೀಪ್ ಅಂಚೆ

    ನಿರ್ವಹಣೆ: ವೈ.ಕೆ.ಸಂಧ್ಯಾ ಶರ್ಮ

    Share. Facebook Twitter Pinterest LinkedIn Tumblr WhatsApp Email
    Previous Articleಫರಂಗಿಪೇಟೆಯಲ್ಲಿ ಯಕ್ಷಧ್ರುವ – ಯಕ್ಷಶಿಕ್ಷಣ ತರಬೇತಿ ಉದ್ಘಾಟನೆ
    Next Article ಯಕ್ಷಧ್ರುವ ಪಟ್ಲ ಫೌಂಡೇಶನ್ ನಿಂದ ‘ಯಕ್ಷಗಾನ ಶಿಕ್ಷಕರಿಗೆ ಕಾರ್ಯಾಗಾರ’
    roovari

    Add Comment Cancel Reply


    Related Posts

    ತಿಂಗಳ ನಾಟಕ ಸಂಭ್ರಮದಲ್ಲಿ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನ | ಸೆಪ್ಟೆಂಬರ್ 20

    September 17, 2025

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಗೋಕುಲ ನಿರ್ಗಮನ’ ನಾಟಕ | ಸೆಪ್ಟೆಂಬರ್ 18 ಮತ್ತು 19

    September 17, 2025

    ಬೆಂಗಳೂರಿನ ವಿಜಯನಗರ ಬಿಂಬದಲ್ಲಿ ಒಂದು ವರ್ಷದ ರಂಗಭೂಮಿ ಡಿಪ್ಲೋಮೋ   

    September 16, 2025

    ವಿಜಯನಗರ ಬಿಂಬದ ಸರಳಾಂಗಣದಲ್ಲಿ ‘ಚೊಟಾಣಿ ನಾಟಕೋತ್ಸವ’ | ಸೆಪ್ಟೆಂಬರ್ 19 ಮತ್ತು 20

    September 16, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.