ಬೆಳಗಾವಿ : ರಂಗಸಂಪದ ಬೆಳಗಾವಿ ಮತ್ತು ರಂಗಶಂಕರ ಬೆಂಗಳೂರಿನ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನವನ್ನು ದಿನಾಂಕ 02 ನವೆಂಬರ್ 2025ರಂದು ಸಂಜೆ 6-30 ಗಂಟೆಗೆ ಬೆಳಗಾವಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಂಧ್ಯಾ ಎಸ್. ಇವರು ರಚಿರುವ ಈ ನಾಟಕಕ್ಕೆ ಸವಿತಾ ಭೈರಪ್ಪ ನಿರ್ದೇಶನ ಮಾಡಿದ್ದು, ಶ್ರೀಪತಿ ಮಂಜನಬೈಲು ಸಂಗೀತ ನೀಡಿರುತ್ತಾರೆ. ವಿನಯ ಕುಲಕರ್ಣಿ, ನಿರ್ಮಲಾ ಬಟ್ಟಲ, ಉಜ್ವಲಾ ಪವಾರ, ಪ್ರಸಾದ ಕಾರಜೋಳ, ಆರೂಷ ಕುಲಕರ್ಣಿ, ಯೋಗೇಶ ದೇಶಪಾಂಡೆ, ಚಿ. ವರದ ದೇಶಪಾಂಡೆ, ಮಂಜುನಾಥ ಕಲಾಲ, ಅರವಿಂದ ಪಾಟೀಲ, ಸ್ನೇಹಾ ಕುಲಕರ್ಣಿ, ಅರವಿಂದ ಕುಲಕರ್ಣಿ ಮುಂತಾದ ಕಲಾವಿದರು ನಟಿಸಿರುತ್ತಾರೆ.

 
									 
					